ಪಿಯು ಮೌಲ್ಯಮಾಪಕರ ಯಡವಟ್ಟು:ಈಗ ರವೀಶ್ ರಾಜ್ಯಕ್ಕೆ ಟಾಪರ್
ಉದಯವಾಣಿ, Jun 17, 2016
ಬೆಂಗಳೂರು : ಪಿಯು ಮಂಡಳಿ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಹತ್ತು ಹಲವು ಯಡವಟ್ಟುಗಳ ಮೂಲಕ ಸುದ್ದಿಯಲ್ಲಿದೆ .ಇದೀಗ ಇನ್ನೊಂದು ಯಡವಟ್ಟನ್ನು ಮೌಲ್ಯ ಮಾಪಕರು ಮಾಡಿದ್ದು ಇದರಿಂದಾಗಿ ಸೈನ್ಸ್ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್ ಅಗಬೇಕಾಗಿದ್ದ ವಿದ್ಯಾರ್ಥಿಯೊಬ್ಬನಿಗೆ ಅನ್ಯಾಯವಾಗಿತ್ತು.
ಫಲಿತಾಂಶ ಪ್ರಕಟವಾದಾಗ 600ಕ್ಕೆ 589 ಅಂಕ ಪಡೆದಿದ್ದ ಮೂಲತಃ ಬೆಂಗಳೂರಿನ ನಿವಾಸಿ ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾ ಶಾಲೆಯ ವಿದ್ಯಾರ್ಥಿ ರವೀಶ್ ಸುರೇಶ್ ಬನಹಟ್ಟಿ ಅವರು ಇದೀಗ ಮರು ಮೌಲ್ಯ ಮಾಪನದ ಬಳಿಕ 597 ಅಂಕಗಳನ್ನು ಪಡೆದು ರಾಜ್ಯಕ್ಕೆ ಟಾಪರ್ ಎನಿಸಿಕೊಂಡಿದ್ದಾರೆ.
ಇಂಗ್ಲೀಷ್ ವಿಷಯದಲ್ಲಿ ರವೀಶ್ಗೆ ಅನ್ಯಾಯವಾಗಿದ್ದು 90ಅಂಕ ಮಾತ್ರ ನೀಡಲಾಗಿತ್ತು. ಆದರೆ ಹೆಚ್ಚು ಅಂಕ ಪಡೆಯುವ ಧೃಡ ವಿಶ್ವಾಸವಿದ್ದ ರವೀಶ್ ಉತ್ತರ ಪತ್ರಿಕೆಯ ನಕಲು ತರಿಸಿ ಪರಿಶೀಲಿಸಿದ್ದಾರೆ. ಆಬಳಿಕ ಮರು ಮೌಲ್ಯ ಮಾಪನಕ್ಕೆ ಅರ್ಜಿ ಹಾಕಿ ಮೌಲ್ಯ ಮಾಪನ ನಡೆದಾಗ 98 ಅಂಕ ಬಂದಿದೆ.
ರವೀಶ್ ಅವರು ಸಿಇಟಿಯಲ್ಲೂ ಉತ್ತಮ ಸಾಧನೆ ತೋರಿದ್ದು ಮೆಡಿಕಲ್ ವಿಭಾಗದಲ್ಲಿ 56 ನೇ ರಾಂಕ್ ಪಡೆದಿದ್ದು ಮುಂದೆ ವೈದ್ಯ ಶಿಕ್ಷಣ ಆಯ್ಕೆ ಮಾಡಿಕೊಂಡಿದ್ದಾರೆ.
ಈ ಹಿಂದೆ ವಿಜ್ಞಾನ ವಿಭಾಗದಲ್ಲಿ 596 ಅಂಕ ಪಡೆದ ರಕ್ಷಿತಾ ತಮನ್ ರಾಜ್ಯಕ್ಕೆ ಟಾಪರ್ ಆಗಿದ್ದರು.
****
*ದ್ವಿತೀಯ ಪಿಯುಸಿ ಫಲಿತಾಂಶ:
ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ.
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಪಿಯು ಬೋರ್ಡ್ನಲ್ಲಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ದಿ:25-5-16 ರಂದು ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ಪ್ರಕಟಿಸಿದರು.
ಈ ಬಾರಿ ಒಟ್ಟು ಶೇ. 57.20ಫಲಿತಾಂಶ ದಾಖಲಾಗಿದೆ. ಮೂರು ವರ್ಷದಲ್ಲಿ ತೀವ್ರ ಕಳಪೆ ಸಾಧನೆ ಇದಾಗಿದ್ದು, ಕಳೆದ ವರ್ಷ ಶೇ. 60.54 ಫಲಿತಾಂಶ ಪ್ರಕಟವಾಗಿತ್ತು.
ದಕ್ಷಿಣ ಕನ್ನಡಕ್ಕೆ ಮೊದಲ ಸ್ಥಾನ, ಉಡುಪಿ ಎರಡನೇ ಸ್ಥಾನ,ಕೊಡಗು ಮೂರನೇ ಸ್ಥಾನ, ಯಾದಗಿರಿಗೆ ಕೊನೆ ಸ್ಥಾನ ಸಿಕ್ಕಿದೆ. ಕಲಾ ವಿಭಾಗದಲ್ಲಿ ಶೇ. 42.12, ವಾಣಿಜ್ಯ ವಿಭಾಗ ಶೇ.64.16, ವಿಜ್ಞಾನ ವಿಭಾಗ ಶೇ. 62.25 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ನಗರ ಪ್ರದೇಶ ಶೇ.57.36 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು 56.66 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 91 ಸರ್ಕಾರಿ ಕಾಲೇಜುಗಳು ಶೂನ್ಯ ಫಲಿತಾಂಶ ದಾಖಲಿಸಿದ್ದರೆ, 88 ಖಾಸಗಿ ಕಾಲೇಜುಗಳಲ್ಲಿ ಶೂನ್ಯ ಸಂಪಾದನೆ ಮಾಡಿವೆ.
ಒಟ್ಟು 6,36,368 ವಿದ್ಯಾರ್ಥಿಗಳು ಪರೀಕ್ಷೆ ಬರದಿದ್ದು, ಒಟ್ಟು 3,64,013 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟು 163484(ಶೇ.50.02) ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದರೆ, 2,50,029(ಶೇ.64.79) ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ.
ದಕ್ಷಿಣ ಕನ್ನಡ ಮೊದಲ ಸ್ಥಾನ – ಶೇ.90.48
ಉಡುಪಿ ಎರಡನೇ ಸ್ಥಾನ – ಶೇ.90.35
ಕೊಡಗು ಮೂರನೇ ಸ್ಥಾನ – ಶೇ.79.35
ಯಾದಗಿರಿಗೆ ಕೊನೆ ಸ್ಥಾನ – ಶೇ. 44.16.
ಬಾಳೆ ಹಣ್ಣಿನ ವ್ಯಾಪಾರಿಯೊಬ್ಬರ ಪುತ್ರಿಯಾದ ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲೂಕಿನ ಇಂದೂ ಪಿಯು ಕಾಲೇಜಿನ ಅನಿತಾ ಬಸಪ್ಪ ಅವರು 600ಕ್ಕೆ 597 ಅಂಕ ಗಳಿಸಿ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನಗಳಿಸಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಬೆಂಗಳೂರು ನಗರದ ಸರ್ದಾರ್ ಪಟೇಲ್ ಪಿಯು ಕಾಲೇಜಿನ ವಿದ್ಯಾರ್ಥಿನಿ ರಕ್ಷಿತಾ ತಮನ್ 600ಕ್ಕೆ 596 ಅಂಕ ಪಡೆದು ಪ್ರಥಮ ಸ್ಥಾನ ಗಳಿಸಿದ್ದಾರೆ.
ಉಡುಪಿ ಜಿಲ್ಲೆಯ ನೇಹಾ ಶೆಟ್ಟಿ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ವಿಜಯಪುರದ ವಿ ಬಿ ದರ್ಬಾರ್ ಪಿಯು ಕಾಲೇಜಿನ ಸಹನಾ ಕುಲಕರ್ಣೀ ಅವರು 594 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ಬೆಂಗಳೂರಿನ ಛಾಯಾಶ್ರೀ ವಿ ಮತ್ತು ದೀಕ್ಷಾ ನಾಯಕ್ ಅವರು ಕೂಡಾ ಅಷ್ಟೇ ಅಂಕಗಳನ್ನು ಗಳಿಸಿದ್ದಾರೆ.
ಎಷ್ಟು ಮಂದಿ ಡಿಸ್ಟಿಂಕ್ಷನ್?
41,373 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್
1,89,791 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ
78,301 ದ್ವಿತೀಯ ಶ್ರೇಣಿ
54,548 ತೃತೀಯ ಶ್ರೇಣಿ
*ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಜೂ. 7ಕ್ಕೆ ಕೊನೆಯ ದಿನಾಂಕ.*
ಸ್ಕ್ಯಾನಿಂಗ್ ಪತ್ರಿ ಪಡೆಯಲು 400 ರೂ.
ಸ್ಕ್ಯಾನಿಂಗ್ ಪತ್ರಿಗೆ ಸಲ್ಲಿಸಲು ಮೇ 30 ಕೊನೆಯ ದಿನಾಂಕ
ಪರೀಕ್ಷಾ ಶುಲ್ಕ ಕಟ್ಟಲು ಜೂನ್ 6 ಕೊನೆಯ ದಿನಾಂಕ
ಜುಲೈ 1 ರಿಂದ 13 ರವರೆಗೆ ಸಪ್ಲಿಮೆಂಟ್ರಿ ಪರೀಕ್ಷೆ
ಪೂರಕ ಪರೀಕ್ಷೆ ಕಟ್ಟಲು ಒಂದು ವಿಷ್ಯಕ್ಕೆ 101 ರೂ.
ಮೂರು ವಿಷಯಕ್ಕೆ 301 ರೂ.
ಜಿಲ್ಲಾವಾರು ಫಲಿತಾಂಶ:
ವಾಣಿಜ್ಯ ವಿಭಾಗದಲ್ಲಿ 3 ಹೆಣ್ಮಕ್ಕಳು ಫಸ್ಟ್:
ಈ ಬಾರಿಯ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಮೂವರು ವಿದ್ಯಾರ್ಥಿನಿಯರೂ ಸಮ ಅಂಕಗಳು ಪಡೆದಿದ್ದು ಈ ಮೂವರಲ್ಲಿ ಸಹನಾ ಫಸ್ಟ್
ವಿಜಯಪುರದ ವಿವಿ ದರ್ಬಾರ್ ಪಿಯು ಕಾಲೇಜಿನ ಸಹನಾ ಕುಲಕರ್ಣಿ 594, ಬೆಂಗಳೂರಿನ ಮಲ್ಲೇಶ್ವರಂ ಎಂಇಎಸ್ ಪಿಯು ಕಾಲೇಜಿನ ಛಾಯಶ್ರೀ 594 ಹಾಗೂ ವಿವಿ ಪುರಂನ ಮಹಾವೀರ್ ಜೈನ್ ಕಾಲೇಜಿನ ವಿದ್ಯಾರ್ಥಿನಿ ದೀಕ್ಷಾ ನಾಯಕ್ 594 ಅಂಕಗಳನ್ನು ಪಡೆದಿದ್ದಾರೆ.
ಬಾಳೆಹಣ್ಣಿನ ವ್ಯಾಪಾರಿ ಮಗಳು ಕಲಾ ವಿಭಾಗದಲ್ಲಿ ಬೆಸ್ಟ್
ಸಾಧನೆಗೆ ಬಡತನ ತೊಡಕಾಗುವುದಿಲ್ಲ. ಸಾಧಿಸುವ ಛಲವಿರಬೇಕಷ್ಟೆ. ನಿರಂತರ ಪರಿಶ್ರ ಮವಿದ್ದರೆ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಬಾಳೆಹಣ್ಣು ವ್ಯಾಪಾರಿ ಪಿಯುಸಿ ವಿದ್ಯಾರ್ಥಿನಿ ಅನಿತಾ ಬಸಪ್ಪ ಸೂಕ್ತ ಉದಾಹರಣೆಯಾಗಿದ್ದಾರೆ. ಕೂಡ್ಲಿಗಿಯ ಕೊಟ್ಟೂರು ನಿವಾಸಿ ಬಸಪ್ಪ ಅವರ ಪುತ್ರಿ ಅನಿತಾ ಬಸಪ್ಪ ಇಂದೂ ಕಾಲೇಜಿನಲ್ಲಿ ಕಲಾ ವಿಭಾಗ ತೆಗೆದುಕೊಂಡಿದ್ದು, ಪ್ರಸಕ್ತ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 585 ಅಂಕಗಳನ್ನು ಗಳಿಸುವುದರ ಮುಖಾಂತರ ಕಲಾ ವಿಭಾಗದಿಂದ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅನಿತಾ ನಾನು ಈ ರೀತಿಯ ಫಲಿತಾಂಶ ಬರುತ್ತದೆ ಎಂದು ಕನಸು ಮನಸಿನಲ್ಲಿಯೂ ಯೋಚಿಸಿರಲಿಲ್ಲ. ಇಷ್ಟು ಅಂಕ ಬಂದಿರುವುದಕ್ಕೆ ಮೊದಲು ನನ್ನ ಪೋಷಕರು ಹಾಗೂ ಕಾಲೇಜಿನ ಉಪನ್ಯಾಸಕರೇ ಸ್ಫೂರ್ತಿಯಾಗಿದ್ದು , ಅವರಿಗೆ ಋಣಿಯಾಗಿರುತ್ತೇನೆ ಎಂದು ತಿಳಿಸಿದರು. ತಂದೆ ಬಸಪ್ಪ ಮಾತನಾಡಿ, ನಾವು ತುಂಬಾ ಬಡವರು ಪ್ರತಿ ದಿನ ಬಾಳೆಹಣ್ಣು ಮಾರಬೇಕು. ಜೀವನ ನಡೆಸಬೇಕು. ಒಂದು ದಿನ ವ್ಯಾಪಾರ ಆಗಲಿಲ್ಲ ಅಂದ್ರೆ ಜೀವನ ನಡೆಸೋದು ತುಂಬಾ ಕಷ್ಟ. ಇದರ ಮಧ್ಯೆಯೂ ನನ್ನ ಮಗಳು ಪರಿಶ್ರಮ ಪಟ್ಟು ಓದಿ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿರುವುದು ನಿಜಕ್ಕೂ ಸಂತೋಷದ ವಿಷಯವಾಗಿದೆ.
ಉನ್ನತ ಶಿಕ್ಷಣ ದುಬಾರಿಯಾಗಿರುವುದರಿಂದ ನಾವು ನಮ್ಮ ಮಗಳನ್ನು ಹೆಚ್ಚು ಓದಿಸಲು ಸಾಧ್ಯವಾಗುವುದಿಲ್ಲ ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಂಡರು. ಕೆಎಎಸ್ ಪರೀಕ್ಷೆ ಬರೆಯುವ ಆಸೆ ಹೊಂದಿರುವ ಅನಿತಾಳ ಕನಸು ನನಸಾಗಲಿ. ಬೆಂಗಳೂರಿನ ಕ್ರಿಸ್ಟ್ ಪಿಯು ಕಾಲೇಜಿನ ತಾನಿಯಾ ಮಾರ್ಥಾ ಥಾಮಸ್ 580 ಅಂಕಗಳು ಪಡೆದಿದ್ದರೆ, ಮೌಂಟ್ ಕಾರ್ಮೆಲ್ ಕಾಲೇಜಿನ ಅನುಶ್ರೀ.ಪಿ.ಜಿ 575 ಅಂಕಗಳನ್ನು ಪಡೆದು ತೃತೀಯ ಸ್ಥಾನದಲ್ಲಿದ್ದಾರೆ.
ಅಂಕಕ್ಕಿಂತ ಅರ್ಥಕ್ಕೆ ಹೆಚ್ಚು ಒತ್ತು ನೀಡಿದ್ದೆ: ರಾಜ್ಯ ಟಾಪರ್ ಸಹನಾ ಕುಲಕರ್ಣಿ:
ನಾನು ತರಗತಿಯಲ್ಲಿ ಆಸಕ್ತಿಯಿಂದ ಪಾಠ ಕೇಳುತ್ತಿದ್ದೆ. ನನಗೆ ನಮ್ಮ ಶಿಕ್ಷಕರು ಹಾಗೂ ಪೋಷಕರು ತುಂಬಾ ಸಹಕಾರ ನೀಡಿದ್ದಾರೆ. ನನ್ನ ಈ ಯಶಸ್ಸಿಗೆ ಅವರೂ ಭಾಗೀದಾರರು. ನಾನು ಮುಂದೆ ಸಿಎ ಮಾಡಬೇಕೆಂದಿದ್ದೇನೆ ಎಂದು ವಾಣಿಜ್ಯ ವಿಭಾಗದಲ್ಲಿ 594 ಅಂಕಗಳಿಸಿ ರಾಜ್ಯಕ್ಕೆ ಟಾಪರ್ ಆಗಿರುವ ಸಹನಾ ಕುಲಕರ್ಣಿ ಸುವರ್ಣ ನ್ಯೂಸ್- ಕನ್ನಡ ಪ್ರಭದೊಂದಿಗೆ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.
ಕಾಲೇಜಿನ ಯಾವುದೇ ವಿಷಯವನ್ನೇ ಆಗಲಿ ಕೇವಲ ಅಂಕಗಳಿಸುವ ಗುರಿಯಿಟ್ಟುಕೊಂಡು ಓದಬಾರದು. ನಾನು ಸಾಧ್ಯವಾದಷ್ಟು ವಿಷಯವನ್ನು ಅರ್ಥ ಮಾಡಿಕೊಂಡು ಓದುತ್ತಿದ್ದೆ. ಯಾವುದೇ ವೇಳಾಪಟ್ಟಿ ಹಾಕಿಕೊಂಡು ಓದುತ್ತಿರಲಿಲ್ಲ ಎಂದಿರುವ ಸಹನಾ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಥ್ಯಾಂಕ್ಸ್ ಹೇಳಿದ್ದಾಳೆ. ವಿ.ಬಿ. ದರ್ಬಾರ್ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಸಹನಾ, ಮುಂದೆ ಇದೇ ಸಂಸ್ಥೆಯ ಶ್ರೀಮತಿ ಕುಮುದಬೆನ್ ದರ್ಬಾರ್ ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್’ಮೆಂಟ್ (ವಿಜಯಪುರ) ನಲ್ಲಿ ಬಿ.ಕಾಂ ಮಾಡುವುದಾಗಿ ಸಹನಾ ತಿಳಿಸಿದ್ದಾಳೆ.
ಸಹನಾ ಪೋಷಕರು ಕೂಡ ಮಗಳ ಸಾಧನೆ ಕುರಿತು ಸಂತೋಷ ವ್ಯಕ್ತಪಡಿಸಿದ್ದಾರೆ. ‘ ಸಹನಾ ಬರಿ ಓದಿಗೆ ಮಾತ್ರ ಸೀಮಿತವಾಗಿರಲಿಲ್ಲ. ಕಲೆ ಕ್ರೀಡೆಯಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಿದ್ದಳು. ಅವಳು ಟಾಪರ್ ಪಟ್ಟಿಯಲ್ಲಿ ಸ್ಥಾನ ಪಡೆಯಬಹುದೆಂದು ನಿರೀಕ್ಷೆಯಿತ್ತು, ಆದರೆ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸುತ್ತಾಳೆಂದು ನಿರೀಕ್ಷಿಸಿರಲಿಲ್ಲ ಎಂದು ಸಹನಾ ತಂದೆ ಗುರುರಾಜ್ ಕುಲಕರ್ಣಿ ಸಂತೋಷ ಹಂಚಿಕೊಂಡಿದ್ದಾರೆ.
ಸಹನಾ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ್ದು ತುಂಬಾ ಸಂತೋಷವಾಗಿದೆ. ಇದು ಸಹನಾಳ ಕಠಿಣ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ ಎಂದು ವಿ.ಬಿ. ದರ್ಬಾರ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಸಿ.ಆರ್ ಕುಲಕರ್ಣಿ ಸುವರ್ಣ ನ್ಯೂಸ್- ಕನ್ನಡ ಪ್ರಭದೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.
ಸಹನಾ ಯಾವುದೇ ಟ್ಯೂಷನ್’ಗೆ ಹೋಗುತ್ತಿರಲಿಲ್ಲ. ಉಪನ್ಯಾಸಕರ ಪಾಠವನ್ನು ತುಂಬಾ ಆಸಕ್ತಿಯಿಂದ ಕೇಳುತ್ತಿದ್ದಳು. ಓದಿಗೆ ಸಂಬಂಧಿಸಿದಂತೆ ಯಾವುದೇ ಗೊಂದಲಗಳಿದ್ದರು ಅದನ್ನು ಉಪನ್ಯಾಸಕರಗಳ ಬಳಿ ಚರ್ಚಿಸುತ್ತಿದ್ದಳು. ಸಹನಾ ಅಗ್ರ ಶ್ರೇಯಾಂಕದಲ್ಲಿ ಉತ್ತೀರ್ಣರಾಗುತ್ತಾಳೆ ಎಂಬ ನಿರೀಕ್ಷೆಯಿತ್ತು, ಆದರೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸುತ್ತಾಳೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಸಿ.ಆರ್ ಕುಲಕರ್ಣಿ ತಿಳಿಸಿದ್ದಾರೆ.
ಸಾಮಾನ್ಯವಾಗಿ ಉತ್ತರ ಕರ್ನಾಟಕ ಭಾಗಗಳಲ್ಲಿ ಶಿಕ್ಷಣಕ್ಕೆ ಒತ್ತು ನೀಡುವ ವಿಚಾರದಲ್ಲಿ ಪೋಷಕರು ನಿರಾಸಕ್ತಿ ಹೊಂದಿರುತ್ತಾರೆ. ಇಂತಹ ಸನ್ನಿವೇಶದಲ್ಲಿ ನಮ್ಮ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಯ ಸಹಕಾರದಿಂದ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗುತ್ತಾ ಬಂದಿದೆ. ನಾವು ನಮ್ಮ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳೂ ಕಿರುಪರೀಕ್ಷೆಗಳನ್ನು ನಡೆಸುತ್ತಿದ್ದೆವು. ಅದರಲ್ಲಿ ಮಕ್ಕಳ ಸರಿ-ತಪ್ಪು ತಿದ್ದಲು ಇದು ಸಹಕಾರಿಯಾಯಿತು ಎಂದು ವಿ.ಬಿ ದರ್ಬಾರ್ ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.
ಕಾಮರ್ಸ್ ವಿಭಾಗದ ಟಾಪ್ಪರ್ ಛಾಯಾಶ್ರೀ
ಎಂಇಎಸ್ ಕಾಲೇಜಿನ ವಿದ್ಯಾರ್ಥಿನಿ ಛಾಯಾಶ್ರೀ ಈ ಬಾರಿಯ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 594 ಅಂಕ ಗಳಿಸಿ ಅಗ್ರಸ್ಥಾನ ಪಡೆದಿದ್ದಾರೆ.
ಫಲಿತಾಂಶ ಪ್ರಕಟವಾದ ಬಳಿಕ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಛಾಯಾಶ್ರೀ ತಾನು ಟಾಪರ್ ಆಗುತ್ತೇನೆಂದು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ. ಇಂತಿಷ್ಟೇ ಓದಬೇಕೆಂದು ಟೈಮ್ ಟೇಬಲ್ ಹಾಕಿಕೊಳ್ಳದಿದ್ದರೂ ಅವತ್ತಿನ ಪಾಠಗಳನ್ನು ಅವತ್ತವತ್ತೇ ಓದುತ್ತಿದ್ದೆ ಎಂದವರು ಹೇಳಿದ್ದಾರೆ. ಹಿಂದಿನ ವರ್ಷಗಳ ಮತ್ತು ಮಾದರಿ ಪ್ರಶ್ನೆಪತ್ರಿಕೆಗಳನ್ನು ತಪ್ಪದೇ ಅಭ್ಯಾಸ ಮಾಡುತ್ತಿದ್ದುದು ಈಕೆಯ ನೆರವಿಗೆ ಬಂದಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಆಸಕ್ತಿ ತೋರದ ಛಾಯಾಶ್ರೀ ಮುಂದೆ ಚಾರ್ಟರ್ಡ್ ಅಕೌಂಟೆಂಟ್ ಆಗಬೇಕೆಂಬ ಗುರಿ ಇದೆ. ಈಗಾಗಲೇ ಇದಕ್ಕಾಗಿ ತಯಾರಿ ನಡೆಸಿದ್ದು ಮುಂದಿನ ತಿಂಗಳು ನಡೆಯಲಿರುವ ಸಿಪಿಟಿ ಪರೀಕ್ಷೆಯನ್ನು ಬರೆಯಲಿದ್ದಾರೆ.
#
ರಾಜ್ಯಕ್ಕೆ ಪ್ರಥಮ ಬಂದ ರಕ್ಷಿತಾಗೆ ವಿಜ್ಞಾನಿಯಾಗುವ ಆಸೆ
“ನನಗೆ ಮೊದಲಿನಿಂದಲೂ ವಿಜ್ಞಾನದ ಬಗ್ಗೆ ಆಸಕ್ತಿ. ಅದೇ ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಹಂಬಲ. ನಾನೂ ಮೂಲವಿಜ್ಞಾನವನ್ನೇ ಓದಬೇಕೆಂದುಕೊಂಡಿದ್ದೇನೆ. ವಿಜ್ಞಾನಿಯಾಗಬೇಕೆಂಬುದು ನನ್ನ ಕನಸು’’
ಇದು ಪಿಯುಸಿಯಲ್ಲಿ 596 ಅಂಕಗಳನ್ನ ಪಡೆದು ರಾಜ್ಯಕ್ಕೆ ಪ್ರಥಮರಾದ ರಕ್ಷಿತಾ ಅವರು ಹೇಳಿದ ಮಾತು. ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಮತ್ತು ಎಲೆಕ್ಟ್ರಾನಿಕ್ಸ್ ನಲ್ಲಿ ಪಿಯುಸಿ ವ್ಯಾಸಂಗ ಮಾಡಿದ ರಕ್ಷಿತಾ ಹೆಚ್ಚೇನು ಶ್ರಮ ಪಡದೆ ಶ್ರದ್ಧೆಯಿಂದ ಓದಿದ್ದೇ ಈ ಫಲಿತಾಂಶಕ್ಕೆ ಕಾರಣವೆಂದು ಕನ್ನಡಪ್ರಭದೊಂದಿಗೆ ಮಾತನಾಡುತ್ತಾ ತಿಳಿಸಿದರು.
“ತರಗತಿಗಳನ್ನು ಮಿಸ್ ಮಾಡಿಕೊಳ್ಳದೆ ಎಲ್ಲಾ ತರಗತಿಗಳಿಗೂ ಹಾಜರಾಗುತ್ತಿದ್ದೆ, ಯೂನಿಟ್ ಟೆಸ್ಟ್’ಗಳನ್ನು ಮಿಸ್ ಮಾಡಿಕೊಳ್ಳುತ್ತಲೂ ಇರಲಿಲ್ಲ. ಏಕಾಗ್ರತೆಯಿಂದ ಓದಿಕೊಳ್ಳುತ್ತಿದ್ದೆ. ಐಐಟಿಗಾಗಿ ಪಡೆದ ಕೋಚಿಂಗ್ ಸ್ವಲ್ಪ ನೆರವಾಯಿತು. ಎಂದು ತಮ್ಮ ಓದಿನ ಕ್ರಮವನ್ನು ವಿವರಿಸಿದರು.
“ಹೀಗೆ ಓದಬೇಕು. ಇಷ್ಟೇ ಓದಬೇಕು ಎಂಬ ನಿಯಮವನ್ನೇನು ಹಾಕಿಕೊಂಡಿರಲಿಲ್ಲ. ಆಸಕ್ತಿಯಿಂದ ಓದುತ್ತಿದ್ದೆ’’ ಎಂದ ಅವರು, ಮುಂದೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಟಿಪ್ಸ್ ಕೊಡಿ ಎಂದಾಗ ಹೇಳಿದ್ದು, “ಅಂಕಗಳಿಗಾಗಿ ಓದಬೇಡಿ, ಪರೀಕ್ಷೆ ಬರೆಯಬೇಡಿ. ವಿಷಯದ ಬಗ್ಗೆ ಆಸಕ್ತಿ ಮುಖ್ಯ. ಅದನ್ನು ತಿಳಿಯುವುದಕ್ಕಾಗಿ ಓದಿದರೆ, ಅಂಕ ತಾನಾಗಿ ಬರುತ್ತವೆ’ಎಂದು ಹೇಳಿದರು.
ರಕ್ಷಿತಾ ಪೋಷಕರು ಮತ್ತು ಕಾಲೇಜಿನ ಸಿಬ್ಬಂದಿಗೆ ಕೃತಜ್ಞತೆಗಳನ್ನು ಅರ್ಪಿಸಿದರು.
ವಿಜ್ಞಾನಿಯಾಗುವ ಹಂಬಲವಿರುವ ರಕ್ಷಿತಾ ಐಐಟಿ, ಜೆಇಇ, ಐಸಾರ್ ಪ್ರವೇಶ ಪರೀಕ್ಷೆ ಬರೆದು ಮುಂದೆ ವಿಜ್ಞಾನ, ಸಂಶೋಧನೆಯಲ್ಲಿ ತೊಡಗಿಕೊಳ್ಳುವವರಿದ್ದಾರೆ.
ಮಗಳ ಸಾಧನೆಗೆ ಹರ್ಷ
“ನಾವು ರಾಜ್ಯಕ್ಕೆ ಪ್ರಥಮ ಬರುತ್ತಾಳೆ ಎಂಬ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಓದಿನ ಬಗ್ಗೆ ಹೆಚ್ಚು ಆಸ್ಥೆ ವಹಿಸುತ್ತಿದ್ದಳು. ಅನಗತ್ಯವಾದ ಯಾವುದೇ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿರಲಿಲ್ಲ. ಅವಳ ಈ ಡೆಡಿಕೇಷನ್ ಫಲ ಕೊಟ್ಟಿದೆ. ತುಂಬಾ ಸಂತೋಷವಾಗಿದೆ ಎಂದು ರಕ್ಷಿತಾ ಅವರ ತಾಯಿ ಪಂಕಜಾ ತಮನ್ ಹರ್ಷ ವ್ಯಕ್ತಪಡಿಸಿದ್ದಾರೆ.
“ಮೂಲ ವಿಜ್ಞಾನವನ್ನೇ ಓದಬೇಕೆಂಬ ಆಸೆ ಅವಳಿಗೆ. ಪ್ರವೇಶ ಪರೀಕ್ಷೆ ಬರೆಯುತ್ತಾಳೆ. ಅವಳಿಗೆ ನಾವು ಸದಾ ಪ್ರೋತ್ಸಾಹಿಸುತ್ತೇವೆ. ಅವಳ ಸಾಧನೆ ನಮಗೆ ಹೆಮ್ಮೆ ತಂದಿದೆ’ಎಂದು ರಕ್ಷಿತಾ ತಂದೆ ತಮನ್ ಸಂತೋಷ್ ವ್ಯಕ್ತಪಡಿಸಿದರು.
ವಿದ್ಯಾವರ್ಧಕ ಸಂಘ ಪಿಯು ಕಾಲೇಜ್ ನ ಪ್ರಾಂಶುಪಾಲರಾದ ವಿದ್ಯಾಶ್ರೀ ಅವರು, “ತುಂಬಾ ಶ್ರಮ ಹಾಕಿದ್ದಾಳೆ. ಶ್ರದ್ಧೆಯಿಂದ ಓದಿದ್ದಾಳೆ. ಅವಳ ಸಾಧನೆಗೆ ಅಭಿನಂದನೆಗಳು. ನಮಗೆ ಸಂತೋಷ ತಂದಿದೆ’’ ಎಂದು ಹೇಳಿದರು.
ವಿಜಯವಾಣೆ ವರದಿ:
ಪಿಯು ಸೆಕೆಂಡ್ಕ್ಲಾಸ್
ಪ್ರಶ್ನೆಪತ್ರಿಕೆ ಸೋರಿಕೆಯಿಂದ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ 2016ನೇ ಸಾಲಿನ ದ್ವಿತೀಯ ಪಿಯು ರಿಸಲ್ಟ್ ಬುಧವಾರ ಪ್ರಕಟವಾಗಿದ್ದು, ಕಳೆದ ಎರಡು ವರ್ಷಗಳಲ್ಲಿ ಇದೇ ಮೊದಲ ಬಾರಿ ದ್ವಿತೀಯ ದರ್ಜೆ ಫಲಿತಾಂಶ ಬಂದಿದೆ. ಒಟ್ಟಾರೆ ಶೇ.57.20 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಫಲಿತಾಂಶದ ಪ್ರಮಾಣ ಶೇ.3.34 ಇಳಿಕೆಯಾಗಿದೆ. ಗುಣಮಟ್ಟದ ಫಲಿತಾಂಶ ನೀಡುವ ಉದ್ದೇಶದಿಂದ ಈ ಬಾರಿ ಕೃಪಾಂಕ ನೀಡದಿರುವುದು ಫಲಿತಾಂಶ ಕುಸಿತಕ್ಕೆ ಕಾರಣವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಹೇಳಿದ್ದಾರೆ. ಇದರ ಹೊರತಾಗಿಯೂ ಕಳೆದ 9 ವರ್ಷಗಳಲ್ಲಿ ನಿರಂತರ ಏರಿಕೆ ಕಂಡಿದ್ದ ಫಲಿತಾಂಶ ಈ ವರ್ಷ ಇಳಿಕೆಯಾಗಿರುವುದು ಶಿಕ್ಷಣದ ಗುಣಮಟ್ಟದ ಬಗ್ಗೆಯೇ ಗುಮಾನಿ ಮೂಡಿಸಿದೆ.
ಸೆಕೆಂಡ್ ಕ್ಲಾಸ್ನಲ್ಲಿ ಪಿಯು ಪಾಸ್!
ಬೆಂಗಳೂರು: ಪ್ರಶ್ನೆಪತ್ರಿಕೆ ಸೋರಿಕೆ, ಉಪನ್ಯಾಸಕರ ಮುಷ್ಕರ ಮತ್ತಿತರ ಕಾರಣಗಳಿಂದ ಭಾರಿ ಕುತೂಹಲ ಕೆರಳಿಸಿದ್ದ ಈ ಬಾರಿಯ ದ್ವಿತೀಯ ಪಿಯು ಫಲಿತಾಂಶ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣಗೊಂಡಿದೆ!
ಬುಧವಾರ ಫಲಿತಾಂಶ ಪ್ರಕಟಗೊಂಡಿದ್ದು, ಶೇ.57.20 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಕಳೆದ 9 ವರ್ಷದಿಂದ ಏರುಗತಿಯಲ್ಲಿದ್ದ ಫಲಿತಾಂಶ ಈ ವರ್ಷ ಇಳಿಕೆ ಕಂಡಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಾಲಿನ ಫಲಿತಾಂಶದಲ್ಲಿ ಶೇ.3.34 ಕುಸಿತ ಕಂಡಿದೆ. ಎಂದಿನಂತೆ ಈ ವರ್ಷ ಕೂಡ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಫಲಿತಾಂಶ ಬಿಡುಗಡೆ ಮಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಮಾತನಾಡಿ, ಗುಣಮಟ್ಟದ ಫಲಿತಾಂಶ ನೀಡುವ ಉದ್ದೇಶದಿಂದ ಈ ಬಾರಿ ಕೃಪಾಂಕ ನೀಡಿಲ್ಲ. ಕಲಾ ವಿಭಾಗದಲ್ಲಿ ಉತ್ತೀರ್ಣರಾದವರ ಸಂಖ್ಯೆ ಕಡಿಮೆ ಇರುವುದು ಫಲಿತಾಂಶ ಕುಸಿತಕ್ಕೆ ಕಾರಣವಾಗಿದೆ. ಗಣಿತ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದ ರಸಾಯನ ಶಾಸ್ತ್ರಕ್ಕೆ ಯಾವುದೇ ಕೃಪಾಂಕ ನೀಡದಿದ್ದರೂ ಕ್ರಮವಾಗಿ ಶೇ.80.89 ಹಾಗೂ ಶೇ.83.31 ಫಲಿತಾಂಶ ಬಂದಿದೆ. ಪಠ್ಯೇತರ ವಿಷಯದಿಂದ ಪ್ರಶ್ನೆ ಆಯ್ಕೆ ಮಾಡಿ ನೀಡಲಾಗಿತ್ತು. ಗಣಿತ ಪ್ರಶ್ನೆಪತ್ರಿಕೆಗೆ ಸಂಬಂಧಿಸಿದಂತೆ ಇಲಾಖೆ, ಪ್ರತ್ಯೇಕ ಸಮಿತಿ ರಚನೆ ಮಾಡಿ ವರದಿ ಪಡೆದು ಕೃಪಾಂಕ ನೀಡಲು ಯಾವುದೇ ಆಸ್ಪದವಿಲ್ಲ ಎಂದು ತಿಳಿಸಿದ ನಂತರವೇ ಫಲಿತಾಂಶ ಪ್ರಕಟಿಸಿದ್ದೇವೆ ಎಂದರು. ಈ ವರ್ಷ 6,36,368 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 3,33,278 ಹೊಸ, 7,273 ಖಾಸಗಿ ಮತ್ತು ಪುನರಾವರ್ತಿತ 23,462 ಸೇರಿ 3,64,013 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ.65.02 ಹೊಸ ವಿದ್ಯಾರ್ಥಿಗಳು, ಶೇ.23.27 ಖಾಸಗಿ, ಶೇ.25.35 ಪುನರಾವರ್ತಿತ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ದಕ್ಷಿಣಕನ್ನಡ ಫಸ್ಟ್, ಯಾದಗಿರಿ ಲಾಸ್ಟ್
ಕಳೆದ ವರ್ಷದಂತೆ ಈ ವರ್ಷವೂ ದಕ್ಷಿಣಕನ್ನಡ ಜಿಲ್ಲೆ ಶೇ.90.48 ಫಲಿತಾಂಶದ ಗಳಿಸಿ ಮೊದಲ ಸ್ಥಾನದಲ್ಲಿದ್ದರೆ, ಉಡುಪಿ(ಶೇ.90.35) ಹಾಗೂ ಕೊಡುಗು (ಶೇ.79.35) ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿವೆ. ಈ ಬಾರಿಯೂ ಹೈಕ ಜಿಲ್ಲೆಗಳು ಕಳಪೆ ಫಲಿತಾಂಶ ಪಡೆದಿದ್ದು, ಚಿತ್ರದುರ್ಗ ಮತ್ತು ಯಾದಗಿರಿ ಕೊನೇ ಸ್ಥಾನದಲ್ಲಿದೆ.
ಸಮಯ ಸಿಕ್ಕಾಗಲೆಲ್ಲ ಆಸಕ್ತಿ ಇಟ್ಟು ಓದುತ್ತಿದ್ದೆ. ಪಠ್ಯದ ಜತೆಗೆ ಕಾದಂಬರಿ ಓದುವುದು, ಟಿ.ವಿ. ವೀಕ್ಷಣೆ ಅಭ್ಯಾಸವೂ ಇತ್ತು. ನನಗೆ ಭೌತಶಾಸ್ತ್ರದಲ್ಲಿ ಆಸಕ್ತಿಯಿದ್ದು, ಮುಂದೆ ಬಿಎಸ್ಸಿ ಅಭ್ಯಾಸ ಮಾಡುತ್ತೇನೆ, ಐಐಎಸ್ಸಿ ಸೇರುವ ಆಸೆಯಿದೆ.
| ರಕ್ಷಿತಾ ವಿಜ್ಞಾನ ವಿಭಾಗದ ಟಾಪರ್
ಜಿಲ್ಲಾವಾರು ಫಲಿತಾಂಶದಲ್ಲಿ ಇಳಿಕೆ
ಕಳೆದ ವರ್ಷಕ್ಕಿಂತ ಈ ವರ್ಷ ಯಾವ ಜಿಲ್ಲೆಯೂ ಹೆಚ್ಚಿನ ಫಲಿತಾಂಶ ದಾಖಲಿಸಿಲ್ಲ. ದಕ್ಷಿಣಕನ್ನಡ ಹಾಗೂ ಉಡುಪಿ ಮಾತ್ರ ಉನ್ನತ ಶ್ರೇಣಿ ಹೊಂದಿದ್ದರೆ, 17 ಜಿಲ್ಲೆಗಳು ಶೇ.60ಕ್ಕಿಂತ ಹೆಚ್ಚಿನ ಫಲಿತಾಂಶ ಹೊಂದಿವೆ. 8 ಜಿಲ್ಲೆಗಳು ದ್ವಿತೀಯ ಶ್ರೇಣಿಯಲ್ಲಿದ್ದರೆ, ಉತ್ತರ ಕರ್ನಾಟಕದ 4 ಜಿಲ್ಲೆಗಳು ಶೇ.50ಕ್ಕಿಂತಲೂ ಕಡಿಮೆ ಫಲಿತಾಂಶ ಗಳಿಸಿವೆ. ಅದಲ್ಲದೇ ಶೂನ್ಯ ಫಲಿತಾಂಶ ಗಳಿಸಿರುವ 91 ಕಾಲೇಜುಗಳಲ್ಲಿ 72 ಕಾಲೇಜುಗಳು ಉತ್ತರ ಕರ್ನಾಟಕದ ಭಾಗಕ್ಕೆ ಸೇರಿರುವುದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಬೇಕಿದೆ.
ಹೆಚ್ಚಿದ ಶೂನ್ಯ ರಿಸಲ್ಟ್ ಕಾಲೇಜುಗಳು
ಈ ವರ್ಷ ಶೇ.100 ಫಲಿತಾಂಶ ಪಡೆದಿರುವ ಕಾಲೇಜುಗಳ ಸಂಖ್ಯೆಯೂ ಕ್ಷೀಣಿಸಿದೆ. ಕಳೆದ ವರ್ಷ 55 ಇದ್ದ ಕಾಲೇಜುಗಳ ಸಂಖ್ಯೆ ಈ ವರ್ಷ 41ಕ್ಕೆ ಇಳಿಕೆಯಾಗಿದೆ. ಶೂನ್ಯ ಪಡೆದ ಕಾಲೇಜುಗಳ ಸಂಖ್ಯೆ 47 ರಿಂದ 91ಕ್ಕೆ ಏರಿಕೆಯಾಗಿದೆ.
ಕನ್ನಡ ಮಾಧ್ಯಮ ಹಿಂದುಳಿಯಿತು
ಫಲಿತಾಂಶದಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಈ ಬಾರಿಯೂ ಹಿಂದುಳಿದಿದ್ದಾರೆ. ಕಳೆದ ವರ್ಷ ಶೇ.66.87 ಆಂಗ್ಲ ಮಾಧ್ಯಮ ಹಾಗೂ ಶೇ.53.41 ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. ಈ ವರ್ಷ ಕನ್ನಡ ಮಾಧ್ಯಮದಲ್ಲಿ ಓದಿದ ಶೇ.46.89 ಹಾಗೂ ಆಂಗ್ಲ ಮಾಧ್ಯಮದಲ್ಲಿ ಶೇ.65.71 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
26 ವಿದ್ಯಾರ್ಥಿಗಳ ಫಲಿತಾಂಶಕ್ಕೆ ತಡೆ
ದ್ವಿತೀಯ ಪಿಯು ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಆರೋಪಿಗಳ ಮಕ್ಕಳ ಫಲಿತಾಂಶ ತಡೆಯಲಾಗಿದೆಯೇ ಎಂಬ ಪ್ರಶ್ನೆಗೆ ಸಚಿವ ಕಿಮ್ಮನೆ ರತ್ನಾಕರ ಉತ್ತರಿಸಿ, ಒಎಂಆರ್ ತಿದ್ದಿರುವುದು ಸೇರಿ ಅನೇಕ ಕಾರಣಗಳಿಂದ ಪ್ರತಿ ವರ್ಷ ಕೆಲವು ವಿದ್ಯಾರ್ಥಿಗಳ ಫಲಿತಾಂಶ ತಡೆ ಹಿಡಿಯಲಾಗುತ್ತದೆ. 2013ರಲ್ಲಿ 3600, 2014ರಲ್ಲಿ 800 ಹಾಗೂ 2015ರಲ್ಲಿ 148 ವಿದ್ಯಾರ್ಥಿಗಳ ಫಲಿತಾಂಶ ತಡೆ ಹಿಡಿಯಲಾಗಿತ್ತು. ಇದೇ ರೀತಿ ಈ ವರ್ಷ 26 ವಿದ್ಯಾರ್ಥಿಗಳ ಫಲಿತಾಂಶ ತಡೆ ಹಿಡಿಯಲಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ ಆರೋಪ ಹೊಂದಿರುವ ಮಕ್ಕಳ ಅಥವಾ ಹೆಚ್ಚು ಫಲಿತಾಂಶ ಪಡೆದಿರುವ 11 ಕಾಲೇಜುಗಳ ವಿದ್ಯಾರ್ಥಿಗಳ ಫಲಿತಾಂಶ ತಡೆ ಹಿಡಿಯುವಂತೆ ತನಿಖಾಧಿಕಾರಿಗಳಿಂದ ಯಾವುದೇ ಪತ್ರದ ಅಥವಾ ಮೌಖಿಕವಾಗಿ ಆದೇಶ ಬಂದಿಲ್ಲ. ಹಾಗಾಗಿ ಈ ರೀತಿಯ ಪ್ರಕರಣದಲ್ಲಿ ಯಾವುದೇ ವಿದ್ಯಾರ್ಥಿಗಳ ಫಲಿತಾಂಶ ತಡೆ ಹಿಡಿದಿಲ್ಲ ಎಂದು ಸ್ಪಷ್ಟಪಡಿಸಿದರು.
ಬರದ ಜಿಲ್ಲೆಯಲ್ಲಿ ಸಹನಾಳ ಶೈಕ್ಷಣಿಕ ಕೃಷಿ
ವಿಜಯಪುರ: ಬರದ ನಾ
ಡೆಂಬ ಹಣೆಪಟ್ಟಿ ಹೊತ್ತಿರುವ ಜಿಲ್ಲೆಯಲ್ಲಿ ಶೈಕ್ಷಣಿಕ ಕೃಷಿ ಮಾಡಿರುವ ಸಹನಾ ಕುಲಕರ್ಣಿ, ವಾಣಿಜ್ಯ ವಿಭಾಗದಲ್ಲಿ 594(ಶೇ.99) ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ದರಬಾರ್ ಪಪೂ ಕಾಲೇಜಿನ ವಿದ್ಯಾರ್ಥಿನಿಯಾದ ಸಹನಾ, ವ್ಯವಹಾರ ಅಧ್ಯಯನ, ಸಂಖ್ಯಾ ಶಾಸ್ತ್ರ, ಗಣಕ ವಿಜ್ಞಾನ ಹಾಗೂ ಸಂಸ್ಕೃತದಲ್ಲಿ 100ಕ್ಕೆ 100, ಅರ್ಥಶಾಸ್ತ್ರದಲ್ಲಿ 99 ಮತ್ತು ಇಂಗ್ಲಿಷ್ನಲ್ಲಿ 95 ಅಂಕ ಗಳಿಸಿದ್ದಾರೆ. ಮಧ್ಯಮ ಕುಟುಂಬದ ಈಕೆಯ ತಂದೆ ಗುರುರಾಜ ಅವರು ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದು, ತಾಯಿ ಗೃಹಿಣಿ. ಮಗಳ ಓದಿಗಾಗಿ ಕುಟುಂಬ ಸದಸ್ಯರು ಟಿವಿ ನೋಡುವುದನ್ನೇ ಬಿಟ್ಟಿದ್ದು, ಯಾವುದೇ ಮನೆಗೆಲಸ ವಹಿಸದೆ ಆಕೆಯ ಏಳಿಗೆಗಾಗಿ ನಿರಂತರ ಶ್ರಮಿಸುತ್ತಿದ್ದಾರೆ. ಕ್ರೀಡೆ, ಸಾಹಿತ್ಯ, ರಸಪ್ರಶ್ನೆ ಸೇರಿ ವಿವಿಧ ಹವ್ಯಾಸಗಳನ್ನು ರೂಢಿಸಿಕೊಂಡಿರುವ ಸಹನಾ ಬಾಲ್ಯದಿಂದಲೇ ಸಿಎ ಆಗುವ ಕನಸು ಕಟ್ಟಿಕೊಂಡಿದ್ದಾರೆ. ‘ಫಲಿತಾಂಶಕ್ಕಾಗಿ ಹೆಚ್ಚಿನ ಪರಿಶ್ರಮವೇನೂ ವಹಿಸಿಲ್ಲ. ಬದಲಾಗಿ ಇಷ್ಟ ಪಟ್ಟು ಓದಿದೆ. ಓದಿದ್ದನ್ನು ಮನನ ಮಾಡಿಕೊಂಡೇ. ಪ್ರತೀ ಆಂತರಿಕ ಪರೀಕ್ಷೆಯಲ್ಲಿ ಅಂಕಗಳನ್ನು ಓರೆಗಲ್ಲಿಗೆ ಹಚ್ಚಿ ನೋಡಿದೆ. ಎಲ್ಲಿ ಹಾಗೂ ಯಾವ ಉತ್ತರಕ್ಕೆ ಏಕೆ ಅಂಕ ಕಡಿತಗೊಳಸಿದ್ದಾರೆ ಎಂಬುದನ್ನು ಉಪನ್ಯಾಸಕರನ್ನೇ ಕೇಳಿ ತಿಳಿದುಕೊಂಡೆ. ಬೆಳಗಿನ ಜಾವದ ಓದು ಸಾಕಷ್ಟು ಸಹಾಯಕ್ಕೆ ಬಂತು’ ಎಂದು ಸಹನಾ ವಿಜಯವಾಣಿಯೊಂದಿಗೆ ಸಂತಸ ಹಂಚಿಕೊಂಡರು.
ವಾಣಿಜ್ಯ ವಿಭಾಗದ ಬಗ್ಗೆ ಕೀಳರಿಮೆ ಬೇಡ. ಇದರಲ್ಲೂ ಶ್ರೇಷ್ಠ ಸಾಧನೆ ಮಾಡಬಹುದು. ಸಾಕಷ್ಟು ಉದ್ಯೋಗಾವಕಾಶವಿದೆ. ಸತತ ಪರಿಶ್ರಮದಿಂದ ಅಭ್ಯಾಸ ಮಾಡಿದರೆ ಯಾವುದೇ ಕ್ಷೇತ್ರವಿದ್ದರೂ ಯಶಸ್ಸು ಸಾಧ್ಯ.
| ಸಹನಾ ಕುಲಕರ್ಣಿ
ಕಾಡಿನ ಕುಸುಮಗಳ ಸಾಧನೆ
ಮೈಸೂರು: ಇಂಗ್ಲಿಷ್ ಗಂಧ ಗಾಳಿಯೇ ಗೊತ್ತಿಲ್ಲದೆ ಕಾಡಿನಿಂದ ನಾಡಿಗೆ ಬಂದ ‘ವನವಾಸಿ ಬಾಲೆಯರಿಬ್ಬರು’ ಪಿಯುನಲ್ಲಿ ಉತ್ತಮ ಅಂಕದೊಂದಿಗೆ ಉತ್ತೀರ್ಣರಾಗುವ ಮೂಲಕ ಸಾಧನೆ ಮಾಡಿದ್ದಾರೆ. ನಗರದ ವಿಜಯವಿಠಲ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಕಾಡಂಚಿನ ಪ್ರದೇಶವಾದ ‘ಬಂಗನೆ’ ಕುಗ್ರಾಮದ ಪೂರ್ಣಿಮಾ ದಾಮೋದರ್ ಮರಾಠಿ ವಿಜ್ಞಾನದಲ್ಲಿ ಶೇ.72.83 ಅಂಕ ಪಡೆದಿದ್ದಾರೆ. ಲಕ್ಷ್ಮೀಪುರಂನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಹರಿಹರ ಬಳಿಯ ಮನಗಾಳದ ಮನಿತಾ ಲಕ್ಕು ಬಾಜಾರಿ ವಾಣಿಜ್ಯ ವಿಭಾಗದಲ್ಲಿ ಶೇ.82 ಅಂಕ ಪಡೆದು, ಅವಕಾಶ ಕೊಟ್ಟರೆ ಕಾಡಿನ ಮಕ್ಕಳೂ ಸಾಧನೆಯಲ್ಲಿ ಕಮ್ಮಿ ಇಲ್ಲ ಎನ್ನುವುದನ್ನು ತೋರಿಸಿದ್ದಾರೆ. ಡಿ.ಎಂ. ದಾಮೋದರ, ಡಿ.ಎಂ.ಸಾವಿತ್ರಿ ದಂಪತಿ ಪುತ್ರಿಯಾದ ಪೂರ್ಣಿಮಾ, ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪಡೆದಿದ್ದಾಳೆ. ಕೂಲಿ ಕೆಲಸ ಮಾಡುವ ತಂದೆ, ತಾಯಿ ಮುಂದೆ ಓದಿಸಲು ಸಾಧ್ಯವಿಲ್ಲ ಎನ್ನುವ ಹಂತದಲ್ಲಿದ್ದಾಗ ಆದಿವಾಸಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ‘ವನವಾಸಿ ಕಲ್ಯಾಣ ಆಶ್ರಮ’ದ ಶಕ್ತಿಕೀರ್ತಿ ಹಾಗೂ ವಿಜಯವಿಠಲ ವಿದ್ಯಾಸಂಸ್ಥೆ ನೆರವು ನೀಡಿತು. ಮೈಸೂರಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿ ಈ ಸಾಧನೆ ಮಾಡಿದ್ದಾರೆ.
ಆರೋಪಿಗಳ ಮಕ್ಕಳು ಅತ್ಯುನ್ನತ ಶ್ರೇಣಿಯಲ್ಲಿ ಪಾಸ್
ಬೆಂಗಳೂರು: ದ್ವಿತೀಯ ಪಿಯು ಪ್ರಶ್ನೆಪತ್ರಿಕೆ ಸೋರಿಕೆ ಆರೋಪಿಗಳ ಮಕ್ಕಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣ ರಾಗಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲರ ಆಪ್ತ ಕಾರ್ಯದರ್ಶಿಯಾಗಿದ್ದ ಓಬಳರಾಜು ಅವರ ಮಗ ಬಿ.ಒ.ಗೌರವ್ ವಿಜ್ಞಾನ ವಿಭಾಗದಲ್ಲಿ ಶೇ.92 ಅಂಕ ಗಳಿಸಿದರೆ, ಪಿಡಬ್ಲ್ಯುಡಿ ಇಲಾಖೆ ಕಚೇರಿ ವ್ಯವಸ್ಥಾಪಕ ರುದ್ರಪ್ಪ ಅವರ ಪುತ್ರಿ ಉಷಾ ಶೇ.89 ಅಂಕ ಗಳಿಸುವ ಮೂಲಕ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
28ಕ್ಕೆ ಸಿಇಟಿ ಫಲಿತಾಂಶ
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಾಗೂ ಕಾಮೆಡ್-ಕೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶ ಮೇ 28ರಂದು ಪ್ರಕಟವಾಗಲಿದೆ. ಸಿಇಟಿ ಫಲಿತಾಂಶವನ್ನು ಬೆಳಗ್ಗೆ 10 ಗಂಟೆಗೆ ಉನ್ನತ ಶಿಕ್ಷಣ ಸಚಿವರು ಪ್ರಕಟಿಸಲಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ಸೈಟ್(ಡಿಡಿಡಿ.kಛಿಚ.kಚ್ಟ.ಜ್ಚಿ.ಜ್ಞಿ)ನಲ್ಲಿ ಫಲಿತಾಂಶ ದೊರೆಯಲಿದೆ. ಸಂಜೆ 6 ಗಂಟೆ ಬಳಿಕ ಕಾಮೆಡ್-ಕೆ ವೆಬ್ಸೈಟ್(ಡಿಡಿಡಿ.ಟಞಛಿಛk.ಟ್ಟಜ)ನಲ್ಲಿ ಫಲಿತಾಂಶ ಸಿಗುತ್ತದೆ.
ರಮ್ಯಾಗೆ ಉಪನ್ಯಾಸಕಿ ಆಗುವಾಸೆ
ಮಂಗಳೂರು: ನನ್ನ ನಿರೀಕ್ಷೆಯಂತೆಯೇ ಅಂಕಗಳು ಬಂದಿವೆ. ಇದರಿಂದ ಖುಷಿಯಾಗಿದೆ. ಮುಂದಕ್ಕೆ ತಂದೆಯಂತೆ ಉಪನ್ಯಾಸ ವೃತ್ತಿ ಕೈಗೊಳ್ಳುವುದು ನನ್ನ ಗುರಿ. ‘ವಿಜಯವಾಣಿ’ ವಿದ್ಯಾರ್ಥಿಮಿತ್ರವನ್ನೂ ನಾನು ಓದುತ್ತಿದ್ದುದು ಹೆಚ್ಚು ಅಂಕ ಗಳಿಸಲು ಸಹಕಾರಿಯಾಯಿತು. ಇದು ಪಿಯು ವಿಜ್ಞಾನ ವಿಭಾಗದಲ್ಲಿ 590ದೊಂದಿಗೆ ರಾಜ್ಯದಲ್ಲೇ 7ನೇ ಸ್ಥಾನ ಪಡೆದ ಸುರತ್ಕಲ್ ಗೋವಿಂದದಾಸ ಪದವಿಪೂರ್ವ ಕಾಲೇಜಿನ ರಮ್ಯಾ ಅವರ ಪ್ರತಿಕ್ರಿಯೆ. ಓದಲು ನಿರ್ದಿಷ್ಟ ಸಮಯ ಮೀಸಲಿಟ್ಟು ನಾನು ಅಧ್ಯಯನ ನಡೆಸಲಿಲ್ಲ. ಮನಸ್ಸಿಗೆ ಬಂದಾಗ ಓದುತ್ತಿದ್ದೆ. ಫಲಿತಾಂಶ ಬಂದ ಬಳಿಕ ನನ್ನ ಶ್ರಮ ಸಾರ್ಥವಾಯಿತು ಎಂಬ ಭಾವನೆ ಮೂಡಿದೆ. ನನ್ನ ಯಶಸ್ಸಿಗೆ ತಂದೆ ತಾಯಿ, ಅಕ್ಕ, ಉಪನ್ಯಾಸಕರು ಕಾರಣ ಎಂದು ರಮ್ಯಾ ಸಂತಸ ಹಂಚಿಕೊಂಡರು.
ಛಲಗಾರ್ತಿಗೆ 541 ಅಂಕ
ರಾಣೆಬೆನ್ನೂರ: ತಮ್ಮನ್ನು ಬಿಟ್ಟು ಹೋದ ತಂದೆಗೆ ಜಿಗುಪ್ಸೆಯಾಗಬೇಕು ಎನ್ನುವ ಛಲದಿಂದ ಓದುತ್ತಿರುವ ಮಾರುತಿ ನಗರದ ಸರ್ಕಾರಿ ಪದವಿಪೂರ್ವ ಕಾಲೇಜ್ನ ವಿದ್ಯಾರ್ಥಿನಿ ಸುಷ್ಮಾ 541 ಅಂಕಗಳಿಸುವ ಮೂಲಕ ಯಶಸ್ಸು ಕಂಡಿದ್ದಾರೆ. ಮೂಲತಃ ಸುಣಕಲ್ಲಬಿದರಿ ಗ್ರಾಮದ ಸುಷ್ಮಾ 1ನೇ ತರಗತಿ ಇದ್ದಾಗಲೇ ತಂದೆ ಮತ್ತೊಂದು ಮದುವೆಯಾಗಿ ಬೇರೆಡೆ ವಾಸವಾಗಿದ್ದಾರೆ. ತಾಯಿ ಚನ್ನಮ್ಮ ಕಡುಬಡತನದ ನಡುವೆಯೇ ಉನ್ನತ ಶಿಕ್ಷಣ ಕೊಡಿಸಿದ್ದಾರೆ.
ನಿತ್ಯವೂ ವಿಜಯವಾಣಿ ವಿದ್ಯಾರ್ಥಿಮಿತ್ರ ಓದುತ್ತಿದ್ದೆ. ಇದರಿಂದ ಪರೀಕ್ಷೆ ಸಮಯದಲ್ಲಿ ಉತ್ತರಿಸಲು ಅನುಕೂಲ ಆಯಿತು. ನಮ್ಮ ಮಾವ ಪತ್ರಿಕೆ ತಂದು ಕೊಡುತ್ತಿದ್ದರು. ಅವರಿಗೂ ಹಾಗೂ ವಿಜಯವಾಣಿಗೂ ಕೃತಜ್ಞತೆಗಳು. ಮುಂದೆ ಸಿಎ ಮಾಡಬೇಕೆಂಬ ಗುರಿ ಇದೆ.
| ಸುಷ್ಮಾ ವಿದ್ಯಾರ್ಥಿನಿ
ಮರು ಎಣಿಕೆ ಉಚಿತ
ಇದೇ ಮೊದಲ ಬಾರಿಗೆ ಉಚಿತವಾಗಿ ಅಂಕಗಳ ಮರು ಎಣಿಕೆ ಮಾಡಲಾಗುತ್ತಿದೆ. ಆದರೆ ಸ್ಕ್ಯಾ
ನಿಂಗ್ ಪ್ರತಿಗೆ 400 ರೂ. ಹಾಗೂ ಮರು ಮೌಲ್ಯಮಾಪನದ ಪ್ರತಿ ವಿಷಯಕ್ಕೆ 1260 ರೂ. ನಿಗದಿಪಡಿಸಲಾಗಿದೆ. ಮರುಮೌಲ್ಯಮಾಪನ ಹಾಗೂ ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಜೂ.7 ಕೊನೆಯ ದಿನವಾಗಿದೆ. ಸ್ಕ್ಯಾನಿಂಗ್ ಪ್ರತಿ ಪಡೆಯಲು ಮೇ 30ರೊಳಗೆ ಆನ್ಲೈನ್ ಅರ್ಜಿ ಸಲ್ಲಿಸಬೇಕು. ಮರು ಎಣಿಕೆ ಹಾಗೂ ಮರು ಮೌಲ್ಯಮಾಪನದ ಫಲಿತಾಂಶವನ್ನು ಆಯಾ ದಿನವೇ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುತ್ತದೆ.
ಸ್ಕ್ಯಾನ್ ಕಾಪಿ ಪಡೆಯುವುದು ಹೇಗೆ?: ವಿದ್ಯಾರ್ಥಿಗಳು ಪಿಯು ವೆಬ್ಸೈಟ್ http://www.pue.kar.nic.in ಗೆ ಭೇಟಿ ನೀಡಿ ಅಲ್ಲಿ ಸ್ಕ್ಯಾನ್ ಪ್ರತಿಗೆ ಎಂದು ಬರುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಸ್ಟೂಡೆಂಟ್ ಮೆನು, ಅಲ್ಲಿ ಆನ್ಲೈನ್ ಅಪ್ಲಿಕೇಷನ್ ಫಾರ್ ಸ್ಕ್ಯಾನ್ ಕಾಪಿ, ಮರು ಮೌಲ್ಯಮಾಪನ, ಮರು ಏಣಿಕೆ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಪ್ರತ್ಯೇಕ ಅರ್ಜಿ ತೆರೆದುಕೊಳ್ಳಲಿದ್ದು, ಅಲ್ಲಿ ಕೇಳಿರುವ ಮಾಹಿತಿಯನ್ನು ಭರ್ತಿ ಮಾಡಬೇಕು. ಯಾವ ವಿಷಯದ ಛಾಯಾಪ್ರತಿ ಬೇಕು ಎಂಬುದನ್ನು ನಮೂದಿಸಿ ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ವಿಳಾಸ ಭರ್ತಿ ಮಾಡಿ ‘ಸಲ್ಲಿಸು’ ಎಂಬ ಬಟನ್ ಕ್ಲಿಕ್ ಮಾಡಬೇಕು. ಅರ್ಜಿ ಸಲ್ಲಿಸಿದ ನಂತರ ಹಣ ಪಾವತಿಸಲು ಲಭ್ಯವಿರುವ ಬ್ಯಾಂಕ್ಗಳ ಪೈಕಿ ಒಂದನ್ನು ನೀವು ಆಯ್ಕೆ ಮಾಡಬೇಕು. ನಂತರ ಚಲನ್ ಜನರೆಟ್ ಬಟನ್ ಕ್ಲಿಕ್ ಮಾಡಿದಲ್ಲಿ ಪ್ರತ್ಯೇಕ ಚಲನ್ ತೆರೆದುಕೊಳ್ಳುತ್ತದೆ. ಇದನ್ನು ಮುದ್ರಿಸಿಕೊಂಡು ಹಣ ಪಾವತಿಸಬೇಕು. ಹಣ ಪಾವತಿಯಾಗಿರುವ ಬಗ್ಗೆ ನೀವು ನೀಡಿರುವ ಮೊಬೈಲ್ ಸಂಖ್ಯೆಗೆ ಸಂದೇಶ ರವಾನೆಯಾಗಲಿದೆ. ಆನಂತರ ಮತ್ತೆ ಪಿಯು ವೆಬ್ಸೈಟ್ಗೆ ಭೇಟಿ ನೀಡಿ ಅಗತ್ಯ ಮಾಹಿತಿಯನ್ನು ನೀಡಿ ನಿಮ್ಮ ಮೊಬೈಲ್ ಬರುವ ಒಟಿಪಿ ಸಂಖ್ಯೆಯನ್ನು ನಮೂದಿಸಿ ಸಲ್ಲಿಸುವ ಬಟನ್ ಕ್ಲಿಕ್ ಮಾಡಬೇಕು. ಆನಂತರ ಸ್ಕ್ಯಾನಿಂಗ್ ಪ್ರತಿ ಡೌನ್ಲೋಡ್ ಆಗಲಿದೆ. ಇದೇ ರೀತಿಯಲ್ಲೇ ಮರು ಮೌಲ್ಯಮಾಪನ, ಮರು ಎಣಿಕೆಗೂ ಅರ್ಜಿ ಸಲ್ಲಿಸಬೇಕು.
ಜು.1ರಿಂದ ಪೂರಕ ಪರೀಕ್ಷೆ
ಹೆಚ್ಚಿನ ಅಂಕ ಬಯಸಿರುವ ಅಥವಾ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಜು.1ರಿಂದ ಪೂರಕ ಪರೀಕ್ಷೆ ನಡೆಯಲಿದೆ. ಒಂದು ವಿಷಯಕ್ಕೆ 101 ರೂ., 2 ವಿಷಯಕ್ಕೆ 201 ರೂ., 3 ಅಥವಾ ಹೆಚ್ಚಿನ ವಿಷಯಕ್ಕೆ 302 ರೂ., ಅಂಕಪಟ್ಟಿ ಶುಲ್ಕ 36 ರೂ. ಪಾವತಿಸಬೇಕು. ಅರ್ಜಿ ಸಲ್ಲಿಸಲು ಜೂ.6 ಕೊನೇ ದಿನವಾಗಿದೆ. ಫಲಿತಾಂಶದಲ್ಲಿ ಯಾವುದೇ ಸಮಸ್ಯೆಯಿದ್ದರೆ ಪೂರಕ ದಾಖಲೆಗಳೊಂದಿಗೆ ಆಯಾ ಕಾಲೇಜು ಪ್ರಾಚಾರ್ಯರು ಇಲಾಖೆಗೆ ದೂರು ಸಲ್ಲಿಸಬೇಕು.
ಅನಿತಾಗೆ ನೆರವಾಯ್ತು ವಿಜಯವಾಣಿ
ಬಳ್ಳಾರಿ: ಪಾಲಕರ ಬಡತನ ಶೈಕ್ಷಣಿಕ ಶ್ರೀಮಂತಿಕೆಗೆ ಅಡ್ಡಿಯಾಗಲಿಲ್ಲ. ಅಪ್ಪ ರಸ್ತೆಬದಿ ಬಾಳೆಹಣ್ಣು ಮಾರಾಟ ಮಾಡಿದರೆ, ಅಮ್ಮ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಇದನ್ನು ನೋಡಿಯೇ ಜೀವನದಲ್ಲಿ ಏನಾದರೂ ಸಾಧಿಸಬೇಕೆಂದುಕೊಂಡ ಕೂಡ್ಲಿಗಿ ತಾಲೂಕು ಕೊಟ್ಟೂರಿನ ಇಂದು ಪಿಯು ಕಾಲೇಜಿನ ವಿದ್ಯಾರ್ಥಿನಿ ಪಿ.ಅನಿತಾ, ಪಿಯು ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆದಿದ್ದಾರೆ. ಒಟ್ಟು 585 ಅಂಕ ಪಡೆದಿರುವ ಅನಿತಾ(ಕನ್ನಡ 97, ಸಂಸ್ಕೃತ 97, ಐಚ್ಛಿಕ ಕನ್ನಡ 99, ರಾಜ್ಯಶಾಸ್ತ್ರ 96, ಇತಿಹಾಸ 97, ಶಿಕ್ಷಣ 99), ‘ವಿಜಯವಾಣಿ’ ವಿದ್ಯಾರ್ಥಿಮಿತ್ರನ ನಿರಂತರ ಅಧ್ಯಯನ ಕೂಡ ನನ್ನ ಈ ಸಾಧನೆಗೆ ನೆರವಾಯಿತು ಎನ್ನುತ್ತಾರೆ. ರಾಜ್ಯಕ್ಕೆ ಮೊದಲ ರ್ಯಾಂಕ್ ಬರುವ ನಿರೀಕ್ಷೆ ಇರಲಿಲ್ಲ. 2 ಅಥವಾ 3ನೇ ರ್ಯಾಂಕ್ ಬರಬಹುದು ಎಂದುಕೊಂಡಿದ್ದೆ. ನಿತ್ಯ 6-8 ತಾಸು ವಿದ್ಯಾಭ್ಯಾಸ ಮಾಡುತ್ತಿದ್ದೆ. ಕಳೆದ ವರ್ಷ ಇದೇ ಕಾಲೇಜಿನಲ್ಲಿ ಓದಿ ಮೊದಲ ರ್ಯಾಂಕ್ ಪಡೆದಿದ್ದ ನೇತ್ರಾವತಿ ನಮ್ಮ ಅತ್ತೆ ಮಗಳು. ಆಕೆ ನೀಡಿದ ಸಲಹೆಗಳು ಹೆಚ್ಚು ಅಂಕ ಗಳಿಸಲು ಸಹಕಾರಿಯಾದವು. ಪಾಲಕರ ಬಡತನವೇ ನನ್ನ ಈ ಸಾಧನೆಗೆ ಪ್ರೇರಣೆಯಾಗಿದೆ. ಪಾಲಕರ ಪೋ›ತ್ಸಾಹ ಹಾಗೂ ಸಹೋದರರ ಶೈಕ್ಷಣಿಕ ಏಳ್ಗೆ ನಾನು ರ್ಯಾಂಕ್ ಪಡೆಯಲು ಕಾರಣವಾಗಿದೆ ಎಂದು ಅನಿತಾ ಸಂತಸ ಹಂಚಿಕೊಂಡರು.
ದತ್ತು ಪಡೆಯಲು ನಿರ್ಧಾರ
8ನೇ ತರಗತಿಯಿಂದಲೇ ಪಿ.ಅನಿತಾ ಇಂದು ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಸಾಮಾನ್ಯ ವಿದ್ಯಾರ್ಥಿನಿಯಾಗಿದ್ದ ಈಕೆ, ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದರು. ಪಿಯುನಲ್ಲಿ ಕಠಿಣ ಪರಿಶ್ರಮದಿಂದ ಮೊದಲ ರ್ಯಾಂಕ್ ಬಂದಿದ್ದಾಳೆ. ಬಡತನದ ಕುಟುಂಬ ಎಂಬ ಕಾರಣಕ್ಕೆ ಅನಿತಾರ ಶೈಕ್ಷಣಿಕ ಶುಲ್ಕದಲ್ಲಿ ಮೊದಲಿನಿಂದ ರಿಯಾಯತಿ ಕೊಡುತ್ತ ಬರಲಾಗಿದೆ. ಇದೀಗ ರ್ಯಾಂಕ್ ಬಂದಿರುವ ಆಕೆಗೆ ಮುಂದಿನ ಶಿಕ್ಷಣ ಕೊಡಿಸುತ್ತೇವೆ. ಕಾಲೇಜಿನ ಆಡಳಿತ ಮಂಡಳಿ ಇದಕ್ಕೆ ಒಪ್ಪಿಗೆ ನೀಡಿದೆ ಎಂದು ಕಾಲೇಜಿನ ಪ್ರಾಚಾರ್ಯ ಎಚ್.ಎನ್.ವೀರಭದ್ರಪ್ಪ ತಿಳಿಸಿದರು.
ನಾನು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಿ ಅಪ್ಪ-ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಆಸೆ ಇದೆ. ಕೊಟ್ಟೂರಿನಲ್ಲೇ ಬಿಎ ಮಾಡಬೇಕು ಎಂದುಕೊಂಡಿದ್ದೇನೆ. ಕೆಎಎಸ್ ಅಧಿಕಾರಿಯಾಗಿ ರೈತರಿಗೆ ನೆರವಾಗಬೇಕೆಂಬ ಅಭಿಲಾಷೆ ಇದೆ. ವಿಜಯವಾಣಿ ವಿದ್ಯಾರ್ಥಿಮಿತ್ರ ಕೂಡ ನನ್ನ ಈ ಸಾಧನೆಗೆ ನೆರವಾಗಿದ್ದು, ‘ಮಿತ್ರ’ನಿಗೆ ಅಭಿನಂದನೆ ಸಲ್ಲಿಸುತ್ತೇನೆ.
| ಪಿ.ಅನಿತಾ
ಗದ್ಗದಿತರಾದ ತಂದೆ
ಕೊಟ್ಟೂರಿನಲ್ಲಿ ಬುಧವಾರ ಎಂದಿನಂತೆ ತಳ್ಳುಬಂಡಿಯಲ್ಲಿ ಬಾಳೆಹಣ್ಣು ಮಾರಾಟ ಮಾಡಲು ಹೋಗಿದ್ದ ತಂದೆ ಬಸ್ಸಪ್ಪಗೆ ಮಗಳು ಮೊದಲ ರ್ಯಾಂಕ್ ಬಂದಿದ್ದಾಳೆ ಎಂಬ ಸುದ್ದಿ ತಿಳಿದ ಕೂಡಲೇ ಮನೆಗೆ ವಾಪಸಾದರು. ಪತ್ನಿ ಹಾಗೂ ಇನ್ನಿಬ್ಬರು ಮಕ್ಕಳೊಂದಿಗೆ ಸೇರಿ ಮಗಳಿಗೆ ಸಿಹಿ ತಿನ್ನಿಸಿ ಸಂತಸ ವ್ಯಕ್ತಪಡಿಸಿದರು. ಬಡತನದಲ್ಲಿ ಮಕ್ಕಳು ಉತ್ತಮ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಆದರೆ, ಮುಂದೆ ಉತ್ತಮ ಶಿಕ್ಷಣ ಕೊಡಿಸುವ ಆರ್ಥಿಕ ಶಕ್ತಿ ನಮಗಿಲ್ಲ ಎಂದು ಒಂದು ಕ್ಷಣ ಗದ್ಗದಿತರಾದರು. ಮುಂದೆ ಓದಿಸುವುದಿಲ್ಲ ಎಂದು ಹೇಳಿ ಬಳಿಕ ಸಾವರಿಸಿಕೊಂಡು, ಕೊಟ್ಟೂರಿನಲ್ಲೇ ವಿದ್ಯಾಭ್ಯಾಸ ಮಾಡಿಸುವುದಾಗಿ ಹೇಳಿದರು.
2ನೇ ಬಾರಿಗೆ ಫಸ್ಟ್
ಕೊಟ್ಟೂರಿನ ಇಂದು ಪಿಯು ಕಾಲೇಜು ಸತತ 2ನೇ ಬಾರಿಗೆ ಮೊದಲ ರ್ಯಾಂಕ್ ಗಳಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ ವರ್ಷ ಇದೇ ಕಾಲೇಜಿನ ಎಂ.ಬಿ.ನೇತ್ರಾವತಿ ಪಿಯು ಕಲಾ ವಿಭಾಗದಲ್ಲಿ ಮೊದಲ ರ್ಯಾಂಕ್ ಹಾಗೂ ಜೆ.ಮಾಲಿನಿ 2ನೇ ರ್ಯಾಂಕ್ ಪಡೆದಿದ್ದರು.
ವಿಜ್ಞಾನದಲ್ಲಿ ಕೆಮಿಸ್ಟ್ರಿಯೇ ಬೆಸ್ಟ್
ಬೆಂಗಳೂರು: ಎರಡು ಬಾರಿ ಪ್ರಶ್ನೆ
ಪತ್ರಿಕೆ ಸೋರಿಕೆಯಾಗಿ ಮರುಪರೀಕ್ಷೆಗೆ ಕಾರಣವಾದ ರಸಾಯನ ಶಾಸ್ತ್ರದಲ್ಲೇ ವಿದ್ಯಾರ್ಥಿಗಳು ಹೆಚ್ಚು ಪ್ರಮಾಣದಲ್ಲಿ ಉತ್ತೀರ್ಣರಾಗಿದ್ದಾರೆ. ಪರೀಕ್ಷೆಗೆ ಹಾಜರಾಗಿದ್ದ 1,70,525 ವಿದ್ಯಾರ್ಥಿಗಳಲ್ಲಿ 1,42,066 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ರಸಾಯನಶಾಸ್ತ್ರದಲ್ಲಿ ಶೇ.83.31 ಫಲಿತಾಂಶ ದಾಖಲಾಗಿದೆ. ಭೌತಶಾಸ್ತ್ರದಲ್ಲಿ ಶೇ.80.72, ಗಣಿತದಲ್ಲಿ ಶೇ.80.69 ಹಾಗೂ ಜೀವಶಾಸ್ತ್ರದಲ್ಲಿ ಶೇ.77.58 ವಿದ್ಯಾರ್ಥಿಗಳು ತೇರ್ಗಡೆಹೊಂದಿದ್ದಾರೆ. ಮತ್ತೊಂದು ಆಸಕ್ತಿಕರ ಅಂಶವೆಂದರೆ ಗಣಿತ ಪರೀಕ್ಷೆಗೆ 1,76,581 ವಿದ್ಯಾರ್ಥಿಗಳು ಹಾಜರಾಗಿದ್ದರೆ, ರಸಾಯನಶಾಸ್ತ್ರ ಪರೀಕ್ಷೆಗೆ 6056 ಕಡಿಮೆ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಮರುಪರೀಕ್ಷೆಯ ಗೊಂದಲವೇ ಇದಕ್ಕೆ ಕಾರಣವಾಯಿತೇ ಎನ್ನುವುದು ಇಲಾಖೆ ವಿಚಾರಣೆಯಿಂದ ಹೊರಬರಬೇಕಿದೆ. ಶೇಕಡಾವಾರು ಬದಲು ಅಂಕಿಯನ್ನು ಮಾತ್ರ ಪರಿಗಣಿಸಿದರೆ ರಸಾಯನ ಶಾಸ್ತ್ರಕ್ಕಿಂತ 764 ಹೆಚ್ಚು ವಿದ್ಯಾರ್ಥಿಗಳು ಗಣಿತದಲ್ಲಿ ಉತ್ತೀರ್ಣರಾಗಿದ್ದಾರೆ.
ಬಾಲ್ಯವಿವಾಹ ಧಿಕ್ಕರಿಸಿ ಬಂದವಳಿಗೆ ಫಸ್ಟ್ ಕ್ಲಾಸ್!
ಬೆಳಗಾವಿ: ನಾಲ್ಕರ ಪ್ರಾಯದಲ್ಲೇ ಬಾಲ್ಯವಿವಾಹ. ಪ್ರಾಯಕ್ಕೆ ಬರುತ್ತಲೇ ಶಿಕ್ಷಣ ಮೊಟಕುಗೊಳಿಸುವಂತೆ ಪಾಲಕರ ಒತ್ತಡ. ಮನೆಯಿಂದ ಹೊರಹಾಕುವ ಬೆದರಿಕೆ. ಆದರೆ, ಇದ್ಯಾವ ಹೆದರಿಕೆಗಳಿಗೂ ಬಗ್ಗದೇ ಮನೆಯಿಂದ ಹೊರಬಂದು ಮಹಿಳಾ ಪುನರ್ವಸತಿ ಕೇಂದ್ರದಲ್ಲಿ ಆಸರೆ ಪಡೆದ ವಿದ್ಯಾರ್ಥಿನಿಯೊಬ್ಬಳು ಈ ಬಾರಿ ಕಲಾ ವಿಭಾಗದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾಳೆ. ಅಥಣಿ ಮೂಲದ ನಂದಾ ಈಶ್ವರ ಕೋಕಳೆ ಎಂಬುವಳೇ ಈ ಸಾಧಕಿ. ಸದ್ಯ ಬೆಳಗಾವಿಯ ಶಾಹೂ ನಗರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಡೆಯುತ್ತಿರುವ ಸ್ವಾಧಾರ್ ಮಹಿಳಾ ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ವಿದ್ಯಾರ್ಥಿನಿ, ದೂರಶಿಕ್ಷಣದ ಮೂಲಕ ಅಥಣಿ ತಾಲೂಕಿನ ಅಡಹಳ್ಳಿಯ ಸರ್ಕಾರಿ ಕಾಲೇಜಿನಲ್ಲಿ ಓದಿ 364 (ಶೇ. 60.66) ಅಂಕ ಗಳಿಸಿದ್ದಾಳೆ. ಮುಂದೆ ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡಬೇಕೆಂಬ ಆಸೆ ಹೊಂದಿದ್ದಾಳೆ.
ಹಿನ್ನೆಲೆ: 4ನೇ ವಯಸ್ಸಿನಲ್ಲಿರುವಾಗಲೇ ನಂದಾಳನ್ನು ಸಂಬಂಧಿಕರಲ್ಲೇ ಮೂಕ ವ್ಯಕ್ತಿಯೊಬ್ಬರಿಗೆ ವಿವಾಹ ಮಾಡಿಕೊಡಲಾಗಿತ್ತು. ಅದು ಬಾಲಕಿಗೆ ತಿಳಿವಳಿಕೆ ಇಲ್ಲದ ವಯಸ್ಸು. ಆದರೆ, ಎಸ್ಸೆಸ್ಸೆಲ್ಸಿ ಮುಗಿಸುವ ಹೊತ್ತಿಗೆ ಪಾಲಕರು ಶಿಕ್ಷಣ ಮೊಟಕುಗೊಳಿಸಿ ವಿವಾಹವಾದ ವ್ಯಕ್ತಿಯೊಂದಿಗೆ ಸಂಸಾರ ನಡೆಸುವಂತೆ ಒತ್ತಡ ಹೇರಿದರು. ನಂದಾ ಅದಕ್ಕೆ ಒಪ್ಪಲಿಲ್ಲ. ತಾನು ಶಿಕ್ಷಣ ಮುಂದುವರಿಸುತ್ತೇನೆ ಎಂದು ಪಟ್ಟು ಹಿಡಿದಳು. ಪಾಲಕರು ಈಕೆಯ ಬೇಡಿಕೆಗೆ ಸ್ಪಂದಿಸದಿದ್ದಾಗ ಅಥಣಿಯ ಮಹಿಳಾ ಸಾಂತ್ವನ ಕೇಂದ್ರದ ನೆರವಿನೊಂದಿಗೆ ಬೆಳಗಾವಿಯ ಕೇಂದ್ರಕ್ಕೆ ಬಂದು ಆಸರೆ ಪಡೆದಿದ್ದಾಳೆ.
ಫಲಿತಾಂಶ ನೋಡಿ ಖುಷಿಯಾಗುತ್ತಿದೆ. ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ಐದಾರು ಗಂಟೆ ಸತತ ಅಭ್ಯಾಸ ಮಾಡುತ್ತಿದ್ದೆ. ಕಾಲೇಜಿನಲ್ಲಿ ಉತ್ತಮವಾಗಿ ಪಾಠ ಮಾಡಿದ್ದರು. ನವೆಂಬರ್ ಒಳಗೆ ಸಿಲಬಸ್ ಮುಗಿಸಿಕೊಟ್ಟಿದ್ದರಿಂದ ಓದಿಕೊಳ್ಳಲು ಸಾಧ್ಯವಾಯಿತು. ಹೆಚ್ಚು ರಿವಿಷನ್ ಮಾಡಿದೆ.
| ದೀಕ್ಷಾ ನಾಯಕ್ 594 ಅಂಕ, ವಾಣಿಜ್ಯ ವಿಭಾಗ
ನಾನು ರಾಜ್ಯಕ್ಕೆ 2ನೇ ಸ್ಥಾನ ಗಳಿಸುತ್ತೇನೆಂದು ನಿರೀಕ್ಷಿಸಿರಲಿಲ್ಲ. ಹೆಚ್ಚು ಅಂಕ ಗಳಿಸಲು ಉಪನ್ಯಾಸಕರು ಹಾಗೂ ನನ್ನ ಪಾಲಕರು ತುಂಬಾ ಸಹಕಾರ ನೀಡಿದ್ದಾರೆ. ಅವರೆಲ್ಲರಿಗೂ ಈ ಸಾಧನೆಯ ಶ್ರೇಯ ಸಲ್ಲಬೇಕು. ನಾನು ಸಮಯವನ್ನು ಹಾಳು ಮಾಡುತ್ತಿರಲಿಲ್ಲ. ನಿಯಮಿತವಾಗಿ ಓದಿದರೆ ಎಲ್ಲರೂ ಹೆಚ್ಚು ಅಂಕ ಗಳಿಸಬಹುದು.
| ತಾನಿಯಾ ಮಾರ್ಥಾ ಥಾಮಸ್ 580 ಅಂಕ, ಕಲಾ ವಿಭಾಗ
ವಿಜ್ಞಾನ ವಿಭಾಗ ಮೊದಲು
ವಾಣಿಜ್ಯ ಹಾಗೂ ಕಲಾ ವಿಭಾಗದ ಹೋಲಿಕೆಯಲ್ಲಿ ಶೇ.66.25 ಉತ್ತೀರ್ಣವಾಗಿರುವ ವಿಜ್ಞಾನ ವಿಭಾಗ ಮೊದಲ ಸ್ಥಾನದಲ್ಲಿದೆ. ಶೇ.64.16ವಿದ್ಯಾರ್ಥಿಗಳು ತೇರ್ಗಡೆಯಾಗಿರುವ ವಾಣಿಜ್ಯ ಹಾಗೂ ಶೇ.42.12 ವಿದ್ಯಾರ್ಥಿಗಳು ತೇರ್ಗಡೆಯಾಗಿರುವ ಕಲಾ ವಿಭಾಗ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ.
ಅನುತ್ತೀರ್ಣಗೊಂಡ ಐವರು ವಿದ್ಯಾರ್ಥಿಗಳು ಆತ್ಮಹತ್ಯೆ
ಬೆಂಗಳೂರು: ಪಿಯು ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಐವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೊಡಿಯಾಲ ಗ್ರಾಮದ ವಂದನಾ(17) ಜೀವಶಾಸ್ತ್ರ ವಿಷಯದಲ್ಲಿ ಅನುತ್ತೀರ್ಣಳಾದ್ದರಿಂದ ಮನನೊಂದು ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ. ಜೆಎಸ್ಎಸ್ ಕಾಲೇಜಿನ ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಚಾಮರಾಜನಗರ ರಾಮಸಮುದ್ರ ಬಡಾವಣೆಯ ಪವಿತ್ರಾ(17), ಕೊಡಗಿನ ಕಾವೇರಿ ಕಾಲೇಜಿನ ಕಡೇಮಾಡ ರಾಜಪ್ಪ (17) ಅರ್ಥಶಾಸ್ತ್ರ ವಿಷಯದಲ್ಲಿ ಫೇಲಾದ್ದರಿಂದ ಹತಾಶೆಗೊಂಡು ನೇಣಿಗೆ ಶರಣಾಗಿದ್ದಾನೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ತಾಲೂಕಿನ ಆರ್ಹಾಳ ಗ್ರಾಮದ ಮಹಾಲಕ್ಷ್ಮಿ ಶಿವನಾಗಯ್ಯಸ್ವಾಮಿ ದಾಸನಾಳ ಮಠ (17), ಮೈಸೂರಿನ ಹೆಬ್ಬಾಳದ ಸಿಂಧು(17) ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೆಳಗಾವಿಯ ಟಿಳಕವಾಡಿಯ ಗಜಾನನ ನಗರದ ಮೇಘಾ ಶಾಂತಪ್ಪ ನರಗೋದಿ, ಬೈಲಹೊಂಗಲದ ಗಜಿಮನಾಳದ ಲಕ್ಷ್ಮಣ್ ದಂಡಾಪುರ, ಹಾಲಗಿಮರಡಿಯ ಲಕ್ಷ್ಮಿ ನಂದಿಹಳ್ಳಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಬೀದರ್ ಜಿಲ್ಲೆ ಅಕ್ಕಮಹಾದೇವಿ ಕಾಲೇಜಿನ ಶೈಲಜಾ, ಯಳಂದೂರು ತಾಲೂಕಿನ ಮಲ್ಲಿಗೆಹಳ್ಳಿಯ ಚಿತ್ರಾ ಆತ್ಮಹತ್ಯೆಗೆ ಯತ್ನಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಧಿ ಪರೀಕ್ಷೆ ಗೆಲ್ಲದ ಫಯಾಜ್
ವಿರಾಜಪೇಟೆ: ಪ್ರವಾಸಕ್ಕೆಂದು ಕುಶಾಲನಗರಕ್ಕೆ ತೆರಳಿ ಮಂಗಳವಾರವಷ್ಟೇ ಕಾವೇರಿ ಹೊಳೆಯಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದ ಮಹಮ್ಮದ್ ಫಯಾಝå್ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾನೆ. ಪಟ್ಟಣದ ನಿಯಾಜ್ ಅಹಮದ್ ಎಂಬುವರ ಪುತ್ರ ಫಯಾಜ್ ವಿರಾಜಪೇಟೆಯ ಸಂತ ಅನ್ನಮ್ಮ ಕಾಲೇಜಿನಲ್ಲಿ ಓದುತ್ತಿದ್ದ. ಈತ ಪರೀಕ್ಷೆಯಲ್ಲಿ 364 ಅಂಕ ಪಡೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಿದ್ದಾನೆ. ಮಂಗಳವಾರ ಸಂಜೆ ಕುಶಾಲನಗರದ ಅಯ್ಯಪ್ಪಸ್ವಾಮಿ ದೇವಸ್ಥಾನ ಸಮೀಪವಿರುವ ನದಿ ಬಳಿ ತೆರಳಿದ್ದಾಗ ಫಯಾಜ್ ಕಾಲುಜಾರಿ ಸಾವಿಗೀಡಾಗಿದ್ದ.
ರಿಜಲ್ಟ್ ಫಸ್ಟ್ ಕ್ಲಾ
ಸ್ ಆದ್ರೂ ಆತ್ಮಹತ್ಯೆ
ಶಿವಮೊಗ್ಗ: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದರೂ ನಿರೀಕ್ಷಿತ ಅಂಕಗಳು ಬಂದಿಲ್ಲ ಎಂಬ ಕಾರಣಕ್ಕೆ ಭದ್ರಾವತಿ ತಾಲೂಕಿನ ಶಂಕರಘಟ್ಟದ ವಿದ್ಯಾರ್ಥಿನಿಯೊಬ್ಬರು ಭದ್ರಾ ಎಡದಂಡೆ ನಾಲೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಂಕರಘಟ್ಟದ ತೋಟಪ್ಪ ಎಂಬುವರ ಪುತ್ರಿ, ಶಿವಮೊಗ್ಗದ ಡಿವಿಎಸ್ ಸಂಯುಕ್ತ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ತನುಜಾ(18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ತನುಜಾ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.68 ಅಂಕ ಗಳಿಸಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದರು. ಆದರೆ ನಿರೀಕ್ಷಿತ ಅಂಕಗಳು ಬಂದಿಲ್ಲ ಎಂದು ನೊಂದುಕೊಂಡಿದ್ದಳೆನ್ನಲಾಗಿದೆ.
ಖುಷಿಪಡಲು ನೀನೇ ಇಲ್ಲವಲ್ಲ ಮಗಳೆ….
ಶಹಾಪುರ(ಯಾದಗಿರಿ): ಆಕೆ ಪಿಯುಸಿಯಲ್ಲಿ ಉತ್ತೀರ್ಣಳಾಗಿದ್ದಾಳೆ. ಆದರೆ ಅದರ ಖುಷಿ ಪಡಲು ಆಕೆಯೇ ಇಲ್ಲ. ಶಹಾಪುರದ ಚಿಂತಮ್ಮ ಗೌಡತಿ ಪದವಿಪೂರ್ವ ಕಾಲೇಜಿನಲ್ಲಿ ಓದುತ್ತಿದ್ದ ಗೀತಾ ಸ್ವಾಮಿ ಪಿಯುಸಿ ಪರೀಕ್ಷೆ ಉತ್ಸುಕತೆಯಿಂದಲೇ ಬರೆದಳು. ಪರೀಕ್ಷೆ ಮುಗಿಸಿದ ನಂತರ ಗೀತಾ ಅನಾರೋಗ್ಯದಿಂದ ಕೆಲ ದಿನಗಳ ಹಿಂದೆ ಸಾವನ್ನಪ್ಪಿ
ದ್ದಳು. ಮಂಗಳವಾರ ಫಲಿತಾಂಶ ಪ್ರಕಟವಾದಾಗ ಗೀತಾ ಶೇ.70 ಅಂಕ ಗಳಿಸಿ ಮೊದಲ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದಳು. ಮಗಳು ಪಡೆದ ಅಂಕಗಳನ್ನು ತಿಳಿದುಕೊಂಡ ತಂದೆ ಈರಯ್ಯ ಸ್ವಾಮಿ ಮತ್ತು ತಾಯಿ ಇಬ್ಬರೂ ದುಃಖತಪ್ತರಾಗಿದ್ದಾರೆ. ಫಲಿತಾಂಶ ಬಂದಿದೆ. ಆದರೆ ಖುಷಿ ಪಡಲು ತಮ್ಮ ಮಗಳೇ ಇಲ್ಲವಲ್ಲ ಎಂದು ಈರಯ್ಯ ಸ್ವಾಮಿ ದು:ಖಿಸುತ್ತಲೇ ಹೇಳಿದರು.
ಪಿಯು ಸಾಧನೆಗೆ ಅಡ್ಡಿಯಾಗದ ಅಂಧತ್ವ
ಮಂಗಳೂರು: ಇಲ್ಲಿನ ಸಂತ ಆಗ್ನೆಸ್ ಕಾಲೇಜಿನ ಅಂಧ ವಿದ್ಯಾರ್ಥಿನಿ ಮೇಘನಾ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ 530 ಅಂಕ ಗಳಿಸಿದ್ದು, ಮನಃಶಾಸ್ತ್ರಜ್ಞೆ ಆಗುವ ಕನಸು ಹೊತ್ತಿದ್ದಾರೆ.
ಬ್ರೖೆಲ್ ಲಿಪಿಯಲ್ಲಿ ಕಲಿತ ಮೇಘನಾ, ಪರೀಕ್ಷೆಯಲ್ಲಿ ತನ್ನ ಕೆಳಗಿನ ತರಗತಿಯ ವಿದ್ಯಾರ್ಥಿನಿ ಕೇಳಿದ ಪ್ರಶ್ನೆಗೆ ಮೌಖಿಕವಾಗಿ ಉತ್ತರಿಸಿ ಉತ್ತಮ ಸಾಧನೆ ತೋರಿದ್ದಾರೆ.
ಕಾಸರಗೋಡು ಮಂಜೇಶ್ವರದ ಹೊಸಬೆಟ್ಟುವಿನ ಪ್ರಮೋದ್ ನಾಯಕ್- ಮಹಾನಂದ ದಂಪತಿ ಪುತ್ರಿ ಮೇಘನಾ ಹುಟ್ಟಿನಿಂದಲೇ ಅಂಧಳಲ್ಲ. 7ನೇ ತರಗತಿಯಲ್ಲಿದ್ದಾಗ ತನ್ನೆರಡೂ ಕಣ್ಣುಗಳ ದೃಷ್ಟಿ ಕಳೆದುಕೊಂಡರು. ಎಸ್ಎಸ್ಎಲ್ಸಿಯಲ್ಲೂ 529 ಅಂಕ ಗಳಿಸಿದ್ದರು. ನಮಗೆ ಬ್ರೖೆಲ್ ಲಿಪಿಯ ಪಠ್ಯಪುಸ್ತಕವಿದೆ. ಸಹಪಾಠಿಗಳು ಮತ್ತು ಉಪನ್ಯಾಸಕರ ಸಹಕಾರದಿಂದ ಹೆಚ್ಚು ಅಂಕ ಗಳಿಸಲು ಸಾಧ್ಯವಾಯಿತು ಎಂದು ಮೇಘನಾ ವಿಜಯವಾಣಿಗೆ ಪ್ರತಿಕ್ರಿಯಿಸಿದರು. ಬಿಎನಲ್ಲಿ ಇತಿಹಾಸ, ಇಂಗ್ಲಿಷ್ ಮೇಜರ್, ಮನಃಶಾಸ್ತ್ರ ವಿಷಯ ಓದಿ, ಮುಂದಕ್ಕೆ ಮನಃಶಾಸ್ತ್ರಜ್ಞೆಯಾಗಿ ಆಪ್ತ ಸಮಾಲೋಚಕಿಯಾಗಿ ಕೆಲಸ ಮಾಡಬೇಕು ಎಂದು ತನ್ನ ಗುರಿ ಬಿಚ್ಚಿಟ್ಟರು.
ತಪಸ್ ವಿದ್ಯಾರ್ಥಿಗಳ ಸಾಧನೆ
ಬೆಂಗಳೂರು: ರಾಷ್ಟ್ರೋತ್ಥಾನ ಪರಿಷತ್ನ ತಪಸ್ ಯೋಜನೆಯಡಿ ಶಿಕ್ಷಣ ಪಡೆದ ಕೊಪ್ಪಳದ ರೈತನ ಮಗ ಪ್ರವೀಣಗೌಡ ಎನ್. ಪಾಟೀಲ್ ಹಾಗೂ ಶಿವಮೊಗ್ಗದ ಟೈಲರ್ ಮಗ ಸಿ. ಯಶವಂತ ಶೇ.97 ಅಂಕ ಗಳಿಸಿದ್ದಾರೆ. ಸಾಮಾನ್ಯ ಕೌಟುಂಬಿಕ ಹಿನ್ನೆಲೆಯಿಂದ ಬಂದು ತಪಸ್ ಯೋಜನೆಯಡಿ ಕಲಿತ 30 ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ.
ಯಶವಂತನ ತಂದೆ ಚಂದ್ರಶೇಖರ್ ಶಿವಮೊಗ್ಗ ಸಮೀಪದ ಕಂಚಿನಕಟ್ಟೆಯಲ್ಲಿ ಟೈಲರ್ ಆಗಿದ್ದಾರೆ. ಇಂಥ ಸಾಮಾನ್ಯ ಕುಟುಂಬದಿಂದ ಬಂದು ಪರಿಶ್ರಮದಿಂದ ಓದಿದ ಯಶವಂತ 583 ಅಂಕ (ಶೇ.97.17) ಗಳಿಸಿದ್ದಾನೆ. ಶೇ. 97 (582) ಅಂಕ ಗಳಿಸಿರುವ ಪ್ರವೀಣಗೌಡನ ತಂದೆ ಗಂಗಾವತಿ ತಾಲೂಕಿನಲ್ಲಿ ಕೃಷಿಕರಾಗಿದ್ದಾರೆ.
ಏನಿದು ತಪಸ್?:
ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲು ರಾಷ್ಟ್ರೋತ್ಥಾನ ಪರಿಷತ್ ಆರಂಭಿಸಿರುವ ಯೋಜನೆ ಇದಾಗಿದೆ. ತಪಸ್ ಯೋಜನೆಯಡಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಊಟ, ವಸತಿಯೊಂದಿಗೆ ಉಚಿತವಾಗಿ 2 ವರ್ಷದ ಪಿಯು ಶಿಕ್ಷಣ ನೀಡಲಾಗುತ್ತದೆ. ಜತೆಗೆ ಪ್ರತಿಷ್ಠಿತ ಜೆಇಇ-ಐಐಟಿ ಪ್ರವೇಶ ಪರೀಕ್ಷೆಗೆ ಉಚಿತ ತರಬೇತಿ ನೀಡಲಾಗುತ್ತಿದೆ. ಬೇಸ್ ಸಂಸ್ಥೆಯು ಈ ಮಕ್ಕಳಿಗೆ ಉಚಿತ ತರಬೇತಿ ನೀಡುತ್ತಿದೆ. ರಾಷ್ಟ್ರೋತ್ಥಾನದ ತಪಸ್ ಪ್ರಕಲ್ಪದಿಂದ ಈ ಬಾರಿ 34 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ಚಹಾ ಮಾರುವ ಹುಡುಗಿ ಕಾಲೇಜಿಗೆ ಫಸ್ಟ್
ಹೊಸಪೇಟೆ(ಬಳ್ಳಾರಿ): ಕೂಲಿ ಕಾರ್ವಿುಕರ ಪುತ್ರಿ ವಾಣಿಜ್ಯ ವಿಭಾಗದಲ್ಲಿ ಕಾಲೇಜಿಗೆ ಟಾಪರ್ ಆಗುವ ಮೂಲಕ ಇತರರಿಗೆ ಮಾದರಿಯಾಗಿದ್ದಾಳೆ.
ಹಿಟ್ಟಿನ ಗಿರಣಿ ಕಾರ್ವಿುಕ ಜಫರುಲ್ಲಾ ಖಾನ್ ಮಗಳು ಆಫ್ರಿನ್ ಕಾಲೇಜು ಅವಧಿ ನಂತರ ತಾಯಿ ನಡೆಸುವ ಚಹಾ ಅಂಗಡಿಯಲ್ಲಿ ಕೆಲಸ ಮಾಡಿಕೊಂಡೇ 530(ಶೇ.88.33) ಅಂಕ ಪಡೆದಿದ್ದಾಳೆ
ಆಳ್ವಾಸ್ಗೆ ಸತತ 8 ವರ್ಷಗಳಿಂದ ಶೇ.99 ಫಲಿತಾಂಶ
ಮೂಡುಬಿದಿರೆ: ರಾಜ್ಯದಲ್ಲೇ ಅತಿ ಹೆಚ್ಚು ಪಿಯುಸಿ ವಿದ್ಯಾರ್ಥಿ ಗಳನ್ನು ಹೊಂದಿರುವ ಆಳ್ವಾಸ್ ಪದವಿಪೂರ್ವ ಕಾಲೇಜು ಪ್ರಸಕ್ತ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಶೇ.99.20 ಫಲಿತಾಂಶ ಪಡೆದಿದ್ದು, ಕಳೆದ 8 ವರ್ಷಗಳಿಂದ ಶೇ.99 ಫಲಿತಾಂಶ ಪಡೆದ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕಾಲೇಜಿನಿಂದ ಒಟ್ಟು 4,285 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 4,251 ವಿದ್ಯಾರ್ಥಿಗಳು ಉತ್ತೀರ್ಣ ರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 3,409 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 3,386 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.99.33 ಫಲಿತಾಂಶ ದಾಖಲಾಗಿದೆ. ವಾಣಿಜ್ಯ ವಿಭಾಗದಲ್ಲಿ 815 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 806 ವಿದ್ಯಾರ್ಥಿಗಳು ಉರ್ತಿ¤ಣರಾಗಿ ಶೇ.98.90 ಫಲಿತಾಂಶ ಲಭಿಸಿದೆ. 61 ವಿದ್ಯಾರ್ಥಿಗಳು ಕಲಾ ವಿಭಾಗದಲ್ಲಿ ಹಾಜರಾಗಿದ್ದು, 59 ವಿದ್ಯಾರ್ಥಿಗಳು ಉತ್ತೀರ್ಣರಾಗಿ, ಶೇ 96.72 ಫಲಿತಾಂಶ ಗಳಿಸಿದೆ ಎಂದು ತಿಳಿಸಿದರು.
ತಂದೆ ಸಾವಿನಲ್ಲೂ ಫಸ್ಟ್ ಕ್ಲಾಸ್ ಪಾಸ್
ಬೀದರ್: ಕಿತ್ತು ತಿನ್ನುವ ಬಡತನದ ಬೇಗೆ, ತಂದೆ ಸಾವಿನ ಶೋಕ. ಇಂಥ ಸಂದಿಗ್ಧತೆ ನಡುವೆ ಪಿಯುಸಿ ವಿಜ್ಞಾನ ಪರೀಕ್ಷೆ ಬರೆದ ಬೀದರ್ ಸಾಯಿಜ್ಞಾನ ಕಾಲೇಜಿನ
ವಿದ್ಯಾರ್ಥಿ ಗಿರಿಧರ ರಮೇಶ ಜೋಶಿ 522 (ಶೇ.87) ಅಂಕ ಗಳಿಸಿದ್ದಾನೆ. ಕೆಮಿಸ್ಟ್ರಿ ಮರು ಪರೀಕ್ಷೆ ಮುನ್ನ ದಿನವೇ ಗಿರಿಧರ ತಂದೆ ರಮೇಶ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಇಂಥ ಸ್ಥಿತಿಯಲ್ಲೂ ಹಿರಿಯರ, ಕಾಲೇಜಿನವರ ಸಲಹೆ ಮೇರೆಗೆ ಗಿರಿಧರ ರಸಾಯನಶಾಸ್ತ್ರ ಪರೀಕ್ಷೆ ಬರೆದಿದ್ದು, 92 ಅಂಕ ಪಡೆದಿದ್ದಾನೆ. ಉಳಿದಂತೆ ಕನ್ನಡ 92, ಭೌತಶಾಸ್ತ್ರ 95, ಗಣಿತ 72, ಇಂಗ್ಲಿಷ್ 80, ಜೀವಶಾಸ್ತ್ರದಲ್ಲಿ 80 ಅಂಕ ಗಳಿಸಿದ್ದಾನೆ. ಗಿರಿಧರ ಮೂಲತಃ ತೆಲಂಗಾಣದವನು.
ಎಕ್ಸ್ಪರ್ಟ್ಗೆ ಶೇ.99.53
ಮಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರದ ಕೊಡಿಯಾಲ್ಬೈಲ್ ಮತ್ತು ವಳಚ್ಚಿಲ್ನ ಎಕ್ಸ್ಪರ್ಟ್ ಪದವಿಪೂರ್ವ ಕಾಲೇಜು ಶೇ.99.53 ಫಲಿತಾಂಶ ಪಡೆದಿದೆ. ಸಂಸ್ಥೆಯ ಶೇ.76.02 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಪರೀಕ್ಷೆಗೆ ಹಾಜರಾದ 1059 ವಿದ್ಯಾರ್ಥಿಗಳ ಪೈಕಿ 141 ವಿದ್ಯಾರ್ಥಿಗಳು 570ಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ. ಶೇ.99.24 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಕಾಲೇಜಿನ ಪ್ರಥಮ ಸ್ಥಾನಿ ವೈಷ್ಣವಿ ಬಳ್ಳಾಲ್ 590 ಅಂಕ ಗಳಿಸಿದ್ದು, ರಾಜ್ಯದಲ್ಲೇ 7ನೇ ಸ್ಥಾನಿಯಾಗಿ ಹೊರ ಹೊಮ್ಮಿದ್ದಾರೆ.
ಐಸ್ಕೀಮ್ ಮಾರಿ ಡಿಸ್ಟಿಂಗ್ಷನ್.
ಕೊಡೇಕಲ್(ಯಾದಗಿರಿ): ಈ ಹುಡುಗನಿಗೆ ಹೃದಯ ಸಂಬಂಧಿ ಕಾಯಿಲೆ ಇದೆ. ತನಗಿರುವ ಕಾಯಿಲೆ ಮರೆತು ನಿತ್ಯ ಜೀವನಕ್ಕೆ ಐಸ್ಕ್ರೀಮ್ ಮಾರುತ್ತಲೇ ವಿದ್ಯೆಯ ಬೆನ್ನು ಹತ್ತಿದ ಈತ ದ್ವಿತೀಯ ಪಿಯು ಕಲಾ ವಿಭಾಗದಲ್ಲಿ ಡಿಸ್ಟಿಂಕ್ಷನ್ ಗಳಿಸಿದ್ದಾನೆ. ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಹುಲಗಪ್ಪ ಸಾವಣ್ಣ ಗಡ್ಡಿ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿ. ಒಟ್ಟು 522 (ಶೇ.87) ಅಂಕ ಗಳಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ.
ಕಾಲಿನಿಂದ ಪರೀಕ್ಷೆ ಬರೆದು ಫಸ್ಟ್ ಕ್ಲಾಸ್
ಬಳ್ಳಾರಿ: ಇಲ್ಲಿನ ವೀರಶೈವ ಕಾಲೇಜಿನ ಕಲಾ ವಿಭಾಗದ ಅಂಗವಿಕಲ ವಿದ್ಯಾರ್ಥಿ ಮುಸ್ತಫಾ, ದ್ವಿತೀಯ ಪಿಯು ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾನೆ. ಎರಡೂ ಕೈಗಳಿಲ್ಲದ ಮುಸ್ತಫಾ ಕಾಲಿನಿಂದ ಪರೀಕ್ಷೆ ಬರೆದು ಈ ಸಾಧನೆ ಮಾಡಿದ್ದಾನೆ. ಪರೀಕ್ಷೆ ಬರೆಯಲು ಪರ್ಯಾಯ ಆಯ್ಕೆಗಳಿದ್ದರೂ ಈ ವಿದ್ಯಾರ್ಥಿ ಎಲ್ಲ 6 ವಿಷಯಗಳ ಪರೀಕ್ಷೆಯನ್ನು ಕಾಲಿನಿಂದ ಬರೆದಿದ್ದಾನೆ. ಕನ್ನಡದಲ್ಲಿ 93, ಇಂಗ್ಲೀಷ್ 70, ಇತಿಹಾಸ 82, ಅರ್ಥಶಾಸ್ತ್ರ 60, ಸಮಾಜಶಾಸ್ತ್ರ 86 ಹಾಗೂ ರಾಜ್ಯಶಾಸ್ತ್ರದಲ್ಲಿ 83 ಒಟ್ಟು 474 ಅಂಕಗಳನ್ನು ಪಡೆದಿದ್ದಾನೆ.
***
ಮಣ್ಣಿನ ಮಗಳ ಸಾಧನೆ
ಮೈಸೂರು: ಟ್ಯೂಷನ್ಗಳಿಗೆ ಹೋದರೆ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂಬ ಮನೋಭಾವಿದೆ. ಆದರೆ, ಅದು ಸತ್ಯಕ್ಕೆೆ ದೂರವಾದದ್ದು, ಟ್ಯೂಷನ್ಗೂ ಹೋಗದೆಯೇ ಯಶಸ್ಸು ಸಾಧಿಸಬಹುದು ಎಂಬುದನ್ನು ಕೃಷಿಕನ ಮಗಳೊಬ್ಬಳು ನಿರೂಪಿಸಿದ್ದಾರೆ.
ತರಗತಿಯಲ್ಲಿ ಕಾಲೇಜಿನ ಅಧ್ಯಾಪಕರು ಹೇಳಿಕೊಟ್ಟ ಪಾಠವನ್ನಷ್ಟೇ ನಂಬಿ, ಅದನ್ನೇ ಮೆಲುಕು ಹಾಕುತ್ತ, ದಿನಪ್ರತಿ ಐದಾರು ಗಂಟೆಗಳು ಮಾತ್ರ ಸ್ವತಃ ಅಧ್ಯಯನ ನಡೆಸಿ ಯಶಸ್ಸು ಸಾಧಿಸಬಹುದು ಎಂಬುದನ್ನು ಕೆ.ಆರ್.ನಗರ ತಾಲೂಕಿನ ಗಂಧನಹಳ್ಳಿಯ ಸೋಮಣ್ಣ ಮತ್ತು ಲತಾಮಣಿಯ ದಂಪತಿಯ ಪುತ್ರಿ ಜಿ.ಎಸ್.ರಾಧಿಕಾ ಸಾಧಿಸಿ ತೋರಿಸಿದ್ದಾರೆ.
ಪಿಯುಸಿ ಪರೀಕ್ಷೆಯಲ್ಲಿ ಶೇ.98ರಷ್ಟು ಅಂಕಗಳಿಸಿ ಸಾಧನೆ ಮಾಡಿದ್ದಾಳೆ. ಪಿಸಿಎಂಬಿ ವಿಷಯದಲ್ಲಿ 400 ಅಂಕಗಳಿಗೆ 398 ಅಂಕಗಳಿಸುವ ಮೂಲಕ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ತನ್ನ ಮುಡಿಗೇರಿಸಿಕೊಂಡಿರುವುದು ರೈತನ ಮಗಳ ಸಾಧನೆಯಾಗಿದೆ.
ಈಕೆ ಮೂಲತಃ ಕೃಷಿ ಕುಟುಂಬದವರು. ಕೆ.ಆರ್.ನಗರ ತಾಲೂಕಿನ ಗಂಧನಹಳ್ಳಿಯ ಸೋಮಣ್ಣ ಮತ್ತು ಲತಾಮಣಿಯ ದಂಪತಿಯ ಸುಪುತ್ರಿ. ಪಿಯುಸಿಯಲ್ಲಿ ಯಾವುದೇ ವಿಷಯಗಳಿಗೆ ಟ್ಯೂಷನ್ಗೆ ಹೋಗದೇ ಎಲ್ಲಾ ವಿಷಯಗಳಲ್ಲೂ (ಭೌತಶಾಸ್ತ್ರ 99, ರಾಸಾಯನಶಾಸ್ತ್ರ 100, ಗಣಿತ 100, ಜೀವಶಾಸ್ತ್ರ 99) 99ಕ್ಕಿಂತ ಹೆಚ್ಚು ಅಂಕಗಳಿಸಿ ಇತರರಿಗೆ ಮಾದರಿಯಾಗಿದ್ದಾಳೆ.
ಇವರ ತಂದೆ ಈಗಲು ಸಹ ಕೃಷಿ ಮಾಡುತ್ತಿದ್ದಾರೆ. ಮಗಳಿಗೆ ಒಳ್ಳೆಯ ವಿದ್ಯಾಾಭ್ಯಾಾಸ ನೀಡಬೇಕು ಎನ್ನುವ ಉದ್ದೇಶದಿಂದ ಮೈಸೂರಿನಲ್ಲಿ ಮನೆ ಮಾಡಿ ಮಕ್ಕಳನ್ನು ಓದಿಸುತ್ತಿದ್ದಾರೆ. ಇವರು ನಿತ್ಯ ಕೆ.ಆರ್.ನಗರ ತಾಲೂಕಿನ ತಮ್ಮ ಸ್ವಗ್ರಾಮಕ್ಕೆೆ ತೆರಳಿ ಕೃಷಿ ಮಾಡುತ್ತಿರುವುದು ಮತ್ತೊಂದು ವಿಶೇಷ.
ಫೋಟೋಗಳು:
ಸಿಇಟಿ ಸಾಧಕರು:
ಬೆಂಗಳೂರು ಮಂಗಳೂರಿಗೆ ಸಿಂಹಪಾಲು
MAY 29, 2016.
ಆರ್ಕಿಟೆಕ್ಚರ್ ನೋಟಾ ಫಲಿತಾಂಶ ಸಲ್ಲಿಸಿದವರು – 1541 ಅರ್ಹ ವಿದ್ಯಾರ್ಥಿಗಳು – 1395
ಬೆಂಗಳೂರು: ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ಬೆಂಗಳೂರು ಹಾಗೂ ಮಂಗಳೂರು ವಿದ್ಯಾರ್ಥಿಗಳು ಟಾಪರ್ಸ್ಗಳಾಗಿ ಹೊರಹೊಮ್ಮಿದ್ದಾರೆ.
ಮೇ ಮೊದಲವಾರದಲ್ಲಿ ನಡೆದ ಸಿಇಟಿಗೆ 1,71,868 ವಿದ್ಯಾರ್ಥಿಗಳು ಹಾಜರಾಗಿದ್ದರು. ಇವರಲ್ಲಿ 1,27,576 ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್ ಹಾಗೂ 41,530 ವಿದ್ಯಾರ್ಥಿಗಳಿಗೆ ವೈದ್ಯಕೀಯ ಕೋರ್ಸ್ಗೆ ಪ್ರವೇಶ ಪಡೆಯಲು ಅರ್ಹರೆಂದು ಪರೀಕ್ಷಾ ಪ್ರಾಧಿಕಾರ ಪರಿಗಣಿಸಿ ರ್ಯಾಂಕ್ ನೀಡಿದೆ. ಉನ್ನತ ಶಿಕ್ಷಣ ಸಚಿವ ಟಿ.ಬಿ.ಜಯಚಂದ್ರ ಹಾಗೂ ವೈದ್ಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ್ ಜಂಟಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದರು.
ಇಂಜಿನಿಯರಿಂಗ್ ಹಾಗೂ ವೈದ್ಯ ರ್ಯಾಂಕಿಂಗ್ನ ಮೊದಲ ಹತ್ತು ರ್ಯಾಂಕ್ಗಳಲ್ಲಿ ಒಂಭತ್ತನ್ನು ಬೆಂಗಳೂರು, ಮಂಗಳೂರಿನ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ವಿಶೇಷವೆಂದರೆ ಇದೇ ಮೊದಲ ಬಾರಿಗೆ ಬೀದರ್ನ ಇಬ್ಬರು ವಿದ್ಯಾರ್ಥಿಗಳು ಇಂಜಿನಿಯರಿಂಗ್ ಹಾಗೂ ಮೆಡಿಕಲ್ ರ್ಯಾಂಕಿಂಗ್ನಲ್ಲಿ ಮೊದಲ 10 ಸ್ಥಾನದ ಪಟ್ಟಿಯಲ್ಲಿ ಸೇರಿದ್ದಾರೆ. ವೈದ್ಯ, ದಂತವೈದ್ಯ, ಬಿಎಸ್ಸಿ ಕೃಷಿ, ಬಿವಿಎಸ್ಸಿ ರ್ಯಾಂಕಿಂಗ್ನಲ್ಲಿ ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ಅನಂತ್ ಜಿ. ಮೊದಲ ರ್ಯಾಂಕ್ ಗಳಿಸಿದ್ದಾರೆ. ಇಂಜಿನಿಯರಿಂಗ್ ಹಾಗೂ ಬಿ-ಫಾರ್ವದಲ್ಲಿ ಬೆಂಗಳೂರಿನ ವಿವಿಎಸ್ ಸರ್ದಾರ್ಪಟೇಲ್ ಕಾಲೇಜಿನ ಮಿಲಿಂದ್ಕುಮಾರ್ ವಡ್ಡಿರಾಜು ಮೊದಲ ರ್ಯಾಂಕ್ ಪಡೆದಿದ್ದರೆ, ಆರ್ಕಿಟೆಕ್ಚರ್ನಲ್ಲಿ ಬೆಂಗಳೂರಿನ ಸಿಎಂಆರ್ ನ್ಯಾಷನ್ ಪಬ್ಲಿಕ್ ಶಾಲೆಯ ಮೃದುಲಾ ಸಿ.ಆರ್. ಮೊದಲ ಸ್ಥಾನ ಗಳಿಸಿದ್ದಾರೆ.
ಟಾಪರ್ಸ್ಗಳಿಗೆ ಉಚಿತ ಶಿಕ್ಷಣ
7ವಿಭಾಗದಲ್ಲಿನ ಐವರು ಟಾಪರ್ಸ್ಗಳಿಗೆ ರಾಜ್ಯ ಸರ್ಕಾರ ಉಚಿತ ಶಿಕ್ಷಣ ನೀಡಲು ನಿರ್ಧರಿಸಿದೆ. ಆ ವಿದ್ಯಾರ್ಥಿಗಳು ಸಿಇಟಿಯಿಂದಲೇ ಸೀಟು ಪಡೆದು ರಾಜ್ಯದಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ನಡೆಸಬೇಕು. ಈವರೆಗೂ ಮೊದಲ ವರ್ಷದ ಶುಲ್ಕ ಮಾತ್ರ ತುಂಬಲಾಗುತ್ತಿತ್ತು. ಆದರೆ ಈ ಬಾರಿಯಿಂದ ಕೋರ್ಸ್ ಮುಗಿಯುವವರೆಗೆ ಪರೀಕ್ಷಾ ಪ್ರಾಧಿಕಾರದಿಂದಲೇ ಶುಲ್ಕ ಭರಿಸಲಾಗುತ್ತದೆ ಎಂದು ಸಚಿವ ಜಯಚಂದ್ರ ತಿಳಿಸಿದರು.
ಸಚಿವರ ಹಾರಿಕೆ ಉತ್ತರ!
ಉನ್ನತ ಶಿಕ್ಷಣ ಇಲಾಖೆ ಕುರಿತು ಯಾವುದೇ ಪ್ರಶ್ನೆ ಕೇಳಿದರೂ ಸಚಿವ ಟಿ.ಬಿಜಯಚಂದ್ರ ನಿರುತ್ತರರಾದರು. ಸೀಟು ಹಂಚಿಕೆ, ಹೆಚ್ಚುವರಿ ಶುಲ್ಕ ವಸೂಲಿ, ಇಂಜಿನಿಯರಿಂಗ್ ಕಾಲೇಜುಗಳ ಅವ್ಯವಸ್ಥೆ, ಸೀಟು ಹಂಚಿಕೆ ಹಗರಣ, ಪದವಿ ಕಾಲೇಜುಗಳ ಪ್ರವೇಶ ಪ್ರಕ್ರಿಯೆ ಕುರಿತ ಪ್ರಶ್ನೆಗಳಿಗೆ ಅವರ ಮುಗುಳ್ನಗುವೇ ಉತ್ತರವಾಯಿತು. ಕಳೆದ ಮೂರು ವರ್ಷಗಳಿಂದ ಏನು ಮಾಡಿದ್ದೀರಿ ಎಂಬುದಕ್ಕೆ ಉತ್ತರಿಸದೇ, ಇನ್ನು ಪರಿಶೀಲಿಸುತ್ತೇವೆ ಎಂಬ ಹಾರಿಕೆ ಉತ್ತರ ನೀಡಿದರು.
ಜೂ.3ರಿಂದ ದಾಖಲೆ ಪರಿಶೀಲನೆ
ರಾಜ್ಯದ 15 ಕೇಂದ್ರಗಳಲ್ಲಿ ಜೂ.3ರಿಂದ ದಾಖಲೆ ಪರಿಶೀಲನೆ ನಡೆಯಲಿದೆ. ರ್ಯಾಂಕ್ ಪ್ರಕಾರ ದಾಖಲೆ ಪರಿಶೀಲನೆ ನಡೆಸಲಾಗುತ್ತದೆ. ಈ ಬಾರಿ ದಾಖಲೆ ಪರಿಶೀಲನೆಗೆ ತುಮಕೂರು ಹಾಗೂ ಬೀದರ್ ಅನ್ನು ಹೊಸದಾಗಿ ಸೇರಿಸಲಾಗಿದೆ.
10 ರ್ಯಾಂಕ್ನಲ್ಲಿಲ್ಲ ಪಿಯು ಟಾಪರ್ಸ್
ದ್ವಿತೀಯ ಪಿಯುನಲ್ಲಿ ಟಾಪ್ ರ್ಯಾಂಕ್ ಗಳಿಸಿದವರು ಸಿಇಟಿಯಲ್ಲಿ ಟಾಪ್ 10 ರ್ಯಾಂಕ್ ಒಳಗೆ ಸ್ಥಾನ ಗಿಟ್ಟಿಸುವಲ್ಲಿ ವಿಫಲರಾಗಿದ್ದಾರೆ. 2014ರಲ್ಲಿ ದ್ವಿತೀಯ ಪಿಯು ರ್ಯಾಂಕ್ಗಳಿಸಿದ್ದ ಬಹುತೇಕರು ಸಿಇಟಿ ಟಾಪ್ 5 ರ್ಯಾಂಕ್ ಪಟ್ಟಿಯಲ್ಲಿದ್ದರು. 2015ನೇ ಫಲಿತಾಂಶದಲ್ಲೂ ಯಾವೊಬ್ಬ ವಿದ್ಯಾರ್ಥಿಗಳು ಟಾಪ್ 10ನಲ್ಲಿ ಇರಲಿಲ್ಲ. 2016ನೇ ಪಿಯು ಫಲಿತಾಂಶದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ್ದ ಟಿ.ರಕ್ಷಿತಾಗೆ ಈ ಬಾರಿಯ ಸಿಇಟಿ ವೈದ್ಯಕೀಯದಲ್ಲಿ 38ನೇ ರ್ಯಾಂಕ್ ಬಂದಿದೆ.
ಲೀಕ್ ಆರೋಪಿ ಮಗ 22,352ನೇ ರ್ಯಾಂಕ್
ಪಿಯು ಪ್ರಶ್ನೆಪತ್ರಿಕೆ ಸೋರಿಕೆ ಆರೋಪಿ ಓಬಳರಾಜು ಮಗ ಬಿ.ಒ.ಗೌರವ್ ಇಂಜಿನಿಯರಿಂಗ್ನಲ್ಲಿ 22,352ನೇ ಹಾಗೂ ಬಿಎಸ್ಸಿ ಅಗ್ರಿಯಲ್ಲಿ 16228 ರ್ಯಾಂಕ್ ಗಳಿಸಿದ್ದಾನೆ. ವೈದ್ಯಕೀಯ, ವಾಸ್ತುಶಿಲ್ಪದ ರ್ಯಾಂಕ್ ಪಡೆಯಲು ಅರ್ಹತೆ ಇಲ್ಲ ಎಂದು ನಮೂದಿಸಲಾಗಿದೆ.
6 ಕೃಪಾಂಕ
2016ನೇ ಸಾಲಿನ ಸಿಇಟಿಯಲ್ಲಿ ಭೌತಶಾಸ್ತ್ರ-1, ರಸಾಯನಶಾಸ್ತ್ರ-2, ಜೀವಶಾಸ್ತ್ರ-3 ಸೇರಿ ಒಟ್ಟಾರೆ 6 ಕೃಪಾಂಕ ನೀಡಲಾಗಿದೆ.
ಟಾಪ್ 5 ರ್ಯಾಂಕ್ ಗಳಿಸಿದವರು
ವೈದ್ಯ ಮತ್ತು ದಂತವೈದ್ಯ(ಪಿಸಿಬಿ)
1. ಅನಂತ್ ಜಿ.- ಆಳ್ವಾಸ್ ಪಿಯು ಕಾಲೇಜು, ಮೂಡುಬಿದಿರೆ
2. ಸಂಜಯ್ ಎಂ. ಗೌಡರ್ – ಶೇಷಾದ್ರಿಪುರ ಪಿಯು ಕಾಲೇಜು, ಬೆಂ. 3. ವಚನಶ್ರೀ ಪಾಟೀಲ್ – ಶಾಹೀನ್ ಪಿಯು ಕಾಲೇಜು, ಬೀದರ್
4. ಇಶಾನ್ ವಜೀರ್ (ಕಾಶ್ಮೀರಿ ವಲಸಿಗ)-ಮಾಡರ್ನ್ ವಿದ್ಯಾನಿಲಯ ದೆಹಲಿ
5. ಸೌರಭ್ ಎಸ್.- ಎಸ್ಪಿಎಸ್ಎಂ ಪಿಯು ಸೈನ್ಸ್ ಕಾಲೇಜು, ದಾವಣಗೆರೆ
ಇಂಜಿನಿಯರಿಂಗ್ (ಪಿಸಿಎಂ)
1. ಮಿಲಿಂದ್ ಕುಮಾರ್- ವಿವಿಎಸ್ ಸರ್ದಾರ್ ಪಟೇಲ್ ಪಿಯು ಕಾಲೇಜು, ಬೆಂ.
2. ನಿರಂಜನ್ ಕಾಮತ್ – ಎಕ್ಸ್ಪರ್ಟ್ ಪಿಯು ಕಾಲೇಜು, ಮಂಗಳೂರು
3. ದಿವ್ಯಾ ಎ. ಜಮಖಂಡಿ – ಕೆಎಲ್ಇ ಪಿಯು ಕಾಲೇಜು, ಬೆಂಗಳೂರು
4. ಆರ್.ರಾಹುಲ್- ಆರ್.ವಿ.ಪಿಯು ಕಾಲೇಜು, ಬೆಂಗಳೂರು
5. ಎಸ್.ವಿಘ್ನೇಶ್ – ವಿವಿಎಸ್ ಸರ್ದಾರ್ ಪಟೇಲ್ ಪಿಯು ಕಾಲೇಜು, ಬೆಂ.
ವಾಸ್ತುಶಿಲ್ಪ
1. ಮೃದುಲಾ ಸಿ.ಆರ್. – ಸಿಎಂಆರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್, ಬೆಂಗಳೂರು
2. ಐಶ್ವರ್ಯಾ ಮಹದೇವನ್-ದಿ ಅಮೃತಾ ಅಕಾಡೆಮಿ ಆಫ್ ಸರ್ಜಾಪುರ ರೋಡ್, ಬೆಂಗಳೂರು
3. ನೇಹಾ ಸಾರಾಹ್ ಅಬ್ರಹಾಂ – ಸೋಫಿಯಾ ಹೈಸ್ಕೂಲ್, ಬೆಂಗಳೂರು
4. ದೈವಯಾನಿ ರಾಮಮೂರ್ತಿ- ಮಲ್ಲಯ್ಯ ಅದಿತಿ ಇಂಟರ್ನ್ಯಾಷನಲ್ ಸ್ಕೂಲ್, ಬೆಂಗಳೂರು
5. ರಿಶಿ ಕುಮಾರನ್ ಮೂದಲಿಯಾರ್- ಪ್ರೆಸಿಡೆನ್ಸಿ ಸ್ಕೂಲ್, ಬೆಂಗಳೂರು
ಐಎಸ್ಎಂ, ಹೋಮಿಯೋಪಥಿ(ಪಿಸಿಬಿ)
1. ಸಂಜಯ್ ಎಂ. ಗೌಡರ್ – ಶೇಷಾದ್ರಿಪುರ ಕಾಲೇಜು, ಬೆಂ.
2. ವಚನಶ್ರೀ ಪಾಟೀಲ್ – ಶಾಹೀನ್ ಪಿಯು ಕಾಲೇಜು, ಬೀದರ್
3. ಅನಂತ್ ಜಿ. – ಆಳ್ವಾಸ್ ಪಿಯು ಕಾಲೇಜು, ಮೂಡುಬಿದಿರೆ
4.
ಸಾಯಿಪ್ರಸಾದ್- ಎಂ.ವಿ. ಪಿಯು ಕಾಲೇಜು, ದಾವಣಗೆರೆ
5. ಪ್ರತಿಕ್ಷಾ ಪೈ- ಮಹೇಶ್ ಪಿಯು ಕಾಲೇಜು, ಹುಬ್ಬಳ್ಳಿ
ಬಿಎಸ್ಸಿ ಕೃಷಿ
1. ಅನಂತ್ ಜಿ.-ಆಳ್ವಾಸ್ ಪಿಯು ಕಾಲೇಜು, ಮೂಡುಬಿದಿರೆ
2. ಎಚ್.ಎಲ್. ಪ್ರವೀಣ್ರಾಜ್-ಮಾಸ್ಟರ್ ಪಿಯು ಕಾಲೇಜು, ಹಾಸನ
3. ಸಂಪತ್ ಕೋಟಿ- ವಿದ್ಯಾಮಂದಿರ ಪಿಯು ಕಾಲೇಜು, ಬೆಂಗಳೂರು
4. ಅಭಿಲಾಷ್ – ಅಳ್ವಾಸ್ ಪಿಯು ಕಾಲೇಜು, ಮೂಡುಬಿದಿರೆ
5. ವೈಷ್ಣವಿ ಬಲ್ಲಾಳ್- ಎಕ್ಸ್ಫರ್ಟ್ ಪಿಯು ಕಾಲೇಜು, ಮಂಗಳೂರು
ಬಿವಿಎಸ್ಸಿ
1. ಅನಂತ್ ಜಿ.-ಆಳ್ವಾಸ್ ಪಿಯು ಕಾಲೇಜು, ಮೂಡುಬಿದಿರೆ
2. ಸಂಜಯ್ ಎಂ ಗೌಡರ್-ಶೇಷಾದ್ರಿಪುರ ಪಿಯು ಕಾಲೇಜು, ಬೆಂ.
3. ವಚನಶ್ರೀ ಪಾಟೀಲ್- ಶಾಹೀನ್ ಪಿಯು ಕಾಲೇಜು, ಬೀದರ್
4. ಇಶಾನ್ ವಜೀರ್ (ಕಾಶ್ಮೀರಿ ವಲಸಿಗ)- ಮಾಡರ್ನ್ ವಿದ್ಯಾನಿಲಯ ಫರಿದಾಬಾದ್, ದೆಹಲಿ
5. ಸೌರಭ್ ಎಸ್.- ಎಸ್ಪಿಎಸ್ಎಂ ಪಿಯು ಸೈನ್ಸ್ ಕಾಲೇಜು, ದಾವಣಗೆರೆ
ಬಿ-ಫಾರ್ಮ, ಫಾರ್ಮಡಿ
1. ಮಿಲಿಂದ್ ಕುಮಾರ್-ವಿವಿಎಸ್ ಸರ್ದಾರ್ ಪಟೇಲ್ ಪಿಯು ಕಾಲೇಜು, ಬೆಂಗಳೂರು
2. ನಿರಂಜನ್ ಕಾಮತ್- ಎಕ್ಸ್ ಫರ್ಟ್ ಪಿಯು ಕಾಲೇಜು, ಮಂಗಳೂರು
3. ಆರ್.ರಾಹುಲ್- ಆರ್.ವಿ. ಪಿಯು ಕಾಲೇಜು, ಬೆಂಗಳೂರು
4. ದಿವ್ಯಾ ಎ. ಜಮಖಂಡಿ-ಕೆಎಲ್ಇಎಸ್ ಇಂಡ್. ಪಿಯು ಕಾಲೇಜು, ಬೆಂಗಳೂರು
5. ಸಂಜಯ್ ಎಂ. ಗೌಡರ್-ಶೇಷಾದ್ರಿಪುರಂ ಪಿಯು ಕಾಲೇಜು, ಬೆಂ.
ಡಾಕ್ಟರ್ ಆಗಿ ಜನಸೇವೆ ಮಾಡ್ತೇನೆ
ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಅನಂತ್ ಜಿ. ಮೆಡಿಕಲ್, ಅಗ್ರಿಕಲ್ಚರಲ್ ಬಿಎಸ್ಸಿ, ವೆಟೆರಿನರಿ ಸೈನ್ಸ್ನಲ್ಲಿ ಪ್ರಥಮ ರ್ಯಾಂಕ್ ಪಡೆದಿದ್ದು, ಉನ್ನತ ವೈದ್ಯಕೀಯ ವ್ಯಾಸಂಗ ನಡೆಸಿ ಜನಸೇವೆಯ ಗುರಿ ಹೊಂದಿದ್ದಾರೆ. ಮೂಲತಃ ಹೊನ್ನಾವರ ಇಡಗುಂಜಿಯವರಾಗಿದ್ದು, ಬೆಂಗಳೂರು ಕೆ.ಆರ್.ಪುರದ ಸರ್ಕಾರಿ ಪಿಯು ಕಾಲೇಜಿನ ಕೆಮಿಸ್ಟ್ರಿ ಉಪನ್ಯಾಸಕ ಗಜಾನನ ಭಟ್ ಹಾಗೂ ಹೈಕೋರ್ಟ್ ಪ್ರಥಮ ದರ್ಜೆ ಸಹಾಯಕಿ ಜಯಶೀಲ ದಂಪತಿ ಪುತ್ರ ಅನಂತ್, ಹೋಮಿಯೋಪಥಿ ವಿಭಾಗದಲ್ಲಿ ಮೂರನೇ ರ್ಯಾಂಕ್ ಗಳಿಸಿದ್ದಾರೆ. ಬಿ ಫಾರ್ಮ ಹಾಗೂ ಡಿ-ಫಾರ್ಮದಲ್ಲಿ 6ನೇ ರ್ಯಾಂಕ್, ಇಂಜಿನಿಯರಿಂಗ್ನಲ್ಲಿ 18ನೇ ರ್ಯಾಂಕ್ ಸಹ ಪಡೆದಿದ್ದಾರೆ. ಜೀವಶಾಸ್ತ್ರದಲ್ಲಿ 60ರಲ್ಲಿ 60, ಭೌತಶಾಸ್ತ್ರದಲ್ಲಿ 55, ಕೆಮಿಸ್ಟ್ರಿ 59 ಹಾಗೂ ಗಣಿತದಲ್ಲಿ 55 ಅಂಕ ಪಡೆದು ಈ ಸಾಧನೆ ಮಾಡಿದ್ದಾರೆ.
ಆಳ್ವಾಸ್ ಶಿಕ್ಷಣ ಸಂಸ್ಥೆಯ ಗುಣಮಟ್ಟದ ಸಿಇಟಿ ಕೋಚಿಂಗ್, ಪರಿಶ್ರಮ, ತಂದೆ-ತಾಯಿಯ ಪ್ರೋತ್ಸಾಹದಿಂದ ಈ ಸಾಧನೆ ಮಾಡಿದ್ದೇನೆ. ದೈನಂದಿನ ತರಗತಿ, ಕೋಚಿಂಗ್ ಹೊರತುಪಡಿಸಿ ಪ್ರತಿದಿನ ಸುಮಾರು 5 ಗಂಟೆ ವ್ಯಾಸಂಗ ಮಾಡಿದ್ದೇನೆ. ಮೆಡಿಕಲ್ ನನ್ನ ನೆಚ್ಚಿನ ಕ್ಷೇತ್ರವಾಗಿದ್ದು, ಅದರಲ್ಲೇ ಮುಂದಿನ ವ್ಯಾಸಂಗ ಮಾಡಿ, ಜನಸೇವೆ ಮಾಡುವ ಇರಾದೆಯಿದೆ.
| ಅನಂತ್ ಜಿ. ಮೆಡಿಕಲ್ 1ನೇ ರ್ಯಾಂಕ್
ಆಳ್ವಾಸ್ನಿಂದ ಅನಂತ್ಗೆ 5 ಲಕ್ಷ ರೂ.
ಮೂಡುಬಿದಿರೆ: ವೈದ್ಯಕೀಯ ವಿಭಾಗದಲ್ಲಿ ಮೊದಲ ರ್ಯಾಂಕ್ ಪಡೆದ ಆಳ್ವಾಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಅನಂತ್ ಜಿ. ಅವರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ 5 ಲಕ್ಷ ರೂ. ಪ್ರೋತ್ಸಾಹ ಧನ ನೀಡುವುದಾಗಿ ಡಾ.ಎಂ.ಮೋಹನ್ ಆಳ್ವ ತಿಳಿಸಿದ್ದಾರೆ. ಪಿಯು ಕಾಮರ್ಸ್ನಲ್ಲಿ 2ನೇ ರ್ಯಾಂಕ್ ಪಡೆದಿದ್ದ ದಕ್ಷಾ ಜೈನ್ ಮತ್ತು ಆಶಿಕ್ ನಾರಾಯಣ್ ಅವರಿಗೆ ತಲಾ 1 ಲಕ್ಷ ರೂ. ನಗದು ಬಹುಮಾನ ಹಾಗೂ ಅವರಿಗೆ ಮುಂದಿನ ವಿದ್ಯಾಭ್ಯಾಸಕ್ಕೂ ಉಚಿತ ಶಿಕ್ಷಣ ಕೊಡುಗೆ ನೀಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಂಶೋಧನೆ ನಿರಂಜನ್ ಗುರಿ
ಇಂಜಿನಿಯರಿಂಗ್ನಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನಿಯಾಗಿರುವ ಮಂಗಳೂರಿನ ಎಕ್ಸ್ಪರ್ಟ್ ಪದವಿಪೂರ್ವ ಕಾಲೇಜಿನ ನಿರಂಜನ್ ಕಾಮತ್ಗೆ ವಿಜ್ಞಾನದತ್ತಲೇ ಹೆಚ್ಚು ಆಸಕ್ತಿ. ಹಾಗಾಗಿ ಇಂಜಿನಿಯರಿಂಗ್ನಲ್ಲಿ ಎರಡನೇ ರ್ಯಾಂಕ್ ಬಂದಿದ್ದರೂ ಜೆಇಇ ಮೈನ್ಸ್ ಬರೆದು ಎನ್ಐಟಿಗೆ ಸೇರಿ ಭೌತ ಶಾಸ್ತ್ರದಲ್ಲಿ ಎಂಎಸ್ಸಿ ಮಾಡುವುದು ನಿರಂಜನ್ ಗುರಿ. ಅಲ್ಲದೆ ಅಬ್ದುಲ್ ಕಲಾಂರಿಂದ ಸ್ಪೂರ್ತಿ ಪಡೆದಿರುವ ಇವರು, ಪಿಎಚ್ಡಿ ಮಾಡಿ ಸಂಶೋಧಕನಾಗುವ ಆಸೆ ಇದೆ ಎನ್ನುತ್ತಾರೆ. ಗುಜರಾತ್ನ ಟಾಟಾ ಕೆಮಿಕಲ್ಸ್ ಉದ್ಯೋಗಿಯಾಗಿರುವ ನರಸಿಂಹ ಕಾಮತ್ ಹಾಗೂ ರಂಜನಿ ಕಾಮತ್ ಅವರ ಪುತ್ರನಾಗಿರುವ ನಿರಂಜನ್, ಹುಟ್ಟಿದ್ದು ಮಂಗಳೂರು ಆದರೂ ಬೆಳೆದದ್ದು ಗುಜರಾತ್ನಲ್ಲಿ. ಮಗನ ವಿದ್ಯಾಭ್ಯಾಸಕ್ಕಾಗಿ ಪಾಲಕರು 2 ವರ್ಷದಿಂದ ಮಂಗಳೂರಿನಲ್ಲೇ ಮನೆ ಮಾಡಿಕೊಂಡಿದ್ದಾರೆ.
ಬೀದರ್ಗೆ ಕೀರ್ತಿ ತಂದ ವಚನಶ್ರೀ
ಪಿಯುನಲ್ಲಿ 600ಕ್ಕೆ 590 ಅಂಕ ಗಳಿಸಿ ಭೇಷ್ ಎನಿಸಿಕೊಂಡ ಬೀದರ್ನ ಶಾಹೀನ್ ಕಾಲೇಜಿನ ವಿದ್ಯಾರ್ಥಿನಿ ವಚನಶ್ರೀ ಬಸವಕುಮಾರ ಪಾಟೀಲ್, ವೈದ್ಯಕೀಯ ವಿಭಾಗದಲ್ಲಿ ರಾಜ್ಯಕ್ಕೆ 3ನೇ ರ್ಯಾಂಕ್ ಪಡೆದಿದ್ದಾರೆ. ವಚನಶ್ರೀ ತಾಯಿ ಡಾ.ಹೇಮಲತಾ ಪಾಟೀಲ್ ಸರ್ಕಾರಿ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ತಜ್ಞೆ. ತಂದೆ ಬಸವಕುಮಾರ ಪಾಟೀಲ್ ವಕೀಲರು. ತಾಯಿಯಂತೆ ವೈದ್ಯೆಯಾಗಿ ಜನಸೇವೆ ಮಾಡುವ ಹಂಬಲ ಈಕೆಗಿದೆ. ಬೀದರ್ ಸರ್ಕಾರಿ ವೈದ್ಯ ಕಾಲೇಜಿನಲ್ಲೇ ಎಂಬಿಬಿಎಸ್ ಮಾಡಿ, ನಮ್ಮ ಭಾಗದಲ್ಲೂ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎಂಬ ಸಂದೇಶ ರವಾನಿಸಬೇಕೆಂಬ ಚಿಂತನೆ ನಡೆದಿದೆ. ಪಾಲಕರ ಜತೆಗೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳುವೆ ಎಂದು ವಚನಶ್ರೀ ವಿಜಯವಾಣಿಗೆ ತಿಳಿಸಿದ್ದಾರೆ.
ಸುಮುಖ್ಗೆ ಸ್ವಂತ ಕಂಪನಿ ಸ್ಥಾಪನೆ ಆಸೆ
ಆರ್ಕಿಟೆಕ್ ವಿಭಾಗದಲ್ಲಿ 6ನೇ ರ್ಯಾಂಕ್ ಪಡೆದಿರುವ ದಕ್ಷಿಣ ಕನ್ನಡ ಜಿಲ್ಲೆ ವಿಟ್ಲದ ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿ ಸುಮುಖ್ಗೆ ಸ್ವಂತ ಕಂಪನಿ ಸ್ಥಾಪನೆ ಮಾಡುವ ಬಯಕೆ. ಮೂಲತಃ ಮಂಡ್ಯದವರಾದ ಸುಮುಖ್ ತಂದೆ -ತಾಯಿ ವೈದ್ಯರು. ಇವರಿಗೆ ಚಿಕ್ಕಂದಿನಿಂದಲೂ ಚಿತ್ರಕಲೆಯಲ್ಲಿ ಹೆಚ್ಚು ಆಸಕ್ತಿ. ಹಾಗಾಗಿಯೇ ಬೆಂಗಳೂರು ಆರ್ವಿ ಕಾಲೇಜಿನಲ್ಲಿ ಆರ್ಕಿಟೆಕ್ ಕಲಿಯಬೇಕೆಂಬ ಆಸೆ ಹೊಂದಿದ್ದಾರೆ.
ಶ್ರೀನಿಧಿಗೆ ವೈದ್ಯನಾಗುವ ಬಯಕೆ
ದಕ್ಷಿಣ ಕನ್ನಡ ಜಿಲ್ಲೆ ವಿಟ್ಲದ ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿ, ಗದಗ ಮೂಲದ ಶ್ರೀನಿಧಿ ಅಂಬೋರೆ, ವೈದ್ಯಕೀಯ ವಿಭಾಗದಲ್ಲಿ 9ನೇ ರ್ಯಾಂಕ್ ಪಡೆದಿದ್ದು, ಉನ್ನತ ವ್ಯಾಸಂಗ ಮಾ
ಡುವ ಸಾಧನೆಯ ಗುರಿ ಇಟ್ಟುಕೊಂಡಿದ್ದಾರೆ. ತಂದೆ ಸುರೇಶ್ ವಿ. ಅಂಬೋರೆ, ತಾಯಿ ಗೀತಾ ಸುರೇಶ್ ಅಂಬೋರೆ ಗದಗದಲ್ಲಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ವೃತ್ತಿ ನಡೆಸುತ್ತಿದ್ದಾರೆ. ಬೆಂಗಳೂರು ಬಿಎಂಎಸ್ ಕಾಲೇಜಿನಲ್ಲಿ ಎಂಬಿಬಿಎಸ್ ಮಾಡಿ ಬಳಿಕ ಮಾಸ್ಟರ್ ಡಿಗ್ರಿ ಪಡೆಯಬೇಕೆಂಬ ಆಸೆ ಶ್ರೀನಿಧಿಯದ್ದು.
ತುಂಬಾ ಖುಷಿ ಆಗಿದೆ. ಐಐಎಸ್ಸಿಯಲ್ಲಿ ಪ್ಯೂರ್ ಸೈನ್ಸ್ ಮಾಡಬೇಕೆಂದಿದ್ದೇನೆ. ತಲೆ ಕೆಡಿಸಿಕೊಂಡು ಎಂದೂ ಓದುತ್ತಿರಲಿಲ್ಲ. ಕಾಲೇಜು ಪಾಠವನ್ನೇ ಸರಿಯಾಗಿ ಕೇಳುತ್ತಿದ್ದೆ.
| ಎಸ್. ಸೌರಭ್ ಮೆಡಿಕಲ್ 5 ನೇ ರ್ಯಾಂಕ್, ಪುಷ್ಪಾ ಮಹಾಲಿಂಗಪ್ಪ ಕಾಲೇಜು, ದಾವಣಗೆರೆ
ನನಗೆ ಕಂಪ್ಯೂಟರ್ ಗೇಮ್ಳು ಆಸಕ್ತಿದಾಯಕ. ಗೇಮ್ ಡಿಸೈನಿಂಗ್ ಅರಿಯುವ ಬಗ್ಗೆ ಕುತೂಹಲ ಬೆಳೆಸಿಕೊಂಡಿದ್ದೆ. ಈಗ ಅದೇ ಕುತೂಹಲ ಕೃತಕ ಮೆದುಳು ಸೃಷ್ಟಿಸುವ ಬಗ್ಗೆ ಆಲೋಚಿ ಸುವಂತೆ ಮಾಡಿದೆ. ಅವಕಾಶ ಸಿಕ್ಕರೆ ವಿದೇಶದಲ್ಲಿ ಹೆಚ್ಚಿನ ವ್ಯಾಸಂಗ ಮಾಡುವೆ.
| ಎಚ್.ಎಲ್.ಪ್ರವೀಣ್ರಾಜ್ ಇಂಜಿನಿಯರಿಂಗ್ 6ನೇ ರ್ಯಾಂಕ್, ಮಾಸ್ಟರ್ಸ್ ಪಿಯು ಕಾಲೇಜು, ಹಾಸನ
ತುಂಬಾ ಖಷಿಯಾಗಿದೆ. 5-6 ಗಂಟೆ ಅಭ್ಯಾಸ ಮಾಡಿದ್ದು ಈ ಸಾಧನೆಗೆ ನೆರವಾಗಿದೆ. ಪ್ರತಿನಿತ್ಯದ ಪರಿಶ್ರಮ ಹಾಕಿದರೆ ಎಲ್ಲರು ಈ ಸಾಧನೆ ಮಾಡಬಹುದು.
| ನೇಹಾ ಸಾರಾಹ್ ಅಬ್ರಾಹಂ
ಆರ್ಕಿಟೆಕ್ಚರ್ 3ನೇ ರ್ಯಾಂಕ್ ನೇಹಾಗೆ ವೈದ್ಯೆಯಾಗುವಾಸೆ
ಮಂಗಳೂರಿನ ಎಕ್ಸ್ಪರ್ಟ್ ಪಿಯು ಕಾಲೇಜಿನ ನೇಹಾ ಎಸ್.ಸಿ. ಮೆಡಿಕಲ್ನಲ್ಲಿ 10ನೇ ರ್ಯಾಂಕ್ ಗಳಿಸಿದ್ದು, ತಂದೆ-ತಾಯಿಯಂತೆ ವೈದ್ಯೆಯಾಗುತ್ತೇನೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ನನ್ನ ಈ ಸಾಧನೆಗೆ ಕಾಲೇಜಿನ ಪಠ್ಯದೊಂದಿಗೆ ತಾನು ಪಡೆದುಕೊಂಡ ಎಕ್ಸ್ಪರ್ಟ್ ಪೋಸ್ಟಲ್ ಕೋಚಿಂಗ್ನ ಮೆಟೀರಿಯಲ್ ಪೂರಕವಾಯಿತು. ಕಾಲೇಜು ಉಪನ್ಯಾಸಕರು, ಸಹಪಾಠಿಗಳು ಅಧ್ಯಯನ ಸಮಯದಲ್ಲಿ ಸಹಕಾರ ನೀಡಿದ್ದಾರೆ. ಬೆಂಗಳೂರು ಮೆಡಿಕಲ್ ಕಾಲೇಜು ಅಥವಾ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮಾಡುವ ಇಚ್ಛೆಯಿದೆ ಎನ್ನುತ್ತಾರೆ ನೇಹಾ. ಈಕೆಗೆ ಐಎಸ್ಎಂಎಚ್ 9, ಇಂಜಿನಿಯ ರಿಂಗ್ನಲ್ಲಿ 382ನೇ ರ್ಯಾಂಕ್ ಬಂದಿದೆ.
ನ್ಯೂರೋಲಜಿಸ್ಟ್ ಆಗುವತ್ತ ವೈಷ್ಣವಿ ಹೆಜ್ಜೆ
ನಾನು ನ್ಯೂರೋ ತಜ್ಞೆ ಆಗಬೇಕು. ಅದಕ್ಕಾಗಿ ನನ್ನ ನಿರಂತರ ಪ್ರಯತ್ನ ಸಾಗಿದೆ ಎನ್ನುತ್ತಾರೆ ಐಎಸ್ಎಂಎಚ್ನಲ್ಲಿ 7, ಮೆಡಿಕಲ್ 22, ಇಂಜಿನಿಯರಿಂಗ್ನಲ್ಲಿ 19ನೇ ರ್ಯಾಂಕ್ ಪಡೆದ ಮಂಗಳೂರಿನ ಎಕ್ಸ್ಪರ್ಟ್ ಪಿಯು ಕಾಲೇಜಿನ ವೈಷ್ಣವಿ ಬಲ್ಲಾಳ್. ಇದೀಗ ನೀಟ್ 2 ಪರೀಕ್ಷೆಗಾಗಿ ಸಿದ್ಧತೆ ನಡೆಸುತ್ತಿದ್ದೇನೆ. ದೇಶದ ಅತ್ಯುತ್ತಮ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಅಧ್ಯಯನ ನಡೆಸುವ ಗುರಿ ಹೊಂದಿದ್ದೇನೆ ಎನ್ನುತ್ತಾರೆ ನೇಹಾ.
ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ರ್ಯಾಂಕ್ ಸಿಕ್ಕಿದೆ. ಖುಷಿ ಆಗಿದೆ. ಮೆಡಿಕಲ್ ಓದಬೇಕೆಂದಿದ್ದೇನೆ. ನನಗೆ ಬಯಾಲಜಿಯಲ್ಲಿ ಕಡಿಮೆ ಅಂಕ ಬಂದಿರುವ ಕಾರಣ ರ್ಯಾಂಕ್ ಕಡಿಮೆ ಆಗಿದೆ.
| ಸಾಯಿಪ್ರಸಾದ್ ಮೆಡಿಕಲ್ 7ನೇ ರ್ಯಾಂಕ್, ಸರ್ ಎಂವಿ ಕಾಲೇಜು, ದಾವಣಗೆರೆ
ಐಐಟಿ ಅಥವಾ ಎನ್ಐಟಿಗೆ ಆದ್ಯತೆಯಿದೆ. ಅಲ್ಲಿ ಸೂಕ್ತ ವಿಭಾಗದಲ್ಲಿ ಅವಕಾಶ ದೊರೆಯದಿದ್ದರೆ ಆರ್.ವಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಇ ಆಂಡ್ ಸಿ ವಿಷಯ ಆಯ್ಕೆ ಮಾಡಿಕೊಳ್ಳುವ ಯೋಚನೆ ಇದೆ. ಮುಂಚಿನಿಂದಲೂ ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ಒಲವಿದೆ.
| ದಿವ್ಯಾ ಎ. ಜಮಖಂಡಿ ಇಂಜಿನಿಯರಿಂಗ್ 3ನೇ ರ್ಯಾಂಕ್
ಸಿಇಟಿಯಲ್ಲಿ ಉತ್ತಮ ರ್ಯಾಂಕ್ ಪಡೆಯುವೆ ಎಂಬ ವಿಶ್ವಾಸವಿತ್ತು. ಆದರೆ ಮೊದಲ ಹತ್ತು ಸ್ಥಾನಗಳಲ್ಲಿ ಸ್ಥಾನ ಪಡೆಯುತ್ತೇನೆ ಎಂಬ ನಿರೀಕ್ಷೆ ಇರಲಿಲ್ಲ. ಟ್ಯೂಷನ್ಗೆ ಹೋಗದೆ ಮನೆಯಲ್ಲೇ ಓದುತ್ತಿದ್ದೆ. ಮುಂದೆ ಉತ್ತಮ ನ್ಯೂರೋಲಜಿಸ್ಟ್ ಆಗಬೇಕು ಎಂಬ ಗುರಿ ಇಟ್ಟುಕೊಂಡಿದ್ದೇನೆ.
| ಪ್ರತೀಕ್ಷಾ ಪೈ ಮೆಡಿಕಲ್ 8ನೇ ರ್ಯಾಂಕ್,
ಮಹೇಶ ಪ.ಪೂ. ಕಾಲೇಜು, ಹುಬ್ಬಳ್ಳಿ
ನಾರಾಯಣ ಕಾಲೇಜ್ಗೆ ಉತ್ತಮ ಫಲಿತಾಂಶ
ಬೆಂಗಳೂರು: ಪಿಯುನಲ್ಲಿ ಉತ್ತಮ ಅಂಕ ಗಳಿಸಿದ್ದ ನಾರಾಯಣ ಪಿಯು ಕಾಲೇಜಿನ ವಿದ್ಯಾರ್ಥಿಗಳು ಪ್ರಸಕ್ತ ವರ್ಷ ಕಾಮೆಡ್-ಕೆ ಹಾಗೂ ಸಿಇಟಿಯಲ್ಲೂ ಹೆಚ್ಚಿನ ಅಂಕ ಗಳಿಸುವ ಮೂಲಕ ಕಾಲೇಜಿನ ಕೀರ್ತಿ ಬೆಳಗಿಸಿದ್ದಾರೆ. ಇಂಜಿನಿಯರಿಂಗ್ ಟಾಪ್ 100 ರ್ಯಾಂಕ್ಗಳ ಪೈಕಿ 7 ವಿದ್ಯಾರ್ಥಿಗಳು ಹಾಗೂ ವೈದ್ಯಕೀಯದಲ್ಲಿ 6 ವಿದ್ಯಾರ್ಥಿಗಳು ನಾರಾಯಣ ಕಾಲೇಜಿನವರಾಗಿದ್ದಾರೆ.
ಸಿಇಟಿ ವೈದ್ಯಕೀಯ ವಿಭಾಗದಲ್ಲಿ ಲತೀಫಾ ಸುಲ್ತಾನ ಸೈಯಿದಾ 6ನೇ ರ್ಯಾಂಕ್ ಗಳಿಸಿದ್ದಾರೆ. ಯು.ಪಿ. ಸುಶ್ಮಿತಾ (16), ಆರ್. ಶ್ರೇಯಾ (28), ವಿ. ವರ್ಷಿಣಿ (65), ಪಿ.ವಿ. ರಂಜಿತ್ (83) ಹಾಗೂ ಶರಣ್ಯ ಯು. ಕೌಶಿಕ್ 92ನೇ ರ್ಯಾಂಕ್ ಪಡೆದಿದ್ದಾರೆ. ಇಂಜಿನಿಯರಿಂಗ್ನಲ್ಲಿ ರಂಜಿತ್ ಜಿ. ಹೆಗ್ಡೆ (12ನೇ ರ್ಯಾಂಕ್), ಜಿ.ಎಸ್. ನಿಖಿಲ್ (25), ಎಸ್.ಎಲ್. ಸ್ಪೂರ್ತಿ (29), ಕೆ.ವಿ. ವಿವೇಕ್ (49), ಸೂರಜ್ (97), ಅನಂತ (98) ಮತ್ತು ಎಂ.ಪಿ. ರಾಮ್್ರಶಾಂತ್ 100ನೇ ರ್ಯಾಂಕ್ ಗಳಿಸಿದ್ದಾರೆ.
ಗುಣಮಟ್ಟದ ಶಿಕ್ಷಣ ಕಾರಣ:ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ನಾರಾಯಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕಿ ಡಾ.ಪಿ. ಸಿಂಧೂರ ನಾರಾಯಣ ಸನ್ಮಾನಿಸಿದರು. ನಂತರ ಮಾತನಾಡಿದ ಅವರು, ಆಂಧ್ರಪ್ರದೇಶ, ತೆಲಂಗಾಣಗಳಲ್ಲಿ ನಾರಾಯಣ ಕಾಲೇಜು ಪ್ರಾರಂಭಿಸಿದ್ದೆವು. ಕಳೆದ 4 ವರ್ಷಗಳಿಂದ ಕರ್ನಾಟಕದಲ್ಲೂ ಶಾಲೆ- ಕಾಲೇಜು ಪ್ರಾರಂಭಿಸಿ ಶಿಕ್ಷಣ ನೀಡುತ್ತಿದ್ದೇವೆ. ಕಾಮೆಡ್-ಕೆ ಹಾಗೂ ಸಿಇಟಿಯಲ್ಲಿ ನಮ್ಮ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸುತ್ತಿರುವುದಕ್ಕೆ ನಾವು ನೀಡುತ್ತಿರುವ ಗುಣಮಟ್ಟದ ಶಿಕ್ಷಣವೇ ಕಾರಣ ಎಂದರು.
ನಮ್ಮ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸುವ ಮೂಲಕ ಐಐಟಿಯಂಥ ಕಾಲೇಜ್ಗಳಲ್ಲೂ ಪ್ರವೇಶ ಪಡೆಯುತ್ತಿದ್ದಾರೆ. ವಿದ್ಯಾರ್ಥಿ ವೇತನವನ್ನು ಸಹ ಪಡೆಯುತ್ತಿದ್ದಾರೆ. ಸಾಕಷ್ಟು ಸಂಶೋಧನೆ ಕೈಗೊಂಡು ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟಿದ್ದಕ್ಕೆ ನಮಗೆ ಈ ಬಗೆಯ ಯಶಸ್ಸು ಸಾಧ್ಯವಾಗಿದೆ. ಈ ಯಶಸ್ಸಿಗೆ ಕಾರಣರಾದ ಪಾಲಕರು ಮತ್ತು ಸಿಬ್ಬಂದಿ ವರ್ಗಕ್ಕೆ ಅಭಿನಂದನೆಗಳು.
| ಡಾ. ಪಿ. ಸಿಂಧೂರ ನಾರಾಯಣ ನಾರಾಯಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕಿ
ಶ್ರೀಚೈತನ್ಯ ವಿದ್ಯಾಸಂಸ್ಥೆ ಉತ್ತಮ ಸಾಧನೆ
ಬೆಂಗಳೂರು: ಶ್ರೀಚೈತನ್ಯ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಕಾಮೆಡ್-ಕೆ ಯುಜಿ
ಇಟಿ ಮತ್ತು ಸಿಇಟಿಯಲ್ಲಿ ಅತ್ಯುನ್ನತ ಅಂಕಗಳಿಸಿದ್ದಾರೆ.
ಕಾಮೆಡ್-ಕೆಯಲ್ಲಿ ರಾಜ್ಯಕ್ಕೆ ಮೊದಲ ರ್ಯಾಂಕ್ ಬಂದಿರುವ ಅಧೋಕ್ಷಜ ಮಧ್ವರಾಜ್ ಶ್ರೀಚೈತನ್ಯ ಶಾಲೆಯ ವಿದ್ಯಾರ್ಥಿಯಾಗಿದ್ದಾನೆ. ಒಟ್ಟಾರೆ ಮೊದಲ 100 ರ್ಯಾಂಕ್ಗಳಲ್ಲಿ 25 ವಿದ್ಯಾರ್ಥಿಗಳು ಚೈತನ್ಯ ಶಾಲೆಯವರಾಗಿದ್ದಾರೆ. ಶ್ರೀಚೈತನ್ಯ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಬಿ.ಎಸ್.ರಾವ್ ಹಾಗೂ ನಿರ್ದೇಶಕಿ ಸುಷ್ಮಾ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.
ನಂತರ ಮಾತನಾಡಿದ ಬಿ.ಎಸ್.ರಾವ್, ಅಧೋಕ್ಷಜ ಮಧ್ವರಾಜ್ ಹಾಗೂ ಬಿ.ಫಾರ್ವದಲ್ಲಿ ರಾಜ್ಯದ ಟಾಪ್ಟೆನ್ ರ್ಯಾಂಕ್ ಪಟ್ಟಿಯಲ್ಲಿ 10ನೇ ಸ್ಥಾನಗಳಿಸಿರುವ ಎಸ್. ಹರ್ಷಿತ್ ನಮ್ಮ ಕಾಲೇಜಿನ ವಿದ್ಯಾರ್ಥಿ. ರಾಜ್ಯದಲ್ಲಿ 100ನೇ ರ್ಯಾಂಕ್ಗಳ ಪೈಕಿ ಇಂಜಿನಿಯರಿಂಗ್ನಲ್ಲಿ 4, ವೈದ್ಯಕೀಯ-6, ಬಿ-ಫಾರ್ವ 7 ಮತ್ತು ಐಎಸ್ಎಂಎಚ್ 4 ರ್ಯಾಂಕ್ ನಮ್ಮ ವಿದ್ಯಾರ್ಥಿಗಳ ಪಾಲಾಗಿದೆ. ಪ್ರತಿ ವರ್ಷ ಐಐಟಿ, ಎನ್ಐಟಿಗೆ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆಯಾಗುತ್ತಿದ್ದಾರೆ.
ನೀಟ್ ಪರೀಕ್ಷೆಯಲ್ಲೂ ನಮ್ಮ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸುತ್ತಾರೆ ಎಂಬ ನಂಬಿಕೆ ಇದೆ. ವಿದ್ಯಾರ್ಥಿಗಳಲ್ಲಿ ಒಂದಲ್ಲ ಒಂದು ಪ್ರತಿಭೆ ಇದೆ. ಇದನ್ನು ಸದುಪಯೋಗ ಪಡಿಸಿಕೊಳ್ಳುವುದು ವಿದ್ಯಾರ್ಥಿಗಳ ಕೈಯಲ್ಲಿಯೇ ಇದೆ. ಮುಂದೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕುವಂತೆ ಸಲಹೆ ನೀಡಿದರು. ನಿರ್ದೇಶಕಿ ಸುಷ್ಮಾ ಮಾತನಾಡಿ, ಸಿಇಟಿ, ಕಾಮೆಡ್-ಕೆ, ಜೆಇಇ ಪರೀಕ್ಷೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ ಗಮನಿಸಿದರೆ ಮುಂದೆ ಜೆಇಇ- ಅಡ್ವಾನ್ಸ್, ನೀಟ್, ಎಐಐಎಂಎಸ್, ಜೆಐಪಿಎಂಇಆರ್ ಪರೀಕ್ಷೆಯಲ್ಲೂ ಉತ್ತಮ ರ್ಯಾಂಕ್ಗಳಿಸುತ್ತಾರೆ ಎಂಬ ಭರವಸೆ ಹೊಂದಿದ್ದೇವೆ ಎಂದರು.
ಕಾಲೇಜಿನಲ್ಲಿ ನೀಡಿರುವ ಮಾರ್ಗದರ್ಶನ, ಪಾಲಕರ ಸಹಕಾರದಿಂದ ಹೆಚ್ಚಿನ ಅಂಕಗಳಿಸಲು ಸಾಧ್ಯವಾಯಿತು. ನಾನು ಜೆಇಇ ಪರೀಕ್ಷೆಗೆ ಸಿದ್ಧನಾಗುತ್ತಿದ್ದರಿಂದ ಕಾಮೆಡ್-ಕೆಯಲ್ಲಿ ಹೆಚ್ಚಿನ ಅಂಕಗಳಿಸಲು ಸಾಧ್ಯವಾಗಿದೆ. ನಾನು ಪ್ರತಿನಿತ್ಯ 4-5ಗಂಟೆ ವ್ಯಾಸಂಗ ಮಾಡುತ್ತಿದ್ದೆ. ಈ ಒತ್ತಡ ನಿವಾರಿಸಿ ಕೊಳ್ಳಲು ಸಂಗೀತ, ಚಿತ್ರಕಲೆಯಲ್ಲಿ ಹೆಚ್ಚು ತೊಡಗಿಕೊಳ್ಳುತ್ತಿದ್ದೆ. ಐಐಟಿ ಫಲಿತಾಂಶಕ್ಕಾಗಿ ಕಾಯುತ್ತಿದ್ದೇನೆ.
| ಅಧೋಕ್ಷಜ ವಿ.ಮಧ್ವರಾಜ್ 1ನೇ ರ್ಯಾಂಕ್, ಕಾಮೆಡ್-ಕೆ, ಚೈತನ್ಯ ಟೆಕ್ನೋ ಶಾಲೆ,
ಟಾಪ್ 5 ರಾಂಕ್ ವಿಜೇತರಿಗೆ ಶುಲ್ಕ ಇಲ್ಲದೇ ಪ್ರವೇಶಾತಿ
ಉದಯವಾಣಿ, May 29,
ಬೆಂಗಳೂರು: ಸಿಇಟಿಯಲ್ಲಿ ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ಎÇÉಾ ಏಳು ವಿಭಾಗಗಳಲ್ಲೂ ಟಾಪ್ ಐದು ರಾಂಕ್ ಗಳಿಸಿದ ವಿದ್ಯಾರ್ಥಿಗಳಿಗೆ ಸರ್ಕಾರದಿಂದಲೇ ಶುಲ್ಕ ಭರಿಸುವ ಸೌಲಭ್ಯ ಈ ವರ್ಷವೂ ಮುಂದುವರಿಯಲಿದೆ. ಈ
ಅಭ್ಯರ್ಥಿಗಳು ಕರ್ನಾಟಕದ ಯಾವುದೇ ಕಾಲೇಜಿಗೆ ಸಿಇಟಿ ಸೀಟು ಮೂಲಕ ಪ್ರವೇಶ ಪಡೆದರೆ ಆ ವಿದ್ಯಾರ್ಥಿಗಳು ಪಾವತಿಸಬೇಕಾದ ಶುಲ್ಕವನ್ನು ಸರ್ಕಾರವೇ ತುಂಬಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ಪ್ರಕಾಶ್ ಪಾಟೀಲ್ ಹೇಳಿದ್ದಾರೆ.
2013ರಲ್ಲಿ ಟಾಪ್ ಐದು ವಿದ್ಯಾರ್ಥಿಗಳಿಗೆ ಸರ್ಕಾರದಿಂದಲೇ ಶುಲ್ಕ ಮರುಪಾವತಿ ಮಾಡುವ ಸೌಲಭ್ಯ ಆರಂಭಿಸಲಾಯಿತು. ಆರಂಭದಲ್ಲಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ/ದಂತ ವೈದ್ಯಕೀಯಕ್ಕೆ ಮಾತ್ರ ಇದ್ದ ಈ ಸೌಲಭ್ಯವನ್ನು 2014ರಲ್ಲಿ ಎÇÉಾ ಕೋರ್ಸುಗಳಿಗೂ ವಿಸ್ತರಿಸಲಾಯಿತು.
ಉತ್ತರಪತ್ರಿಕೆ ಪ್ರತಿ ಲಭ್ಯ
ಸಿಇಟಿ ಅಭ್ಯರ್ಥಿಗಳ ಅನುಕೂಲಕ್ಕಾಗಿ ಈ ವರ್ಷವೂ ಎÇÉಾ ಓಎಂಆರ್ ಉತ್ತರ ಪತ್ರಿಕೆಗಳ ಸ್ಕಾÂನ್ ಪ್ರತಿಗಳನ್ನು ಪ್ರಾಧಿಕಾರದ ವೆಬ್ಸೈಟ್ನಲ್ಲಿ ವಿದ್ಯಾರ್ಥಿಗಳ ಪರಿಶೀಲನೆಗಾಗಿ ಪ್ರಕಟಿಸಲಾಗಿದ್ದು, ಅಭ್ಯರ್ಥಿಗಳು ತಮ್ಮ ಓಎಂಆರ್ ಪ್ರತಿಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಫಲಿತಾಂಶ ಅಥವಾ ಅಂಕದಲ್ಲಿ ಯಾವುದೇ ವ್ಯತ್ಯಾಸಗಳಿದ್ದಲ್ಲಿ ಅದನ್ನು ಪ್ರಾಧಿಕಾರದ ಗಮನಕ್ಕೆ ತರಬಹುದು. ರ್ಯಾಂಕ್ ತಡೆಹಿಡಿಯಲ್ಪಟ್ಟಿರುವ ಅಭ್ಯರ್ಥಿಗಳು ತಮ್ಮ ಅರ್ಹತಾ ಪರೀಕ್ಷೆಯ ಅಂಕಪಟ್ಟಿಯ ಯಥಾ ಪ್ರತಿಯನ್ನು
ಕೆಇಎ ಕಚೇರಿಗೆ ಇ-ಮೇಲ್ keauthority&kanic.in ಮೂಲಕ ಅಥವಾ ಖು¨ªಾಗಿ ಸಲ್ಲಿಸಿ ತಮ್ಮ ರ್ಯಾಂಕ್ ಪಡೆದುಕೊಳ್ಳಬಹುದು ಎಂದು ಕೆಇಎ ಅಧಿಕಾರಿಗಳು ತಿಳಿಸಿ¨ªಾರೆ.
ಸಿಇಟಿ ಪರೀಕ್ಷೆಯಲ್ಲಿ ಆಳ್ವಾಸ್ ಗೆ ನಂ.1 . ; ಅನಂತ್ಗೆ ‘ ಐದು ಲಕ್ಷ’ ಪ್ರೋತ್ಸಾಹ ಧನ
ಮೂಡುಬಿದಿರೆ: ಈ ಸಾಲಿನ ಸಿಇಟಿ ಫಲಿತಾಂಶದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಅನಂತ್ ಜಿ. ಮೆಡಿಕಲ್ ಸಹಿತ ಬಿಎಸ್ಸಿ ಕೃಷಿ, ವೆಟರ್ನರಿ ಸೈನ್ಸ್ನಲ್ಲಿ ಮೊದಲ ರ್ಯಾಂಕ್ ಪಡೆಯುವುದರೊಂದಿಗೆ ಗಮನಾರ್ಹ ಸಾಧನೆ ದಾಖಲಿಸಿದ್ದಾರೆ.
ಉತ್ತರ ಕನ್ನಡ ಮೂಲದವರಾಗಿದ್ದು ಪ್ರಸ್ತುತ ಬೆಂಗಳೂರಿನಲ್ಲಿರುವ ಅನಂತ್ ಭೌತಶಾಸ್ತ್ರದಲ್ಲಿ 55, ಕೆಮಿಸ್ಟ್ರಿಯಲ್ಲಿ 59, ಗಣಿತದಲ್ಲಿ 55, ಬಯಾಲಜಿ 60, ಅಂಕಗಳನ್ನು ಪಡೆದಿದ್ದು ಪಿಸಿಎಂನಲ್ಲಿ 169 ಹಾಗೂ ಪಿಸಿಬಿಯಲ್ಲಿ 174 ಅಂಕಗಳಿಸಿದ್ದಾರೆ. ಈ ರೀತಿ ಪಿಸಿಬಿಯಲ್ಲಿ ವಿದ್ಯಾರ್ಥಿಯೋರ್ವ 180ರಲ್ಲಿ 174 ಅಂಕಗಳನ್ನು ಪಡೆದಿರುವುದೂ ಅಪರೂಪದ ಸಾಧನೆ. ಈ ದಾಖಲೆಯೂ ಅನಂತ್ ಪಾಲಾಗಿದೆ.
ಎಸ್ಸೆಸ್ಸೆಲ್ಸಿಯಲ್ಲಿ ಶೇ 98 ಅಂಕಗಳು, ಪಿಯುಸಿಯಲ್ಲಿ ಶೇ 97.7 ಅಂಕಗಳನ್ನು ಪಡೆದಿದ್ದ ಅನಂತ್ ಶೈಕ್ಷಣಿಕ ಪ್ರತಿಭಾವಂತರಾಗಿ ಉಚಿತ ದತ್ತು ಶಿಕ್ಷಣ ಯೋಜನೆಯಡಿ ಆಳ್ವಾಸ್ನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದಿದ್ದಾರೆ. ಸಿಇಟಿಯಲ್ಲಿ ಮೊದಲ ರ್ಯಾಂಕ್ ಪಡೆದ ವಿದ್ಯಾರ್ಥಿಯನ್ನು ನೀಡುವ ಮೂಲಕ ಈ ಬಾರಿ ಆಳ್ವಾಸ್ ಗಮನಾರ್ಹ ಸಾಧನೆ ದಾಖಲಿಸಿದೆ. ಈ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸಂತಸವನ್ನು ಮಾಧ್ಯಮದವರೊಂದಿಗೆ ಹಂಚಿಕೊಂಡ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಈವರೆಗೆ ಸುಮಾರು 353 ಮಂದಿ ಮೆಡಿಕಲ್ಗೆ ಹೋಗಿದ್ದು 8 ನೇ ರ್ಯಾಂಕ್ ನಮ್ಮಲ್ಲಿ ಬಂದಿತ್ತು. ಈಗ ಅನಂತ್ ಮೊದಲ ರ್ಯಾಂಕ್ ಸಾಧನೆ ಮಾಡಿದ್ದಾರೆ. 180ರಲ್ಲಿ 174 ಅಂಕಗಳಿಸಿರುವುದೂ ಅಪರೂಪದ ದಾಖಲೆಯೊಂದಿಗೆ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಕೀರ್ತಿ ಗಳಿಸಿದ್ದಾನೆ.
ಸಿಇಟಿ ಸಾಧಕರು: ಸಿಇಟಿ ಸಾಧಕರ ಟಾಪ್ ಟೆನ್ ಪಟ್ಟಿಯಲ್ಲಿ ಆಳ್ವಾಸ್ನ ಅನಂತ್ ಹಾಗೂ ಅಭಿಲಾಶ್ ಅವಳಿ ಸಾಧಕರಾಗಿದ್ದಾರೆ. ಅನಂತ್ ಬಿಎಸ್ಸಿ ಕೃಷಿ, ವೆಟರ್ನರಿ ಸೈನ್ಸ್ನಲ್ಲಿ ಪ್ರಥಮ, ಬಿಫಾರ್ಮಾ, ಡಿ ಫಾರ್ಮಾದಲ್ಲಿ 6ನೇ ರ್ಯಾಂಕ್, ಐಎಸ್ಎಂಎಚ್. ನಲ್ಲಿ 03ನೇ ರ್ಯಾಂಕ್ ಹೀಗೆ 5 ಸ್ಥಾನಗಳಲ್ಲಿ ಕಾಣಿಸಿಕೊಂಡಿದ್ದು ಮತ್ತೋರ್ವ ವಿದ್ಯಾರ್ಥಿ ಅಭಿಲಾಷ್ ಬಿಎಸ್ಸಿ ಕೃಷಿಯಲ್ಲಿ 4ನೇ ರ್ಯಾಂಕ್ ಪಡೆದಿದ್ದಾರೆ.
ಆಳ್ವಾಸ್ ವಿದ್ಯಾರ್ಥಿಗಳ ಪೈಕಿ ಸಿ.ಇ.ಟಿಯಲ್ಲಿನ ಮೊದಲ ನೂರು ರ್ಯಾಂಕ್ಗಳೊಳಗೆ 56 ವಿದ್ಯಾರ್ಥಿಗಳು, 200 ರ್ಯಾಂಕಿನೊಳಗೆ 109, 300 ರ್ಯಾಂಕಿನೊಳಗೆ 160, 400 ರ್ಯಾಂಕಿನೊಳಗೆ 223, 500 ರ್ಯಾಂಕಿನೊಳಗೆ 271, 1000 ರ್ಯಾಂಕಿನೊಳಗೆ 532, 2000 ರ್ಯಾಂಕಿನೊಳಗೆ 1038, 3000 ರ್ಯಾಂಕಿನೊಳಗೆ 1479, 5000 ರ್ಯಾಂಕಿನೊಳಗೆ 2189, 1000 ರ್ಯಾಂಕಿನೊಳಗೆ 3873 ಮಂದಿ ವಿದ್ಯಾರ್ಥಿಗಳು ಸ್ಥಾನ ಪಡೆದುಕೊಂಡಿದ್ದರೆ.
ಅನಂತ್ನಿಗೆ ‘ ಐದು ಲಕ್ಷ’ ಪ್ರೋತ್ಸಾಹ ಧನ
ಸಿಇಟಿಯಲ್ಲಿ ಮೆಡಿಕಲ್ ಸಹಿತ ಬಿಎಸ್ಸಿ ಕೃಷಿ, ವೆಟರ್ನರಿ ಸೈನ್ಸ್ನಲ್ಲಿ ಮೊದಲ ರ್ಯಾಂಕ್ ಪಡೆದಿರುವ ಸಾಧಕ ಆಳ್ವಾಸ್ ವಿದ್ಯಾರ್ಥಿ ಅನಂತ್ ಜಿ.ಯವರಿಗೆ ಈ ಅಪರೂಪದ ಸಾಧನೆಗಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ 5 ಲಕ್ಷ ರು. ನಗದು ಪ್ರೋತ್ಸಾಹ ಧನ ನೀಡುವುದಾಗಿ ಡಾ.ಎಂ. ಮೋಹನ್ ಆಳ್ವ ತಿಳಿಸಿದರು. ಇತ್ತಿಚಿಗೆ ಪಿ.ಯು.ಸಿ ಫಲಿತಾಂಶದಲ್ಲಿ ಕಾಮರ್ಸ್ನಲ್ಲಿ ರಾಜ್ಯದಲ್ಲಿ 2 ನೇ ರ್ಯಾಂಕ್ ಪಡೆದಿದ್ದ ದಕ್ಷಾ ಜೈನ್ ಮತ್ತು ಆಶಿಕ್ ನಾರಾಯಣ್ ಅವರಿಗೆ ತಲಾ 1 ಲಕ್ಷ ರು. ನಗದು ಬಹುಮಾನ ನೀಡಿ, ಹಾಗೂ ಅವರಿಗೆ ಮುಂದಿನ ವಿದ್ಯಾಭ್ಯಾಸಕ್ಕೂ ಉಚಿತ ಶಿಕ್ಷಣ ನೀಡಲಾಗುವುದು ಎಂದು ಡಾ.ಆಳ್ವ ತಿಳಿಸಿದ್ದಾರೆ.
ಮೆಡಿಕಲ್ನಲ್ಲಿ 7 ವಿದ್ಯಾರ್ಥಿಗಳು 100 ರ್ಯಾಂಕಿನೊಳಗಿನ ಸಾಧನೆ ಮಾಡಿದ್ದಾರೆ. ಅನಂತ್ ಜಿ (1) ಅಭಿಲಾಷ್ (37) ವಿನಯಕುಮಾರ್ ತುರುಮುರಿ (50) ಸೃಷ್ಟಿ (58) ಮಧು ಬಿ,ಕೆ. (66) ನಿಹಾಲ್ ಹೆಚ್.ಜಿ (77) ಮತ್ತು ಪವನ್ ಕುಮಾರ್ (90) ಈ ಸಾಧಕರಾಗಿದ್ದಾರೆ. ಇದೇ ವೇಳೆ ಮೆಡಿಕಲ್ನಲ್ಲಿಯೂ 7 ಮಂದಿ ವಿದ್ಯಾರ್ಥಿಗಳು ಪವನ್ (15) ಅಭಿಲಾಷ್ (16) ಅನಂತ್ (18) ಸಿದ್ಧೇಶ್ ( 32) ಚೆನ್ನವೀರೇಶ (46) ವಿನಯ ಕುಮಾರ್ ತುರುಮುರಿ (72) ಭರತ್ (80) ಈ ಸಾಧಕರಾಗಿದ್ದಾರೆ.
ಸಿಇಟಿ ಸಾಧಕರು..
* ಅನಂತ್ ಜಿ. ಮೆಡಿಕಲ್, ಬಿಎಸ್ಸಿ ಕೃಷಿ, ವೆಟರ್ನರಿ ಸೈನ್ಸ್ನಲ್ಲಿ ಮೊದಲ ರ್ಯಾಂಕ್
* ಪಿಸಿಬಿಯಲ್ಲಿ 180ರಲ್ಲಿ 174 ಅಂಕಗಳನ್ನು ಪಡೆದಿರುವುದೂ ಅನಂತ್ಗೆ ಅಪರೂಪದ ಸಾಧನೆ.
* ಬಯೋಲಜಿಯಲ್ಲಿ ಅನಂತ್, ಗಣಿತದಲ್ಲಿ ಪವನ್ ಕುಮಾರ್ಮ ಸಿದ್ಧೇಶ್,ಸಚಿನ್ 60ರಲ್ಲಿ 60 ಅಂಕ
* ಮೊದಲ ನೂರು ರ್ಯಾಂಕ್ಗಳೊಳಗೆ 56 ವಿದ್ಯಾರ್ಥಿಗಳು,
* ಮೆಡಿಕಲ್, ಎಂಜಿನಿಯರಿಂಗ್ನಲ್ಲಿ 100 ರ್ಯಾಂಕೊಳಗೆ ತಲಾ 7 ವಿದ್ಯಾರ್ಥಿಗಳು.