Monthly Archives: April 2019

ದ್ವಿತೀಯ ಪಿಯುಸಿ 2019 ರ ಫಲಿತಾಂಶ

*ಬ್ರೇಕಿಂಗ್ : ಪಿಯುಸಿ ಫಲಿತಾಂಶ ಪ್ರಕಟ, ಉಡುಪಿ ಫಸ್ಟ್, ಚಿತ್ರದುರ್ಗ ಲಾಸ್ಟ್, ಬಾಲಕಿಯರೇ ಬೆಸ್ಟ್..!

Monday, 15 Apr,2019.

ಬೆಂಗಳೂರು, ಏ.15-ಮಾರ್ಚ್ ತಿಂಗಳಲ್ಲಿ ನಡೆದ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, 61.73ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಎಂದಿನಂತೆ ಈ ವರ್ಷವೂ ಬಾಲಕಿಯರು ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ.
ಜಿಲ್ಲಾವಾರು ಫಲಿತಾಂಶದಲ್ಲಿ ಉಡುಪಿ ಮೊದಲ ಸ್ಥಾನದಲ್ಲಿದ್ದರೆ, ಚಿತ್ರದುರ್ಗ ಕೊನೆ ಸ್ಥಾನದಲ್ಲಿದೆ. 2019ರ ಮಾರ್ಚ್ 1 ರಿಂದ 18ರವರೆಗೆ 1013 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆದಿತ್ತು.

ಮಾ.25 ರಿಂದ ಏ.7ರವರೆಗೆ 54 ಮೌಲ್ಯ ಮಾಪನ ಕೇಂದ್ರಗಳಲ್ಲಿ 22,746 ಮೌಲ್ಯಮಾಪಕರು ಮೌಲ್ಯಮಾಪನ ನಡೆಸಿದ್ದರು. ಈ ಬಾರಿಯ ಪರೀಕ್ಷೆಗೆ 6,71,653 ವಿದ್ಯಾರ್ಥಿಗಳು ಹಾಜರಾಗಿದ್ದರು.
ಅವರಲ್ಲಿ 4,14,587 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಹೊಸಬರ ಪೈಕಿ 5,58,399 ವಿದ್ಯಾರ್ಥಿಗಳು ಹಾಜರಾಗಿ, 3,83,521 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ.68.68ರಷ್ಟು ಫಲಿತಾಂಶ ಬಂದಿದೆ.

ಪುನರಾವರ್ತಿತ ವಿದ್ಯಾರ್ಥಿಗಳ ಪೈಕಿ 85,585 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 23,425 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಶೇ.27.37 ರಷ್ಟು ಫಲಿತಾಂಶ ಬಂದಿದೆ.
ಖಾಸಗಿ ವಿದ್ಯಾರ್ಥಿಗಳ ಪೈಕಿ 27,669 ವಿದ್ಯಾರ್ಥಿಗಳು ಹಾಜರಾಗಿದ್ದು, 7,641 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ.27.62ರಷ್ಟು ಫಲಿತಾಂಶ ಬಂದಿದೆ. ಕಲಾ ವಿಭಾಗದಲ್ಲಿ 2,00,022 ವಿದ್ಯಾರ್ಥಿಗಳು ಹಾಜರಾಗಿದ್ದು, 1,01073 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ.50.53ರಷ್ಟು ಫಲಿತಾಂಶ ಬಂದಿದೆ.
ವಾಣಿಜ್ಯ ವಿಭಾಗದಲ್ಲಿ 2,53,865 ವಿದ್ಯಾರ್ಥಿಗಳು ಹಾಜರಾಗಿದ್ದು, 1,68,531 ವಿದ್ಯಾರ್ಥಿಗಳು ತೇರ್ಗಡೆಯಾಗಿ, ಶೇ.66.39ರಷ್ಟು ಫಳಿತಾಂಶ ಬಂದಿದೆ.
ವಿಜ್ಞಾನ ವಿಭಾಗದಲ್ಲಿ 2,17,766 ವಿದ್ಯಾರ್ಥಿಗಳು ಹಾಜರಾಗಿ 1,14,983 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ.66.58ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಪ್ರತಿ ವರ್ಷದಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಪರೀಕ್ಷೆಗೆ ಹಾಜರಾದ 3,33,983 ವಿದ್ಯಾರ್ಥಿನಿಯರ ಪೈಕಿ 2,27,897 ವಿದ್ಯಾರ್ಥಿನಿಯರು ತೇರ್ಗಡೆಯಾಗಿ ಶೇ.68.24ರಷ್ಟು ಫಲಿತಾಂಶ ಗಳಿಸಿದ್ದಾರೆ.
ಬಾಲಕರು 3,37,668 ವಿದ್ಯಾರ್ಥಿಗಳು ಹಾಜರಾಗಿ, 1,86,691 ಮಂದಿ ಪಾಸಾಗಿದ್ದು, ಶೇ.55.29ರಷ್ಟು ಫಲಿತಾಂಶ ಬಂದಿದೆ. ನಗರ ಪ್ರದೇಶದಲ್ಲಿ 5,22,391 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 3,20,657 ವಿದ್ಯಾರ್ಥಿಗಳು ತೇರ್ಗಡೆಯಾಗಿ, ಶೇ.61.38ರಷ್ಟು ಮಂದಿ ಪಾಸಾಗಿದ್ದಾರೆ.
ಗ್ರಾಮೀಣ ಭಾಗದಲ್ಲಿ 1,49,262 ವಿದ್ಯಾರ್ಥಿಗಳು ಹಾಜರಾಗಿ 93,860 ವಿದ್ಯಾರ್ಥಿಗಳು ಪಾಸಾಗಿದ್ದು, ಶೇ.62.88ರಷ್ಟು ಮಂದಿ ತೇರ್ಗಡೆಯಾಗಿದ್ದಾರೆ. ನಗರ ಪ್ರದೇಶಕ್ಕಿಂತಲೂ ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳ ಉತ್ತೀರ್ಣದ ಪ್ರಮಾಣ ಶೇ.1.5ರಷ್ಟು ಹೆಚ್ಚಿದೆ.
ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಶೇ.60.80ರಷ್ಟು, ಅನುದಾನಿತ ಕಾಲೇಜಿನಲ್ಲಿ ಶೇ.65.37ರಷ್ಟು, ಅನುದಾನ ರಹಿತ ಕಾಲೇಜಿನಲ್ಲಿ ಶೇ.73.64ರಷ್ಟು, ವಿಭಜಿತ ಕಾಲೇಜಿನಲ್ಲಿ ಶೇ.72.46ರಷ್ಟು , ಕಾರ್ಪೊರೇಷನ್ ಕಾಲೇಜಿನಲ್ಲಿ ಶೇ.62.60ರಷ್ಟು ಫಲಿತಾಂಶ ಬಂದಿದೆ.

ಇನ್ನು ಜಾತಿವಾರು ಕೂಡ ಫಲಿತಾಂಶ ವರ್ಗೀಕರಣ ಮಾಡಲಾಗಿದ್ದು, ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಶೇ.51.97ರಷ್ಟು , ಪರಿಶಿಷ್ಟ ಪಂಗಡದ ಶೇ.53.34ರಷ್ಟು, ಪ್ರವರ್ಗದಲ್ಲಿ ಶೇ.60.09ರಷ್ಟು , ಪ್ರವರ್ಗ 2ಎ ನಲ್ಲಿ ಶೇ.65.99ರಷ್ಟು, ಪ್ರವರ್ಗ 2ಬಿನಲ್ಲಿ ಶೇ.57.07ರಷ್ಟು , ಪ್ರವರ್ಗ 3ಎ ನಲ್ಲಿ ಶೇ.68.86ರಷ್ಟು , ಪ್ರವರ್ಗ 3 ಬಿ ನಲ್ಲಿ ಶೇ.65.03ರಷ್ಟು , ಸಾಮಾನ್ಯ ವರ್ಗದಲ್ಲಿ ಶೇ.68.01ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕನ್ನಡ ಮಾಧ್ಯಮದಲ್ಲಿ ಶೇ.55.08ರಷ್ಟು, ಇಂಗ್ಲೀಷ್ ಮಾಧ್ಯಮದಲ್ಲಿ ಓದಿದವರು ಶೇ.66.90ರಷ್ಟು ಮಂದಿ ಪಾಸಾಗಿದ್ದಾರೆ. ಶೇ.85ಕ್ಕಿಂತಲೂ ಹೆಚ್ಚಿನ ಅಂಕ ಪಡೆದು 54,823 ಮಂದಿ ಡಿಸ್ಟಿಂಕ್ಷನ್ನಲ್ಲಿ ಪಾಸಾಗಿದ್ದರೆ, ಶೇ.60ಕ್ಕಿಂತ ಹೆಚ್ಚು ಅಂಕ ಪಡೆದು 2,27,301 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ.
80,357 ಮಂದಿ ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದು, ಶೇ.50ಕ್ಕಿಂತ ಕಡಿಮೆ ಅಂಕ ಪಡೆದು 52,106 ಮಂದಿ ತೃತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ. ಕನ್ನಡ ವಿಷಯದಲ್ಲಿ 161, ಸಂಸ್ಕøತದಲ್ಲಿ 852, ಹಿಂದಿಯಲ್ಲಿ 35, ಐಚ್ಛಿಕ ಕನ್ನಡದಲ್ಲಿ 07, ಇತಿಹಾಸದಲ್ಲಿ 155, ಅರ್ಥಶಾಸ್ತ್ರದಲ್ಲಿ 303, ತರ್ಕಶಾಸ್ತ್ರದಲ್ಲಿ 23, ಭೂಗೋಳ ಶಾಸ್ತ್ರದಲ್ಲಿ 757, ಹಿಂದೂಸ್ತಾನಿ ಸಂಗೀತ ಮತ್ತು ಮಲಯಾಳಂನಲ್ಲಿ ತಲಾ ಒಬ್ಬರು, ವ್ಯವಹಾರ ಅಧ್ಯಯನದಲ್ಲಿ 955, ಸಮಾಜಶಾಸ್ತ್ರದಲ್ಲಿ 58, ರಾಜ್ಯಶಾಸ್ತ್ರದಲ್ಲಿ 117, ಉರ್ದುವಿನಲ್ಲಿ 02, ಲೆಕ್ಕಶಾಸ್ತ್ರದಲ್ಲಿ 1939, ಸಂಖ್ಯಾಶಾಸ್ತ್ರದಲ್ಲಿ 977, ಮನಃಶಾಸ್ತ್ರದಲ್ಲಿ 19, ಭೌತಶಾಸ್ತ್ರದಲ್ಲಿ 07, ರಸಾಯನ ಶಾಸ್ತ್ರದಲ್ಲಿ 754, ಗಣಿತ ಶಾಸ್ತ್ರದಲ್ಲಿ 2447, ಜೀವಶಾಸ್ತ್ರದಲ್ಲಿ 128, ಎಲೆಕ್ಟ್ರಾನಿಕ್ಸ್ನಲ್ಲಿ 93, ಗಣಕವಿಜ್ಞಾನದಲ್ಲಿ 1546, ಶಿಕ್ಷಣದಲ್ಲಿ 314, ಬೇಸಿಕ್ ಮ್ಯಾಥ್ಸ್ನಲ್ಲಿ 357 ಮಂದಿ ಶೇ.100ಕ್ಕೆ ನೂರರಷ್ಟು ಅಂಕಪಡೆದಿದ್ದಾರೆ.

*ಜಿಲ್ಲಾವಾರು ಫಲಿತಾಂಶ:

1) ಉಡುಪಿ ಶೇ.92.20

2) ದಕ್ಷಿಣಕನ್ನಡ ಶೇ.90.91

3) ಕೊಡಗು ಶೇ.83.31

4) ಉತ್ತರ ಕನ್ನಡ ಶೇ.79.59

5) ಚಿಕ್ಕಮಗಳೂರು ಶೇ.76.42

6) ಹಾಸನ ಶೇ.75.19

7) ಬಾಗಲಕೋಟೆ ಶೇ.74.26

8) ಬೆಂಗಳೂರು ದಕ್ಷಿಣ ಶೇ.74.25

9) ಶಿವಮೊಗ್ಗ ಶೇ.73.54

10) ಬೆಂಗಳೂರು ಗ್ರಾಮಾಂತರ ಶೇ.72.91

11) ಬೆಂಗಳೂರು ಉತ್ತರ ಶೇ.72.68

12) ಚಾಮರಾಜನಗರ ಶೇ.72.67

13) ಚಿಕ್ಕಬಳ್ಳಾಪುರ ಶೇ.70.11

14) ವಿಜಯಪುರ ಶೇ.68.55

15) ಮೈಸೂರು ಶೇ.68.55

16) ಹಾವೇರಿ ಶೇ.68.40

17) ತುಮಕೂರು ಶೇ.65.81

18) ಕೋಲಾರ ಶೇ.65.19

19) ಬಳ್ಳಾರಿ ಶೇ.64.87

20) ಕೊಪ್ಪಳ ಶೇ.63.15

21) ಮಂಡ್ಯ ಶೇ.63.08

22) ದಾವಣಗೆರೆ ಶೇ.62.53

23) ಧಾರವಾಡ ಶೇ.62.49

24) ರಾಮನಗರ ಶೇ.62.08

25) ಚಿಕ್ಕೋಡಿ ಶೇ.60.86

26) ಗದಗ ಶೇ.57.76

27) ರಾಯಚೂರು ಶೇ.56.73

28) ಬೆಳಗಾವಿ ಶೇ.56.18

29) ಕಲಬುರಗಿ ಶೇ.56.09

30) ಬೀದರ್ ಶೇ.55.78

31) ಯಾದಗಿರಿ ಶೇ.53.02

32) ಚಿತ್ರದುರ್ಗ ಶೇ.51.42.

ಇನ್ನು ವಿಕಲಚೇತನರ ಪೈಕಿ ದೃಷ್ಟಿಮಾಂದ್ಯರು 717 ಮಂದಿ, ಶ್ರವಣ ಮತ್ತು ವಾಕ್ ದೋಷವುಳ್ಳವರು 106 ಮಂದಿ, ಆರ್ಥೋ ಸಮಸ್ಯೆ ಇರುವವರು 250 ಮಂದಿ, ಡಿಸ್ಲೇಲೆಕ್ಷಿಯಾ ಸಮಸ್ಯೆ ಇರುವವರು 236 ಮಂದಿ ಉತ್ತೀರ್ಣರಾಗಿದ್ದಾರೆ.

18 ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಶೇ.100 ರಷ್ಟು ಫಲಿತಾಂಶ ಪಡೆದರೆ, 03 ಕಾಲೇಜುಗಳು ಶೂನ್ಯ ಫಲಿತಾಂಶ ಪಡೆದಿವೆ. ಅನುದಾನಿತ ಕಾಲೇಜುಗಳ ಪೈಕಿ ಒಂದು ಶೇ.100ರಷ್ಟು ಫಲಿತಾಂಶ ಪಡೆದರೆ ಮತ್ತೊಂದು ಶೂನ್ಯ ಫಲಿತಾಂಶ ಪಡೆದಿದೆ. ಅನುದಾನ ರಹಿತ 63 ಕಾಲೇಜುಗಳು ಶೇ.100ರಷ್ಟು ಫಲಿತಾಂಶ ಪಡೆದರೆ, 94 ಕಾಲೇಜುಗಳು ಶೂನ್ಯ ಫಲಿತಾಂಶ ಪಡೆದಿದೆ.
ವಿಭಜಿತ ಕಾಲೇಜುಗಳಲ್ಲಿ ಒಂದು ಕಾಲೇಜು ಮಾತ್ರ ಶೇ.100 ರಷ್ಟು ಫಲಿತಾಂಶ ಪಡೆದಿದೆ. ಒಟ್ಟು ರಾಜ್ಯದಲ್ಲಿ 9 ಕಾಲೇಜುಗಳು 100ರಷ್ಟು ಫಲಿತಾಂಶ ಪಡೆದಿದ್ದು, 98 ಕಾಲೇಜುಗಳು ಶೂನ್ಯ ಫಲಿತಾಂಶ ಪಡೆದಿವೆ.
ಫಲಿತಾಂಶ ಲಭ್ಯವಾಗುವ ವೆಬ್ ಸೈಟ್ ವಿಳಾಸ : http://pue.kar.nic.in / http://www.karresults.nic.in

***

ಪಂಕ್ಚರ್ ಹಾಕುತ್ತಲೇ ಪಿಯುಸಿ ಟಾಪರ್ ಆದ ಬಳ್ಳಾರಿಯ ಕುಸುಮ!

2nd PU Result 2019: ಕಷ್ಟಪಟ್ಟರೆ ಯಶಸ್ಸು ಖಂಡಿತ ಎನ್ನುವ ಮಾತಿಗೆ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಮೊದಲ ಸ್ಥಾನ ಗಳಿಸಿರುವ ಕುಸುಮಾ ಅತ್ಯುತ್ತಮ ಉದಾಹರಣೆ. ಪಂಕ್ಷರ್ ಅಂಗಡಿಯಲ್ಲಿ ತಂದೆಗೆ ಸಹಾಯ ಮಾಡುತ್ತಾ ಓದಿ ಕಲಾ ವಿಭಾಗಕ್ಕೆ ಮೊದಲ ಸ್ಥಾನ ಗಳಿಸಿದ್ದಾರೆ.