ಕಾರ್ಯನಿರ್ವಹಣಾ ವರದಿಯ ಕಾರ್ಯ ವಿಧಾನ
30.05.2018.
| ಲ.ರಾಘವೇಂದ್ರ, ಸೇವಾ ಕಾನೂನು ತಜ್ಞರು
ಕರ್ನಾಟಕ ಸರ್ಕಾರಿ ಸೇವಾ (ಕಾರ್ಯನಿರ್ವಹಣಾ ವರದಿ) ನಿಯಮಗಳು 2000ರಂತೆ ರಾಜ್ಯ ಸರ್ಕಾರದ ಅಧಿಕಾರಿ/ನೌಕರರಿಗೆ (ಎ, ಬಿ ಮತ್ತು ಸಿ ನೌಕರರಿಗೆ) ಪ್ರತಿ ವರ್ಷದ ಆರ್ಥಿಕ ವರ್ಷ ಮುಕ್ತಾಯದ ನಂತರ ಕಾರ್ಯನಿರ್ವಹಣಾ ವರದಿ ಬರೆಯಬೇಕಾಗುತ್ತದೆ. ಈ ವರದಿಯು ಸರ್ಕಾರಿ ನೌಕರನ ಪರೀಕ್ಷಾರ್ಥ ಅವಧಿ ಘೊಷಣೆ ಮತ್ತು ಪದೋನ್ನತಿಗೆ ಅವಶ್ಯಕ. ಇದು ಸರ್ಕಾರಿ ನೌಕರನ ಕಾರ್ಯ ಕ್ಷಮತೆಯನ್ನು ಪ್ರತಿಬಿಂಬಿಸುತ್ತದೆ. ಸರ್ಕಾರವು ಈ ವರದಿ ಬರೆಯುವಿಕೆ ಬಗ್ಗೆ ಈ ನಿಯಮಾವಳಿಯಲ್ಲದೆ, ದಿನಾಂಕ: 29.08.2002ರ ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ: ಸಿಆಸುಇ 4 ಕೆರವ 2002 ರಲ್ಲಿ ಸ್ಪಷ್ಟೀಕರಿಸಲಾಗಿದೆ. ಇದಕ್ಕಾಗಿ ನಿಯಮ 4(2)ರಲ್ಲಿ ವಿವರಿಸಿದ್ದು, ನಿಗದಿಪಡಿಸಿದ ನಮೂನೆಯಲ್ಲಿ ಬರೆಯಬೇಕಾಗುತ್ತದೆ. ಕಾರ್ಯನಿರ್ವಹಣಾ ವರದಿಯ ನಮೂನೆಯು ಒಟ್ಟು 5 ಭಾಗಗಳನ್ನು ಹೊಂದಿರುತ್ತದೆ. ಭಾಗ-1ರಲ್ಲಿ ನೌಕರರು ತನ್ನ ವೈಯಕ್ತಿಕ ಮಾಹಿತಿಯನ್ನು ತುಂಬಿ ಸಹಿ ಮಾಡಬೇಕಾಗುತ್ತದೆ. ಭಾಗ-2ರಲ್ಲಿ ನೌಕರರು ತನ್ನ ಕಾರ್ಯನಿರ್ವಹಣೆ ಬಗ್ಗೆ ಸ್ವಯಂ ಮೌಲ್ಯಮಾಪನ ಮಾಡಬೇಕಾಗುತ್ತದೆ. ಭಾಗ-3ರಲ್ಲಿ ನೌಕರರ ತಕ್ಷಣದ ಮೇಲಾಧಿಕಾರಿಯು ವರದಿ ಪ್ರಾಧಿಕಾರಿಯಾಗಿ ಕಾರ್ಯ ನಿರ್ವಹಣೆ ಬರೆಯಬೇಕು. ಭಾಗ-4ರಲ್ಲಿ ಪರಿಶೀಲನಾ ಪ್ರಾಧಿಕಾರ ಅಂದರೆ ವರದಿ ಮಾಡುವ ಅಧಿಕಾರಿಯ ಮೇಲಿನ ಅಧಿಕಾರಿಯು ಬರೆಯಬೇಕಾಗುತ್ತದೆ. ಭಾಗ-5ರಲ್ಲಿ ಅಂಗೀಕಾರ ಪ್ರಾಧಿಕಾರ ಅಂದರೆ ಸಾಮಾನ್ಯವಾಗಿ ನೇಮಕಾತಿ ಮತ್ತು ಶಿಸ್ತು ಪ್ರಾಧಿಕಾರಿಯೇ ಅಂಗೀಕಾರ ಪ್ರಾಧಿಕಾರಿಯಾಗಿದ್ದು, ಅವರು ಅಂತಿಮವಾಗಿ ಅಂಗೀಕಾರ ಅಥವಾ ತಿರಸ್ಕಾರ ಮಾಡುವ ಪ್ರಾಧಿಕಾರಿಯಾಗಿರುತ್ತಾರೆ.
ನೌಕರನು ತನ್ನ ಕಾರ್ಯನಿರ್ವಹಣಾ ವರದಿಯ ಭಾಗ-1 ಮತ್ತು ಭಾಗ-2 ಭರ್ತಿಮಾಡಿ ಆರ್ಥಿಕ ವರ್ಷ ಮುಕ್ತಾಯವಾಗಿ ಒಂದು ತಿಂಗಳ ಒಳಗೆ ಅಂದರೆ ಏಪ್ರಿಲ್ ತಿಂಗಳಿನಲ್ಲಿ ವರದಿ ಪ್ರಾಧಿಕಾರಕ್ಕೆ ನಿಯಮ 4(2)ರಂತೆ (ಖಜಠಿಠಡಿಣಟಿರ ಂಣಣkಠಡಿಣಥಿ) ಸಲ್ಲಿಸತಕ್ಕದ್ದು. ವರದಿ ಮಾಡುವ ಪ್ರಾಧಿಕಾರವು ನಮೂನೆಯ ಭಾಗ-3ರಲ್ಲಿ ಆ ನೌಕರನ ಕಾರ್ಯನಿರ್ವಹಣೆಯನ್ನು ಮೌಲ್ಯಮಾಪನ ಮಾಡಿ ಮುಂದಿನ 3 ತಿಂಗಳ ಒಳಗಾಗಿ ಅಂದರೆ ಜೂನ್ ಅಂತ್ಯದೊಳಗಾಗಿ ಪರಿಶೀಲನಾ ಪ್ರಾಧಿಕಾರಕ್ಕೆ ಕಳುಹಿಸಬೇಕು (ನಿಯಮ-5). ಪರಿಶೀಲನಾ ಪ್ರಾಧಿಕಾರವು (ಖಜತಜತಿ ಂಣಣkಠಡಿಣಥಿ) ಸಾಮಾನ್ಯವಾಗಿ ವರದಿ ಪ್ರಾಧಿಕಾರದಿಂದ ಸ್ವೀಕೃತಗೊಂಡ ಮೂರು ತಿಂಗಳೊಳಗಾಗಿ ಅಂದರೆ ಸೆಪ್ಟೆಂಬರ್ ತಿಂಗಳಿನ ಕೊನೆಯೊಳಗೆ ಭಾಗ-4ರಲ್ಲಿ ಷರಾ ದಾಖಲಿಸಿ ಅಂಗೀಕಾರ ಪ್ರಾಧಿಕಾರಕ್ಕೆ ಕಳುಹಿಸುವುದು. ಅಂಗೀಕಾರ ಪ್ರಾಧಿಕಾರವು ತಮ್ಮ ಕಚೇರಿಗೆ ಸ್ವೀಕೃತಗೊಂಡ 3 ತಿಂಗಳೊಳಗಾಗಿ ಅಂದರೆ ಸಾಮಾನ್ಯವಾಗಿ ಡಿಸೆಂಬರ್ ಅಂತ್ಯದ ಒಳಗಾಗಿ ಅಂತಿಮ ಟಿಪ್ಪಣಿಯನ್ನು ಬರೆದು ಯಾವ ಪ್ರಾಧಿಕಾರಿಗೆ ಕಾರ್ಯನಿರ್ವಹಣಾ ವರದಿ ರಕ್ಷಿಸಲು ಸುತ್ತೋಲೆಗಳಿರುತ್ತವೆಯೋ ಅಲ್ಲಿ ಸಂರಕ್ಷಿಸಬೇಕು ನಿಯಮ-5(5).
ಸರ್ಕಾರಿ ನೌಕರನು ನಿಗದಿತ ಅವಧಿಯೊಳಗೆ ತನ್ನ ವೈಯಕ್ತಿಕ ಮಾಹಿತಿ ಮತ್ತು ಸ್ವಯಂ ಮೌಲ್ಯಮಾಪನದೊಂದಿಗೆ ಕಾರ್ಯನಿರ್ವಹಣಾ ವರದಿಯನ್ನು ಸಂಬಂಧಪಟ್ಟ ವರದಿ ಪ್ರಾಧಿಕಾರಕ್ಕೆ ಸಲ್ಲಿಸದಿದ್ದಲ್ಲಿ, ಅಂದರೆ ಏಪ್ರಿಲ್ ಅಂತ್ಯದೊಳಗೆ ವರದಿ ಪ್ರಾಧಿಕಾರಕ್ಕೆ ಸಲ್ಲಿಸದಿದ್ದಲ್ಲಿ ಆಗ ಅವರು ಲಭ್ಯವಿರುವ ವೈಯಕ್ತಿಕ ಮಾಹಿತಿಯೊಂದಿಗೆ ಸ್ವಯಂ ಕಾರ್ಯನಿರ್ವಹಣಾ ವರದಿ ಬರೆಯಬೇಕಾಗುತ್ತದೆ ನಿಯಮ-5(3)(ಸಿ).
ಕಾರ್ಯನಿರ್ವಹಣಾ ವರದಿಯನ್ನು, ವರದಿ ಮಾಡುವ ಪ್ರಾಧಿಕಾರ ಅಥವಾ ಆ ಪ್ರಾಧಿಕಾರ ವರ್ಗಾವಣೆಯಾದಲ್ಲಿ ಅಧಿಕಾರ ಹಸ್ತಾಂತರಿಸಿದ ದಿನಾಂಕಕ್ಕೆ ಅನ್ವಯಿಸಿ ಕಾರ್ಯನಿರ್ವಹಣಾ ವರದಿಯನ್ನು ಕೂಡಲೇ ಬರೆಯತಕ್ಕದ್ದು ಮತ್ತು ಅದನ್ನು ಪರಿಶೀಲನಾ ಪ್ರಾಧಿಕಾರಕ್ಕೆ ಕಳುಹಿಸಿಕೊಡಬೇಕು. ಈ ವರದಿಯಲ್ಲಿ ಯಾವ ಅವಧಿಗೆ ವರದಿಯನ್ನು ಬರೆಯಲಾಗಿದೆ ಎಂಬುದನ್ನು ನಮೂದಿಸತಕ್ಕದ್ದು.
ಎಲ್ಲ ವರದಿ ಪ್ರಾಧಿಕಾರಗಳೂ ವರದಿ ವರ್ಷದಲ್ಲಿ ಯಾರಿಗೆ ವರದಿ ಪ್ರಾಧಿಕಾರವಾಗಿರುತ್ತಾರೋ ಅಂತಹ ಎಲ್ಲ ಸರ್ಕಾರಿ ನೌಕರರ ಕಾರ್ಯನಿರ್ವಹಣಾ ವರದಿಗಳನ್ನು ಬರೆದಿರುವುದಾಗಿ ದೃಢೀಕರಣವನ್ನು ಅವರವರ ಕಾರ್ಯನಿರ್ವಹಣಾ ವರದಿಗಳಲ್ಲಿ ನೀಡಬೇಕು. ಆದಾಗ್ಯೂ ಅಂತಹ ಪ್ರಾಧಿಕಾರ, ವರದಿ ಪ್ರಾಧಿಕಾರವಾಗಿ ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾಗಿರುತ್ತಾರೆ ಎಂಬ ಪ್ರತಿಕೂಲ ಷರಾವನ್ನು ಅಂತಹ ವರದಿ ಪ್ರಾಧಿಕಾರದ ಕಾರ್ಯನಿರ್ವಹಣಾ ವರದಿಯಲ್ಲಿ ಪರಿಶೀಲನಾ ಪ್ರಾಧಿಕಾರ ದಾಖಲಿಸಬೇಕಾಗಿರುತ್ತದೆ.
ವರದಿ ಮಾಡಲ್ಪಡುವ ಸರ್ಕಾರಿ ನೌಕರನ ಕಾರ್ಯನಿರ್ವಹಣೆ ವರದಿ ಮಾಡಲ್ಪಡುವ ಅವಧಿಯಲ್ಲಿ ಕನಿಷ್ಟ 3 ತಿಂಗಳವರೆಗೆ ಸಂಬಂಧಪಟ್ಟ ವರದಿ ಪ್ರಾಧಿಕಾರ ನೋಡದೇ ಇದ್ದಲ್ಲಿ, ಆದರೆ ಪರಿಶೀಲನಾ ಪ್ರಾಧಿಕಾರವು ಕನಿಷ್ಠ 3 ತಿಂಗಳವರೆಗೆ ನೋಡಿದ್ದಲ್ಲಿ, ಪರಿಶೀಲನಾ ಪ್ರಾಧಿಕಾರವೇ ವರದಿ ಬರೆದು ಅಂಗೀಕರಿಸುವ ಪ್ರಾಧಿಕಾರಕ್ಕೆ ಕಳುಹಿಸಿಕೊಡಬೇಕು. (ನಿಯಮ-6).
ಒಂದು ವೇಳೆ ವರದಿ ಪ್ರಾಧಿಕಾರ ಮತ್ತು ಪರಿಶೀಲನಾ ಪ್ರಾಧಿಕಾರಗಳೆರಡೂ ಸಂಬಂಧಪಟ್ಟ ಸರ್ಕಾರಿ ನೌಕರನ ಕಾರ್ಯನಿರ್ವಹಣೆಯನ್ನು ಕನಿಷ್ಠ 3 ತಿಂಗಳವರೆಗೆ ನೋಡದೇ ಇದ್ದಲ್ಲಿ, ಆದರೆ ಸಂಬಂಧಪಟ್ಟ ಅಂಗೀಕಾರ ಪ್ರಾಧಿಕಾರವು ನೋಡಿದ್ದಲ್ಲಿ, ಅಂಗೀಕಾರ ಪ್ರಾಧಿಕಾರವೇ ಕಾರ್ಯನಿರ್ವಹಣಾ ವರದಿ ಬರೆಯಬೇಕು(ನಿಯಮ-7).
ಯಾವುದೇ ಒಬ್ಬ ಸರ್ಕಾರಿ ನೌಕರನ ಕಾರ್ಯನಿರ್ವಹಣೆಯನ್ನು ವರದಿ ವರ್ಷದಲ್ಲಿ ಕನಿಷ್ಠ 3 ತಿಂಗಳವರೆಗೆ ವರದಿ ಪ್ರಾಧಿಕಾರ, ಪರಿಶೀಲನಾ ಪ್ರಾಧಿಕಾರ ಮತ್ತು ಅಂಗೀಕಾರ ಪ್ರಾಧಿಕಾರಗಳು ನೋಡದೆ ಇದ್ದಲ್ಲಿ ಸಂಬಂಧಪಟ್ಟ ಪ್ರಾಧಿಕಾರ ಆ ಬಗ್ಗೆ ವರದಿಯಲ್ಲಿ ಸೂಕ್ತ ಟಿಪ್ಪಣಿ ನಮೂದು ಮಾಡಬೇಕು.
ಯಾವುದೇ ಒಬ್ಬ ಸರ್ಕಾರಿ ನೌಕರನು ವರದಿ ವರ್ಷದಲ್ಲಿ 3 ತಿಂಗಳಿಗಿಂತ ಕಡಿಮೆಯಾಗದಂತೆ ನಿರಂತರವಾಗಿ ಯಾವುದೇ ಬಗೆಯ ರಜೆಯಲ್ಲಿದ್ದಲ್ಲಿ, ಅಂತಹ ಅವಧಿಗೆ ಕಾರ್ಯನಿರ್ವಹಣೆಯ ಬಗ್ಗೆ ವರದಿ ಬರೆಯಬೇಕಿಲ್ಲ (ನಿಯಮ-7, ಟಿಪ್ಪಣಿ-1).
ವರದಿ ಮಾಡಲ್ಪಡುವ ಸರ್ಕಾರಿ ನೌಕರನು ಅಮಾನತಿನಲ್ಲಿದ್ದರೆ ಅಂತಹ ಅಮಾನತಿನ ಅವಧಿಗಾಗಿ ವರದಿ ಬರೆಯಬೇಕಿಲ್ಲ.(ನಿಯಮ-7, ಟಿಪ್ಪಣಿ-2).
ವರದಿ/ಪರಿಶೀಲನಾ/ಅಂಗೀಕಾರ ಪ್ರಾಧಿಕಾರವಾದಂತಹ ಯಾವುದೇ ಅಧಿಕಾರಿ ಕಾರ್ಯನಿರ್ವಹಣಾ ವರದಿ ಬರೆಯುವಂತಹ ಸಮಯದಲ್ಲಿ ನಿವೃತ್ತನಾದರೆ, ಅಂತಹ ವರದಿಗಳನ್ನು ನಿವೃತ್ತಿಯಾದ 3 ತಿಂಗಳೊಳಗೆ ವರದಿ ಬರೆಯಬಹುದು(ನಿಯಮ-8(2).
ಸರ್ಕಾರಿ ನೌಕರನ ಪದೋನ್ನತಿ ವೇಳೆ ಕಳೆದ 1 ಅಥವಾ ಅದಕ್ಕಿಂತ ಹೆಚ್ಚು ವರ್ಷದ ಈ ಕಾರ್ಯ ನಿರ್ವಹಣಾ ವರದಿ ಲಭ್ಯವಾಗದಿದ್ದರೆ, ನೇಮಕಾತಿ ಪ್ರಾಧಿಕಾರಿಯು ವಿಶೇಷ ಕಾರ್ಯ ನಿರ್ವಹಣಾ ವರದಿ ಸಿದ್ಧಪಡಿಸಬೇಕಾಗುತ್ತದೆ.(ನಿಯಮ-7-ಎ).
ಸರ್ಕಾರಿ ನೌಕರನ ಪರೀಕ್ಷಾರ್ಥ ಅವಧಿಯ (Probationary Period) ಘೊಷಣೆಗೆ ಎರಡು ವರ್ಷಗಳ ತೃಪ್ತಿದಾಯಕವಾದ ಈ ವರದಿ ಅವಶ್ಯಕ.
****
ಸರ್ಕಾರಿ ನೌಕರರ ನಡತೆ ಸಂಹಿತೆ
Wednesday, 18.04.2018, ವಿಜಯವಾಣಿ.
| ಲ.ರಾಘವೇಂದ್ರ
ಕರ್ನಾಟಕ ಸರ್ಕಾರವು ತನ್ನ ನೌಕರರಿಗೆ ಯಾವ ರೀತಿ ಇರಬೇಕು, ಹೇಗೆ ತಮ್ಮ ಕರ್ತವ್ಯ ನಿಷ್ಠೆ ತೋರಬೇಕು ಎಂಬ ಬಗ್ಗೆ 1966ರ ಕರ್ನಾಟಕ ಸರ್ಕಾರಿ(ನಡತೆ) ನಿಯಮಗಳು ಜಾರಿಗೆ ತಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರ ನಡತೆ ಸಂಹಿತೆಯನ್ನು ಕೆಳಗೆ ನೀಡಲಾಗಿದೆ.
1) ಪ್ರತಿಯೊಬ್ಬ ಸರ್ಕಾರಿ ನೌಕರನು ಪ್ರಥಮವಾಗಿ ರಾಜ್ಯ/ರಾಷ್ಟ್ರಕ್ಕೆ ನಿಷ್ಠೆಯುಳ್ಳವನಾಗಿರಬೇಕು. 2) ತಾನು ನಿರ್ವಹಿಸುವ ಕೆಲಸದ ಬಗ್ಗೆ ಪೂರ್ತಿ ತಿಳಿದಿರಬೇಕಲ್ಲದೇ ನಿಯಮಾವಳಿ/ಸರ್ಕಾರಿ ಆದೇಶಗಳ ಬಗ್ಗೆ ತಿಳಿವಳಿಕೆ ಇರಬೇಕು ಹಾಗೂ ಇರಡು ತಯಾರಿಕೆ/ವಿಷಯ ಮಂಡನೆಯಲ್ಲಿ ಪರಿಣಿತರಿದ್ದು, ಕರ್ತವ್ಯ ನಿಷ್ಠೆಯುಳ್ಳವನಾಗಿರಬೇಕು. 3) ಕಾರ್ಯಾಲಯಕ್ಕೆ ನಿಯಮಿತವಾಗಿ ಹಾಜರಾಗಬೇಕಲ್ಲದೇ ಅನಧಿಕೃತವಾಗಿ ಗೈರಾಗಬಾರದು. 4) ವಹಿಸಿಕೊಟ್ಟ ಕೆಲಸವನ್ನು ನಿಷ್ಠೆಯಿಂದ ನಿರ್ವಹಿಸಬೇಕು.
5) ಅಧೀನ ಸಿಬ್ಬಂದಿಗೆ ಕಾರ್ಯನಿರ್ವಹಿಸುವಲ್ಲಿ ಮಾರ್ಗದರ್ಶನ ಮಾಡಬೇಕಲ್ಲದೇ, ಅಧೀನ ಸಿಬ್ಬಂದಿ ಕಾರ್ಯನಿರ್ವಹಿಸುವಂತೆ ಪ್ರೋತ್ಸಾಹಿಸಬೇಕು. ಉತ್ಸಾಹ ತುಂಬಬೇಕು, ಸಮರ್ಪಕ ಮೇಲ್ವಿಚಾರಣೆ ಮಾಡಬೇಕು. 6) ತಾನು ನಿರ್ವಹಿಸುತ್ತಿರುವ ಕಾರ್ಯ ಸಮರ್ಪಕವಾಗಿ ನಿರ್ವಹಿಸಬೇಕಲ್ಲದೇ, ಕೈಗೊಂಡ ನಿರ್ಣಯ ಸಾರ್ವಜನಿ ಹಿತಾಸಕ್ತಿಗೆ ಅನುಗುಣವಾಗಿರುವಂತೆ ನೋಡಿಕೊಳ್ಳಬೇಕು. 7) ಕಾರ್ಯ ನಿರ್ವಹಿಸಲು ಅವಧಿ ನಿಗಧಿಪಡಿಸದೇ ಇದ್ದಾಗ ತಾವೇ ಅವಧಿ ನಿಗದಿಪಡಿಸಿಕೊಂಡು ತ್ವರಿತವಾಗಿ ಕೆಲಸ ಮುಗಿಸಬೇಕು. 8) ನಿಯಮಾವಳಿ/ಸರ್ಕಾರಿ ಆದೇಶ/ಸುತ್ತೋಲೆಗಳನ್ನು ಸರಿಯಾಗಿ ಅರ್ಥೈಸಿಕೊಂಡು ಸಾರ್ವಜನಿಕ ಹಿತಾಸಕ್ತಿಗೆ ಕುಂದು ಬಾರದಂತೆ ಕಾರ್ಯ ನಿರ್ವಹಿಸಬೇಕು.9) ಸಾರ್ವಜನಿಕರು/ಸಹೋದ್ಯೋಗಿಗಳೊಡನೆ ಒಳ್ಳೆಯ ಸಂಬಂಧಗಳಿರುವಂತೆ ನೋಡಿಕೊಳ್ಳಬೇಕು. 10) ಮಾಡುವ ಕೆಲಸ ಒಳ್ಳೆಯ ಗುಣಮಟ್ಟದ್ದಾಗಿರಬೇಕು. ತಪ್ಪು ನಿರ್ಣಯ/ಸಾರ್ವಜನಿಕರಿಗೆ ತೊಂದರೆಯುಂಟಾಗುವ ನಿರ್ಣಯಗಳನ್ನು ತೆಗೆದುಕೊಳ್ಳಬಾರದು.
11) ನಿರ್ಣಯವನ್ನು ಅವಸರದಲ್ಲಿ ತೆಗೆದುಕೊಳ್ಳದೇ ರ್ಚಚಿಸಿ, ನಿಯಮಾನುಸಾರ ಪರಿಶೀಲಿಸಿ ಸಮರ್ಪಕ ನಿರ್ಣಯ ತೆಗೆದುಕೊಳ್ಳಬೇಕು. 12) ಒಂಟಿಯಾಗಿ ಕಾರ್ಯನಿರ್ವಹಿಸದೇ, ಸಹೋದ್ಯೋಗಿ/ಅಧೀನ ಸಿಬ್ಬಂದಿಯನ್ನು ಹುರಿದುಂಬಿಸಿ, ಕರ್ತವ್ಯ ಪಾರಾಯಣರಾಗುವಂತೆ ಕಾರ್ಯ ನಿರ್ವಹಿಸಬೇಕು. 13) ಯಾವುದೇ ಯೋಜನೆ ರೂಪಿಸುವಾಗ ಸಾಧಕ/ಬಾಧಕ ಹಾಗೂ ಅದರಿಂದಾಗುವ ಪ್ರಯೋಜನಗಳನ್ನು ಮನದಟ್ಟು ಮಾಡಿಕೊಂಡು ಮೇಲಾಧಿಕಾರಿಗಳು ಒಪ್ಪಿಗೆ ನೀಡುವಂತೆ ಯೋಜನೆಗಳನ್ನು ರೂಪಿಸಿಕೊಳ್ಳಬೇಕು. 14) ನಿಯಮಾವಳಿ/ಸರ್ಕಾರಿ ಆದೇಶಗಳನ್ನು ಅರ್ಥೈಸುವಾಗ ಕೇವಲ ತರ್ಜುಮೆಗೆ ಅವಕಾಶ ನೀಡದೇ ವಿವೇಚನಾಶಕ್ತಿ ಬಳಸಿ, ನಿಯಮಾವಳಿ/ಸರ್ಕಾರಿ ಆದೇಶಗಳನ್ನು ಸಾರ್ವಜನಿಕರ/ ಅರ್ಜಿದಾರರ ಹಿತಾಸಕ್ತಿಗೆ ಭಂಗವಾಗದಂತೆ ಉಪಯೋಗಿಸುವ ಕಲೆಯನ್ನು ರೂಪಿಸಿಕೊಳ್ಳಬೇಕಲ್ಲದೇ ಅಧೀನ ಸಿಬ್ಬಂದಿಗೆ ಕೂಡ ಮಾರ್ಗದರ್ಶನ ಮಾಡಬೇಕು. 15) ಸಹೋದ್ಯೋಗಿ/ಅಧೀನ ಸಿಬ್ಬಂದಿಗೆ ಮಾರ್ಗದರ್ಶನ ಮಾಡುವುದು, ಅವರ ಕರ್ತವ್ಯ ನಿಷ್ಠೆ, ಸಮಯ ಪಾಲನೆ, ಸರಿಯಾಗಿ ನಿರ್ಣಯ ತೆಗೆದುಕೊಳ್ಳುವಲ್ಲಿ ಸಹಕಾರ ನೀಡಬೇಕು. 16) ಸರ್ಕಾರ ಹಮ್ಮಿಕೊಳ್ಳುವ ಯೋಜನೆಗಳ ಅನುಷ್ಠಾನದ ಬಗ್ಗೆ ಪರಿಪೂರ್ಣ ಮಾಹಿತಿ ಇರಬೇಕಲ್ಲದೇ ಯೋಜನೆಗಳ ಅನುಷ್ಠಾನಕ್ಕಾಗಿ ಒಳ್ಳೆಯ ಕ್ರಿಯಾಶೀಲನೆ, ಕರ್ತವ್ಯ ನಿಷ್ಠೆ, ಉತ್ಸಾಹ/ಪ್ರೋತ್ಸಾಹ, ಸಾಮಾಜಿಕ ಕಳಕಳಿ, ಬಡಜನರ ಅಭ್ಯುದಯದ ಬಗ್ಗೆ ಒಳ್ಳೆಯ ಯೋಜನೆ ಮುಂತಾದವುಗಳನ್ನು ರೂಪಿಸಿಕೊಳ್ಳಬೇಕು. 17) ಅಲ್ಲದೇ ಸರ್ಕಾರದ ವಿವಿಧ ಯೋಜನೆ ಅದರಲ್ಲಿ ಮುಖ್ಯವಾಗಿ ಬಡತನ ರೇಖೆಗಿಂತ ಕೆಳಗಿನವರನ್ನು ಮೇಲೆತ್ತಲು ರೂಪಿಸಿಕೊಳ್ಳುವ ಯೋಜನೆಗಳ ಫಲ ಸಂಬಂಧಿಸಿದವರಿಗೆ ತಲುಪುವಂತೆ ಕಾರ್ಯ ನಿರ್ವಹಿಸಬೇಕಲ್ಲದೇ ಅಧೀನ ಸಿಬ್ಬಂದಿಗೆ ಕೂಡ ಮಾರ್ಗದರ್ಶನ ಮಾಡಿ ಅವರನ್ನು ಕೂಡ ಯೋಜನೆ ಸಫಲವಾಗುವಂತೆ ಕಾರ್ಯ ನಿರ್ವಹಿಸಲು ಪರಿವರ್ತನೆ ಮಾಡಬೇಕು. 18) ಸರ್ಕಾರಿ ಹಣ ವಿನಿಯೋಗಿಸುವಾಗ ತನ್ನ ಸ್ವಂತ ಹಣವನ್ನು ವೆಚ್ಚ ಮಾಡುವಾಗ ತೆಗೆದುಕೊಳ್ಳುವ ವೀಚಕ್ಷಣೆಯನ್ನು (ಜಾಗರೂಕತೆ) ಬಳಸಿ ವಿನಿಯೋಗಿಸಬೇಕು. 19) ಸರ್ಕಾರಿ ಹಣದ ದುರುಪಯೋಗ ಮಾಡಬಾರದು. ಅಲ್ಲದೆ ಅಧೀನ ಸಿಬ್ಬಂದಿಯಿಂದ ಹಣ ದುರುಪಯೋಗವಾಗದಂತೆ ಕಾರ್ಯ ನಿರ್ವಹಿಸಬೇಕು. 20) ತಾವಾಗಿಯೇ ಜವಾಬ್ದಾರಿ ಹೊರುವ ಪ್ರವೃತ್ತಿ ಹೊಂದಿರಬೇಕು ಅಥವಾ ಜವಾಬ್ದಾರಿ ಹೊರಿಸಿದಲ್ಲಿ ಅದನ್ನು ವಹಿಸಿಕೊಳ್ಳುವ ಶಕ್ತಿ ಇರಬೇಕು.
21 ) ಸಾರ್ವಜನಿಕರೊಂದಿಗೆ ಒಳ್ಳೆಯ ಸಂಬಂಧ/ ಬಾಂಧವ್ಯ ಹೊಂದಿರಬೇಕಲ್ಲದೇ ಸಾರ್ವಜನಿಕರ ಬಗ್ಗೆ ಕಳಕಳಿಯುಳ್ಳವರಾಗಿಬೇಕು.22) ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗಾಗಿರುವ ವಿವಿಧ ಯೋಜನೆಗಳ ಫಲ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವರ್ಗದವರಿಗೆ ತಲುಪಿಸುವಂತೆ ಕ್ರಮ ಜರುಗಿಸಬೇಕು. 23)ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಯಶಸ್ವಿ ಅನುಷ್ಠಾನಕ್ಕೆ ಕ್ರಮ ಜರುಗಿಸಬೇಕು. 24) ಸಾಮಾಜಿಕ ನ್ಯಾಯದಾನದ ಅನುಷ್ಠಾನದ ಬಗ್ಗೆ ಕಳಕಳಿ ಇರಬೇಕು ಹಾಗೂ ನ್ಯಾಯ ನಿರ್ಣಯಿಸುವಾಗ ಕಾನೂನುಗಳನ್ನು ಪಾಲಿಸಬೇಕಲ್ಲದೇ ವಿವೇಚನಾ ಶಕ್ತಿ ಬಳಸಿ ಸಮರ್ಪಕ ನ್ಯಾಯ ಒದಗಿಸಬೇಕು. 25) ಸಮಾಜಘಾತುಕ ಶಕ್ತಿಗಳನ್ನು ಗುರುತಿಸುವುದು ಹಾಗೂ ಸದೆಬಡಿಯುವುದು. ಸಮಾಜ ವಿಚ್ಛಿದ್ರಕಾರಕ ಶಕ್ತಿಗಳನ್ನು ಹದ್ದುಬಸ್ತಿನಲ್ಲಿಡುವುದು/ತಡೆಗಟ್ಟಲು ಕ್ರಮ ಜರುಗಿಸಬೇಕು. 26) ಈಗ ತಾಂತ್ರಿಕ ಯುಗದಲ್ಲಿರುವುದರಿಂದ ಗಣಕಯಂತ್ರಗಳ ಉಪಯೋಗದ ಮಾಹಿತಿ ಪಡೆಯುವುದು ಅವಶ್ಯಕ ಹಾಗೂ ಅಧೀನ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಲು ಕ್ರಮ ಜರುಗಿಸಬೇಕು. 27) ಅಧೀನ ಸಿಬ್ಬಂದಿಗೆ ಪ್ರೋತ್ಸಾಹ ನೀಡಬೇಕಲ್ಲದೇ ಸಮರ್ಪಕವಾಗಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಮಾರ್ಗದರ್ಶನ, ಸಹಕಾರ, ಪ್ರೋತ್ಸಾಹ ನೀಡಬೇಕು. 28) ಸರ್ಕಾರಿ ನೌಕರರು ಒಳ್ಳೆಯ ಗುರಿ, ಆದರ್ಶ ಹೊಂದಿರಬೇಕು.
ಎನ್ಪಿಎಸ್ ಯೋಜನೆಯಲ್ಲಿ ನೌಕರರ ಪಾತ್ರ:
04.04.2018..
| ಲ.ರಾಘವೇಂದ್ರ ಸೇವಾ ಕಾನೂನು ತಜ್ಞರು
ಅ) ಪ್ರಾನ್(ಪಿಎಆರ್ಎಎನ್) ಸಂಖ್ಯೆಯನ್ನು ಪಡೆಯುವುದಕ್ಕೆ ಸಿಆರ್ಎಯೊಂದಿಗೆ ನೋಂದಾಯಿಸಿಕೊಳ್ಳಲು ಎಸ್1 ಅರ್ಜಿ ಭರ್ತಿ ಮಾಡುವುದು.
ಆ) ಮೇಲಿನ ಕಂಡಿಕೆ 2(ಆ)ಯ ಪ್ರಕಾರ ಬಾಕಿ ಇರುವ ತಿಂಗಳಿನಿಂದ, ನೌಕರರ ಬ್ಯಾಕ್ಲಾಗ್ ವಂತಿಗೆ ಸಂದಾಯ ಮಾಡಲು ಸಂದಾಯದ ವಿಧಾನಕ್ಕೆ ಆಯ್ಕೆ ಮಾಡಿಕೊಳ್ಳುವುದು ಮತ್ತು ಸಂಬಂಧಪಟ್ಟ ಡಿಡಿಒಗೆ ಲಿಖಿತದಲ್ಲಿ ತಿಳಿಸುವುದು.
ಇ) ಕಂಡಿಕೆ 4(ಆ)ಯಲ್ಲಿ ಪಟ್ಟಿ ಮಾಡಲಾದ ಮೂರು ಆಯ್ಕಗಳ ಪೈಕಿ ಆಯ್ಕೆ (1)ನ್ನು ಆಯ್ದುಕೊಂಡ ಸಂದಂರ್ಭದಲ್ಲಿ ಬ್ಯಾಕ್ಲಾಗ್ ವಂತಿಗೆಯನ್ನು ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಸಂದಾಯ ಮಾಡುವುದು.
ಈ) ಪಿಂಚಣಿ ಖಾತೆಯನ್ನು ಸಿಆರ್ಎನ ವೆಬ್ಸೈಟ್ನಲ್ಲಿ ನಿಯತವಾಗಿ ಪರಿಶೀಲಿಸುವುದು ಮತ್ತು ತಪ್ಪಿಹೋಗಿರುವ ವಂತಿಗೆ ಇದ್ದಲ್ಲಿ ಡಿಡಿಒ ಮುಖಾಂತರ ಸಂಬಂಧಪಟ್ಟ ಖಜಾನೆ ಅಧಿಕಾರಿಗೆ ಮಾಹಿತಿ ನೀಡುವುದು.
4. ನೂತನ ಪಿಂಚಣಿ ಯೋಜನೆ ಅನುಷ್ಠಾನ ಘಟಕ
ಅ) ನೂತನ ಪಿಂಚಣಿ ಯೋಜನಾ ಘಟಕ (ಎನ್ಪಿಎಸ್ಘಟಕ)ವನ್ನು ಯೋಜನೆಯ ಅನುಷ್ಠಾನಕ್ಕಾಗಿ ಖಜಾನೆ ಇಲಾಖೆಯ ಅಡಿಯಲ್ಲಿ ಸೃಜಿಸಲಾಗಿದೆ ಮತ್ತು ಇದು ಖಜಾನೆ ನಿರ್ದೇಶಕರ ಸಂಪೂರ್ಣ ನಿಯಂತ್ರಣ ಹಾಗೂ ಮೇಲ್ವಿಚಾರಣೆ ಅಡಿಯಲ್ಲಿರುತ್ತದೆ.
ಆ) ನೂತನ ಪಿಂಚಣಿ ಪದ್ಧತಿ ಯೋಜನೆಯಲ್ಲಿ ಒಳಗೊಳ್ಳುವ ಎಲ್ಲಾ ನೌಕರರ ಸರ್ಕಾರಿ ಬ್ಯಾಕ್ಲಾಗ್ ವಂತಿಗೆಯನ್ನು ಏಕಕಾಲಿಕ ಚಟುವಟಿಕೆಯಾಗಿ, ಸರ್ಕಾರದಿಂದ ಯುಕ್ತ ಅನುಮೋದನೆಗಳನ್ನು ಪಡೆದ ನಂತರ ನೂತನ ಪಿಂಚಣಿ ಯೋಜನಾ ಘಟಕವು ಕೇಂದ್ರೀಯವಾಗಿ ಸಂದಾಯ ಮಾಡತಕ್ಕದ್ದು.
ಇ) ನೂತನ ಪಿಂಚಣಿ ಯೋಜನಾ ಘಟಕವು ವಂತಿಗೆಗಳು ಸರಿಯಾದ ಸಮಯದೊಳಗೆ ಸಂದಾಯವಾಗುವ ಬಗ್ಗೆ ಮೇಲ್ವಿಚಾರಣೆ ಮಾಡತಕ್ಕದ್ದು ಮತ್ತು ತಪ್ಪಿಹೋಗಿರುವ ವಂತಿಗೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸತಕ್ಕದ್ದು.
ಈ) ನೂತನ ಪಿಂಚಣಿ ಯೋಜನಾ ಘಟಕವು ಈ ಕೆಳಗಿನ ದಾಖಲೆಗಳ ಪ್ರತಿಗಳನ್ನು ನಿರ್ವಹಿಸತಕ್ಕದ್ದು.
1) ನೂತನ ಪಿಂಚಣಿ ಯೋಜನೆಗಾಗಿ ಸಿಆರ್ಎಯಲ್ಲಿ ನೋಂದಾಯಿತವಾದ ಎಲ್ಲರ ವಿವರಗಳು
2) ವಂತಿಗೆದಾರರ ವ್ಯವಹಾರಗಳ ವಿವರಣ ಪಟ್ಟಿ
3) ವಂತಿಗೆದಾರರ ನಿವೃತ್ತಿಯ ವಿವರಗಳು
4) ಸರ್ಕಾರಿ ಬ್ಯಾಕ್ಲಾಗ್ ವಂತಿಗೆಯ ವಿವರಗಳು.
5) ಖಜಾನೆ ನಿರ್ದೇಶಕರು.
ಖಜಾನೆ ನಿರ್ದೇಶಕರು ನೂತನ ಪಿಂಚಣಿ ಯೋಜನೆಯ ಸಮಗ್ರ ಅನುಷ್ಠಾನಕ್ಕೆ ಜವಾಬ್ದಾರರಾದ ರಾಜ್ಯ ನೋಡಲ್ ಅಧಿಕಾರಿಯಾಗಿರುತ್ತಾರೆ. ಈ ಮುಂದಿನವುಗಳು ನಿರ್ದೇಶಕರ ನಿರ್ದಿಷ್ಟ ಜವಾಬ್ದಾರಿಯಾಗಿರುತ್ತದೆ.
ಅ) ಇತರ ನೋಡಲ್ ಅಧಿಕಾರಿಗಳ ಕಾರ್ಯನಿರ್ವಹಣೆಯ ಮೇಲ್ವಿಚಾರಣೆ ಅಂದರೆ, ಜಿಲ್ಲಾ/ಉಪ ಖಜಾನೆ ಅಧಿಕಾರಿಗಳು ಮತ್ತು ಡಿಡಿಒಗಳು ಅರ್ಹ ನೌಕರರ ಬಗ್ಗೆ ತಮ್ಮ ಹೊಣೆಗಾರಿಕೆಗಳನ್ನು ನಿರ್ವಹಿಸುವುದಕ್ಕೆ ಹಾಗೂ ನಿರ್ವಹಣಾ ಕಾರ್ಯವಿಧಾನಗಳನ್ನು ಪಾಲಿಸುವುದಕ್ಕೆ ಸಂಬಂಧಪಟ್ಟಂತೆ ಮೇಲ್ವಿಚಾರಣೆ
ಆ) ಸಿಆರ್ಎ ಅಥವಾ ಖಜಾನೆ ಅಧಿಕಾರಿಗಳ ವಿರುದ್ಧದ ದೂರಗಳ ಪರಿಹಾರದ ಮೇಲ್ವಿಚಾರಣೆ
ಸಿ) ಯೋಜನೆಯ ಉದ್ದೇಶಕ್ಕಾಗಿ ಸಿಆರ್ಎ, ಪಿಎಫ್ಆರ್ಡಿಎ ಮತ್ತು ಪಿಎನ್ಪಿಎಸ್ ಟ್ರಸ್ಟ್ಗಳೊಂದಿಗೆ ಎಲ್ಲಾ ಅಗತ್ಯ ಪತ್ರವ್ಯವಹಾರ ನಡೆಸುವುದು.
ಡಿ) ಮಾಡಲಾದ ಸಂದಾಯಗಳ ನಿಯತ ಲೆಕ್ಕ ಪರಿಶೋಧನೆ ಆಗುವಂತೆ ನೋಡಿಕೊಳ್ಳುವುದು.
6. ಬಳಕೆದಾರ ಕೈಪಿಡಿಗಳು ಮತ್ತು ಎಸ್1, ಎನ್2 ಹಾಗೂ ಎನ್3 ಗಳಂತಹ ನಿಗದಿತ ನೋಂದಣಿ ಅರ್ಜಿ ನಮೂನೆಗಳು ಎಚ್ಆರ್ಎಂಎಸ್ ವ್ಯವಸ್ಥೆ, ಖಜಾನೆ ನೆಟ್ನಲ್ಲಿ ಲಭ್ಯವಿದ್ದು ಅವುಗಳನ್ನು ಇಳಿನಕಲು(ಡೌನ್ಲೋಡ್) ಮಾಡಿಕೊಳ್ಳಬಹುದು.
7. ನೂತನ ಪಿಂಚಣಿ ಯೋಜನೆಯನ್ನು ಅನುಷ್ಠಾನಕ್ಕೆ ತರುವ ಬಗ್ಗೆ ಯಾವುದಾದರೂ ಸ್ಪಷ್ಟೀಕರಣ ಅಥವಾ ಸಂಶಯಗಳಿದ್ದಲ್ಲಿ ಬೆಂಗಳೂರಿನ ಖಜಾನೆ ನಿರ್ದೇಶನಾಲಯದಲ್ಲಿರುವ ನೂತನ ಪಿಂಚಣಿ ಯೋಜನೆ ಅನುಷ್ಠಾನದ ಘಟಕ ಸಂರ್ಪಸಬಹುದು.
***
ಎನ್ಪಿಎಸ್ ಯೋಜನೆ ಅನುಷ್ಠಾನಕ್ಕೆ ಮಾರ್ಗದರ್ಶನ.
14.03.2018,
| ಲ.ರಾಘವೇಂದ್ರ, ಸೇವಾ ಕಾನೂನು ತಜ್ಞರು
ಸರ್ಕಾರವು 1-4-2006ರಂದು ಅಥವಾ ನಂತರ ಸರ್ಕಾರಿ ಸೇವೆಗೆ ಸೇರುವ ನೌಕರರಿಗೆ ನೂತನ ಪಿಂಚಣಿ ಪದ್ಧತಿ(ಎನ್ಪಿಎಸ್) ಜಾರಿಗೆ ತಂದಿದ್ದು ಈ ಯೋಜನೆಯು ದಿನಾಂಕ 1-4-2010ರಿಂದ ಕಾರ್ಯಾರಂಭ ಮಾಡಿದೆ. ಈ ಯೋಜನೆಯ ಅನುಷ್ಠಾನಕ್ಕಾಗಿ ದಿನಾಂಕ 29-3-2010ರಂದು ಸರ್ಕಾರಿ ಆದೇಶ ಸಂಖ್ಯೆ ಎಫ್ಡಿ(ಎಸ್ಪಿಎಲ್) 28 ಪಿಇಎನ್ 2009ರ ಮೇರೆಗೆ ಮಾರ್ಗದರ್ಶನವನ್ನು ಈ ಕೆಳಗೆ ನೀಡಲಾಗಿದೆ.
1. ನೋಂದಣಿ
ಅ) ಕೇಂದ್ರೀಯ ದಾಖಲೆ ನಿರ್ವಹಣಾ ಏಜೆನ್ಸಿ(ಸಿಆರ್ಎ) ಎಂದು ಸಹಾ ಕರೆಯುವ ರಾಷ್ಟ್ರೀಯ ಭದ್ರತೆಗಳ ಠೇವಣಿ ಸಂಸ್ಥೆ ಲಿಮಿಟೆಡ್(ಎನ್ಎಸ್ಡಿಎಲ್)ನಲ್ಲಿ ಖಜಾನೆ ನಿರ್ದೇಶಕರು ನೋಂದಾಯಿಸಿಕೊಳ್ಳಬೇಕು. ಜಿಲ್ಲಾ ಖಜಾನಾಧಿಕಾರಿ ಮತ್ತು ಸಹಾಯಕ ಖಜಾನಾಧಿಕಾರಿಗಳೂ ಸಿಆರ್ಎಯವರು ನಿಗದಿಪಡಿಸಿರುವ ನೋಂದಣಿ ನಮೂನೆ ಎನ್ 2ನ್ನು ಕ್ರಮಬದ್ಧವಾಗಿ ತುಂಬಿ ಎನ್ಎಸ್ಡಿಎಲ್ನಲ್ಲಿನ ನೋಂದಾಯಿಸಬೇಕು.
ಆ)ಎಚ್ರ್ಎಂಎಸ್ನಲ್ಲಿ ದೊರೆಯುವ ಮಾಹಿತಿಯನ್ನು ಆಧರಿಸಿ ಹೊಸ ಪಿಂಚಣಿ ಯೋಜನೆಯ (ಎನ್ಪಿಎಸ್) ಘಟಕದವರು ಏಕಕಾಲದ, ಕ್ರಮವಾಗಿ 31-3-2010ರಂತೆ ಇರುವ ಎಲ್ಲಾ ವೇತನ ಸಂದಾಯ ಮಾಡುವ, ಹಣ ಸೆಳೆಯುವ ಮತ್ತು ಬಟವಾಡೆ ಅಧಿಕಾರಿಗಳನ್ನು (ಡಿ.ಡಿ.ಒ) ಮತ್ತು ಅರ್ಹ ನೌಕರರನ್ನು ತಾತ್ಕಾಲಿಕವಾಗಿ ಕೇಂದ್ರೀಯ ದಾಖಲೆ ನಿರ್ವಹಣಾ ಏಜೆನ್ಸಿಯಲ್ಲಿ ನೋಂದಾಯಿಸಬೇಕು.
ಇ)ತಾತ್ಕಾಲಿಕ ನೋಂದಣಿಯ ತರುವಾಯ ಕ್ರಮಬದ್ಧ ನೋಂದಣಿ ಮಾಡಲಾಗುವುದು. ಇದಕ್ಕಾಗಿ ನೌಕರರು ತಮ್ಮ ವಿವರಗಳನ್ನು ನಮೂನೆ ಎಸ್1ರಲ್ಲಿ ಸಲ್ಲಿಸಬೇಕು. ಈ ನಮೂನೆಗಳನ್ನು ಸಂಬಂಧಪಟ್ಟ ಜಿಲ್ಲಾ ಖಜಾನಾಧಿಕಾರಿ/ಸಹಾಯಕ ಖಜಾನಾಧಿಕಾರಿ ಮೂಲಕ ಕೇಂದ್ರೀಯ ದಾಖಲೆ ನಿರ್ವಹಣಾ ಏಜೆನ್ಸಿಗೆ ಕಳುಹಿಸಬೇಕು. ಹೊಸ ಡಿ.ಡಿ.ಒಗಳು ಹಾಗೂ ನೌಕರರ ಸಂದರ್ಭದಲ್ಲಿ ಆಯಾ ಖಜಾನೆ ಅಧಿಕಾರಿಗಳಿಗೆ ನಮೂನೆ ಎನ್3 ಅಥವಾ ಎನ್1ನ್ನು ಸಲ್ಲಿಸಿ ಕೇಂದ್ರೀಯ ದಾಖಲೆ ನಿರ್ವಹಣಾ ಏಜೆನ್ಸಿಯಲ್ಲಿ ನೋಂದಾಯಿಸಿಕೊಳ್ಳಬೇಕು.
ಈ)ಎನ್ಎಸ್ಡಿಎಲ್ನವರು ಡಿಡಿಒಗಳಿಗೆ ವಿಶಿಷ್ಟ ಎನ್ಪಿಎಸ್ ನೋಂದಣಿ ಸಂಖ್ಯೆಯನ್ನು ಮತ್ತು ನೌಕರರಿಗೆ (ಹೊಸ ಪಿಂಚಣಿ ಯೋಜನೆಯ ವಂತಿಗೆದಾರರಿಗೆ) ಕಾಯಂ ನಿವೃತ್ತಿ ಖಾತೆ ಸಂಖ್ಯೆ(ಪಿಆರ್ಎಎನ್)ಯನ್ನು ಹಂಚಿಕೆ ಮಾಡುತ್ತದೆ. ಈ ವಿಶಿಷ್ಟ ಎನ್ಪಿಎಸ್ ನೋಂದಣಿ ಸಂಖ್ಯೆಗಳನ್ನು ಪಿಆರ್ಎಎನ್ ಸಂಖ್ಯೆಗಳನ್ನು ಡಿಡಿಒ ಎಚ್ಆರ್ಎಂಎಸ್ನಲ್ಲಿ ಅಪ್ಡೇಟ್ ಮಾಡುತ್ತಾರೆ. ಸಾಧಾರಣವಾಗಿ ತಾತ್ಕಾಲಿಕ ಮತ್ತು ಅಂತಿಮ ನೋಂದಣಿಗಳ ನಡುವೆ ಈ ಸಂಖ್ಯೆಗಳಲ್ಲಿ ಯಾವುದೇ ಬದಲಾವಣೆ ಇರಕೂಡದು. ಒಂದು ವೇಳೆ ಯಾವುದೇ ಬದಲಾವಣೆಯಾದಲ್ಲಿ ಎನ್ಪಿಎಸ್ ಘಟಕದಿಂದ ಮಾರ್ಗದರ್ಶನ ಪಡೆದುಕೊಳ್ಳಬೇಕು. ಈ ವಿಶಿಷ್ಟ ಎನ್ಪಿಎಸ್ ನೋಂದಣಿಗೆ ಸಂಖ್ಯೆಗಳನ್ನು ಮತ್ತು ಪಿಆರ್ಎಎನ್ ಸಂಖ್ಯೆಗಳನ್ನು ಖಜಾನೆಗೆ ಅಥವಾ ಎನ್ಪಿಎಸ್ ಘಟಕಕ್ಕೆ ಸಲ್ಲಿಸುವ ಪ್ರತಿ ಎನ್ಪಿಎಸ್ ಶೆಡ್ಯೂಲ್ನಲ್ಲಿ ನಮೂದಿಸಬೇಕು.
2. ಎನ್ಪಿಎಸ್ಗೆ ನೀಡತಕ್ಕ ಕೊಡುಗೆಗಳು
ಅ) ಹೊಸ ಪಿಂಚಣಿ ಯೋಜನೆಯ ಸ್ತರ1ಕ್ಕೆ ನೌಕರನು ತನ್ನ ಮೂಲವೇತನ ಮತ್ತು ತುಟ್ಟಿಭತ್ಯೆಯ ಶೇ.10ರಷ್ಟನ್ನು ಪ್ರತಿ ತಿಂಗಳು ಕೊಡುಗೆಯಾಗಿ ನೀಡಬೇಕು. ಇದಕ್ಕೆ ಸರಿಸಮನಾದ ಕೊಡುಗೆಯನ್ನು ಸರ್ಕಾರ ಕೊಡುತ್ತದೆ.
ಆ) ಸರ್ಕಾರಿ ನೌಕರನು ತಿಂಗಳ ಒಂದನೇ ದಿನಾಂಕದಂದು ಸೇವೆಗೆ ಸೇರಿದ ಸಂದರ್ಭ ಹೊರತುಪಡಿಸಿ ಉಳಿದಂತೆ ವೇತನ ಕಟಾವಣೆಯ ಮೂಲಕ ಈ ಕೊಡುಗೆ ನೀಡುವ ಪ್ರಕ್ರಿಯೆ ಸರ್ಕಾರಿ ನೌಕರನು ಸೇವೆಗೆ ಸೇರಿದ ತಿಂಗಳಿನ ಮುಂದಿನ ತಿಂಗಳಿನ ವೇತನದಿಂದ ಪ್ರಾರಂಭವಾಗತಕ್ಕದ್ದು. ಒಂದು ವೇಳೆ ಸರ್ಕಾರಿ ನೌಕರನು ತಿಂಗಳ ಮೊದಲನೇ ದಿನದಂದು ಸೇವೆಗೆ ಸೇರಿದ್ದ ಸಂದರ್ಭದಲ್ಲಿ ಆತನ ವೇತನ ಕಟಾವಣೆಯು ಅದೇ ತಿಂಗಳಿನಿಂದ ಪ್ರಾರಂಭವಾಗಬೇಕು.
ಇ) ಟ್ರಸ್ಟಿ ಬ್ಯಾಂಕ್ಗೆ (ಬ್ಯಾಂಕ್ ಆಫ್ ಇಂಡಿಯಾ) ಈ ಕೊಡುಗೆಗಳನ್ನು ಜಮೆ ಮಾಡುವ ವಿಧಾ ನಹಾಗೂ ಸಿಆರ್ಎಗೆ ಮಾಹಿತಿಯನ್ನು ಏರು ನಕಲು ಮಾಡುವ ವಿಧಾನ ವಿಕೇಂದ್ರೀಕೃತ ವ್ಯವಸ್ಥೆಯಲ್ಲಿರತಕ್ಕದ್ದು ಮತ್ತು ಇದರಲ್ಲಿ ರಾಜ್ಯದ ಎಲ್ಲ ಖಜಾನೆಗಳು ನೋಡಲ್ ಕಚೇರಿಗಳಾಗಿರತಕ್ಕದ್ದು. ಈ ಕಚೇರಿಗಳು ವಿವರಗಳನ್ನು ಸಿಆರ್ಎಗೆ ಏರು ನಕಲು(ಅಪ್ಲೋಡ್) ಮಾಡತಕ್ಕದ್ದು ಮತ್ತು ನೌಕರರ ಹಾಗೂ ಸರ್ಕಾರದ ಕೊಡುಗೆಗಳನ್ನು ಟ್ರಸ್ಟಿ ಬ್ಯಾಂಕ್ಗೆ ರವಾನಿಸಬೇಕು.
3. ಪ್ರಸಕ್ತ ಕೊಡುಗೆಯ ಸಂದಾಯ
ಅ) ಹೊಸ ಪಿಂಚಣಿ ಯೋಜನೆಗೆ ಪ್ರಸಕ್ತಕೊಡುಗೆಗಳನ್ನು ಸಂದಾಯ ಮಾಡುವ ಕಾರ್ಯ ಸಿಆರ್ಎಗೆ ಅರ್ಹ ನೌಕರರನ್ನು ನೋಂದಾಯಿಸಿದ ತರುವಾಯ 2010ರ ವೇತನದಿಂದ ಪ್ರಾರಂಭವಾಗಬೇಕು. ಒಂದು ವೇಳೆ ಸಂದಾಯವಾಗತಕ್ಕ ಮಾರ್ಚ್ 2010ರ ವೇತನದಿಂದ ಪ್ರಾರಂಭವಾಗಬೇಕು. ಒಂದು ವೇಳೆ ಮಾರ್ಚ್ 2010ರ ಒಳಗೆ ನೋಂದಣಿಯಾಗದೆ ನೋಂದಣಿಯಲ್ಲಿ ವಿಳಂಬವಾದಲ್ಲಿ, ಸಿಆರ್ಎನಲ್ಲಿ ನೌಕರರ ನೋಂದಣಿ ಕಾರ್ಯವು ಪೂರ್ಣವಾದ ತಿಂಗಳಿನಿಂದ ಪ್ರಾರಂಭವಾಗಬೇಕು.
ಆ)ಎಚ್ಆರ್ಎಂಎಸ್ನಲ್ಲಿ ಉತ್ಪಾದಿತವಾದ ಎನ್ಪಿಎಸ್ ಷೆಡ್ಯೂಲ್ನಲ್ಲಿ ನೌಕರರ ಪ್ರಸಕ್ತ ಕೊಡುಗೆಗಳು ಮತ್ತು ಸರ್ಕಾರದಿಂದ ಕೊಡಬೇಕಾದ ಸರಿಸಮಾನ ಕೊಡುಗೆಯ ವಿವರಗಳನ್ನು ನೀಡಲಾಗುವುದು ಮತ್ತು ಇದನ್ನು ವೇತನ ಬಿಲ್ಲಿನ ಜತೆಗೆ ಲಗತ್ತಿಸಬೇಕು.
4. ನೌಕರರ ಬ್ಯಾಕ್ಲಾಗ್ ವಂತಿಗೆಯ ಪಾವತಿ
ಅ)ದಿನಾಂಕ 1-4-2006ರಂದು ಅಥವಾ ಅನಂತರ ಸೇವೆಗೆ ಸೇರಿರುವ ಎಲ್ಲ ನೌಕರರಿಗೂ ನೂತನ ಪಿಂಚಣಿ ಯೋಜನೆಯ ಅನ್ವಯವಾಗುವುದರಿಂದ ಮತ್ತು ಪ್ರಸಕ್ತ ವಂತಿಗೆಗಳು ಏಪ್ರಿಲ್ 2010ರಿಂದ ಪ್ರಾರಂಭವಾಗುವುದರಿಂದ ಮೇಲ್ಕಂಡ ಪ್ಯಾರಾ 2(ಬಿ) ಅನುಸಾರ ಮೊದಲನೆಯ ತಿಂಗಳಿನಿಂದ ಆರಂಭವಾಗಿ ಪ್ರಸಕ್ತ ವಂತಿಗೆಗಳು ಪ್ರಾರಂಭವಾಗುವುದಕ್ಕಿಂತ ಹಿಂದಿನ ತಿಂಗಳಿನವರೆಗೆ ವಂತಿಗೆಗಳು ಬ್ಯಾಕ್ಲಾಗ್ ಇರುತ್ತದೆ.
ಆ) ನೌಕರನು, ಆತನ/ಆಕೆಯ ಬ್ಯಾಕ್ಲಾಗ್ ವಂತಿಗೆಯನ್ನು ಈ ಮುಂದಿನ ಯಾವುದೇ ಒಂದು ಆಯ್ಕೆ ಆಯ್ದುಕೊಳ್ಳುವ ಮೂಲಕ ಒಂದೇ ಇಡುಗಂಟಿನಲ್ಲಿ ಅಥವಾ ಮಾಸಿಕ ಆಧಾರದಲ್ಲಿ ಸಂದಾಯ ಮಾಡಬಹುದು.
ಜಿ)ಬ್ಯಾಕ್ಲಾಗ್ ವಂತಿಗೆಯನ್ನು ಒಂದು ಇಡುಗಂಟಿನಲ್ಲಿ ಪಾವತಿಸುವುದು
ಜಿಜಿ)ಎಷ್ಟು ತಿಂಗಳಿಗೆ ಬಾಕಿ ಆಗಿದೆಯೋ ಅಷ್ಟು ತಿಂಗಳನ್ನು ಮೀರದಂತೆ ಸಂಬಳದಿಂದ ಸಮಾನ ಮಾಸಿಕ ಕಂತುಗಳು
ಜಿಜಿಜಿ) ಹಲವಾರು ಕಂತುಗಳಲ್ಲಿ (ಅಂದರೆ (ಜಿಜಿ)ರ ಗುಣಕಗಳು) ಇಡುಗಂಟಾಗಿ ಸಂಬಳದಿಂದ ಕಟ್ಟುವುದು.
ಇ)ನೌಕರನು ಮೇಲಿನ ಮೂರು ಆಯ್ಕೆಗಳಲ್ಲಿ (ಜಿ)ನೇ ಆಯ್ಕೆಯನ್ನು ಆಯ್ದುಕೊಂಡರೆ ವಂತಿಗೆಯ ವಿವರಗಳನ್ನು ವಿಶಿಷ್ಟ ಸಂಖ್ಯೆಯ ಸಹಿತವಾಗಿ ಎಚ್ಆರ್ಎಂಎಸ್ ನಮೂನೆಯಲ್ಲಿ ಕಲ್ಪಿಸಿರುವ ಅನುಸೂಚಿ ಐಐಐರಲ್ಲಿ ತಿಳಿಸಬೇಕು. ಡಿಡಿಒರವರು ಯುಕ್ತವಾಗಿ ಪ್ರಮಾಣೀಕರಿಸಿರುವ ಅನುಸೂಚಿ ಐಐಐ ಮತ್ತು ಇಡೀ ಬ್ಯಾಕ್ಲಾಗ್ ವಂತಿಗೆಗಾಗಿ ಟ್ರಸ್ಟಿ ಬ್ಯಾಂಕ್ ಹೆಸರಿಗೆ ನಡೆದಿರುವ ಡಿಮ್ಯಾಂಡ್ ಡ್ರಾಫ್ಟ್ ಅನ್ನು ಸಂಬಂಧಪಟ್ಟ ಖಜಾನೆ ಅಧಿಕಾರಿಗೆ ಕಳುಹಿಸಿಕೊಡಬೇಕು.
ಈ)ನೌಕರನು(ಜಿಜಿ) ಅಥವಾ (ಜಿಜಿಜಿ)ನೇ ಆಯ್ಕೆ ಆಯ್ದುಕೊಂಡರೆ ವಂತಿಗೆಯ ವಿವರಗಳನ್ನು ಪ್ರತಿ ತಿಂಗಳು ಸಂಬಳದ ಬಿಲ್ನೊಂದಿಗೆ ಎಚ್ಆರ್ಎಂಎಸ್ ನಮೂನೆಯಲ್ಲಿ ಕಲ್ಪಿಸಿರುವ ಅನುಸೂಚಿ ಐಐರಲ್ಲಿ ತಿಳಿಸಬೇಕು. ಬ್ಯಾಕ್ಲಾಗ್ ವಂತಿಗೆಗಳ ಕಟಾವನ್ನು ಸಂಬಳದ ಬಿಲ್ನಲ್ಲಿ ಮಾಡಬೇಕು.
ಉ) ವಿಶಿಷ್ಟ ಸಂಖ್ಯೆಯ ಸಹಿತವಾಗಿ ಅನುಸೂಚಿ ಐಐ ಅಥವಾ ಐಐಐ ರಲ್ಲಿರುವ ವಿವರಗಳನ್ನು ಆಧರಿಸಿ ಖಜಾನೆ ಅಧಿಕಾರಿಯು ವಿವರಗಳನ್ನು ಎನ್ಪಿಎಸ್ ವಂತಿಗೆ ಲೆಕ್ಕ ನಿರ್ವಹಣಾ ಜಾಲಕ್ಕೆ (ಎಪಿಎಸ್ಸಿಎಎನ್) ಏರು ನಕಲು(ಅಪ್ಲೋಡ್) ಮಾಡಬೇಕು. ಇದು ಅಂಗೀಕಾರವಾಟದ ನಂತರ, ವಂತಿಗೆದಾರರ ವಂತಿಗೆ ಕಡತದ(ಎಸ್ಪಿಎಫ್) ವಿವರಗಳನ್ನು ಒಳಗೊಂಡಿರುವ ವಂತಿಗೆ ಸಲ್ಲಿಕೆ ನಮೂನೆ(ಸಿಎಸ್ಎಫ್) ಯೊಂದಿಗೆ ವ್ಯವಹರಣೆ ಐಡಿ(ಎನ್ಪಿಸ್ಕಾನ್ನಿಂದ) ನೀಡಲ್ಪಡುವುದು ಖಜಾನೆ ಅಧಿಕಾರಿ, ಸಿಎಸ್ಎಫ್ ಮುದ್ರಿಸಿ ಅದನ್ನು ಚೆಕ್/ಡಿಡಿಯೊಂದಿಗೆ ಟ್ರಸ್ಟಿ ಬ್ಯಾಂಕ್ಗೆ ಸಲ್ಲಿಸುವರು.
5. ಸರ್ಕಾರದ ಬ್ಯಾಕ್ಲಾಗ್ ವಂತಿಗೆಯ ಪಾವತಿ
ಅ) ಎಲ್ಲ ನೌಕರರಿಗೆ ಸಂಬಂಧಿಸಿದ ಸರ್ಕಾರದ ಬ್ಯಾಕ್ಲಾಗ್ ವಂತಿಗೆಯನ್ನು ಶೇ.8ರಷ್ಟು ಚಕ್ರಬಡ್ಡಿ ಸಹಿತ ಒಂದೇ ಇಡುಗಂಟಿನಲ್ಲಿ ಪಾವತಿಸತಕ್ಕದ್ದು ಬಡ್ಡಿಯನ್ನು, ಪ್ರತಿಯೊಂದು ಬ್ಯಾಕ್ಲಾಗ್ ಮಾಸಿಕ ವಂತಿಗೆಗೆ, ಬಾಕಿಯಿರುವ ತಿಂಗಳಿನಿಂದ ಆರಂಭಿಸಿ ವಾಸ್ತವಿಕವಾದ ಪಾವತಿ ತಿಂಗಳಿನ ಹಿಂದಿನ ತಿಂಗಳವರೆಗಿನ ಅವಧಿಗೆ ಪಾವತಿಸಬೇಕು.
ಆ)ಬಡ್ಡಿಸಹಿತವಾಗಿ ಸರ್ಕಾರದ ಬಾಕಿ ವಂತಿಗೆಯ ವಿವರಗಳನ್ನು, ಪ್ರತಿಯೊಬ್ಬ ನೌಕರನ ಸಂಬಂಧದಲ್ಲಿ ಅನುಸೂಚಿ ಲಭ್ಯವಿರುತ್ತದೆ. ಡಿಡಿಒ ಅನುಸೂಚಿ 1ನ್ನು ಪರಿಶೀಲಿಸಬೇಕು. ಅಗತ್ಯವೆನಿಸಿದರೆ ತಿದ್ದುಪಡಿಗಳನ್ನು ಮಾಡಬೇಕು. ಡಿಡಿಒ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಹ ನೌಕರರ, ಅಂಥಹ ಎಲ್ಲಾ ಅನುಸೂಚಿಗಳನ್ನು *ಅನುಸೂಚಿ1ರಲ್ಲಿ ಕ್ರೋಢೀಕರಿಸತಕ್ಕದ್ದು. ಸಂಬಂಧಪಟ್ಟ ಅನುಸೂಚಿ 1ರ ಸಹಿತವಾಗಿರುವ ಕ್ರೋಢೀಕೃತ ಅನುಸೂಚಿ ಎಚ್ಆರ್ಎಂಎಸ್ ಮೂಲಕ ಸಲ್ಲಿಸತಕ್ಕದ್ದು ಮತ್ತು ಯುಕ್ತವಾಗಿ ಪ್ರಮಾಣೀಕರಿಸಿದ ಮುದ್ರಿತ ಪ್ರತಿಯನ್ನು ಎನ್ಪಿಎಸ್ ಘಟಕ, ಬೆಂಗಳೂರು ಇಲ್ಲಿಗೆ ಕಳುಹಿಸಿಕೊಡಬೇಕು.
ಇ)ಅನುಸೂಚಿ ಮತ್ತು ಐರ ಅನುಸೂಚಿಗಳ ಮುದ್ರಿತ ಪ್ರತಿ ಸ್ವೀಕರಿಸಿದ ಮೇಲೆ ಅವುಗಳನ್ನು ಪರಿಶೀಲಿಸುವುದು ಮತ್ತು ಬಡ್ಡಿಯನ್ನು ತಹಲ್ವರೆಗೆ ಪ್ಯಾರಾ 5(ಎ) ಅನುಸಾರ ನಿಗದಿಗೊಳಿಸುವುದು ಹಾಗೂ ಪೂರ್ತಿ ಬಾಕಿ ಮೊತ್ತ ಪಾವತಿಸುವುದು ಎಪಿಎಸ್ ಘಟಕದ ಜವಾಬ್ದಾರಿಯಾಗಿರುತ್ತದೆ.
ಇ.ಮೇಲ್ : raghavendral3532@gmail.com
ಎನ್ಪಿಎಸ್ ಯೋಜನೆಯ ಅಧಿಕಾರಿಗಳ ಪಾತ್ರ
ಎನ್ಪಿಎಸ್ ಯೋಜನೆಯ ಅಧಿಕಾರಿಗಳ ಪಾತ್ರ
Wednesday, 21.03.2018,
|ಲ.ರಾಘವೇಂದ್ರ, ಸೇವಾ ಕಾನೂನು ತಜ್ಞರು
ಸರ್ಕಾರವು 1-4-2006 ರಂದು ಅಥವಾ ನಂತರ ಸರ್ಕಾರಿ ಸೇವೆಗೆ ಸೇರುವ ನೌಕರರಿಗೆ ನೂತನ ಪಿಂಚಣಿ ಪದ್ಧತಿ(ಎನ್ಪಿಎಸ್) ಜಾರಿಗೆ ತಂದಿದ್ದು ಈ ಯೋಜನೆಯು ದಿನಾಂಕ 1-4-2010ರಿಂದ ಕಾರ್ಯಾರಂಭ ಮಾಡಿದೆ. ಈ ಯೋಜನೆ ಅನುಷ್ಠಾನಕ್ಕಾಗಿ ದಿನಾಂಕ 29-3-2010ರಂದು ಸರ್ಕಾರಿ ಆದೇಶ ಸಂಖ್ಯೆ ಎಫ್ಡಿ(ಎಸ್ಪಿಎಲ್) 28 ಪಿಇಎನ್ 2009ರ ಮೇರೆಗೆ
ಎನ್ಪಿಎಸ್ ಯೋಜನೆಯಡಿಯಲ್ಲಿ ಬರುವ ವಿವಿಧ ಅಧಿಕಾರಿಗಳ ಮತ್ತು ಚಂದಾದಾರರ ಪಾತ್ರಗಳು ಮತ್ತು ಕರ್ತವ್ಯಗಳನ್ನು ಕೆಳಕಂಡಂತೆ ನೀಡಲಾಗಿದೆ.
1. ಖಜಾನೆ ಅಧಿಕಾರಿಗಳು
ಅ) ಖಜಾನೆ ಅಧಿಕಾರಿಯನ್ನು, ಯೋಜನೆಯ ನೋಡಲ್ ಅಧಿಕಾರಿಯಾಗಿ ಗೊತ್ತುಪಡಿಸಲಾಗಿದ್ದು, ಅವರು ಸಿಆರ್ಎ ಮತ್ತು ಡಿಡಿಒಗಳ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುವರು. ತಮ್ಮಸ್ವಂತ ಕಚೇರಿಯ ಅರ್ಹ ನೌಕರರ ಡಿಡಿಒ ಆಗಿರುವುದರೊಂದಿಗೆ ಸರ್ಕಾರದ ವಂತಿಗೆ ಸಂಬಂಧದಲ್ಲೂ ಸಹ ಡಿಡಿಒ ಆಗಿರಬೇಕು.
ಆ)ಮುಂದಿನವು ಖಜಾನೆ ಅಧಿಕಾರಿಗಳ ನಿರ್ದಿಷ್ಟ ಕರ್ತವ್ಯಗಳಾಗಿರುತ್ತವೆ.
1)ಚಂದಾದಾರರ ಅರ್ಜಿಗಳನ್ನು ಎಸ್1 ಮತ್ತು ಡಿಡಿಒ ನೋಂದಣಿ ಅರ್ಜಿಗಳನ್ನು ಎನ್ 3ನಲ್ಲಿ ಸ್ವೀಕರಿಸುವುದು ಮತ್ತು ಪರಿಶೀಲನೆ ತರುವಾಯ ಸಿಆರ್ಎಗೆ ಕಳುಹಿಸಬೇಕು.
2)ಸಂಬಳದ ಬಿಲ್ಲು ಅನುಮೋದಿತವಾದ ನಂತರ ನೌಕರರ ವಂತಿಗೆಯು ಸಂಬಳದ ಲೆಕ್ಕ ಶೀರ್ಷಿಕೆಯಿಂದ ಲೆಕ್ಕ ಶೀರ್ಷಿಕೆ ‘8342-00-120-2-01’ಕ್ಕೆ ವರ್ಗಾವಣೆಯಾಗುವಂತೆ ನೋಡಿಕೊಳ್ಳಬೇಕು.
3)ಸರ್ಕಾರದ ಸಮಪ್ರಮಾಣ ವಂತಿಗೆಯು ಲೆಕ್ಕ ಶೀರ್ಷಿಕೆ ‘2071-01-101-3-01 ರಾಜ್ಯ ಸರ್ಕಾರ, ಪಿಂಚಣಿ, ಯೋಜನೇತರ ಪುರಸ್ಕೃತ 251’ರಿಂದ ‘8,342-00-120-2-02ಕ್ಕೆ ವರ್ಗಾವಣೆಯಾಗುವಂತೆ ನೋಡಿಕೊಳ್ಳಬೇಕು.
4)ಖಜಾನೆ ವ್ಯವಸ್ಥೆಯಲ್ಲಿ ನಿಯಂತ್ರಣ ಕಡತವನ್ನು ಸೃಜಿಸುವುದು ಮತ್ತು ಅದನ್ನು ಎಚ್ಆರ್ಎಂಎಸ್ನಲ್ಲಿ ಏರು ನಕಲು(ಅಪ್ಲೋಡ್) ಮಾಡುವುದು ಅನಂತರ ಅದು ಚಂದಾದಾರರ ವಂತಿಗೆ ಕಡತ (ಎಸ್ಸಿಎಫ್) ಎನ್ನುವ ಔಟ್ಪುಟ್ ನೀಡುತ್ತದೆ. 5)ಎಸ್ಸಿಎಫ್ಅನ್ನು ಸಿಆರ್ಎನ ಕಡತ ಸಿಂಧುಗೊಳಿಸುವಿಕೆ ಕ್ರಮದ ಊಖಿ ಮೂಲಕ ಹಾಯಿಸಿ ಅದನ್ನು ಸಿಂಧುಗೊಳಿಸಬೇಕು.
6)ಸಿಂಧುಗೊಳಿಸಿದ ಎಸ್ಸಿಎಫ್ ಅನ್ನು ಸಿಆರ್ಎನ ಎನ್ಪಿಎಸ್ಸಿಎಎನ್ ವ್ಯವಸ್ಥೆಗೆ ಏರು ನಕಲು ಮಾಡುವುದು ಮತ್ತು ವಂತಿಗೆ ಸಲ್ಲಿಕೆ ನಮೂನೆ(ಸಿಎಸ್ಎಫ್) ತಯಾರಿಸಬೇಕು.
7)ವಂತಿಕೆ ಸಲ್ಲಿಕೆ ನಮೂನೆಯನ್ನು ಟ್ರಸ್ಟಿ ಬ್ಯಾಂಕ್ಗೆ ಪಾವತಿಸುವುದಕ್ಕೆ ಬಳಸಬೇಕು.
8)ಎನ್ಪಿಸ್ಕ್ಯಾನ್ನಲ್ಲಿ ಏರುನಕಲು (ಅಪ್ಲೋಡ್) ಮಾಡಿರುವ ವಂತಿಗೆ ಸಲ್ಲಿಕೆ ನಮೂನೆಗನುಸಾರವಾಗಿ ಸರ್ಕಾರದ ಮತ್ತು ನೌಕರರ ವಂತಿಗೆ ಮೊತ್ತವನ್ನು ಟ್ರಸ್ಟಿ ಬ್ಯಾಂಕ್ನ ಪಿಂಚಣಿ ನಿಧಿ ಖಾತೆಗೆ ಸಂದಾಯ ಮಾಡಬೇಕು.
9)ನೌಕರನು ಬಾಕಿ ಮೊತ್ತವನ್ನು ಒಂದೇ ಇಡುಗಂಟಿನಲ್ಲಿ ಪಾವತಿಸಲು ಆಯ್ಕೆ ಮಾಡಿಕೊಂಡರೆ ನೌಕರರ ಬ್ಯಾಕ್ಲಾಗ್ವಂತಿಕೆ ವಿವರ ಪಟ್ಟಿಯನ್ನು ಸಿಆರ್ಎಗೆ ಕಳುಹಿಸಿಕೊಡುವುದು ಮತ್ತು ಟ್ರಸ್ಟಿ ಬ್ಯಾಂಕ್ಗೆ ಚೆಕ್ಕಗಳು/ಡಿಡಿಗಳು/ನಿಧಿಗಳನ್ನು ವರ್ಗಾಯಿಸಬೇಕು.
10) ನೌಕರರಿಂದ ಸ್ವೀಕರಿಸಿದ ವಂತಿಗೆ ವಿವರಗಳು ಮತ್ತು ಹೂಡಿಕೆ ಆಯ್ಕೆಗಳ ಬದಲಾವಣೆಗಳಿಗೆ ಸಂಬಂಧಿಸಿದಂತೆ ಕೋರಿಕೆಗಳನ್ನು ಎನ್ಪಿಎಸ್ಸಿಎಎಎನ್ ಮೂಲಕ ನಿರ್ವಹಿಸುವುದು ಮತ್ತು ನೌಕರರು ಮತ್ತು ಡಿಡಿಒಗಳಿಂದ ಸ್ವೀಕರಿಸಿದ ಅಹವಾಲುಗಳನ್ನು ಸಿಆರ್ಎಗೆ ಕಳುಹಿಸಿಕೊಡಬೇಕು.
11) ಮುಂದಿನ ದಾಖಲೆಗಳ ನಿರ್ವಹಣೆ:
ಬಾಕಿ ಇರುವ ವಂತಿಕೆ ಕಡಿತ
ವಂತಿಕೆ ಸಲ್ಲಿಕೆ ನಮೂನೆ, ಸಿಎಸ್ಎಫ್ ಮತ್ತು ಅದಕ್ಕೆ ಸಂಬಂಧಿಸಿದ ಅನುಸೂಚಿಗಳು ಐ, ಐಐ ಮತ್ತು ಐಐಐ
ಟ್ರಸ್ಟಿ ಬ್ಯಾಂಕ್ ಪಾವತಿ ದಾಖಲೆಗಳು
ಲೆಕ್ಕ ಶೀರ್ಷಿಕೆ 8342ಕ್ಕೆ ಮಾಡಿದ ಮತ್ತು ಲೆಕ್ಕ ಶೀರ್ಷಿಕೆ 8342ರಿಂದ ಮಾಡಿದ ವರ್ಗಾವಣೆಯ ದೈನಿಕ/ಸಾಪ್ತಾಹಿಕ/ಮಾಸಿಕ ವಿವರ ಪಟ್ಟಿಗಳು ಮತ್ತು ಶಿಲ್ಕುಗಳು
12) ಕರ್ನಾಟಕ ಖಜಾನೆ ಸಂಹಿತೆಯ ಉಪಬಂಧಗಳು ಮತ್ತು ಕಾಲಕಾಲಕ್ಕೆ ಹೊರಡಿಸಲಾದ ಯಾವುದೇ ಇತರ ಸರ್ಕಾರಿ ಆದೇಶಗಳಿಗನುಸಾರ ಲೆಕ್ಕಪತ್ರಗಳನ್ನು ಸಲ್ಲಿಸಬೇಕು.
2. ಬಟವಾಡೆ ಅಧಿಕಾರಿಗಳ (ಡಿಡಿಒ) ಪಾತ್ರ ಮತ್ತು ಕರ್ತವ್ಯಗಳು
ಅ)ಡಿಡಿಒಗಳು ಎನ್ಪಿಎಸ್ನಲ್ಲಿ ನಿರ್ವಹಿಸುವ ಪಾತ್ರ ಪ್ರಾಥಮಿಕವಾದ ಪಾತ್ರ. ಅವರು ನಿರ್ದಿಷ್ಟಪಡಿಸಿರುವ ರೀತಿಯಲ್ಲಿ ಅಂದರೆ ಮೂಲ ವೇತನ ಮತ್ತು ತುಟ್ಟಿಭತ್ಯೆಯ ಶೇ.10ರಷ್ಟನ್ನು ಯೋಜನೆಯ ಸ್ತರ 1ಕ್ಕೆ ಮಾಸಿಕ ವಂತಿಗೆಯನ್ನು ಮತ್ತು ನೌಕರ ಆಯ್ಕೆ ಮಾಡಿಕೊಂಡಿರುವ ಪಾವತಿ ವಿಧಾನಕ್ಕನುಸಾರವಾಗಿ ಬ್ಯಾಕ್ಲಾಗ್ ವಂತಿಗೆಯನ್ನು ಕಟಾವಣೆ ಮಾಡಿ ಅನುಸೂಚಿಮತ್ತು ಬಿಲ್ಗಳನ್ನು ಮುಂದಿನ ಕ್ರಮಕ್ಕಾಗಿ ಖಜಾನೆಗೆ ಸಲ್ಲಿಸಬೇಕು.
ಆ)ಡಿಡಿಒಗಳು ನಿರ್ವಹಿಸಬೇಕಾದ ಕಾರ್ಯಚಟುವಟಿಕೆಗಳು
1)ಎನ್ಎಸ್ಡಿಎಲ್ ನಿರ್ದಿಷ್ಟಪಡಿಸಿರುವ ಅರ್ಜಿ ನಮೂನೆ ಎನ್3ರಲ್ಲಿ ವಿವರಗಳನ್ನು ಸಂಬಂಧಪಟ್ಟ ಖಜಾನೆ ಅಧಿಕಾರಿ ಮೂಲಕ ಸಲ್ಲಿಸಿ ಸಿಆರ್ಎನಲ್ಲಿ ನೋಂದಣಿ ಮಾಡಬೇಕು.
2)ನೌಕರರು ಕ್ರಮಬದ್ಧವಾಗಿ ಭರ್ತಿ ಮಾಡಿದ ನೋಂದಣಿ ನಮೂನೆ ಎಸ್1ನ್ನು ದ್ವಿಪ್ರತಿಯಲ್ಲಿ ಪಡೆದುಕೊಳ್ಳುವುದು, ವಿಭಾಗ ‘ಬಿ’ನಲ್ಲಿ ನೌಕರರ ಔದ್ಯೋಗಿಕ ವಿವರಗಳನ್ನು ಡಿಡಿಒಗಳು ಭರ್ತಿಮಾಡಿ ಪ್ರಮಾಣೀಕರಿಸುವುದು, ನಮೂನೆಯಲ್ಲಿ ಇತರ ವಿವರಗಳನ್ನು ದೃಢೀಕರಿಸುವುದು ಮತ್ತು ಅದನ್ನು ಸಂಬಂಧಪಟ್ಟ ಖಜಾನೆ ಅಧಿಕಾರಿಗೆ ಕಳುಹಿಸಬೇಕು.
3) ಸಿಆರ್ಎಯಿಂದ ಪಡೆದ ಪಿಆರ್ಎಎನ್(ಪ್ರಾನ್) ಕಿಟ್ಗಳನ್ನು ಸಂಬಂಧಪಟ್ಟ ನೌಕರರಿಗೆ ವಿತರಿಸಬೇಕು.
4) ನೌಕರರ ಬಾಕಿ ಪಿಂಚಣಿ ವಂತಿಗೆ ಸಂದಾಯದ ಆಯ್ಕೆಯ ಮಾಹಿತಿಯನ್ನು ಖಜಾನಾಧಿಕಾರಿಗೆ ನೀಡುವುದು. ನಿಯತ ಮಾಸಿಕ ವಂತಿಗೆಯೊಂದಿಗೆ ನೌಕರರು ಆಯ್ಕೆ ಮಾಡಿಕೊಂಡಿರುವ ಆಯ್ಕೆ ವಿಧಾನಕ್ಕನುಸಾರವಾಗಿ ಬ್ಯಾಕ್ಲಾಗ್ ವಂತಿಗೆ ಕಟಾವಣೆ ಮಾಡಬೇಕು.
5) ಪ್ರಸಕ್ತ ವಂತಿಕೆಗಾಗಿಎನ್ಪಿಎಸ್ ಅನುಸೂಚಿ-ಐ ಬ್ಯಾಕ್ಲಾಗ್ ವಂತಿಗೆಗಾಗಿ ಎನ್ಪಿಎಸ್ ಅನುಸೂಚಿ ಐಐ ಮತ್ತು ನೌಕರನು ಸಂಬಳದ ಹೊರಗಡೆ ನೇರವಾಗಿ ಪಾವತಿಸುವ ಇಡುಗಂಟು ಬಾಕಿ ವಂತಿಗೆಗಾಗಿ ಎನ್ಪಿಎಸ್ ಅನುಸೂಚಿ ಐಐಐ ತಯಾರಿಸಬೇಕು.
6) ಬ್ಯಾಕ್ಲಾಗ್ನ್ನು ಒಂದೇ ಇಡುಗಂಟಿನಲ್ಲಿ ಪಾವತಿಸುವುದಕ್ಕೆ ಆಯ್ಕೆ ಮಾಡಿಕೊಂಡಿರುವ ನೌಕರನ ಸಂಬಂಧದಲ್ಲಿ ಖಜಾನೆ ಅಧಿಕಾರಿಗೆ ಅನುಸೂಚಿ ಐಐಐರೊಂದಿಗೆ ಡಿಮ್ಯಾಂಡ್ ಡ್ರಾಫ್ಟ್/ ಚೆಕ್ ಕಳುಹಿಸಿ ಕೊಡಬೇಕು.
7) ಪ್ರತಿಯೊಬ್ಬ ಅರ್ಹ ನೌಕರರ ಸಂಬಂಧದಲ್ಲಿ ಎಚ್ಆರ್ಎಂಎಸ್ನಲ್ಲಿ ಸರ್ಕಾರದ ಬ್ಯಾಕ್ಲಾಗ್ ವಂತಿಗೆ ಅನುಸೂಚಿ ಐನ್ನು ತಯಾರಿಸುವ ಬಗೆ ಪರಿಶೀಲಿಸುವುದು ಮತ್ತು ಅಗತ್ಯಾನುಸಾರ ತಿದ್ದುಪಡಿಗಳನ್ನು ಮಾಡುವುದು ಎಲ್ಲಾ ಅರ್ಹ ನೌಕರರನ್ನು ಒಳಗೊಳ್ಳುವಂತೆ ಎಲ್ಲ ಅನುಸೂಚಿ ಐನ್ನು ಅನುಸೂಚಿ Vರಲ್ಲಿ ಕ್ರೋಢಿಕರಿಸುವುದು.
8) ಅನುಸೂಚಿ ಗಳನ್ನು (IV ಮತ್ತು v) ಪ್ರಮಾಣೀಕರಿಸುವುದು ಮತ್ತು ಅವುಗಳನ್ನು ಎಚ್ಆರ್ಎಂಎಸ್ ವ್ಯವಸ್ಥೆಯಲ್ಲಿ ಸಲ್ಲಿಸುವುದು
9) ಈ ಅನುಸೂಚಿಗಳ ಸಹಿ ಮಾಡಿರುವ ಮತ್ತು ಪ್ರಮಾಣೀಕರಿಸಿರುವ ಮುದ್ರಿತ ಪ್ರತಿಗಳನ್ನು ಎನ್ಪಿಎಸ್ ಕೋಶ ಖಜಾನೆ ಇಲಾಖೆ, ವಿ.ವಿ. ಕೇಂದ್ರ ಬೆಂಗಳೂರು ಇಲ್ಲಿಗೆ ಪಾವತಿಗಾಗಿ ಕಳುಹಿಸುವುದು.
10) ಉದ್ಯೋಗ ವಿವರಗಳಲ್ಲಿ ವೇತನ ಶ್ರೇಣಿ, ಮೂಲವೇತನ, ವರ್ಗಾವಣೆ ಮೊದಲಾದ ಬದಲಾವಣೆಗಳಿಂದಾಗಿ ಅವುಗಳನ್ನು ಸಂಬಂಧಪಟ್ಟ ಖಜಾನೆ ಅಧಿಕಾರಿಗೆ ತಿಳಿಸುವುದು.
11) ಚಂದಾದಾರರಿಂದ ಸ್ವೀಕರಿಸಲಾದ ಹಣಹೂಡಿಕೆ ಮಾದರಿಯಲ್ಲಿ ಬದಲಾವಣೆ ಮತ್ತು ಚಂದಾದಾರರ ವಿವರ ಬದಲಾವಣೆ ಕೋರಿಕೆ
12) ದೂರುಗಳನ್ನು ಸಿಆರ್ಎಗೆ ಕಳುಹಿಸುವುದಕ್ಕಾಗಿ ಸಂಬಂಧಪಟ್ಟ ಖಜಾನೆ ಅಧಿಕಾರಿಗೆ ಕಳುಹಿಸಿ ಕೊಡುವುದು.
13)ಈ ಕೆಳಗಿನ ದಾಖಲೆಗಳನ್ನು ನಿರ್ವಹಿಸುವುದು.
ನೌಕರರ /ಚಂದಾದಾರರ ವ್ಯವಹಾರಗಳ ವಿವರಣಪಟ್ಟಿ
ನೌಕರರ /ಚಂದಾದಾರರ ನಿವೃತ್ತಿಯ ವಿವರಗಳು.
****
07.03.2018,
| ಲ.ರಾಘವೇಂದ್ರ, ಸೇವಾ ಕಾನೂನು ತಜ್ಞರು.
ನಮ್ಮ ರಾಷ್ಟ್ರದಲ್ಲಿ ಸರ್ಕಾರದ ನಿಯಮಾವಳಿಗಳು ಕಾಲಕಾಲಕ್ಕೆ ಬದಲಾಗಿ ಆಯಾ ಹುದ್ದೆಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಹತೆ ಮತ್ತು ಇನ್ನಿತರ ಷರತ್ತುಗಳನ್ನು ಒಳಗೊಂಡು ನಿಯಮಾವಳಿಗಳು ರೂಪುಗೊಂಡವು. ಅದರಂತೆ 1977ರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ರಚನೆಯಾಗಿ ದಿನಾಂಕ 7-7-1977ರಿಂದ ಜಾರಿಗೆ ಬಂದಿದೆ. ಈ ನಿಯಮಾವಳಿಯಲ್ಲಿ ಸರ್ಕಾರಿ ಸೇವೆಗೆ ಅರ್ಹತೆ ಮೀಸಲಾತಿ ಹಾಗೂ ಇನ್ನಿತರ ಕಾರ್ಯವಿಧಾನವನ್ನು ಅಳವಡಿಸಲಾಗಿದೆ.
ಈ ನಿಯಮಾವಳಿಯಲ್ಲಿ ಸರ್ಕಾರಿ ನೌಕರಿಗೆ ಸೇರುವ ಕನಿಷ್ಠ ಮತ್ತು ಗರಿಷ್ಠ ವಯೋಮಿತಿ ಪದೋನ್ನತಿ ದೇಹದಾರ್ಢ್ಯತೆ ಒಂದು ಹುದ್ದೆಯಿಂದ ಇನ್ನೊಂದು ಹುದ್ದೆಗೆ ವರ್ಗಾವಣೆ ಸೇರಿಕೆ ಕಾಲ ಇತ್ಯಾದಿ ಅಂಶಗಳೆಲ್ಲವನ್ನೂ ಒಳಗೊಂಡಿರುತ್ತದೆ. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರದ ಕಚೇರಿಗಳಲ್ಲಿರುವ ಲಿಪಿಕ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು 1978ರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳನ್ನು ಜಾರಿಗೆ ತರಲಾಗಿದೆ. ಈ ನಿಯಮಾವಳಿಯಂತೆ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕೆಂದು ದಿನಾಂಕ 13-12-2013ರಿಂದ ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ. (ಅಧಿಸೂಚನೆ ಸಂಖ್ಯೆ ಡಿಪಿಎಆರ್ 18 ಎಸ್ಸಿಎಆರ್ 2013) ಆದರೆ ಈಗಾಗಲೇ ಸೇವೆಯಲ್ಲಿರುವ ಸರ್ಕಾರಿ ನೌಕರರು ಈ ದಿನಾಂಕಕ್ಕೆ ಪೂರ್ವದಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಹತೆ ಹೊಂದಿ ಬಡ್ತಿಗೆ ಅಥವಾ ವರ್ಗಾವಣೆಗೆ ಪಿಯುಸಿ ಶಿಕ್ಷಣ ಹೊಂದಿರಬೇಕೆಂದು ಅನ್ವಯಿಸತಕ್ಕದ್ದಲ್ಲವೆಂದು ಸೂಚಿಸಿದೆ.(ಅಧಿಸೂಚನೆ ಸಂಖ್ಯೆ ಡಿಪಿಆರ್ 20 ಎಸ್ಸಿಆರ್ 2014) ಹೀಗಾಗಿದ್ದರೂ 1977ರ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 5ರಲ್ಲಿ ಗ್ರೂಪ್ ‘ಡಿ’ ಹುದ್ದೆಗೆ ಎಸ್ಎಸ್ಎಲ್ಸಿ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ಹೀಗೆ ಬದಲಾದ ವಿದ್ಯಾರ್ಹತೆಗೆ ತತ್ಸಮಾನ ಯಾವುದು ಎಂಬುದನ್ನು ಪರಿಗಣಿಸಲು ದಿನಾಂಕ 27-7-2018ರ ಸರ್ಕಾರಿ ಸುತ್ತೋಲೆ ಸಂಖ್ಯೆ ಸಿಆಸುಇ81ಸೇವನೆ2017ರಲ್ಲಿ ಈ ಕೆಳಕಂಡಂತೆ ನೀಡಲಾಗಿದೆ.
ಎಸ್ಎಸ್ಎಲ್ಸಿ ವಿದ್ಯಾರ್ಹತೆಯ ತತ್ಸಮಾನ ವಿದ್ಯಾರ್ಹತೆಗಳು:
# ಸಿ.ಬಿ.ಎಸ್.ಇ. ಮತ್ತು ಐ.ಸಿ.ಎಸ್.ಇ., ಮಂಡಳಿಯು ನಡೆಸುವ ಕ್ಲಾಸ್ 10 ಪರೀಕ್ಷೆ
# ಇತರೆ ರಾಜ್ಯ ಸರ್ಕಾರದ ಪರೀಕ್ಷಾ ಮಂಡಳಿಗಳಿಂದ ನಡೆಸುವ ಕ್ಲಾಸ್ 10 ಪರೀಕ್ಷೆ
# ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (ಎನ್ಐಒಎಸ್) ವತಿಯಿಂದ ನಡೆಸುವ ಪ್ರೌಢ ಶಿಕ್ಷಣಮಟ್ಟದ ಕೋರ್ಸ್
# ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಪ್ರೌಢ ಶಿಕ್ಷಣಮಟ್ಟದ ಕೋರ್ಸ್
ಪಿ.ಯು.ಸಿ. ವಿದ್ಯಾರ್ಹತೆಯ ತತ್ಸಮಾನ ವಿದ್ಯಾರ್ಹತೆಗಳು:
#ಸಿ.ಬಿ.ಎಸ್.ಇ. ಮತ್ತು ಐ.ಸಿ.ಎಸ್.ಇ., ಮಂಡಳಿಯು ನಡೆಸುವ ಕ್ಲಾಸ್ 12 ಪರೀಕ್ಷೆ
# ಇತರೆ ರಾಜ್ಯ ಸರ್ಕಾರದ ಪರೀಕ್ಷಾ ಮಂಡಳಿಗಳಿಂದ ನಡೆಸುವ ಕ್ಲಾಸ್ 12 ಪರೀಕ್ಷೆ
# ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (ಎನ್.ಐ.ಒ.ಎಸ್.) ವತಿಯಿಂದ ನಡೆಸುವ ಉನ್ನತ ಪ್ರೌಢ ಶಿಕ್ಷಣ ಕೋರ್ಸ್/ಎಚ್.ಎಸ್.ಸಿ.
# ತಾಂತ್ರಿಕ ಶಿಕ್ಷಣ ಇಲಾಖೆಯ ಮೂರು ವರ್ಷಗಳ ಡಿಪ್ಲೊಮಾ ಅಥವಾ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದ ಎರಡು ವರ್ಷಗಳ ಐ.ಟಿ.ಐ. ಕೋರ್ಸ್ ಅಥವಾ ಎರಡು ವರ್ಷಗಳ ವೃತ್ತಿ ಶಿಕ್ಷಣ ಡಿಪ್ಲೊಮಾ (ಜೆ.ಒ.ಸಿ./ಜೆ.ಒ.ಡಿ.ಸಿ./ಜೆ.ಎಲ್.ಡಿ.ಸಿ.) ಅಭ್ಯರ್ಥಿಗಳು ಎನ್.ಐ.ಒ.ಎಸ್.ನ ವತಿಯಿಂದ ನಡೆಸುವ ಒಂದು ಭಾಷಾ ಕೋರ್ಸ್ ಮತ್ತು ಒಂದು ಶೈಕ್ಷಣಿಕ ವಿಷಯದಲ್ಲಿ (ದೂರಕಲಿಕೆ ಮಾದರಿಯಲ್ಲಿ) ಅಥವಾ ಪದವಿ ಪೂರ್ವ ಮಂಡಳಿಯು ನಡೆಸುವ ಪರೀಕ್ಷೆಯಲ್ಲಿ ಒಂದು ಭಾಷೆ ಮತ್ತು ಒಂದು ವಿಷಯದಲ್ಲಿ ಉತ್ತೀರ್ಣರಾದಲ್ಲಿ ಮಾತ್ರ ಪಿ.ಯು.ಸಿ.ಗೆ ತತ್ಸಮಾನವೆಂದು ಪರಿಗಣಿಸಬಹುದು.
ಪದವಿ ವಿದ್ಯಾರ್ಹತೆಯ ತತ್ಸಮಾನ ವಿದ್ಯಾರ್ಹತೆಗಳು:
# ಯುಜಿಸಿಯಿಂದ ಮಾನ್ಯತೆ ಹೊಂದಿರುವ ಪರಿಗಣಿತ ವಿಶ್ವವಿದ್ಯಾಲಯಗಳು, ಖಾಸಗಿ/ಡೀಮ್್ಡ ಹಾಗೂ ಹೊರ ರಾಜ್ಯದ ವಿವಿಗಳಿಂದ ಪಡೆದ ಪದವಿಗಳು. ಆದರೆ, ವಿವಿಗಳ ಪದವಿಯ ತತ್ಸಮಾನದ ಬಗ್ಗೆ ಶಿಕ್ಷಣಕ್ಕೆ ಸಂಬಂಧಿಸಿದಂತೆ ಆಯಾ ವಿಶ್ವವಿದ್ಯಾಲಯ ಮತ್ತು ಉದ್ಯೋಗಕ್ಕೆ ಸಂಬಂಧಿಸಿದಂತೆ ಉದ್ಯೋಗ ನೀಡುವ ಪ್ರಾಧಿಕಾರ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ್ಝ ಅಂಚೆ ಮತ್ತು ದೂರ ಶಿಕ್ಷಣದ ಮೂಲಕ ಪಡೆದಿರುವ ಪದವಿಗಳು. ಆದರೆ, ನಿಯಮಬಾಹಿರವಾಗಿ ಕೆಲವು ವಿಶ್ವವಿದ್ಯಾಲಯಗಳು ಯು.ಜಿ.ಸಿ.ಯ ಅನುಮೋದನೆ ಇಲ್ಲದೆ ನಡೆಸುತ್ತಿರುವ ಅಂಚೆ ಮತ್ತು ದೂರ ಶಿಕ್ಷಣದ ಕೋರ್ಸಗಳನ್ನು ಹಾಗೂ ಅಂಚೆ ಮತ್ತು ದೂರ ಶಿಕ್ಷಣದ ಮುಖಾಂತರ ಪಡೆದ ತಾಂತ್ರಿಕ ಪದವಿಗಳನ್ನು ನೇಮಕಾತಿಗೆ ಪರಿಗಣಿಸುವಂತಿಲ್ಲ.
ದಿನಾಂಕ 27-7-2018ರ ಈ ಸುತ್ತೋಲೆಯು ಮತ್ತಷ್ಟು ಗೊಂದಲಗಳನ್ನು ಸೃಷ್ಟಿಸಿದೆ. ಪಿಯುಸಿಗೆ ತತ್ಸಮಾನವಾದ 3 ವರ್ಷದ ಡಿಪ್ಲೊಮಾ ಅಥವಾ ಎರಡು ವರ್ಷಗಳ ಐ.ಟಿ.ಐ. ಅಥವಾ ಎರಡು ವರ್ಷಗಳ ವೃತ್ತಿ ಶಿಕ್ಷಣ ಡಿಪ್ಲೊಮಾದಾರರು ಪದವಿ ಪೂರ್ವ ಪರೀಕ್ಷಾ ಮಂಡಳಿಯು ನಡೆಸುವ ಪರೀಕ್ಷೆಯಲ್ಲಿ ಒಂದು ಭಾಷೆ ಮತ್ತು ಒಂದು ವಿಷಯದಲ್ಲಿ ತೇರ್ಗಡೆಯಾದರೆ ಮಾತ್ರ ಪಿಯುಸಿಗೆ ತತ್ಸಮಾನವೆಂದು ಪರಿಗಣಿಸಬಹುದೆಂದು ಸೂಚಿಸಿರುವುದು ಮತ್ತಷ್ಟು ಗೊಂದಲವಾಗಿದೆ.
ಇ.ಮೇಲ್: raghavendral3532@gmail.com
***
( ಮುುಂದುವರೆದದ್ದದು)
28.02.2018,
| ಲ.ರಾಘವೇಂದ್ರ
ಸರ್ಕಾರಿ ನೌಕರರು ಸುದೀರ್ಘ ಅವಧಿಯ ಕರ್ತವ್ಯದ ಬಳಿಕ ನಿವೃತ್ತಿಯಾದಾಗ ಪಿಂಚಣಿ ಎನ್ನುವುದೇ ಅವರಿಗೆ ಸಂಜೀವಿನಿ. ಆದರೆ ದಿನಾಂಕ 1-4-2006ರಿಂದ ಜಾರಿಗೆ ತಂದಿರುವ ನೂತನ ಪಿಂಚಣಿ ಯೋಜನೆ ಬಗ್ಗೆ ಸರ್ಕಾರಿ ನೌಕರರು ಗೊಂದಲಕ್ಕೀಡಾಗಿದ್ದಾರೆ. ತಮ್ಮ ಹಣ ಎಲ್ಲಿ ಜಮೆಯಾಗುತ್ತಿದೆ, ಎಲ್ಲಿ ಹೂಡಿಕೆಯಾಗುತ್ತಿದೆ ಎನ್ನುವ ಸ್ಪಷ್ಟ ಮಾಹಿತಿಯಿಲ್ಲದೆ ಕಂಗೆಟ್ಟಿದ್ದಾರೆ. ದಿನಾಂಕ 1-1-2004ರಿಂದ ರಾಷ್ಟ್ರದ ಒಂದೆರಡು ರಾಜ್ಯಗಳನ್ನು ಹೊರತುಪಡಿಸಿ ಬೇರೆ ಎಲ್ಲ ರಾಜ್ಯಗಳಲ್ಲೂ ಈ ನೂತನ ಪಿಂಚಣಿ ಯೋಜನೆಯನ್ನು ಸರ್ಕಾರಿ ನೌಕರರಿಗೆ ಅನುಷ್ಠಾನಗೊಳಿಸಲಾಗಿದೆ. ಪಶ್ಚಿಮ ಬಂಗಾಳ, ತ್ರಿಪುರ ರಾಜ್ಯಗಳಲ್ಲಿ ಹಳೆಯ ನಿಶ್ಚಿತ ಪಿಂಚಣಿ ಯೋಜನೆಯನ್ನೇ ಮುಂದುವರಿಸಲಾಗಿದೆ.
ಕೇಂದ್ರ ಸರ್ಕಾರವು ಆರ್ಥಿಕತೆಯ ಸಂಸದೀಯ ಸ್ಥಾಯಿ ಸಮಿತಿಯನ್ನು ಯಶವಂತ ಸಿಂಹ ಅವರ ನೇತೃತ್ವದಲ್ಲಿ ರಚಿಸಿದ್ದು, ಅದು ಈ ಕೆಳಗಿನಂತೆ ಸಲಹೆಗಳನ್ನು ನೀಡಿದೆ.
ಎನ್.ಪಿ.ಎಸ್.ನಲ್ಲಿ ನೌಕರ ತೊಡಗಿಸಿದ ಹಣಕ್ಕೆ ನಿಶ್ಚಿತ ಮೊಬಲಗು ಹಾಗೂ ಪಿಂಚಣಿ ಬಗ್ಗೆ ಖಚಿತ ಪಡಿಸಿರುವುದಿಲ್ಲ. ಎನ್.ಪಿ.ಎಸ್.ನಲ್ಲಿ ಎಫ್.ಡಿ.ಐ. ಕೇವಲ ಶೇ.26ರಷ್ಟು ನಿಗದಿಪಡಿಸಲು ಸೂಚಿಸಲಾಗಿದೆ. ಆದರೆ ಪ್ರಸ್ತುತ ಶೇ.100ರಷ್ಟು ಇದನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ.
ಎನ್.ಪಿ.ಎಸ್.ನಲ್ಲಿ ನೌಕರನು ಇತರ ನಿವೃತ್ತ ನೌಕರರು ಪಡೆಯುವಂತೆ ಪಿಂಚಣಿ ಮೊಬಲಗನ್ನು ಪಡೆಯುವಂತಿರಬೇಕು.
ಪಿಂಚಣಿ ನಿಧಿಯ ಹಣಕ್ಕೆ ನೌಕರರ ಭವಿಷ್ಯ ನಿಧಿ ಯೋಜನೆ ಅಡಿಯಲ್ಲಿ ನೀಡುವ ಬಡ್ಡಿ ದರಕ್ಕೆ ಉಪದಾನ ನೀಡಬೇಕು.
ಕೇಂದ್ರ ಸರ್ಕಾರದ 5ನೇ ವೇತನ ಆಯೋಗವು ಸವೋಚ್ಛ ನ್ಯಾಯಾಲಯದ ತೀರ್ಪನ್ನು ಉಲ್ಲೇಖಿಸಿ ಪಿಂಚಣಿ ಎಂಬುದು ನೌಕರರಿಗೆ ನ್ಯಾಯಬದ್ದವಾಗಿ ಬರಬೇಕಾದ, ಹಿಂದಕ್ಕೆ ಪಡೆಯಲಾರದ, ಕಾನೂನು ರೀತ್ಯಾ ಹಕ್ಕಾಗಿದೆ ಎಂದು ತಿಳಿಸಿದೆ. ಇಂತಹ ಪಿಂಚಣಿಯನ್ನು ಸೇವೆಯಲ್ಲಿರುವ ನೌಕರರ ವೇತನ ಪರಿಷ್ಕರಿಸಿದಂತೆ ಅಗಾಗ ಪರಿಷ್ಕರಿಸಿ ನಿಗದಿ ಮಾಡಬೇಕೆಂದು ಶಿಫಾರಸ್ಸು ಮಾಡಿತ್ತು. ಇವೆಲ್ಲವುಗಳನ್ನು ತಿರಸ್ಕರಿಸಿ ಪಿ.ಎಫ್.ಆರ್.ಡಿ.ಎ. ಅಧಿನಿಯಮ 2013ರನ್ನು ರಚಿಸಲಾಗಿದೆ. ಇದರಲ್ಲಿ ನೌಕರರ ಹಣಕ್ಕೆ 30-35 ವರ್ಷಗಳ ಸೇವೆಯ ನಂತರ ಸಿಗಬೇಕಾದ ಪಿಂಚಣಿ ಸೌಲಭ್ಯಕ್ಕೆ ಯಾವುದೇ ಭದ್ರತೆ ಹಾಗು ನಿಶ್ಚಿತ ಪಿಂಚಣಿ ಇಲ್ಲವಾಗಿದೆ.
ಎನ್.ಪಿ.ಎಸ್.ನಿಂದ ಉದ್ಭವಿಸುವ ಸಮಸ್ಯೆಗಳು:
ಸರ್ಕಾರಿ ನೌಕರರನ್ನು ಎರಡು ಗುಂಪುಗಳನ್ನಾಗಿ ಬೇರ್ಪಡಿಸುತ್ತದೆ.
ಎನ್.ಪಿ.ಎಸ್. ನೌಕರರು ಸದರಿ ಯೋಜನೆಯು ಮಾರುಕಟ್ಟೆ ಆಧಾರಿತವಾಗಿರುವುದರಿಂದ ಭವಿಷ್ಯದಲ್ಲಿ ಪಿಂಚಣಿ ಪಡೆಯುವುದು ಬಹಳ ಅನಿಶ್ಚಿತವಾಗಿರುತ್ತದೆ.
ಎನ್.ಪಿ.ಎಸ್.ಗೆ ನೌಕರರು ವೇತನದ ಶೇ.10ರಷ್ಟು ಚಂದಾ ನೀಡಬೇಕಾಗಿರುವುದರಿಂದ ಒಟ್ಟು ಪಡೆಯಬೇಕಾದ ವೇತನ ಕಡಿಮೆಯಾಗುತ್ತದೆ. ಇದರಿಂದ ನೌಕರರಲ್ಲಿ ಅಸಮಧಾನ ಸೃಷ್ಟಿಯಾಗುತ್ತದೆ.
ಯೋಜನೆಯಲ್ಲಿ ನೌಕರರಿಗೆ ನಿವೃತ್ತಿ ಸಮಯದಲ್ಲಿ ನಿವೃತ್ತಿ ಉಪದಾನ ಹಾಗೂ ನಿಶ್ಚಿತ ಕುಟುಂಬ ನಿವೃತ್ತಿ ವೇತನಕ್ಕೆ ಅವಕಾಶವಿಲ.
ಯೋಜನೆಯ ನೌಕರರು ಸಾಮಾನ್ಯ ಭವಿಷ್ಯ ನಿಧಿಯಲ್ಲಿ (ಜಿಪಿಎಫ್) ಉಳಿತಾಯ ಮಾಡಲು ಅವಕಾಶವಿರುವುದಿಲ್ಲ.
ಯೋಜನೆಯಲ್ಲಿ ಜಿಪಿಎಫ್ನಲ್ಲಿ ಇದ್ದಂತೆ ನೌಕರರು ತಮ್ಮ ಸಾಮಾಜಿಕ ಅಗತ್ಯ ಗಳಿಗೆ ಅನುಸಾರವಾಗಿ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ. ಇದರಿಂದಾಗಿ ನೌಕರ ಇನ್ನಷ್ಟು ಸಾಲಗಾರನಾಗುವ ಪರಿಸ್ಥಿತಿ ಉಂಟಾಗುತ್ತದೆ.
ಹಣ ಹಿಂಪಡೆದಾಗ ಒಟ್ಟು ಆದಾಯಕ್ಕೆ ಪಿಂಚಣಿ ಸೇರಿ ತೆರಿಗೆ ಕಟ್ಟಬೇಕಾಗುತ್ತದೆ. ಇದಲ್ಲದೆ ಸೇವಾ ತೆರಿಗೆಯನ್ನು ನೀಡಬೇಕಾಗುತ್ತದೆ.
ಹಳೆ ಪದ್ಧತಿಯಲ್ಲಿ ಸರ್ಕಾರ ನೀಡುವ ಪಿಂಚಣಿಗೆ ಬೆಲೆ ಏರಿಕೆಯಿಂದಾಗಿ ನೀಡುವ ತುಟ್ಟಿ ಭತ್ಯೆ ಈ ನೂತನ ಪಿಂಚಣಿ ಯೋಜನೆಗೆ ಒಳಪಡುವ ನೌಕರರಿಗೆ ಅನ್ವಯವಾಗುವುದಿಲ್ಲ. ಇದು ನೌಕರರಲ್ಲಿ ತಾರತಮ್ಯ ಉಂಟುಮಾಡುತ್ತದೆ.
ವೇತನ ಆಯೋಗಗಳು ಪಿಂಚಣಿ ಪರಿಷ್ಕರಿಸುವಂತೆ ಈ ಯೋಜನೆಯಡಿ ಪಿಂಚಣಿ ಪರಿಷ್ಕರಿಸುವ ಬಗ್ಗೆ ಕಾಯಿದೆಯಲ್ಲಿ ಯಾವುದೇ ಭರವಸೆ ಇಲ್ಲ.
ನೌಕರರು ಹಾಗೂ ಸರ್ಕಾರ ತಲಾ ಶೇ.10ರಷ್ಟು ವಂತಿಗೆ ನೀಡಿದರೂ ನೌಕರ 30-35 ವರ್ಷಗಳ ಸೇವೆಯ ನಂತರ ನಿವೃತ್ತಿ ಸಮಯದಲ್ಲಿ ಪಡೆದ ವೇತನದ ಶೇ.50ರಷ್ಟು ಪಿಂಚಣಿ ಪಡೆಯುವ ಬಗ್ಗೆ ಕಾಯಿದೆಯಲ್ಲಿ ಯಾವುದೇ ಭರವಸೆ ಇಲ್ಲ.
ಯೋಜನೆಯ ನೌಕರ ಮರಣ ಹೊಂದಿದರೆ ಅವರ ಅವಲಂಬಿತ ಕುಟುಂಬಗಳಿಗೆ ಆರ್ಥಿಕ ಭದ್ರತೆ ನೀಡುವ ಯಾವುದೇ ಅಂಶ ಈ ಕಾಯಿದೆಯಲ್ಲಿ ಇಲ್ಲ.
ಈ ಎಲ್ಲ ಸಮಸ್ಯೆಗಳಿಗೆ ಸಮರ್ಪಕ ಉತ್ತರ ಇಲ್ಲದೆ ಇರುವುದು ಎನ್.ಪಿ.ಎಸ್.ನ ಪೊಳ್ಳುತನವನ್ನು ತೋರಿಸುತ್ತದೆ. ಇದರಲ್ಲಿ ಕೇವಲ ನೌಕರರ ವೇತನದ ಶೇ.10ರಷ್ಟು ಮಾತ್ರವಲ್ಲ ಸರ್ಕಾರದ ಶೇ.10ರಷ್ಟು ಹಣದ ಭದ್ರತೆಯೂ ಅನಿಶ್ಚಿತವಾಗಿದೆ. ನೌಕರರ ಹೂಡಿಕೆ ಮಾತ್ರವಲ್ಲ ಸರ್ಕಾರದ ಅಂದರೆ ಸಾರ್ವಜನಿಕರ ಹೂಡಿಕೆಯೂ ಮುಳುಗಿ ಹೋಗುವುದು ನಿಶ್ಚಿತವಾಗಿದೆ.
ಈ ಯೋಜನೆಯ ಹಿಂದೆ ಆರ್ಥಿಕ ಹಾಗೂ ಆಡಳಿತ ಸುಧಾರಣೆಯ ನೆಪದಲ್ಲಿ ಈ ದೇಶಕ್ಕೆ ಬಂದೊದಗಿರುವ ಜಾಗತೀಕರಣ ಉದಾರೀಕರಣ ಹಾಗೂ ಖಾಸಗೀಕರಣದ ರೂವಾರಿಗಳಾದ ವಿಶ್ವ ಬ್ಯಾಂಕ್, ವಿಶ್ವ ಹಣಕಾಸು ನಿಧಿ, (ಐ.ಎಂ.ಎಫ್.) ವಿಶ್ವ ವ್ಯಾಪಾರಿ ಸಂಸ್ಥೆ (ಡಬ್ಲ್ಯೂ.ಟಿ.ಒ) ಹಾಗೂ ಖಾಸಗಿ ವಿಮಾ ಸಂಸ್ಥೆಗಳ, ಕಾರ್ಪೆರೇಟ್ ಸಂಸ್ಥೆಗಳ ಹಾಗೂ ಎಲ್ಲ್ಲೆಡೆ ನುಸುಳುತ್ತಿರುವ ವಿದೇಶಿ ಬಂಡವಾಳ (ಎಫ್.ಡಿ.ಐ.) ಪ್ರಭಾವ ಹಾಗೂ ಒತ್ತಡ ಇರುವುದು ಕಂಡುಬರುತ್ತದೆ. ಈಗಾಗಲೇ ಫ್ರಾನ್ಸ್, ಸ್ಪೇನ್, ಗ್ರೀಸ್, ಡೆನ್ಮಾರ್ಕ್, ಅಮೆರಿಕ ಮತ್ತು ಬ್ರಿಟನ್ನಲ್ಲಿ ಇದೇ ರೀತಿಯ ಷೇರು ಮಾರುಕಟ್ಟೆಯಲ್ಲಿ ನೌಕರರ ಹಾಗೂ ಜನಸಾಮಾನ್ಯರ ಹಣವನ್ನು ಹೂಡಿದ ಕಂಪನಿಗಳು ಜಗತ್ತಿನ ಆರ್ಥಿಕ ಕುಸಿತದಿಂದಾಗಿ ನಷ್ಟ ಅನುಭವಿಸಿ ದಿವಾಳಿ ಎದ್ದಿವೆ. ಇದರಿಂದಾಗಿ ಅಲ್ಲಿನ ನೌಕರರು ಪಿಂಚಣಿ ಹಣ, ವಿಮೆ ಹಣ ಹಾಗೂ ಉಳಿತಾಯದ ಎಲ್ಲಾ ಹಣವನ್ನು ಸಂಪೂರ್ಣವಾಗಿ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಇದೆಲ್ಲವನ್ನು ಅರಿತಿದ್ದರೂ ನೌಕರರನ್ನು ಅನಿಶ್ಚಿತ ಸ್ಥಿತಿಗೆ ಸರ್ಕಾರವೇ ನೂಕುತ್ತಿರುವುದು ವಿಪರ್ಯಾಸ. ನೌಕರನ ವಯೋನಿವೃತ್ತಿ ಸಮಯದಲ್ಲಿ ಅವರ ಖಾತೆಯ ಸಂಪೂರ್ಣ ಲೆಕ್ಕವನ್ನು ಚುಕ್ತಾ ಮಾಡಿ ಬರಬಹುದಾದ ಒಟ್ಟು ಮೊತ್ತದಲ್ಲಿ ಶೇಕಡ 60ರಷ್ಟು ಮೊಬಲಗನ್ನು ಕೈಗೆ ನೀಡಿ ಉಳಿದ ಶೇ. 40ರಷ್ಟು ಮೊಬಲಗನ್ನು ಮಾಸಿಕ ಪಿಂಚಣಿಯಾಗಿ ನೀಡುವುದು ಈ ಯೋಜನೆಯ ಉದ್ದೇಶ. ಒಂದು ವೇಳೆ ಹೂಡಿಕೆ ವ್ಯವಹಾರದಲ್ಲಿ ನಷ್ಟವಾಗಿ ಖಾತೆಯಲ್ಲಿನ ಮೊಬಲಗು ಶೂನ್ಯಕ್ಕೆ ಇಳಿದರೆ ಪಿಂಚಣಿ ಎಂಬುದು ಕನ್ನಡಿಯೊಳಗಿನ ಗಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಪರಿಶೀಲಿಸಿದರೆ ಸರ್ಕಾರವೇ ನೌಕರರ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಮೂರನೇ ವ್ಯಕ್ತಿಯ ಲಾಭಕ್ಕಾಗಿ ಬಳಸಲು ಮುಂದಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಅಂದರೆ ಲಾಭ ಖಾಸಗಿಯವರಿಗೆ ನಷ್ಟ ನೌಕರರಿಗೆ ಎಂಬ ವ್ಯಾಪಾರ ನೀತಿ ಈ ಯೋಜನೆಯ ಉದ್ದೇಶವಾಗಿದೆ. ಇಂದು ಕರ್ನಾಟಕ ಸರ್ಕಾರದಲ್ಲಿ 01-04-2006ರಿಂದ ಇಲ್ಲಿಯವರೆಗೂ 1.97 ಲಕ್ಷದಷ್ಟು ನೌಕರರಿದ್ದಾರೆ.
21-02-2018.
| ಲ. ರಾಘವೇಂದ್ರ
ಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಸರ್ಕಾರಿ ನೌಕರನು ಸೇವಾ ಕಾನೂನಿನ ಚೌಕಟ್ಟಿಗೆ ಒಳಗಾಗಿ ಕೆಲಸ ಮಾಡಬೇಕಾಗುತ್ತದೆ. ಈ ರೀತಿಯಾಗಿ 25-35 ವರ್ಷ ಸರ್ಕಾರಿ ಸೇವೆ ಸಲ್ಲಿಸಿ ನಿವೃತ್ತನಾಗುವ ನೌಕರನಿಗೆ ಸರ್ಕಾರವು ಈ ಹಿಂದೆ ನಿಶ್ಚಿತ ಪಿಂಚಣಿ ಸೌಲಭ್ಯ ನೀಡುತ್ತಿತ್ತು. ಈ ರೀತಿ ಪಿಂಚಣಿ ಸೌಲಭ್ಯ ಪಡೆಯುತ್ತಿರುವ ಸರ್ಕಾರಿ ನೌಕರರಲ್ಲಿ ಒಂದು ಜೀವನದ ಭದ್ರತೆ ಉಂಟಾಗುತ್ತಿತ್ತು. ಈ ರೀತಿಯ ಜೀವನ ಭದ್ರತೆಗೆ ಒಳಗಾಗಿರುವ 5.8 ಲಕ್ಷ ಪಿಂಚಣಿದಾರರು ಇಂದು ನಮ್ಮ ರಾಜ್ಯದಲ್ಲಿದ್ದಾರೆ.
ಸರ್ವೇಚ್ಛ ನ್ಯಾಯಾಲಯವು ‘ಪಿಂಚಣಿ ಎಂಬುದು ನೌಕರರಿಗೆ ನೀಡುವ ಭಿಕ್ಷೆಯಲ್ಲ ನೌಕರರು ದೀರ್ಘಾವಧಿ ಮಾಡಿದ ಸೇವೆ ಹಾಗೂ ಸೇವಾವಧಿಯಲ್ಲಿ ನೌಕರನು ಪಡೆದ ಜೀವನಾವಶ್ಯಕ ವೇತನಕ್ಕಿಂತ ಕಡಿಮೆ ವೇತನ ಪಿಂಚಣಿಯ ರೂಪದಲ್ಲಿ ಇಳಿವಯಸ್ಸಿನಲ್ಲಿ ಸಾಮಾಜಿಕ ಆರ್ಥಿಕ ಭದ್ರತೆಗಾಗಿ ನೀಡುವಂತದ್ದು. ಇದನ್ನು ಮುಂದೂಡಿದ ವೇತನವೆಂದು ಅರ್ಥೈಸಿದೆ. ಇದು ಮೂಲಭೂತ ಹಕ್ಕೆಂದು ಪರಿಗಣಿಸುವಂತೆ ಹೇಳಿದೆ. (ಎಐಆರ್-1983-ಎಸ್ಸಿ-130) ಈ ರೀತಿ ನಿಶ್ಚಿತ ಪಿಂಚಣಿ ವ್ಯವಸ್ಥೆ ಬದಲಿಸಿದ ಕೀರ್ತಿ ಹಿಂದಿನ ಎನ್ಡಿಎ ಸರ್ಕಾರಕ್ಕೆ ಸಲ್ಲುತ್ತದೆ. ಈ ನಿಶ್ಚಿತ ಪಿಂಚಣಿಯನ್ನು ಅಂಶದಾಯಿಕ ಪಿಂಚಣಿ ಯೋಜನೆಯಾಗಿ ಅಳವಡಿಸಿಕೊಳ್ಳಲು ಹಾಗೂ ವಿಶ್ವಬ್ಯಾಂಕಿನಿಂದ ಸಾಲ ದೊರಕಿಸಿಕೊಳ್ಳಲು ಅಧಿಕಾರದ ಚುಕ್ಕಾಣಿ ಹಿಡಿದ ಸರ್ಕಾರಗಳು ಮಾಡಿದ ಷಡ್ಯಂತ್ರವಾಗಿದೆ. ಈ ಯೋಜನೆಯು ಸಾಫಲ್ಯಕ್ಕಿಂತ ಇಂದು ವಿಫಲತೆಯೇ ಜಾಸ್ತಿಯಾಗಿದೆ.
ಸ್ವಾತಂತ್ರ್ಯೊತ್ತರ ಭಾರತದಲ್ಲಿ ಸರ್ಕಾರಿ ನೌಕರರು ಹಲವು ಬದಲಾವಣೆಗಳನ್ನು ಕಂಡಿದ್ದಾರೆ. ವೇತನದಲ್ಲಿ 6ಕ್ಕೆ ಏರದ 3ಕ್ಕೆ ಇಳಿಯದ ಸ್ಥಿತಿಯಲ್ಲಿದ್ದರೂ ಸರ್ಕಾರ ನೀಡುವ ನಿಶ್ಚಿತ ಪಿಂಚಣಿ ಸೌಲಭ್ಯದಿಂದಾಗಿ ಇಳಿವಯಸ್ಸಿನಲ್ಲಿ ಗೌರವಯುತ ಬಾಳ್ವೆ ನಡೆಸಬಹುದೆಂಬ ಆಶಾಭಾವನೆಯು ಯುವ ಜನಾಂಗವನ್ನು ಸರ್ಕಾರಿ ನೌಕರಿಯ ಕಡೆ ಆಕರ್ಷಿಸುತ್ತಿತ್ತು. ಆದರೆ ಇಂದು ಸರ್ಕಾರಿ ನೌಕರಿಗೆ ಸೇರುವವರಿಗೆ ಪಿಂಚಣಿ ಇಲ್ಲ ಎಂಬ ಕಹಿ ಸತ್ಯ ನಮ್ಮ ಮುಂದಿದೆ. ದಿನಾಂಕ 1-4-2004ರಿಂದ ಕೇಂದ್ರ ಸರ್ಕಾರವು ತನ್ನ ನೌಕರರಿಗೆ ನೂತನ ಅಂಶದಾಯಿ ಪಿಂಚಣಿಯೋಜನೆ ಜಾರಿಗೆ ತಂದಿತು. ಈ ಯೋಜನೆಯನ್ನೇ ಅಂದು ಅಧಿಕಾರದಲ್ಲಿದ್ದ ಸರ್ಕಾರವು ದಿನಾಂಕ 1-4-2006ರಿಂದ ಕೇಂದ್ರ ಸರ್ಕಾರದ ಯೋಜನೆಯನ್ನೇ ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ದಿನಾಂಕ 31-3-2006ರ ಸರ್ಕಾರದ ಆದೇಶ ಸಂಖ್ಯೆ ಎಫ್ಡಿ (ವಿಶೇಷ) 4 ಪಿಇಟಿ 2005ರ ಮೇರೆಗೆ ಅನುಷ್ಠಾನಗೊಳಿಸಿತು. ದಿನಾಂಕ 1-4-2000ದ ನಂತರ ಹೊಸದಾಗಿ ಸರ್ಕಾರಿ ಸೇವೆಗೆ ಸೇರುವ ನೌಕರರಿಗೆ ಹೊಸದಾಗಿ ವ್ಯಾಖ್ಯಾನಿಸಿದ ಅಂಶದಾಯಿ ಕೊಡುಗೆ ನಿವೃತ್ತಿವೇತನ ಯೋಜನೆಯನ್ನು ಕಡ್ಡಾಯವಾಗಿ ಜಾರಿಗೆ ತಂದಿದೆ. ಆದರೆ ಈ ಹಿಂದೆ ಸರ್ಕಾರಿ ಸೇವೆಯಲ್ಲಿದ್ದು ತದನಂತರ ತತ್ಸಮಾನ ಅಥವಾ ಮೇಲಿನ ಹುದ್ದೆಗೆ ಆಯ್ಕೆ ಪ್ರಾಧಿಕಾರಗಳ ಮೂಲಕ ಬೇರೊಂದು ಹುದ್ದೆಗೆ ಆಯ್ಕೆಯಾಗಿ ನಿಯೋಜಿತರಾದರೆ ಅಂತಹವರಿಗೆ ಹಿಂದಿನ ನಿಶ್ಚಿತ ಪಿಂಚಣಿ ಯೋಜನೆ ಅಳವಡಿಸಿಕೊಳ್ಳಲು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 224ಬಿ ರೀತ್ಯಾ 3 ವರ್ಷದೊಳಗೆ ತಮ್ಮ ಐಚ್ಛಿಕತೆ ನೀಡಲು ಅವಕಾಶ ಕಲ್ಪಿಸಲಾಗಿದೆ. 2-2-2013ರವರೆಗೆ ದಿನಾಂಕ ವಿಸ್ತರಿಸಲಾಗಿದೆ. ಅನಂತರ ನೇಮಕವಾದರೆ ನೇಮಕ ಪ್ರಾಧಿಕಾರಗಳು ಸೂಕ್ತ ಆದೇಶ ಹೊರಡಿಸುವ ಮುನ್ನ ಕ್ಲೇಮ್ ಸಮರ್ಥಿಸುವ ಸೂಕ್ತ ದಾಖಲೆಗಳನ್ನೇ ಸರ್ಕಾರದ ಅನುಮೋದನೆ ಪಡೆಯಬೇಕೆಂದು ದಿನಾಂಕ 30-10-2012ರ ಸರ್ಕಾರದ ಅಧಿಸೂಚನೆ ಸಂಖ್ಯೆ ಎಫ್ಡಿ06ಎಸ್ಆರ್ಎ2012ರಲ್ಲಿ ತಿಳಿಸಿದೆ. ಅಲ್ಲದೆ ಈ ಯೋಜನೆಯನ್ನು ದಿನಾಂಕ 30-1-2014ರ ಸರ್ಕಾರಿ ಆದೇಶ ಸಂಖ್ಯೆ ಎಫ್ಡಿ(ವಿಶೇಷ) 219 ಪಿಇಎನ್ 2012ರ ಮೇರೆಗೆ ಸರ್ಕಾರದ ಸ್ವಾಯತ್ತ ಸಂಸ್ಥೆಗಳಾದ ಮಂಡಳಿ ನಿಗಮಗಳು, ವಿವಿಗಳು, ರಾಜ್ಯದಿಂದ ಅನುದಾನಿತ ಪಡೆದ ಸಂಸ್ಥೆಗಳು ಹಾಗೂ ಸ್ವಾಯತ್ತ ಸಂಸ್ಥೆಗಳಲ್ಲಿ ಅಳವಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ದಿನಾಂಕ 26-12 ಸರ್ಕಾರಿ ಆದೇಶ ಸಂಖ್ಯೆ ಸಕಇ 352, ಮೋದೇಶಾ 2016 ಮೇರೆಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾಯಂ ಸಿಬ್ಬಂದಿಗಳಿಗೆ ಈ ಹೊಸ ಪಿಂಚಣಿ ಯೋಜನೆ ಅನುಷ್ಠಾನಗೊಳಿಸಲು ಅನುಮೋದನೆ ನೀಡಿದೆ. ಹೀಗೆ ರಾಜ್ಯ ಸರ್ಕಾರದ ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಈ ಹೊಸ ಪಿಂಚಣಿ ಯೋಜನೆಗೆ ಸುಮಾರು 1.80 ಲಕ್ಷದಷ್ಟು ನೌಕರರು ಸೇರ್ಪಡೆಯಾಗಿದ್ದಾರೆ.
ನೂತನ ಪಿಂಚಣಿ ಯೋಜನೆ ಏನು?
ದಿನಾಂಕ 16-6-2007ರ ಸರ್ಕಾರಿ ಆದೇಶ ಸಂಖ್ಯೆ 79 ಟಿಎಆರ್ 2006ರ ಮೇರೆಗೆ ಸರ್ಕಾರಿ ನೌಕರನ ಮೂಲವೇತನದ ಮತ್ತು ಅದರ ಮೇಲೆ ದೊರೆಯುವ ತುಟ್ಟಿಭತ್ಯೆಯು ಸೇರಿ ಈ ನೂತನ ಅಂಶದಾಯಿ ಪಿಂಚಣಿ ಯೋಜನೆಯಡಿಯಲ್ಲಿ ಪಿಂಚಣಿ ನೀಡುವ ಉದ್ದೇಶಕ್ಕಾಗಿ ನೌಕರರ ವೇತನದಿಂದ ಶೇ.10ರಷ್ಟು ಕಠಾವು ಮಾಡಬೇಕೆಂದು ಸೂಚಿಸಲಾಗಿದೆ. ಹೀಗೆ ಶೇಖರಣೆಗೊಳ್ಳುವ ಮೊತ್ತವನ್ನು ವಿವಿಧ ಖಾಸಗಿ ಹಣಕಾಸಿನ ಮೂಲಕ ಷೇರು ಮಾರುಕಟ್ಟೆಯಲ್ಲಿ ತೊಡಗಿಸಲಾಗುತ್ತದೆ. 30-35 ವರ್ಷಗಳ ನಂತರ ಈ ಹಣ ಬಳಸಿದ ಕಂಪನಿಗಳು ಷೇರುಮಾರುಕಟ್ಟೆಯ ಏರಿಳಿತ ಆಧರಿಸಿ ಸದರಿ ಮೊತ್ತಕ್ಕೆ ಬಂದ ಲಾಭಾಂಶದಲ್ಲಿ ಪಿಂಚಣಿಯನ್ನು ನೌಕರರಿಗೆ ನೀಡುತ್ತದೆಂದು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ ಹೇಳುತ್ತದೆ ಎಂದರೆ ಸರ್ಕಾರಿ ನೌಕರನು ಪಡೆಯುವ ಪಿಂಚಣಿ ಮೊತ್ತವು ಸದರಿ ಕಂಪನಿಗಳ ಲಾಭಾ ನಷ್ಟಗಳ ಮೇಲೆ ನಿರ್ಧಾರಿತವಾಗಿರುತ್ತದೆ. ಇದಕ್ಕಾಗಿ ಕಾನೂನುಗಳನ್ನು ರಚಿಸದೆ ನೌಕರರು ಹಾಗೂ ಸರ್ಕಾರ ತೊಡಗಿಸುವ ಹಣಕ್ಕೆ ಯಾವುದೇ ಭದ್ರತೆ ನೀಡದೆ ಈ ಹೊಸ ಪಿಂಚಣಿ ಯೋಜನೆಯನ್ನು ಕೇಂದ್ರ ಸರ್ಕಾರವು 2004ರಲ್ಲಿ ಘೊಷಿಸಿದೆ. ಕೇಂದ್ರ ಸರ್ಕಾರವು 2003ರ ಆಗಸ್ಟ್ನಲ್ಲಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಏಜೆನ್ಸಿ ಸಂಸ್ಥೆಯನ್ನು ಕೇವಲ ಒಂದು ಕಾರ್ಯಾದೇಶದ ಮೂಲಕ ರಚಿಸಿದರೂ ಕೆಲವು ಸಂವೇದನಾಶೀಲ ಜನಪ್ರತಿನಿಧಿಗಳ ಹಾಗೂ ನೌಕರರ ಸಂಘಟನೆಗಳು ಇದರ ಜಾರಿ ವಿರೋಧಿಸುತ್ತಿದ್ದುದರಿಂದ 10 ವರ್ಷಗಳ ಕಾಲ ಇದಕ್ಕೆ ಸಂಸತ್ತಿನ ಅಂಗೀಕಾರ ಪಡೆಯಲು ಸಾಧ್ಯವಾಗಿರಲಿಲ್ಲ. ಅಂತಿಮವಾಗಿ 2013ರ ಸೆಪ್ಟೆಂಬರ್ ತಿಂಗಳಿನಲ್ಲಿ ಈ ಕಾಯ್ದೆಯನ್ನು ಸಂಸತ್ ಅನುಮೋದಿಸಿದೆ. ಈವರೆಗೂ ಈ ಹೊಸ ಪಿಂಚಣಿಯೋಜನೆಗೆ ಯಾವುದೇ ಅಧಿನಿಯಮ ಇಲ್ಲದೆ ಕೇವಲ ಕಾರ್ಯಾದೇಶಗಳ ಮೂಲಕ ಜಾರಿಗೆ ತರಲಾಗಿದೆ. ಇಂತಹ ಒಂದು ಕಾರ್ಯಾದೇಶವನ್ನು ಬಾಧಿತ ಸರ್ಕಾರಿ ನೌಕರರು ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ ಇಂತಹ ಹೊಸ ಪಿಂಚಣಿ ಯೋಜನೆ ಊರ್ಜಿತವಾಗುವುದು ಕಷ್ಟ. 2006ರ ನಂತರ ರಾಜ್ಯ ಸರ್ಕಾರಿ ಕೆಲಸಕ್ಕೆ ಸೇರಿದ ನೌಕರರು ತಮ್ಮ ಹಿರಿಯ ಸಹೋದ್ಯೋಗಿಗಳಿಗಿಂತ ಶೇ.10ರಷ್ಟು ಕಡಿಮೆ ವೇತನವನ್ನು ಈ ಕಠಾವಿನಿಂದಾಗಿ ಪಡೆಯುವ ಅವಕಾಶವಾಗಿದೆ.
(ಮುಂದುವರೆಯುವುದು…..)
***
27.12.2017,
ವಿಜಯವಾಣಿ.
| ಲ. ರಾಘವೇಂದ್ರ
ಸರ್ಕಾರಿ ನೌಕರ ಸೇವೆಯಿಂದ ನಿವೃತ್ತನಾಗಲು ಇರುವ ಸಂದರ್ಭಗಳು ಅನೇಕ. ನಿವೃತ್ತಿ ವೇತನ ಸೌಲಭ್ಯಗಳು ದಿನಾಂಕ 31.3.2006ಕ್ಕೆ ಮೊದಲು ಸೇವೆಗೆ ಸೇರಿದ ನೌಕರರಿಗೆ ಮಾತ್ರ ಅನ್ವಯವಾಗುತ್ತದೆ. ದಿನಾಂಕ 1-4-2006ರಿಂದ ಸರ್ಕಾರಿ ಸೇವೆಗೆ ಸೇರಿದವರಿಗೆ ನೂತನ ಪಿಂಚಣಿ ಯೋಜನೆ ಅನ್ವಯವಾಗುತ್ತವೆ.
ಪರಿಹಾರ ನಿವೃತ್ತಿ ವೇತನ: ಕಾಯಂ ನೌಕರಿಯಲ್ಲಿರುವ ಸರ್ಕಾರಿ ನೌಕರನು, ಹುದ್ದೆಯು ರದ್ದಾಗಿ ಸೇವೆಯಿಂದ ಬಿಡುಗಡೆಯಾದಾಗ ಮತ್ತು ಸರಿಸಮನಾದ ಹುದ್ದೆ ಕೊಡಲಾಗದಿದ್ದಾಗ ಪರಿಹಾರ ನಿವೃತ್ತಿ ವೇತನ ಕೊಡಲಾಗುತ್ತದೆ. (ನಿಯಮ 259 ರಿಂದ 272)
ಅಶಕ್ತತಾ ನಿವೃತ್ತಿ ವೇತನ: ಸರ್ಕಾರಿ ನೌಕರನು ದೈಹಿಕವಾಗಿ ಅಥವಾ ಮಾನಸಿಕವಾಗಿ ಕಾಯಂ ಆಗಿ ಸೇವೆಗೆ ಅಶಕ್ತನೆಂದು ವೈದ್ಯಕೀಯ ಪ್ರಾಧಿಕಾರ ಘೊಷಿಸಿದರೆ ಅಂಥಹವರಿಗೆ ನಿವೃತ್ತಿ ವೇತನ ಕೊಡಲಾಗುತ್ತದೆ.(ನಿಯಮ 273 ರಿಂದ 283ಎ)
ವಯೋನಿವೃತ್ತಿ ವೇತನ: ನಿಯಮ 95ರ ಮೇರೆಗೆ ನಿರ್ದಿಷ್ಟ ವಯಸ್ಸು 60 ವರ್ಷ ತಲುಪಿದ ಕೊನೆಯ ದಿನ ನಿವೃತ್ತಿ ಹೊಂದುತ್ತಾರೆ.(ನಿಯಮ 283) ಆದರೆ ಸರ್ಕಾರಿ ನೌಕರನ ಜನ್ಮದಿನ 1ನೇ ತಾರೀಖು ಆಗಿದ್ದರೆ, ಹಿಂದಿನ ತಿಂಗಳ ಕಡೆಯ ಕೆಲಸದ ದಿನದಂದು ನಿವೃತ್ತಿ ಹೊಂದುತ್ತಾರೆ.
ವಿಶ್ರಾಂತಿ ನಿವೃತ್ತಿ ವೇತನ: ಸ್ವಇಚ್ಛಾ ನಿವೃತ್ತಿ ವೇತನ: (ನಿಯಮ 285(1)(ಎ), 285(2)15 ವರ್ಷಗಳಿಗೆ ಕಡಿಮೆ ಇಲ್ಲದ ಅರ್ಹತಾದಾಯಕ ಸೇವೆ ಪೂರ್ಣಗೊಳಿಸಿದ ನಂತರದ ಅವಧಿಯಲ್ಲಿ ಸ್ವಇಚ್ಛೆಯಿಂದ ನಿವೃತ್ತಿಯ ಅವಕಾಶ. ಕನಿಷ್ಠ 3 ತಿಂಗಳ ಮೊದಲು ನೋಟಿಸ್ ಅನ್ನು ನೇಮಕಾತಿ ಪ್ರಾಧಿಕಾರಕ್ಕೆ ಬರಹದಲ್ಲಿ ಕೊಡಬೇಕು. ನಿವೃತ್ತಿ ಹೊಂದುವ ನೌಕರನಿಗೆ ನಿವೃತ್ತಿ ವೇತನ, ಉಪದಾನ ನೀಡುವಾಗ ಅವನು ವಾಸ್ತವವಾಗಿ ಸಲ್ಲಿಸಿದ ಸೇವೆಯ ಜತೆಗೆ 5 ವರ್ಷಗಳವರೆಗೆ ಅಧಿಕ್ಯ ನೀಡತಕ್ಕದ್ದು. ಆದಾಗ್ಯೂ ಹಾಗೆ ನೀಡಿದ ಅಧಿಕ್ಯವೂ ಸೇರಿದ ನಂತರ ಒಟ್ಟು ಅರ್ಹತಾದಾಯಕ ಸೇವೆಯು ಅವನು ನಿವೃತ್ತಿ ವಯಸ್ಸನ್ನು ಹೊಂದಿ ನಿವೃತ್ತನಾದರೆ ಅವನಿಗೆ ಸಿಗುತ್ತಿದ್ದ ಅರ್ಹತಾದಾಯಕ ಸೇವೆಗಿಂತ ಹೆಚ್ಚಾಗತಕ್ಕದ್ದಲ್ಲ.(ಗರಿಷ್ಠ ಅರ್ಹತಾದಾಯಕ ಸೇವೆ 33 ವರ್ಷ) ಈ ಅಧಿಕ್ಯವು ಅರ್ಹತಾದಾಯಕ ಸೇವೆಗೆ ಸೇರಿಸುವ ಹೆಚ್ಚಳ ಮಾತ್ರ ಆಗಿದೆಯೇ ಹೊರತು, ಯಾವುದೇ ಕಾಲ್ಪನಿಕ ವೇತನದ ನಿಗದಿಗೆ ಹಕ್ಕು ಕೊಡತಕ್ಕದ್ದಲ್ಲ. ನೇಮಕಾತಿ ಪ್ರಾಧಿಕಾರವು, ಯಥೋಚಿತವಾಗಿ ಅಂಗೀಕರಿಸಿದ ಹೊರತು ಸರ್ಕಾರಿ ನೌಕರನು ನೋಟಿಸ್ ನೀಡಿದಾಕ್ಷಣ ಜಾರಿಗೆ ಬರುವುದಿಲ್ಲ. ಸ್ವಇಚ್ಛಾ ನಿವೃತ್ತಿ ನೋಟೀಸನ್ನು ನೇಮಕಾತಿ ಪ್ರಾಧಿಕಾರ ಅಂಗೀಕರಿಸುವ ಮೊದಲು, ಸರ್ಕಾರಿ ನೌಕರನು ನೇಮಕಾತಿ ಪ್ರಾಧಿಕಾರದ ಅನುಮೋದನೆ ಪಡೆದು ಹಿಂತೆಗೆದುಕೊಳ್ಳಬಹುದು. ಸರ್ಕಾರಿ ನೌಕರನ ವಿರುದ್ಧ ಸಿ.ಸಿ.ಎ. ನಿಯಮಗಳಡಿ ಕಠಿಣ ದಂಡನೆಗಳು ವಿಧಿಸಬಹುದಾದಂತಹ ಇಲಾಖಾ ವಿಚಾರಣೆಗಳು ಮತ್ತು ನ್ಯಾಯಾಂಗ ವಿಚಾರಣೆಗಳು ಯಾವುದಾದರೂ ಬಾಕಿ ಇರುವಾಗ, ಅಂತಹ ಸರ್ಕಾರಿ ನೌಕರನಿಗೆ ಸ್ವಇಚ್ಛಾ ನಿವೃತ್ತಿಗೆ ಮಂಜೂರಾತಿ ನೀಡಲು ಅವಕಾಶವಿಲ್ಲ. 15 ವರ್ಷ ಅರ್ಹತಾದಾಯಕಸೇವೆ ನಿರ್ವಹಿಸಿದ್ದಾನೆ ಎಂಬ ವಾಸ್ತವಾಂಶವನ್ನು ಮಹಾಲೇಖಪಾಲರೊಂದಿಗೆ ಸಮಾಲೋಚಿಸಿ ಪರಿಶೀಲಿಸಿದ ನಂತರ ನೇಮಕ ಪ್ರಾಧಿಕಾರ ಮಂಜೂರಾತಿ ನೀಡತಕ್ಕದ್ದು.
(ಬಿ) ಸ್ವಇಚ್ಛಾ ನಿವೃತ್ತಿ ವೇತನ: (ನಿಯಮ 285(1) (ಬಿ) ಮತ್ತು 285(3):
50 ವರ್ಷ ವಯಸ್ಸನ್ನು ಹೊಂದಿದ ತರುವಾಯದ ಯಾವುದೇ ಅವಧಿಯಲ್ಲಿ ವಿಶ್ರಾಂತಿ ಪಡೆಯಲು ಅನುಮತಿ ಪಡೆದವರು
ಕನಿಷ್ಠ ಪಕ್ಷ 3ತಿಂಗಳ ಮೊದಲು ನೋಟಿಸನ್ನು ಲಿಖಿತದಲ್ಲಿ ನೇಮಕಾತಿ ಕೊಡಬೇಕು.
ಯಾವುದೇ ಅರ್ಹತಾದಾಯಕ ಸೇವೆಗೆ ಅಧಿಕ್ಯ ನೀಡಲು ಅವಕಾಶವಿಲ್ಲ.
ನೇಮಕಾತಿ ಪ್ರಾಧಿಕಾರದ ಅಂಗೀಕಾರದೊಂದಿಗೆ ಮಾತ್ರ ಜಾರಿಗೆ ಬರುತ್ತದೆ.
ನ್ಯಾಯಾಂಗ ವಿಚಾರಣೆ ಬಾಕಿ ಇರುವಾಗ ಅನುಮತಿಗೆ ಅವಕಾಶವಿಲ್ಲ
ಕನಿಷ್ಠ ಅರ್ಹತಾದಾಯಕ ಸೇವೆಯ ಪರಿಗಣನೆ ಅವಶ್ಯಕವಿಲ್ಲ. ಆದರೆ ಪಿಂಚಣಿ ಲಭ್ಯವಾಗಲು ಹತ್ತು ವರ್ಷ ಅಗತ್ಯ.
***
ಸರ್ಕಾರಿ ನೌಕರರ ಮರಣ ಉಪದಾನದ ನಿಯಮಗಳು
Wednesday, 20.12.2017.
| ಲ. ರಾಘವೇಂದ್ರ
ಸರ್ಕಾರಿ ನೌಕರ ಸೇವೆಯಲ್ಲಿರುವಾಗಲೇ ನಿಧನ ಹೊಂದಿದರೆ ಮಾತ್ರ ಈ ಮರಣ ಉಪದಾನ ಸಂದಾಯ ಮಾಡಲಾಗುತ್ತದೆ. ಸರ್ಕಾರಿ ನೌಕರ ಸೇವೆಯಲ್ಲಿರುವಾಗಲೇ ಮೃತನಾದಾಗ ಒಂದು ವರ್ಷಕ್ಕಿಂತ ಕಡಿಮೆ ಸೇವಾವಧಿ ಸಲ್ಲಿಸಿದ್ದರೆ ಅವನ ಉಪಲಬ್ಧಿಗಳ 2ರಷ್ಟು ಉಪದಾನ ಲಭ್ಯವಾಗುತ್ತದೆ. ಒಂದು ವರ್ಷಕ್ಕಿಂತ ಹೆಚ್ಚು ಆದರೆ 5 ವರ್ಷಕ್ಕಿಂತ ಕಡಿಮೆ ಅವಧಿ ಸೇವೆ ಸಲ್ಲಿಸಿದ್ದರೆ ಉಪಲಬ್ಧಿಗಳ 6ರಷ್ಟು ಲಭ್ಯವಾಗುತ್ತದೆ. 5 ವರ್ಷಕ್ಕಿಂತ ಹೆಚ್ಚು ಆದರೆ 20 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿದ್ದರೆ 12ರಷ್ಟು ಉಪಲಬ್ಧಿಗಳ ಉಪದಾನ ಲಭ್ಯವಾಗುತ್ತದೆ. 20 ವರ್ಷಕ್ಕಿಂತ ಹೆಚ್ಚು ಅರ್ಹತಾದಾಯಕ ಸೇವೆ ಸಲ್ಲಿಸಿದ್ದರೆ ಪ್ರತಿವರ್ಷದ ಉಪಲಬ್ಧಿಯ ಅರ್ಧದಷ್ಟು ಅಥವಾ ಗರಿಷ್ಠ 10 ಲಕ್ಷದಷ್ಟು ಉಪದಾನ ಲಭ್ಯವಾಗುತ್ತದೆ.(ನಿಯಮ 292ಎಎ)
ಈ ಮರಣ ಉಪದಾನಕ್ಕೆ ಸಂಬಂಧಿಸಿದಂತೆ ಕುಟುಂಬ ಎನ್ನುವುದರಲ್ಲಿ ಪತಿ, ಸಂದರ್ಭಾನುಸಾರ ಪತ್ನಿ, ಗಂಡು ಮಕ್ಕಳು, ಅವಿವಾಹಿತ, ವಿಧವೆಯರಾದ ಹೆಣ್ಣುಮಕ್ಕಳು, 18 ವರ್ಷದೊಳಗಿನ ಸಹೋದರರು, ತಂದೆ, ತಾಯಿ ಮೃತನಾದ ಸರ್ಕಾರಿ ನೌಕರನ ಮಗನ ಮಕ್ಕಳು ಒಳಗೊಳ್ಳುತ್ತಾರೆ. (ನಿಯಮ 302) ಸರ್ಕಾರಿ ನೌಕರನು ಸರ್ಕಾರಿ ಸೇವೆಗೆ ಸೇರಿದ ಕೂಡಲೇ ಮಂಜೂರು ಮಾಡಬಹುದಾದ ಯಾವುದೇ ಉಪದಾನ ಸ್ವೀಕರಿಸುವ ಅಧಿಕಾರವನ್ನು ಒಬ್ಬನಿಗೆ ಅಥವಾ ಹೆಚ್ಚು ಜನರಿಗೆ ಪ್ರದಾನ ಮಾಡುವ ನಾಮನಿರ್ದೇಶನ ಮಾಡಬಹುದು(ನಿಯಮ 302 ಟಿಪ್ಪಣಿ ಜಿಜಿ)
ಪ್ರತಿಯೊಬ್ಬ ಸರ್ಕಾರಿ ನೌಕರನು ನಾಮನಿರ್ದೇಶನ ಮಾಡಲು ನಮೂನೆ 2ರಿಂದ 5ರವರೆಗಿನ ಪೈಕಿ ಒಂದು ನಮೂನೆ ಬಳಸಬೇಕು. ಸರ್ಕಾರಿ ನೌಕರನು ಯಾವುದೇ ಕಾಲದಲ್ಲಾಗಲಿ ತಾನು ಹಿಂದೆ ಮಾಡಿದ ನಾಮ ನಿರ್ದೇಶನ ರದ್ದು ಮಾಡಿ ಹೊಸ ನಾಮನಿರ್ದೇಶನ ಮಾಡಬಹುದು(ನಿಯಮ 302, ಟಿಪ್ಪಣಿ 6)
ಸರ್ಕಾರಿ ನೌಕರನು ತಾನು ಮದುವೆಯ ಮುಂಚಿತವಾಗಿ ಮಾಡಿದ ನಾಮ ನಿರ್ದೇಶನವು ಆತನ ಮದುವೆ ನಂತರ ತಾನೇ ತಾನಾಗಿ ಅನೂರ್ಜಿತಗೊಳ್ಳುವುದು ಮತ್ತು ನಾಮನಿರ್ದೇಶನವು ಪತ್ನಿ ಅಥವಾ ಪತಿಯ ಹೆಸರಿನಲ್ಲಿ ಆಗಿದೆಯೆಂದು ಭಾವಿಸಲಾಗುತ್ತದೆ.(ನಿಯಮ 302, ಟಿಪ್ಪಣಿ 5)
ಸರ್ಕಾರಿ ನೌಕರನು ತನ್ನ ನಿವೃತ್ತಿಗೆ ಮೊದಲೇ ನಾಮ ನಿರ್ದೇಶನ ಮಾಡಲು ತಪ್ಪಿದ್ದಲ್ಲಿ ಉಪದಾನ ಸ್ವೀಕರಿಸುವುದಕ್ಕಿಂತ ಮುಂಚೆ ಅವನು ನಿಧನ ಹೊಂದಿದರೆ ಅವನ ಕುಟುಂಬದ ಉತ್ತರ ಜೀವಿತ ಅಧಿಕಾರಿ ಪ್ರಮಾಣಪತ್ರ ಪಡೆದು ಜೀವಂತ ಸದಸ್ಯರಿಗೆ ಸಂದಾಯ ಮಾಡಲಾಗುತ್ತದೆ.(ನಿಯಮ 302, ಟಿಪ್ಪಣಿ 10)
***
ವೇತನ ನಿಗದೀಕರಣದ ನಿಯಮಗಳು
Wednesday, 06.12.2017.
| ಲ. ರಾಘವೇಂದ್ರ.
ಸರ್ಕಾರಿ ನೌಕರನು ಒಂದು ಹುದ್ದೆಯಿಂದ ನೇಮಕಾತಿ ಹೊಂದಿದಾಗ ನಿಯಮಗಳಿಗನುಸಾರವಾಗಿ ಮತ್ತೊಂದು ಸರ್ಕಾರಿ ಹುದ್ದೆಗೆ ನೇಮಕ ಹೊಂದಿದಾಗ ವೇತನ ನಿಗದಿ (ಕರ್ನಾಟಕ ಸರ್ಕಾರಿ ಸೇವಾ ನಿಯಮ 41-ಎ) ಮಾಡಲಾಗುತ್ತದೆ. ಅದರ ವಿವರ ಇಲ್ಲಿದೆ.
1. ಸದೃಶ ವೇತನ ಶ್ರೇಣಿಯ ಹುದ್ದೆಗೆ ನೇಮಕಾತಿ: ಸರ್ಕಾರಿ ನೌಕರನು ನೇಮಕ ಹೊಂದಿದ ಹುದ್ದೆಯ ವೇತನ ಶ್ರೇಣಿಯು ಈ ಮೊದಲು ಅವನು ಹೊಂದಿದ್ದ ಹುದ್ದೆಯ ವೇತನ ಶ್ರೇಣಿಯಂಥದೇ ಆಗಿರುವಲ್ಲಿ, ಹಾಗೆ ನೇಮಕವಾದಾಗ ಆತನ ವೇತನವನ್ನು ಅವನು ಈ ಮೊದಲು ಹೊಂದಿದ್ದ ಹುದ್ದೆಯಲ್ಲಿ ಪಡೆದ ವೇತನಕ್ಕೆ ಸಮನಾದ ಹಂತದಲ್ಲಿ ನಿಗದಿಪಡಿಸಬೇಕು.
2. ಹೊಸ ಹುದ್ದೆಯಲ್ಲಿ ಮುಂದಿನ ವಾರ್ಷಿಕ ಬಡ್ತಿಯು ಹಿಂದಿನ ಹುದ್ದೆಯಲ್ಲಿ ಮುಂದುವರಿದಿದ್ದರೆ ಆ ಹುದ್ದೆಯಲ್ಲಿ ಯಾವ ದಿನಾಂಕದಂದು ಪ್ರಾಪ್ತವಾಗುತ್ತಿತ್ತೋ ಆ ದಿನಾಂಕದಂದೇ ಕೊಡತಕ್ಕದ್ದು.
3. ಉನ್ನತ ವೇತನ ಶ್ರೇಣಿಯ ಹುದ್ದೆಯಿಂದ ಕೆಳಗಿನ ವೇತನ ಶ್ರೇಣಿಗೆ ನೇಮಕಾತಿ: ಸರ್ಕಾರಿ ನೌಕರನು ನೇಮಕ ಹೊಂದಿದ ಹುದ್ದೆಯು ವೇತನ ಶ್ರೇಣಿಯು ಅವನು ಹಿಂದೆ ಹೊಂದಿದ್ದ ಹುದ್ದೆಯು ವೇತನ ಶ್ರೇಣಿಗಿಂತ ಕಡಿಮೆಯಾಗಿರುವಲ್ಲಿ, ಹಿಂದಿನ ಹುದ್ದೆಗೆ ನೇಮಕವಾದ ದಿನಾಂಕದಿಂದ, ಅವನು ನೇಮಕವಾದ ಹೊಸ ಹುದ್ದೆಯ ವೇತನ ಶ್ರೇಣಿಯಲ್ಲಿ ಅವನು ತಲುಪಬಹುದಾಗಿದ್ದ ವೇತನ ಹಂತಕ್ಕೆ ಸಮನಾದ ಹಂತವನ್ನು ಕಾಲ್ಪನಿಕವಾಗಿ ನಿಗದಿಪಡಿಸಿ, ಆ ವೇತನ ನೀಡಬೇಕು.
4. ಹೊಸ ಹುದ್ದೆಯಲ್ಲಿ ಮುಂದಿನ ವಾರ್ಷಿಕ ಬಡ್ತಿಯು, ಹಿಂದಿನ ಹುದ್ದೆಯಲ್ಲಿ ಮುಂದುವರಿದಿದ್ದರೆ ಆ ಹುದ್ದೆಯಲ್ಲಿ ಯಾವ ದಿನಾಂಕದಂದು ಪ್ರಾಪ್ತವಾಗುತ್ತಿತ್ತೋ ಆ ದಿನಾಂಕದಂದೇ ನೀಡಬೇಕು.
5. ಹೆಚ್ಚಿನ ವೇತನ ಶ್ರೇಣಿಯ ಹುದ್ದೆಗೆ ನೇಮಕಾತಿ: ಹೊಸ ಹುದ್ದೆಯ ವೇತನ ಶ್ರೇಣಿಯ ಕನಿಷ್ಠ ವೇತನವು ಹಿಂದಿನ ಹುದ್ದೆಯ ವೇತನ ಶ್ರೇಣಿಯಲ್ಲಿ ಪಡೆಯುತ್ತಿದ್ದ ವೇತನಕ್ಕಿಂತ ಹೆಚ್ಚಾಗಿದ್ದರೆ, ಹೊಸ ಹುದ್ದೆಯ ಕನಿಷ್ಠ ಹಂತದಲ್ಲಿ ವೇತನ ನಿಗದಿಪಡಿಸುವುದು.
6. ಹೊಸ ಹುದ್ದೆಯಲ್ಲಿ ನೇಮಕಾತಿ ಆದ ದಿನಾಂಕದಿಂದ ಮಾತ್ರ ಮುಂದಿನ ವಾರ್ಷಿಕ ಬಡ್ತಿಯ ದಿನಾಂಕ ಪರಿಗಣಿಸಲಾಗುವುದು.
1. ಪದೋನ್ನತಿಯ ಸಂದರ್ಭದಲ್ಲಿ ವೇತನ ನಿಗದಿ (ಕರ್ನಾಟಕ ಸರ್ಕಾರಿ ಸೇವಾ ನಿಯಮ 42ಬಿ):
ಈ ಕೆಳಕಂಡ ಸಂದರ್ಭಗಳಲ್ಲಿ ಪದೋನ್ನತಿಯ ವೇತನ ನಿಗದಿಪಡಿಸಬೇಕಾಗುತ್ತದೆ.
ಉನ್ನತ ಹುದ್ದೆಗೆ ನೇಮಕಾತಿ
ಕಾಲಮಿತಿ ವೇತನ ಮುಂಬಡ್ತಿ
ಹಿರಿಯ ವೇತನ ಶ್ರೇಣಿಗೆ ಸ್ವಯಂಚಾಲಿತ ಮುಂಬಡ್ತಿ
2. ಜಿ) ಸರ್ಕಾರಿ ನೌಕರನು ಒಂದು ಹುದ್ದೆಗೆ ಪದೋನ್ನತಿ ಪಡೆದು, ಆತನು ಆ ಹುದ್ದೆಯ ಕರ್ತವ್ಯಗಳನ್ನು ವಹಿಸಿಕೊಂಡ ದಿನಾಂಕದಿಂದ, ಈ ಕೆಳಗಿನ ಹುದ್ದೆಯ ಕಾಲಿಕ ವೇತನ ಶ್ರೇಣಿಯಲ್ಲಿನ ವೇತನದ ಆ ಮುಂದಿನ ಹಂತಕ್ಕೆ ವೇತನ ನಿಗದಿಪಡಿಸಬೇಕು.
ಜಿಜಿ) ಪದೋನ್ನತಿ ಹೊಂದಿದ ಹುದ್ದೆಯ ವೇತನ ಶ್ರೇಣಿಯ ಕನಿಷ್ಠ ಹಂತವು, ಈ ರೀತಿ ನಿಗದಿಪಡಿಸಬೇಕಾದ ವೇತನದ ಹಂತಕ್ಕಿಂತ ಹೆಚ್ಚಾಗಿದ್ದರೆ, ಪದೋನ್ನತಿ ಹುದ್ದೆಯ ವೇತನ ಶ್ರೇಣಿಯ ಕನಿಷ್ಠ ಹಂತದಲ್ಲಿ ವೇತನ ನಿಗದಿಪಡಿಸಬೇಕು.
ಜಿಜಿಜಿ) ಪದೋನ್ನತಿ ಹೊಂದಿದ ಹುದ್ದೆಯ ವೇತನ ಶ್ರೇಣಿಯ ಗರಿಷ್ಠ ಹಂತವು, ಈ ರೀತಿ ನಿಗದಿಪಡಿಸಬೇಕಾದ ವೇತನಕ್ಕಿಂತ ಕಡಿಮೆ ಇದ್ದಲ್ಲಿ, ಪದೋನ್ನತಿ ಹುದ್ದೆಯ ವೇತನ ಶ್ರೇಣಿಯ ಗರಿಷ್ಠ ಹಂತಕ್ಕೆ ನಿಗದಿಪಡಿಸಬೇಕು.
3. ವೇತನ ಪುನರ್ನಿಗದಿ (ಕರ್ನಾಟಕ ಸರ್ಕಾರಿ ಸೇವಾ ನಿಯಮ 42ಬಿ (2)
ಜಿ) ಪದೋನ್ನತಿ ಪಡೆದ ವೇತನ, ಆತನ ಹಿಂದಿನ ಹುದ್ದೆಯಲ್ಲಿನ ವಾರ್ಷಿಕ ವೇತನ ಬಡ್ತಿಯ ದಿನದಂದು, ವೇತನ ಪುನರ್ನಿಗದಿ ಮಾಡಬೇಕಾಗುತ್ತದೆ.
ಜಿಜಿ) ಆತನು ಪದೋನ್ನತಿ ಪಡೆಯದೆ ಹಳೆ ಹುದ್ದೆಯಲ್ಲಿಯೇ ಮುಂದುವರಿದಿದ್ದರೆ ಕೆಳಗಿನ ಹುದ್ದೆಯಲ್ಲಿ ವಾರ್ಷಿಕ ಬಡ್ತಿ ದಿನಾಂಕದಂದು ಪಡೆಯಬಹುದಾಗಿದ್ದ ವೇತನ ನಿಗದಿಪಡಿಸಿ, ವಾರ್ಷಿಕ ಬಡ್ತಿ ದಿನಾಂಕದಂದು ಪದೋನ್ನತಿ ಹೊಂದಿದ್ದರೆ ಹೊಸ ಹುದ್ದೆಯಲ್ಲಿ ನಿಗದಿಪಡಿಸಬಹುದಾದ ವೇತನ ಹಂತದಲ್ಲಿ ಪುನರ್ನಿಗದಿ ಮಾಡುವುದು.
ಜಿಜಿಜಿ) ಪುನರ್ನಿಗದಿಯಿಂದ, ಆತನಿಗೆ ಆರ್ಥಿಕ ಸೌಲಭ್ಯವಾಗುವಂತಿದ್ದರೆ, ಹಳೆಯ ಹುದ್ದೆಯಲ್ಲಿನ ವಾರ್ಷಿಕ ವೇತನ ಬಡ್ತಿ ದಿನಾಂಕವೇ ಅವನ ಮುಂದಿನ ವಾರ್ಷಿಕ ಬಡ್ತಿಗೆ ಪರಿಗಣಿಸತಕ್ಕದ್ದು. ಅಂದರೆ ವಾರ್ಷಿಕ ಬಡ್ತಿಯ ದಿನಾಂಕದ ಬದಲಾವಣೆ ಇರುವುದಿಲ್ಲ.
ಪುನರ್ ನಿಗದಿಯಿಂದ, ಆತನಿಗೆ, ಆರ್ಥಿಕ ಸೌಲಭ್ಯವಾಗಿಲ್ಲವಾದರೆ – ಆತನು ಪದೋನ್ನತಿ ಪಡೆದ ದಿನಾಂಕದಿಂದ ಒಂದು ವರ್ಷದ ನಂತರ ವಾರ್ಷಿಕ ವೇತನ ಬಡ್ತಿ ಮಂಜೂರು ಮಾಡತಕ್ಕದ್ದು ಹಾಗೂ ಅನಂತರ ವಾರ್ಷಿಕ ಬಡ್ತಿಯ ದಿನಾಂಕ ಆ ದಿನಕ್ಕೆ ಬದಲಾವಣೆ ಆಗಿರುತ್ತದೆ.
4. ಬಡ್ತಿ ವೇಳೆ ವೇತನ ನಿಗದಿ ಬಗ್ಗೆ ಇಚ್ಛೆ ವ್ಯಕ್ತಪಡಿಸುವ ಸಂದರ್ಭಗಳು:
ಉನ್ನತ ಹುದ್ದೆಗೆ ಪದೋನ್ನತಿ ಹೊಂದಿದಾಗ ಪದೋನ್ನತಿ ಹುದ್ದೆಯಲ್ಲಿ ವೇತನ ನಿಗದಿ ಸಲುವಾಗಿ, ತನ್ನ ಸ್ವಇಚ್ಛೆಯಿಂದ ಮುಂದಿನ ವೇತನ ಬಡ್ತಿ ದಿನಾಂಕದವರೆಗೆ ಕೆಳಗಿನ ಹುದ್ದೆಯ ವೇತನ ಶ್ರೇಣಿಯಲ್ಲಿ ಮುಂದುವರಿದು, ನಂತರ ಪದೋನ್ನತಿ ಹುದ್ದೆಯಲ್ಲಿ ವೇತನ ನಿಗದಿಪಡಿಸಿಕೊಳ್ಳಲು ಸಾಮಾನ್ಯ ಸಂದರ್ಭದಲ್ಲಿ ಅವಕಾಶವಿರುವುದಿಲ್ಲ. ಈ ರೀತಿ ಮುಂದುವರಿಯುವುದರಿಂದ ಯಾವುದೇ ವೇತನ ಹೆಚ್ಚುವರಿಯ ಸೌಲಭ್ಯ ಉಂಟಾಗುವ ಸಂಭವವಿರುವುದಿಲ್ಲ. ಆದರೆ ಕೆಳಗಿನ ಪ್ರಕರಣಗಳಲ್ಲಿ ಸರ್ಕಾರಿ ನೌಕರನು ಪದೋನ್ನತಿ ಪಡೆದಾಗ್ಯೂ ವೇತನ ಬಡ್ತಿ ಗಳಿಸುವವರೆಗೂ ಕೆಳದರ್ಜೆಯ ವೇತನ ಶ್ರೇಣಿಯಲ್ಲಿಯೇ ಮುಂದುವರಿದು, ನಂತರ ಉನ್ನತ ಹುದ್ದೆಯ ವೇತನ ಶ್ರೇಣಿಯಲ್ಲಿ ವೇತನ ನಿಗದಿಪಡಿಸಿಕೊಳ್ಳಲು ನಿಗದಿತ ಅವಧಿಯೊಳಗೆ ಇಚ್ಛೆ ವ್ಯಕ್ತಪಡಿಸಬಹುದು.
(1) ಸ್ಥಗಿತ ವೇತನ ಬಡ್ತಿಯ ನಿರೀಕ್ಷೆ
(2) ಕಾಲಮಿತಿ ಮುಂಬಡ್ತಿ ಯೋಜನೆಯ ಸೌಲಭ್ಯದ ನಿರೀಕ್ಷೆ
(3) ಸ್ವಯಂಚಾಲಿತ ಮುಂಬಡ್ತಿ ಯೋಜನೆಯ ಸೌಲಭ್ಯದ ನಿರೀಕ್ಷೆ.
ಅಂಥಹ ಸಂದರ್ಭಗಳಲ್ಲಿ ಇಚ್ಛೆ ವ್ಯಕ್ತಪಡಿಸಿದ ದಿನಾಂಕದವರೆಗೆ ಹಳೆಯ ಕೆಳದರ್ಜೆಯ ಹುದ್ದೆಯ ವೇತನ ಶ್ರೇಣಿಯಲ್ಲಿ ಪಡೆಯುತ್ತಿದ್ದ ವೇತನ ಹಂತದಲ್ಲಿಯೇ ಮುಂದುವರಿದು, ಇಚ್ಛೆ ವ್ಯಕ್ತಪಡಿಸಿದ ದಿನಾಂಕದಂದು ಪಡೆಯುವ ಅರ್ಹವಾದ ವೇತನದ ನಿಗದಿಯನಂತರ ನಿಯಮ 42(ಬಿ)(1)ರನ್ವಯ ಪದೋನ್ನತಿಯ ವೇತನ ನಿಗದಿ ಸೌಲಭ್ಯ ಪಡೆಯಬಹುದು.
(ಮುಂದುವರಿಯುವುದು…..)
ಸರ್ಕಾರಿ ನೌಕರರ ಕುಟುಂಬ ನಿವೃತ್ತಿ ವೇತನ ನಿಯಮಗಳು
13.12.2017.
| ಲ ರಾಘವೇಂದ್ರ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ಪರಿಶಿಷ್ಟ V1 ರಲ್ಲಿ ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ನಿವೃತ್ತಿ ವೇತನ )ನಿಯಮಗಳು 2002ನ್ನು ನೀಡಲಾಗಿದೆ. ಈ ನಿಯಮವು 1.4.1998ರಿಂದ 31.3.2006ರವರೆಗೆ ಸರ್ಕಾರಿ ಸೇವೆಗೆ ಸೇರಿದ ಸರ್ಕಾರಿ ನೌಕರರಿಗೆ ಅನ್ವಯವಾಗುತ್ತದೆ. ಈ ನಿಯಮದ ಸಂಕ್ಷಿಪ್ತ ವಿವರವನ್ನು ಕೆಳಗೆ ವಿವೇಚಿಸಲಾಗಿದೆ.
=ಕುಟುಂಬ ನಿವೃತ್ತಿ ವೇತನ ಮಂಜೂರಾತಿಯು ಸರ್ಕಾರಿ ನೌಕರನು ಸೇವೆಯಲ್ಲಿದ್ದಾಗ ಮೃತನಾದರೆ ಅವನ ಕುಟುಂಬಕ್ಕೆ ಅಥವಾ ಅವಲಂಬಿತರಿಗೆ ಮರಣ ಉಪದಾನ ಮತ್ತು ಈ ಕುಟುಂಬ ವೇತನವನ್ನು ಸಂದಾಯ ಮಾಡಲಾಗುವುದು. ಈ ಕುಟುಂಬ ನಿವೃತ್ತಿ ವೇತನ ಪಡೆಯಲು ಸರ್ಕಾರಿ ನೌಕರನು ಒಂದು ವರ್ಷಗಳ ಕಾಲ ಸೇವೆ ಸಲ್ಲಿಸಿರಬೇಕು. ಈ ಒಂದು ವರ್ಷದ ಸೇವೆಯಲ್ಲಿ ಅಮಾನತ್ತಿನ ಅವಧಿ, ಕರ್ತವ್ಯವಲ್ಲದ ಅವಧಿ ಹಾಗೂ ವೇತನ ರಹಿತ ರಜೆಯು ಒಳಗೊಳ್ಳುವುದಿಲ್ಲ.
ಕುಟುಂಬ ನಿವೃತ್ತಿ ವೇತನವನ್ನು ಒಬ್ಬ ಸರ್ಕಾರಿ ನೌಕರನು ಸೇವೆಯಲ್ಲಿದ್ದಾಗ ಮೃತನಾದಾಗ ಅಥವಾ ನಿವೃತ್ತಿ ನಂತರ ಮರಣ ಹೊಂದಿದಲ್ಲಿ ಮರಣದ ಅಥವಾ ನಿವೃತ್ತಿಯ ನಿಕಟ ಪೂರ್ವದಲ್ಲಿ ಪಡೆಯುತ್ತಿದ್ದ ಅಂತಿಮ ವೇತನದ ಶೇ. 30ರಷ್ಟು ಕುಟುಂಬ ನಿವೃತ್ತಿ ವೇತನವನ್ನು ಮಂಜೂರು ಮಾಡಲಾಗುತ್ತದೆ. (ನಿಯಮ 4)
ಏಳು ವರ್ಷಕ್ಕೆ ಕಡಿಮೆಯಿಲ್ಲದ ಅರ್ಹತಾದಾಯಕ ಸೇವೆ ಸಲ್ಲಿಸಿ ಸೇವೆಯಲ್ಲಿರುವಾಗಲೆ ಮರಣ ಹೊಂದಿದ ಸರ್ಕಾರಿ ನೌಕರನ ಕುಟುಂಬ ವೇತನವನ್ನು ಆತನು ಅಂತಿಮವಾಗಿ ಪಡೆಯುತ್ತಿದ್ದ ಉಪಲಬ್ಧಿಗಳ ಶೇ.50ರಷ್ಟು ಅಥವಾ ಸಾಮಾನ್ಯವಾಗಿ ದೊರೆಯುವ ಕುಟುಂಬ ವೇತನದ 2ರಷ್ಟಕ್ಕೆ ಸಮನಾದ ಹೆಚ್ಚಿಸಿದ ದರದಲ್ಲಿ ಯಾವುದು ಕಡಿಮೆಯೋ ಅಷ್ಟನ್ನು ಏಳು ವರ್ಷಗಳ ಅವಧಿಗಾಗಿ ಸಂದಾಯ ಮಾಡಲಾಗುವುದು. (ನಿಯಮ 5)
ತಂದೆ ತಾಯಿ ಇಬ್ಬರೂ ಸರ್ಕಾರಿ ನೌಕರರಾಗಿದ್ದು ಮೃತರಾದ ಸಂದರ್ಭದಲ್ಲಿ ಅಪ್ರಾಪ್ತ ಮಕ್ಕಳಿಗೆ 2 ಕುಟುಂಬ ವೇತನವನ್ನು ಪಾವತಿ ಮಾಡಬಹುದಾಗಿದ್ದು ಇದು ಗರಿಷ್ಠ ಮೊತ್ತ 23,990ಕ್ಕಿಂತ ಮೀರಬಾರದು (ನಿಯಮ 6) ಈ ನಿಯಮಗಳಲ್ಲಿ ಕುಟುಂಬ ಎಂಬ ಪದ ಅರ್ಥದಲ್ಲಿ ಸರ್ಕಾರಿ ನೌಕರನ ಪತ್ನಿ ಅಥವಾ ಸಂದರ್ಭಾನುಸಾರ ಪತಿ, 18 ವರ್ಷ ವಯಸ್ಸಿನವರೆಗಿನ ಅಪ್ರಾಪ್ತ ಗಂಡು ಮಕ್ಕಳು, 21 ವರ್ಷ ವಯಸ್ಸಿಗಿಂತ ಕಡಿಮೆಯ ಅವಿವಾಹಿತ ಅಪ್ರಾಪ್ತವಯಸ್ಸಿನ ಹೆಣ್ಣುಮಕ್ಕಳು ಒಳಗೊಳ್ಳುತ್ತಾರೆ. (ನಿಯಮ 8) ಆದರೆ ಸರ್ಕಾರಿ ನೌಕರನ ಮಗ ಅಥವಾ ಮಗಳು ಮಾನಸಿಕ ಅಸ್ವಸ್ಥತೆ ಅಥವಾ ದೈಹಿಕ ಅಂಗಹೀನತೆ ಹೊಂದಿದ್ದು ಜೀವನೋಪಾಯ ಮಾಡಲು ಅಸಮರ್ಥರಾಗಿದ್ದರೆ ಅಂತಹ ಮಗ/ ಮಗಳಿಗೆ ಅವರ ಜೀವಮಾನ ಪರ್ಯಂತ ಕುಟುಂಬ ನಿವೃತ್ತಿ ವೇತನವನ್ನು ಸಂದಾಯ ಮಾಡಲಾಗುತ್ತದೆ. (ನಿಯಮ 9(ಡಿ)) =ಸರ್ಕಾರಿ ನೌಕರನು ಸರ್ಕಾರದ ಅನುಮತಿಯನ್ನು ಪಡೆದು ಒಬ್ಬರಿಗಿಂತ ಹೆಚ್ಚು ಪತ್ನಿಯರನ್ನು ಹೊಂದಿದ್ದರೆ ಅವರಿಬ್ಬರಿಗೆ ಸಮಾನವಾಗಿ ಈ ಕುಟುಂಬ ನಿವೃತ್ತಿ ವೇತನವನ್ನು ಹಂಚಬೇಕು. (ನಿಯಮ 9 (ಇ)) =ಮಾನಸಿಕವಾಗಿ ಅಥವಾ ದೈಹಿಕವಾಗಿ ಅಂಗವಿಕಲತೆಯಿಂದ ಕೂಡಿದ ಹಾಗೂ ಜೀವನೋಪಾಯ ಮಾಡಲು ಅಸಮರ್ಥರಾದ ಗಂಡು ಮಕ್ಕಳಿಗೆ ಒಬ್ಬರಾದ ಮೇಲೆ ಒಬ್ಬರಂತೆ ಜೀವಮಾನ ಪರ್ಯಂತ ಸಂದಾಯ ಮಾಡಲಾಗುತ್ತದೆ (ನಿಯಮ 9) =ಸರ್ಕಾರಿ ನೌಕರನು ಅಥವಾ ನಿವೃತ್ತಿದಾರನು ಮರಣ ಹೊಂದಿದ ಸಂದರ್ಭದಲ್ಲಿ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ಮೇರೆಗೆ ಕುಟುಂಬ ನಿವೃತ್ತಿ ವೇತನ, ಉಪದಾನ ಪಡೆಯಲು ಅರ್ಹನಾಗಿದ್ದು ಅವರು ಕೊಲೆಯ ಅಪರಾಧ ಮಾಡಿದ ಅಥವಾ ಅಪರಾಧಕ್ಕೆ ದುಷ್ಪ್ರೇರಣೆ ನೀಡಿದ ದೋಷಾರೋಪಣೆ ಸಾಬೀತಾದಲ್ಲಿ ಅವನ ಕುಟುಂಬ ಈ ಉಪದಾನ ಪಡೆಯಲು ಅನರ್ಹರಾಗುತ್ತಾರೆ. (ನಿಯಮ 9(ಎಫ್ ) ಮತ್ತು ನಿಯಮ 292 ಸಿ)
***
ಬಡ್ತಿಗೆ ಅರ್ಹವಾಗುವ ಅವಧಿ:
29.11.2017.| ಲ. ರಾಘವೇಂದ್ರ
1.) ಒಂದು ಹುದ್ದೆಯಲ್ಲಿ ನಿರ್ವಹಿಸಿದ ಎಲ್ಲ ಕರ್ತವ್ಯವೂ ಕಾಲಿಕ ವೇತನ ಶ್ರೇಣಿಯಲ್ಲಿ ವೇತನ ಬಡ್ತಿ ಪಡೆಯಲು ಪರಿಗಣಿತವಾಗುವುದು.
2.) ವೇತನ ಬಡ್ತಿಗೆ ಪರಿಗಣಿತವಾಗುವ ಕರ್ತವ್ಯದ ಅವಧಿಯಲ್ಲಿ ಈ ಕೆಳಕಂಡವು ಒಳಗೊಳ್ಳುತ್ತದೆ. (ನಿಯಮ 53)
3.) ಒಂದು ಹುದ್ದೆಯಲ್ಲಿ ನಿರ್ವಹಿಸಿದ ಎಲ್ಲ ಕರ್ತವ್ಯದ ಅವಧಿ
4.) ವೇತನ ಸಹಿತ ಎಲ್ಲ ರೀತಿಯ ರಜೆಯ ಅವಧಿ
5.) ವೈದ್ಯಕೀಯ ಪ್ರಮಾಣ ಪತ್ರದ ಆಧಾರದ ಮೇಲೆ ಪಡೆದ ಅಸಾಧಾರಣ ರಜೆ (EOL)
6.) ಎಲ್ಲ ರೀತಿಯ ಸೇರಿಕೆ ಕಾಲದ ಅವಧಿ
7.) ತರಬೇತಿ ಅವಧಿಗಳು
8.) ಅನ್ಯ ಸೇವೆಯ ನಿಯೋಜನೆಯಲ್ಲಿ ಕಳೆದ ಅವಧಿ.
9.) ಸ್ಥಳ ನಿಯುಕ್ತಿ ಆದೇಶದ ಕಡ್ಡಾಯ (ನಿ8 (15-ಎಫ್)ನಿರೀಕ್ಷಣೆಯಲ್ಲಿ ಕಳೆದ ಅವಧಿ.
ವೇತನ ಬಡ್ತಿಗೆ ಕರ್ತವ್ಯವೆಂದು ಪರಿಗಣಿಸಲಾಗದ ಅವಧಿ
ಎ) ವಾರ್ಷಿಕ ವೇತನ ಬಡ್ತಿಯು ಒಂದು ವರ್ಷ ಸೇವೆ ಪೂರೈಸಿದ ಮರುದಿನ ಪ್ರಾಪ್ತವಾಗುವುದಾದರೂ ಈ ಒಂದು ವರ್ಷದ ಸೇವೆಯಲ್ಲಿ , ಈ ಕೆಳಕಂಡ ಅವಧಿಗಳು ವಾರ್ಷಿಕ ವೇತನ ಬಡ್ತಿಗೆ ಕರ್ತವ್ಯವೆಂದು ಪರಿಗಣಿಸಲಾಗುವುದಿಲ್ಲ.
1.) ವೈದ್ಯಕೀಯ ಉದ್ದೇಶಕ್ಕಾಗಿ ಹೊರತುಪಡಿಸಿ, ಇತರೆ ಉದ್ದೇಶಗಳಿಗಾಗಿ ಪಡೆದ ಅಸಾಧಾರಣ ರಜೆಯ ಅವಧಿ (ನಿಯಮ 53(ಬಿ)
2.) ಕರ್ತವ್ಯವಲ್ಲವೆಂದು ಪರಿಗಣಿಸಿ ಅಮಾನತ್ತು ಅವಧಿ (ನಿಯಮ 55)
3.) ಲೆಕ್ಕಕ್ಕಿಲ್ಲದ ಅವಧಿ (ಈಜಿಛಿಠಟ್ಞ) (ನಿಯಮ 8(14ಎ) ಮತ್ತು ನಿಯಮ 55ಎ)
(ಬಿ) ಸರ್ಕಾರಿ ನೌಕರನು ತನ್ನ ಹತೋಟಿಗೆ ಮೀರಿದ ಕಾರಣಗಳಿಂದ ವೈದ್ಯಕೀಯೇತರ ಅಸಾಧಾರಣ ರಜೆ ಪಡೆಯಬೇಕಾಯಿತೆಂದು, ಸರ್ಕಾರಕ್ಕೆ ಮನದಟ್ಟಾದರೆ ಸರ್ಕಾರದ ಪೂರ್ವಾನುಮತಿಯಿಂದ ರಜೆ ಪಡೆದಿದ್ದರೆ, ಆ ಅವಧಿಯನ್ನು ಸರ್ಕಾರವು ವೇತನ ಬಡ್ತಿಗೆ ಪರಿಗಣಿಸಲು ಆದೇಶ ಮಾಡಬಹುದು. (ನಿಯಮ 53(ಬಿ) (ಜಿಜಿ) ಪರಂತುಕ).
ಸಿ) ಹೆಚ್ಚಿನ ವ್ಯಾಸಂಗಕ್ಕಾಗಿ ಪಡೆದ ಅಸಾಧಾರಣ ರಜೆಯನ್ನು ಪದವಿ, ಸ್ನಾತಕೋತ್ತರ ಪದವಿ ಪಡೆಯಲು 2 ವರ್ಷದ ಅವಧಿ ಮತ್ತು ಪಿಎಚ್ಡಿ ಪಡೆಯಲು 3 ವರ್ಷಗಳ ಅವಧಿಯನ್ನು ಸರ್ಕಾರವು ವೇತನ ಬಡ್ತಿಯ ಗಣನೆಗೆ ಪರಿಗಣಿಸಿ ಆದೇಶ ಮಾಡಬಹುದು. (ನಿಯಮ 53 (ಬಿ) (ಜಿಜಿ) ಪರಂತುಕ ಮತ್ತು ಟಿಪ್ಪಣಿ -3.
ಡಿ) ವಾರ್ಷಿಕ ವೇತನ ಬಡ್ತಿಗೆ ಪರಿಗಣಿಸುವ ಆ ವರ್ಷದಲ್ಲಿ, ಮೇಲ್ಕಂಡಂತೆ ವೇತನ ಬಡ್ತಿಗೆ ಪರಿಗಣಿಸಲಾಗದ ಅವಧಿಗಳಿದ್ದಲ್ಲಿ, ಆ ಅವಧಿಯನ್ನು, ಯಥಾ ಪ್ರಕಾರ ಬರುವ ವೇತನ ಬಡ್ತಿ ದಿನಾಂಕಕ್ಕೆ ಕೂಡಿಸಿದ ನಂತರ ಬರುವ ಮುಂದಿನ ದಿನಾಂಕಕ್ಕೆ ಮುಂದೂಡಲಾಗುವುದು. (ನಿಯಮ 53(ಎ))
ಆದರೆ ಆ ಮುಂದೂಡಿದ ದಿನವು ತಿಂಗಳ ಮೊದಲ ದಿನಾಂಕವಲ್ಲದೆ, ಇತರ ದಿನವಾದಲ್ಲಿ, ಅದನ್ನು ಆ ತಿಂಗಳ ಮೊದಲ ದಿನಾಂಕವೇ ಮಂಜೂರು ಮಾಡಬೇಕು ಮತ್ತು ಈ ರೀತಿ ಹಿಂದೂಡಿದ ಬಗ್ಗೆ ಸೇವಾಪುಸ್ತಕ ಮತ್ತು ವೇತನ ಬಡ್ತಿ ಮಂಜೂರಿ ಫಾರಂ – 28ರಲ್ಲಿ ಟಿಪ್ಪಣಿ ಇಡಬೇಕು. (ಸರ್ಕಾರಿ ಆದೇಶ ಸಂಖ್ಯೆ : ಎಫ್ಡಿ 119 ಎಸ್ಆರ್ಎಸ್ : 74 : ದಿನಾಂಕ 23-10-1974)
8) ನಿಯಮ 106ಎ ಅನ್ವಯ ಅನಧಿಕೃತ ಗೈರು ಹಾಜರಿ ಅವಧಿ, ನಿಯಮ 162ರನ್ವಯ ರಜೆಯ ಅನಧಿಕೃತ ಮುಂದುವರಿದ ಅವಧಿ, ನಿಯಮ 88ರನ್ವಯ ಹೆಚ್ಚುವರಿಯಾಗಿ ಉಪಯೋಗಿಸಿ ಸೇರುವ ಕಾಲದ ಅವಧಿ – ಈ ಅವಧಿಗಳಿಗೆ ಅರ್ಧವೇತನ ರಜೆ ಖರ್ಚು ಹಾಕಿದ ನಂತರ (ಯಾವುದೇ ವೇತನ ಪ್ರಾಪ್ತಿ ಮಾಡದೇ) – ಈ ಅವಧಿಗಳನ್ನು ವಾರ್ಷಿಕ ವೇತನ ಬಡ್ತಿಗೆ ಸೇವೆಯೆಂದು ಪರಿಗಣಿಸಲಾಗುವುದು. (ನಿಯಮ 106-ಎ, ನಿಯಮ 53(ಬಿ) (ಟಿಪ್ಪಣಿ -4)
****
ವೇತನ ನಿಗದೀಕರಣದ ನಿಯಮಗಳು
22.11.2017.
| ಲ. ರಾಘವೇಂದ್ರ
ಒಂದು ಹುದ್ದೆಯ ವೃಂದದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸರ್ಕಾರಿ ನೌಕರಿಗೂ ಏಕರೀತಿಯ ವೇತನ ಲಭ್ಯವಾಗಲು ಅನುಕೂಲವಾಗುವಂತೆ ಪ್ರತಿ ಹುದ್ದೆಗೂ ಒಂದು ನಿಶ್ಚಿತ ವೇತನ ಶ್ರೇಣಿಯನ್ನು ರೂಪಿಸಲಾಗಿದೆ. ಒಂದು ಹುದ್ದೆಗೆ ಮೂಲತಃ ನೇಮಕವಾಗಿರುವ ಸರ್ಕಾರಿ ನೌಕರನು, ಈ ವೇತನ ಶ್ರೇಣಿಯಂತೆ ವೇತನ ಪಡೆಯಲು ಹಕ್ಕುಳ್ಳವನಾಗಿರುತ್ತಾನೆ. ಇದರ ಜತೆ ವಿವಿಧ ಭತ್ಯೆಗಳಾದ – ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ, ವೈದ್ಯಕೀಯ ಭತ್ಯೆ, ವಿಶೇಷ ಭತ್ಯೆ ಮುಂತಾದವು – ಪರಿಹಾರ ಭತ್ಯೆಗಳ ರೂಪದಲ್ಲಿ ಸರ್ಕಾರ ಮಂಜೂರು ಮಾಡಬಹುದಾದರೂ, ವೇತನ ಶ್ರೇಣಿಯನ್ವಯ ಪಡೆಯುವ ವೇತನ ಮಾತ್ರ ನಿಶ್ಚಿತ ಹಕ್ಕಿನದಾಗಿದ್ದು ಇದನ್ನು ಮೂಲವೇತನವೆಂದು ಕರೆಯಲಾಗುತ್ತದೆ. (ನಿಯಮ 8 (44).
ವೇತನ ಶ್ರೇಣಿಯು ಒಂದು ಕನಿಷ್ಠ ಮಟ್ಟದಿಂದ ಪ್ರಾರಂಭವಾಗಿ – ನಿಯತಕಾಲಿಕ (ವಾರ್ಷಿಕ) ವೇತನ ಬಡ್ತಿಗಳ ಮೂಲಕ ಹೆಚ್ಚಾಗುತ್ತಾ ಹೋಗಿ ಒಂದು ಗರಿಷ್ಠ ಹಂತದವರೆಗೆ ತಲುಪುವುದರಿಂದ ಇದಕ್ಕೆ ಕಾಲಿಕ ವೇತನ ಶ್ರೇಣಿ ಎಂದು ಕರೆಯಲಾಗುತ್ತದೆ. (ನಿಯಮ 8(48).
ಸರ್ಕಾರಿ ಹುದ್ದೆಗೆ ನೇಮಕಾತಿ ಆದಾಗ ಮತ್ತು ಆ ನಂತರ ಪದೋನ್ನತಿ (ಬಡ್ತಿ) ಪಡೆದಾಗ ವಿವಿಧ ಸಂದರ್ಭಗಳಲ್ಲಿ ವೇತನ ಶ್ರೇಣಿಯಲ್ಲಿ ವೇತನ ನಿಗದಿಗೊಳಿಸಬೇಕಾಗುವ ಸಂದರ್ಭಗಳು ಇರುತ್ತದೆ.
ಹೊಸ ನೇಮಕಾತಿಯಾದಾಗ
ಪ್ರಥಮ ನೇಮಕಾತಿಯೆಂದು ಹುದ್ದೆಗೆ ನಿಗದಿಪಡಿಸಿದ ವೇತನ ಶ್ರೇಣಿ ಕನಿಷ್ಠ ಹಂತದಲ್ಲಿ ನಿಗದಿ ಮಾಡಬೇಕಾಗುತ್ತದೆ. ಆದರೆ ವಿಶೇಷ ಸಂದರ್ಭಗಳಲ್ಲಿ ಅಭ್ಯರ್ಥಿಯ ಅರ್ಹತೆ, ಅನುಭವ ಪರಿಗಣಿಸಿ ನಿಯಮ 57ರಡಿಯಲ್ಲಿ ಮುಂಗಡ ವೇತನ ಬಡ್ತಿ ನೀಡಿ ವೇತನ ನಿಗದಿಪಡಿಸಲು, ಸರ್ಕಾರಕ್ಕೆ ಅಧಿಕಾರವಿರುತ್ತದೆ.
ವಾರ್ಷಿಕ ವೇತನ ಬಡ್ತಿ ((Increments): ಎ) ಸರ್ಕಾರಿ ನೌಕರನು ತಾನು ಹೊಂದಿದ ಹುದ್ದೆಗೆ ನಿಗದಿಪಡಿಸಿದ ವೇತನ ಶ್ರೇಣಿಯ ಕನಿಷ್ಠ ವೇತನ ಹಂತದಿಂದ ಗರಿಷ್ಠ ವೇತನ ಮಟ್ಟಕ್ಕೆ ಹಂತಹಂತವಾಗಿ ಏರುತ್ತಾ ಹೋಗಲು ಅವಕಾಶವಿದೆ. ಈ ವೇತನ ಏರಿಕೆಯನ್ನು ವಾರ್ಷಿಕ ವೇತನ ಬಡ್ತಿ ಎಂದು ಕರೆಯಲಾಗುತ್ತದೆ. ಉದ್ಯೋಗಿಯು ಒಂದು ವರ್ಷ ತೃಪ್ತಿಕರ ಸೇವೆಯನ್ನು ಪೂರ್ಣಗೊಳಿಸಿದ ಮುಂದಿನ ದಿನಾಂಕದಂದು ವಾರ್ಷಿಕ ವೇತನ ಬಡ್ತಿಯನ್ನು ಪಡೆಯಲು ಅರ್ಹನಿರುತ್ತಾನೆ. ಈ ವಾರ್ಷಿಕ ಬಡ್ತಿಯನ್ನು, ತಡೆಯಲು ಯಾವುದೇ ಆದೇಶವಿದ್ದ ಹೊರತು, ತಂತಾನೆ ಬಿಡುಗಡೆ ಮಾಡತಕ್ಕದ್ದು.
ಸಕ್ಷಮ ಅಧಿಕಾರಿಯು, ಉದ್ಯೋಗಿಯ ನಡತೆ ಸರಿಯಾಗಿಲ್ಲವೆಂದು ಅಥವಾ ಆತನ ಸೇವೆಯು ತೃಪ್ತಿಕರವಲ್ಲವೆಂದು ಭಾವಿಸಿ, ಸಿ ಸಿ ಎ ನಿಯಮಾವಳಿಗಳ ಪ್ರಕಾರ ಶಿಸ್ತು ಕ್ರಮ ಜರುಗಿಸಿ ದಂಡನೆಯ ರೂಪದಲ್ಲಿ ಆತನು ಮುಂದೆ ಗಳಿಸಬಹುದಾದ ವಾರ್ಷಿಕ ವೇತನ ಬಡ್ತಿಗಳನ್ನು ತಡೆ ಹಿಡಿಯಬಹುದು. (ನಿಯಮ 51(ಜಿ))
ಬಿ) ಆಯಾ ತಿಂಗಳ ಮೊದಲನೆಯ ದಿನಾಂಕವಲ್ಲದೆ, ಇತರ ದಿನದಂದು, ವೇತನ ಬಡ್ತಿ ಪ್ರಾಪ್ತವಾಗುವುದಾದರೆ, ಅದನ್ನು ಆಯಾ ತಿಂಗಳ ಮೊದಲ ದಿನಾಂಕವೇ ಪ್ರಾಪ್ತವಾಗುವುದೆಂದು ಭಾವಿಸಿ ಬಿಡುಗಡೆಗೊಳಿಸಬೇಕು.
ಮೊದಲ ವರ್ಷದಲ್ಲಿ ಮಾತ್ರವೇ ಇಂತಹ ಸಂದರ್ಭ ಬರುವುದಿದ್ದು , ಈ ರೀತಿ ಹಿಂದೂಡಿದ ಬಗ್ಗೆ ಸೇವಾ ಪುಸ್ತಕ ಮತ್ತು ವೇತನ ಬಡ್ತಿ ಫಾರಂ-28ರಲ್ಲಿ ನಮೂದಿಸಬೇಕು. (ಸರ್ಕಾರಿ ಆದೇಶ ಎಫ್ಡಿ : 119 : ಎಸ್ ಆರ್ ಎಸ್ : 74 ದಿನಾಂಕ : 23-1-1974)
ಸಿ) ಕರ್ನಾಟಕ ಆರ್ಥಿಕ ಸಂಹಿತೆ ಅನುಚ್ಛೇದ 12ರಲ್ಲಿ ನಿಗದಿಪಡಿಸಿರುವ ಫಾರಂ – 28ರಲ್ಲಿ ವೇತನ ಬಡ್ತಿಯ ವಿವರಗಳನ್ನು ನಮೂದಿಸಿ, ಮಂಜೂರು ಮಾಡಿ ವೇತನ ಬಿಲ್ಲಿನೊಂದಿಗೆ ಲಗತ್ತಿಸಬೇಕು.
ಡಿ) ವೇತನ ಬಡ್ತಿಯ ದಿನಾಂಕದಂದು ಸರ್ಕಾರಿ ನೌಕರನು ಯಾವುದೇ ರೀತಿ ರಜೆಯ ಮೇಲಿದ್ದರೆ (ಸಾಂರ್ದಭಿಕ ರಜೆ ಹೊರತುಪಡಿಸಿ), ಅರ್ಹ ದಿನಾಂಕದಂದು ವೇತನ ಬಡ್ತಿ ಮಂಜೂರು ಮಾಡಬಹುದು. ಆದರೆ ನಿಯಮ 118ರ ಮೇರೆಗೆ ರಜೆಯ ಮೇಲೆ ತೆರಳುವ ಹಿಂದಿನ ದಿನದಂದು ಪಡೆ ಯುತ್ತಿದ್ದ ವೇತನಕ್ಕೆ ಸಮನಾದ ರಜಾ ಸಂಬಳವನ್ನು ಮಾತ್ರ ರಜೆಯ ಅವಧಿಯಲ್ಲಿ ಪಡೆಯಲು ಹಕ್ಕುಳ್ಳವ ನಾಗಿದ್ದರಿಂದ, ಆತನು ರಜೆಯಿಂದ ಕರ್ತವ್ಯಕ್ಕೆ ಹಿಂತಿರುಗಿದ ದಿನಾಂಕದಿಂದ ಮಾತ್ರ ಆರ್ಥಿಕ ಸೌಲಭ್ಯ ಕೊಡತಕ್ಕದ್ದು. (ಸರ್ಕಾರಿ ಆದೇಶ ಸಂಖ್ಯೆ : ಎಫ್ಡಿ : 119 : ಎನ್ಆರ್ಎನ್ : 74 : ದಿನಾಂಕ : 23-10-1974)
*****
ಸರ್ಕಾರಿ ನೌಕರರ ಹುದ್ದೆಯ ಹಕ್ಕಿನ ವಿಶ್ಲೇಷಣೆ:
15.11.2017.
| ಲ. ರಾಘವೇಂದ್ರ
ಕರ್ನಾಟಕ ಸರ್ಕಾರಿ ಸೇವಾ ನಿಮಯಾವಳಿಯ ನಿಯಮ 17ರಿಂದ 20 ರವರೆಗಿನ ನಿಯಮಗಳು ಸರ್ಕಾರಿ ನೌಕರನ ಹುದ್ದೆಯ ಹಕ್ಕಿನ ಬಗೆಗೆ ವಿವೇಚಿಸುತ್ತದೆ. ಅದರ ವಿಶ್ಲೇಷಣೆ ಇಲ್ಲಿದೆ.
ಒಬ್ಬ ವ್ಯಕ್ತಿಯನ್ನು ಸರ್ಕಾರದ ವ್ಯವಹಾರಗಳ ನಿರ್ವಹಣೆಗಾಗಿ ಒಂದು ಸ್ಥಿರ (ಮೂಲ) ಹುದ್ದೆಗೆ ನೇಮಕಾತಿ ನಿಯಮಗಳು ಪ್ರಕಾರ ನೇಮಿಸಿ ವಿಧಿಸಲಾದ ಷರತ್ತುಗಳನ್ನು ತೃಪ್ತಿಕರವಾಗಿ ಪೂರೈಸಿದ ಮೇರೆಗೆ ಆತನ ನೇಮಕಾತಿಯನ್ನು ಆ ಸ್ಥಿರ ಹುದ್ದೆಯಲ್ಲಿ ಸ್ಥಿರೀಕರಣಗೊಳಿಸಲಾಗುವುದು. ನೇಮಕಾತಿ ಸ್ಥಿರೀಕೃತಗೊಳಿಸಿದ ದಿನದಿಂದ ಆ ಮೂಲ (ಸ್ಥಿರ) ಹುದ್ದೆಯ ಮೇಲೆ ಸರ್ಕಾರಿ ನೌಕರನ ಹಕ್ಕು ಸ್ಥಾಪಿತವಾಗುತ್ತದೆ.(ನಿಯಮ 17-20)
ಆದ್ದರಿಂದ ಒಂದು ಸ್ಥಿರ (ಮೂಲ) ಹುದ್ದೆಗೆ ಒಬ್ಬ ವ್ಯಕ್ತಿಯನ್ನು ಮಾತ್ರ ಕಾಯಂ ಆಗಿ ನೇಮಿಸಬಹುದು. ಹಾಗೆಯೇ ಒಬ್ಬ ವ್ಯಕ್ತಿಯನ್ನು ಕಾಯಂ ಆಗಿ ಒಂದೇ ಸ್ಥಿರ ಹುದ್ದೆಗೆ ನೇಮಕ ಮಾಡಲು ಮಾತ್ರ ಅವಕಾಶವಿರುತ್ತದೆ. ಆದರೆ ಸರ್ಕಾರ ವಿಶೇಷ ಸಂದರ್ಭಗಳಲ್ಲಿ ತಾತ್ಕಾಲಿಕವಾಗಿ ಒಬ್ಬ ಸರ್ಕಾರಿ ನೌಕರನನ್ನು ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ನೇಮಿಸಲೂಬಹುದು. (ನಿಯಮ – 66)
ಒಬ್ಬ ನೌಕರನು ಹುದ್ದೆ ಹಕ್ಕು ಪಡೆದಿರುವ ಹುದ್ದೆಗೆ ಕಾಯಂ ಆಗಿ ಬೇರೊಬ್ಬ ನೌಕರನನ್ನು ನೇಮಿಸಲು ಅವಕಾಶವಿಲ್ಲ. ಸರ್ಕಾರಿ ನೌಕರನು ಬೇರೊಂದು ಕಾಯಂ ಹುದ್ದೆ ಮೇಲೆ ಹಕ್ಕುಗಳಿಸಿದ ದಿನದಿಂದ ತನ್ನ ಹಿಂದಿನ ಸ್ಥಿರ ಹುದ್ದೆ ಮೇಲಿನ ಹಕ್ಕನ್ನು ಕಳೆದುಕೊಳ್ಳುತ್ತಾನೆ. ಅಂತಹ ಹುದ್ದೆಗೆ ಬೇರೊಬ್ಬ ವ್ಯಕ್ತಿಯನ್ನು ಕಾಯಂ ಆಗಿ ನೇಮಿಸಬಹುದು ಅಥವಾ ಪದೋನ್ನತಿ ನೀಡಿ ಸದರಿ ಸ್ಥಿರ ಹುದ್ದೆಯನ್ನು ಕಾಯಂ ಆಗಿ ತುಂಬಬಹುದು. (ನಿಯಮ 18 ಮತ್ತು 19) ಸರ್ಕಾರಿ ನೌಕರನ ಹುದ್ದೆಯ ಹಕ್ಕನ್ನು ತನ್ನಲ್ಲಿ ಉಳಿಸಿಕೊಳ್ಳುವ ಸಂದರ್ಭಗಳು:
ಸರ್ಕಾರಿ ನೌಕರನು ಹುದ್ದೆಯ ಹಕ್ಕನ್ನು ತಾತ್ಕಾಲಿಕವಾಗಿ ವರ್ಗಾಯಿಸದಿದ್ದಲ್ಲಿ ಅಥವಾ ಅಮಾನತ್ತಿನಲ್ಲಿಡದಿದ್ದಲ್ಲಿ ಕೆಳಗಿನ ಸಂದರ್ಭಗಳಲ್ಲಿ ಸ್ಥಿರ ಹುದ್ದೆಯಲ್ಲಿ ಹಕ್ಕನ್ನು ಉಳಿಸಿಕೊಂಡಿರುತ್ತಾನೆ.
# ಸ್ಥಿರ ಹುದ್ದೆಯ ಕಾರ್ಯನಿರ್ವಹಣಾ ಅವಧಿ
# ರಜೆ ಅವಧಿ (ಉನ್ನತ ವ್ಯಾಸಂಗದ ರಜೆ ಅವಧಿಯೂ ಸೇರಿ)
# ತಾತ್ಕಾಲಿಕ ಹುದ್ದೆಯ ಕಾರ್ಯನಿರ್ವಹಣಾ ಅವಧಿ
# ಸ್ಥಾನಾಪನ್ನ ಆಧಾರದ ಮೇಲೆ ಮತ್ತೊಂದು ಹುದ್ದೆಯ ಕಾರ್ಯನಿರ್ವಹಣಾ ಅವಧಿ
# ಅನ್ಯ ಸೇವೆಗೆ ನಿಯೋಜನಾ ಅವಧಿ
# ತರಬೇತಿ ಮತ್ತು ಉನ್ನತ ವ್ಯಾಸಂಗದ ನಿಯೋಜನಾ ಅವಧಿ
# ವೃಂದೇತರ ಹುದ್ದೆಯಲ್ಲಿನ ಸೇವಾ ಅವಧಿ
# ಸೇರಿಕೆ ಕಾಲದ ಬಳಕೆಯ ಅವಧಿ
# ವಿಚಾರಣಾ ಪ್ರಯುಕ್ತ ಅಮಾನತುಗೊಳಿಸಿದ ಅವಧಿ
# ದಂಡನೆಯಾಗಿ ಕೆಳದರ್ಜೆ ಹುದ್ದೆಗೆ ತಾತ್ಕಾಲಿಕ ವರ್ಗಾವಣೆ ಅವಧಿ
# ಒಂದು ಸ್ಥಿರ ಹುದ್ದೆಯಲ್ಲಿ ‘ಹುದ್ದೆಯ ಹಕ್ಕು’ ಹೊಂದಿರುವ ಸರ್ಕಾರಿ ನೌಕರ ಅದೇ ಇಲಾಖೆಯ ಇನ್ನೊಂದು ಹುದ್ದೆಗೆ ಅಥವಾ ಸರ್ಕಾರದ ಬೇರೆ ಇಲಾಖೆಯ ಇನ್ನೊಂದು ಹುದ್ದೆಗೆ ನೇಮಕಗೊಂಡಾಗ ತನ್ನ ಮೊದಲನೇ ಹುದ್ದೆಯಿಂದ ಬಿಡುಗಡೆ ಹೊಂದಿದ ದಿನಾಂಕದಿಂದ ಹೊಸ ಹುದ್ದೆಯಲ್ಲಿ ಸೇವೆಯನ್ನು ಸ್ಥಿರೀಕೃತಗೊಳಿಸುವ ದಿನಾಂಕದವರೆಗಿನ ಅವಧಿ.
# ಸರ್ಕಾರವು ಸರ್ಕಾರಿ ನೌಕರನನ್ನು ಬೇರೆ ರಾಜ್ಯಗಳ ಅಥವಾ ಕೇಂದ್ರ ಸರ್ಕಾರದ ಸೇವೆಗೆ ನಿಯೋಜಿಸಿದ ಅವಧಿ.
ಸ್ಥಿರ ಹುದ್ದೆಯ ಹಕ್ಕು ಹೊಂದಿರುವ ಉದ್ಯೋಗಿಯ ಅರ್ಜಿಯನ್ನು ಇಲಾಖೆ ಮುಖಾಂತರ ಸಲ್ಲಿಸಿ, ರಾಜ್ಯದ ಹೊರಗಿನ ಸೇವೆಗೆ ನೇಮಕಗೊಂಡಾಗ ಆತನ ಸೇವೆಯು ಹೊಸ ಹುದ್ದೆಯಲ್ಲಿ ಸ್ಥಿರೀಕರಣಗೊಳ್ಳುವವರೆಗೆ ಮೊದಲಿನ ಹುದ್ದೆಯಲ್ಲಿಯೇ ಹಕ್ಕು ಅಂತರ್ಗತವಾಗಿರುತ್ತದೆ.
ಹುದ್ದೆಯ ಹಕ್ಕನ್ನು ಅಮಾನತುಗೊಳಿಸಬಹುದಾದ ಸಂದರ್ಭಗಳು:
ಸರ್ಕಾರವು ಕೆಳಗಿನ ಸಂದರ್ಭಗಳಲ್ಲಿ ಸರ್ಕಾರಿ ನೌಕರನ ಹುದ್ದೆಯ ಹಕ್ಕನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಬಹುದು.
# ನಿರ್ದಿಷ್ಟಾವಧಿ ಹುದ್ದೆ (ಟೆನ್ಯೂರ್ ಪೋಸ್ಟ್)ಗೆ ನೇಮಕ
# ಒಬ್ಬ ಸರ್ಕಾರಿ ನೌಕರ ಹಕ್ಕು ಪಡೆದಿರುವ ಹುದ್ದೆಗೆ ತಾತ್ಕಾಲಿಕವಾಗಿ ಬೇರೊಬ್ಬನ ನೇಮಕಾತಿ.
# ಸರ್ಕಾರಿ ನೌಕರನನ್ನು ಹೊರಗಿನ ಸೇವೆಗೆ ಅನ್ಯ ಸೇವೆಗೆ ಅಥವಾ ಬೇರೊಂದು ಹುದ್ದೆಯಲ್ಲಿ ಸ್ಥಾನಪನ್ನ ಆಧಾರದ ಮೇಲೆ ನಿಯೋಜಿಸಿದಾಗ ಆತನು ಕನಿಷ್ಠ ಪಕ್ಷ ಮೂರು ವರ್ಷ ಕಡಿಮೆ ಇಲ್ಲದಂತೆ ಹುದ್ದೆಯ ಹೊರಗುಳಿಯುವ ಪ್ರಸಂಗಗಳಲ್ಲಿ.
ಮೇಲಿನ ಸಂದರ್ಭಗಳಲ್ಲಿ ಮತ್ತೊಬ್ಬ ಸರ್ಕಾರಿ ನೌಕರನನ್ನು ತಾತ್ಕಾಲಿಕವಾಗಿ ಕಾಯಂಆಗಿ ನೇಮಿಸಬಹುದು ಹಾಗೂ ಅಂತಹ ಸರ್ಕಾರಿ ನೌಕರನು ತಾತ್ಕಾಲಿಕವಾಗಿ ಹುದ್ದೆಯ ಹಕ್ಕು ಗಳಿಸುತ್ತಾನೆ.
ಮೇಲಿನ ಮೂರು ಪ್ರಸಂಗಗಳಲ್ಲಿ ಸರ್ಕಾರಿ ನೌಕರ ತನ್ನ ಮೂಲ ಹುದ್ದೆಗೆ ಹಿಂದಿರುಗಿದ ಕೂಡಲೇ ಹುದ್ದೆಯ ಮೇಲಿನ ಅವನ ಮೂಲ ಹಕ್ಕು ಪುನರುಜ್ಜೀವನಗೊಳಿಸಲ್ಪಡುತ್ತದೆ. ಯಾವುದೇ ಕಾರಣಕ್ಕೂ ನಿರ್ದಿಷ್ಟಾವಧಿ ಹುದ್ದೆಯಲ್ಲಿನ ಹಕ್ಕನ್ನು ಅಮಾನತುಗೊಳಿಸಲಾಗುವುದು.
ಸರ್ಕಾರಿ ನೌಕರ ಇಚ್ಛೆಪಡಿಸಿದ್ದಾಗ್ಯೂ ಆತನ ಹುದ್ದೆಯ ಹಕ್ಕನ್ನು ತೆಗೆದುಹಾಕಲಾಗುವುದಿಲ್ಲ.
****
ನಿವೃತ್ತಿವೇತನದ ಅರ್ಥ ವಿವರಣೆWednesday, 01.11.2017.
| ಲ. ರಾಘವೇಂದ್ರ
ನಿವೃತ್ತ ನೌಕರರಿಗೆ ಜೀವಿತ ಅವಧಿವರೆಗೂ ಅವರ್ಥಕವಾಗಿ ವೇತನ ಬಟವಡೆಯಾಗಿರುತ್ತದೆ. ಉಪದಾನವು ನಿವೃತ್ತ ನೌಕರರಿಗೆ ಹಾಗೂ ಮೃತ ನೌಕರ/ಳ ಕುಟುಂಬವರ್ಗದವರಿಗೆ ನೀಡುವಂತಹ ಹಣ. ಕ.ಸ.ಸೇ.ನಿ. ನಿಯಮ 208ರ ರೀತ್ಯ ನಿವೃತ್ತಿವೇತನ ಉಪದಾನದಲ್ಲಿ ಸೇರುತ್ತದೆ. ಆದ್ದರಿಂದ ನಿವೃತ್ತಿವೇತನ ಮತ್ತು ಉಪದಾನವನ್ನು ಜತೆಗೆ ನೌಕರರು ಸಲ್ಲಿಸಿರುವ ಅರ್ಹಸೇವೆ ಹಾಗೂ ಉಪಲಬ್ಧಗಳ ಆಧಾರದ ಮೇಲೆ ಲೆಕ್ಕಾಚಾರ ಮಾಡಬಹುದು.
ನಿವೃತ್ತಿವೇತನ ವಿಧಗಳು: ನಿವೃತ್ತಿ ವೇತನಗಳನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಲಾಗಿದೆ.
ಪರಿಹಾರ(ನಿಯಮ 259),
ಅಶಕ್ತತಾ (ನಿಯಮ 273),
ವಯೋ ನಿವೃತ್ತಿ ವೇತನ(ನಿಯಮ 283),
ವಿಶ್ರಾಂತಿ(ನಿಯಮ 285)
ನಿವೃತ್ತಿ ವೇತನ ಮತ್ತು ಉಪದಾನ ಪಡೆಯಲು ಅರ್ಹ ವ್ಯಕ್ತಿಗಳು: ಕ.ಸ.ಸೇ.ನಿ. ನಿಯಮ 302ರ ರೀತ್ಯ ಹಾಗೂ ಕೆ.ಜಿ.ಎಸ್.(ಎಸ್.ಪಿ.) ನಿಯಮ 2002ರ ನಿಯಮ 7 ಪರಿಶಿಷ್ಟರ ರೀತ್ಯ ಪಿಂಚಣಿ ಮತ್ತು ಉಪದಾನ ಸೌಲಭ್ಯ ಪಡೆಯಲು ಈ ಕೆಳಕಂಡ ವ್ಯಕ್ತಿಗಳು ಅರ್ಹರು.
ಕುಟುಂಬ ನಿವೃತ್ತಿಗಾಗಿ ಹೆಂಡತಿ, ಗಂಡ, ಅಪ್ರಾಪ್ತ ಮಕ್ಕಳು, ಅಪ್ರಾಪ್ತ ಅವಿವಾಹಿತ ಮಗಳು. ಉಪದಾನಕ್ಕಾಗಿ ಹೆಂಡತಿ, ಗಂಡ, ಮಕ್ಕಳು(ದತ್ತು ಮಕ್ಕಳು ಸೇರುತ್ತಾರೆ), ಅವಿವಾಹಿತ/ವಿಧವಾ/ವಿಚ್ಛೇದಿತ ಮಗಳು, ತಮ್ಮಂದಿರು 18 ವರ್ಷ ಒಳಗಿರುವವರು ಅವಿವಾಹಿತ/ವಿಧವಾ/ವಿಚ್ಛೇದಿತ ತಂಗಿಯರು, ತಂದೆ, ತಾಯಿ, ವಿವಾಹಿತ ಮಗಳು, ಮೃತ ಮಗನ ಮಕ್ಕಳು.
ನಿವೃತ್ತಿ ವೇತನ ಪತ್ರಗಳನ್ನು ಯಾರಿಗೆ ಸಲ್ಲಿಸಬೇಕು?: ನಿವೃತ್ತ ಸರ್ಕಾರಿ ನೌಕರರಿಗೆ ಮತ್ತು ಸ್ಥಳೀಯ ಸಂಸ್ಥೆಯ ನೌಕರರಿಗೆ ನಿವೃತ್ತಿ ವೇತನ ಸೌಲಭ್ಯಗಳನ್ನು ಪ್ರಾಧೀಕರಿಸುವ ಸಲುವಾಗಿ ಭರ್ತಿ ಮಾಡಿದ ನಿವೃತ್ತಿ ವೇತನ ಪತ್ರಗಳನ್ನು ಬಟವಾಡೆ ಅಧಿಕಾರಿಗಳು/ಮಂಜೂರಾತಿ ಅಧಿಕಾರಿಗಳು ದೃಢೀಕರಿಸಿ ಸರ್ಕಾರಿ ಸುತ್ತೋಲೆ ಸಂಖ್ಯೆ ಎಫ್ಡಿ (ವಿಶೇಷ)2 ಸಿಪಿಸಿ 2002 ಬೆಂಗಳೂರು ದಿನಾಂಕ 19-1-2002ರ ರೀತ್ಯ ಆರು ತಿಂಗಳು ಮುಂಚಿತವಾಗಿ ಸಂಬಂಧಪಟ್ಟ ಪ್ರಾಧೀಕರಣ ಪ್ರಾಧಿಕಾರಕ್ಕೆ ಕಳುಹಿಸಬೇಕು. ಅಂತೆಯೇ ಪೂರ್ಣಪ್ರಮಾಣದ ನಿವೃತ್ತಿ ಕಡತಗಳನ್ನು ಪರಿಶೀಲಿಸಿ ನಿವೃತ್ತಿ ಪ್ರಾಧೀಕರಣ ಪ್ರಾಧೀಕಾರವು ನಿವೃತ್ತ/ನಿಧನರಾದ ನೌಕರರ ಸಂಬಂಧ ನಿವೃತ್ತಿ ಪಾವತಿ ಆದೇಶ ಪತ್ರವನ್ನು 15 ದಿನ ಮುಂಚಿತವಾಗಿ ನೀಡಬೇಕು.
ಒಂದು ವೇಳೆ ನಿವೃತ್ತಿ ವೇತನ ಪತ್ರಗಳನ್ನು ತಡವಾಗಿ ಸಲ್ಲಿಸಿದಲ್ಲಿ ಸರ್ಕಾರಿ ಆದೇಶ ಸಂಖ್ಯೆ ಎಫ್ಡಿ(ವಿಶೇಷ) 199 ಪಿಇಎಸ್ 93 ಬೆಂಗಳೂರು ದಿನಾಂಕ 13-9-94ರ ರೀತ್ಯ ತಡವಾಗಿ ಪಾವತಿಸಬಹುದಾದ ನಿವೃತ್ತಿ ವೇತನ, ಉಪದಾನ ಹಾಗೂ ಗಳಿಕೆ ರಜೆ ಮೊತ್ತಕ್ಕೆ ಶೇ.8ರಷ್ಟು ಬಡ್ಡಿ ನೀಡಬೇಕಾಗುತ್ತದೆ.
ಸರಳ ನಿಯಮ:
# ಮೂರು ತಿಂಗಳು ಅವಧಿ ಸೇವೆಯ ಕಡಿಮೆ ಬೀಳುವ ಭಿನ್ನಾಂಕವನ್ನು ಕಡೆಗಣಿಸಬೇಕು.
# 3 ತಿಂಗಳು ಮೇಲ್ಪಟ್ಟು 9 ತಿಂಗಳು ಅವಧಿಯ ಸೇವೆಯನ್ನು ಒಂದು ಅರ್ಧವರ್ಷ ಎಂದು ಪರಿಗಣಿಸಬೇಕು.
# 9 ತಿಂಗಳು ಮತ್ತು ಅದಕ್ಕೂ ಮೇಲ್ಪಟ್ಟ ಅವಧಿಯ ಸೇವೆಯನ್ನು 2 ಅರ್ಧ ವರ್ಷ ಎಂದು ಪರಿಗಣಿಸಬೇಕು.
ಉದಾಹರಣೆಗಳು:
# ಒಟ್ಟು ಅರ್ಹ ಸೇವೆಯು 31 ವರ್ಷ 1ತಿಂಗಳು 25 ದಿನಗಳಾಗಿದ್ದಲ್ಲಿ ಇದನ್ನು 31 ವರ್ಷ ಅಥವಾ 62 ಅರ್ಧ ವರ್ಷಗಳೆಂದು ಲೆಕ್ಕ ಹಾಕಬೇಕು.
# ಒಟ್ಟು ಅರ್ಹ ಸೇವೆಯು 31 ವರ್ಷ 7 ತಿಂಗಳು 20 ದಿನಗಳಾಗಿದ್ದಲ್ಲಿ ಇದನ್ನು 31 1/2 ವರ್ಷ ಅಥವಾ 63 ಅರ್ಧ ವರ್ಷ ಎಂದು ಲೆಕ್ಕ ಹಾಕಬೇಕು.
# ಒಟ್ಟು ಸೇವೆಯು 30 ವರ್ಷ 9 ತಿಂಗಳು 12 ದಿನಗಳಾಗಿದ್ದಲ್ಲಿ ಇದನ್ನು 31 ವರ್ಷ ಅಥವಾ 62 ಅರ್ಧ ವರ್ಷಗಳೆಂದು ಲೆಕ್ಕ ಹಾಕಬೇಕು.
# ಅರ್ಹ ಸೇವೆಯು 35 ವರ್ಷ 6 ತಿಂಗಳು 18 ದಿನಗಳಾಗಿದ್ದಲ್ಲಿ ಇದನ್ನು ಗರಿಷ್ಠ 33 ವರ್ಷ ಅಥವಾ 66 ಅರ್ಧ ವರ್ಷಗಳಿಗೆ ಸೀಮಿತಗೊಳಿಸಿ ಲೆಕ್ಕ ಹಾಕಬೇಕು.
# ಮೊತ್ತವನ್ನು ರೂಪಾಯಿಗೆ ಲೆಕ್ಕಹಾಕುವುದು
# ನಿವೃತ್ತಿ ವೇಳೆ ನಿವೃತ್ತಿವೇತನವನ್ನು ಸೌಲಭ್ಯ ಮಂಜೂರಿಗೆ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನ ಮೊತ್ತ ರೂಪಾಯಿಗಿಂತ ಬಿನ್ನಾಂಕವಾಗಿದ್ದರೂ ಅಧಿಕೃತ ಜ್ಞಾಪನ ಸಂಖ್ಯೆ ಎಫ್ಡಿ ವಿಶೇಷ: ಪಿಇಟಿ 84 ಬೆಂಗಳೂರು, ದಿನಾಂಕ 7-1-84ರ ರೀತ್ಯ ಹತ್ತಿರದ ರೂಪಾಯಿಗೆ ಲೆಕ್ಕಹಾಕಬೇಕು.
ಅರ್ಹದಾಯಕ ಸೇವೆಯ ಲೆಕ್ಕಾಚಾರ
ದಿನಾಂಕ 30-9-2003ರ ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ ಎಫ್ಡಿ 6 ಸನಿತಿ 2003ರಲ್ಲಿ ನಿವೃತ್ತಿ ವೇತನ ಪಡೆಯಲು ನಿಯಮ 222ರ ಉಪಬಂಧಗಳನ್ನು ಮಾರ್ಪಡಿಸಿ ಕನಿಷ್ಠ 10 ವರ್ಷ ಅರ್ಹತೆ ಸೇವೆ ಸಲ್ಲಿಸಬೇಕೆಂದು ಆದೇಶಿಸಿದೆ. ಈ ಆದೇಶವು ದಿನಾಂಕ 1-9-2003 ರಿಂದ ಜಾರಿಗೆ ಬಂದಿದೆ.
ನಿವೃತ್ತಿ ವೇತನ ಮತ್ತು ಉಪದಾನ ಪಡೆಯಲು ಅರ್ಹವಲ್ಲದ ಸೇವೆಗಳು
# ನಿಗದಿತ ಅವಧಿಗಾಗಿ/ನಿರ್ದಿಷ್ಟ ಕರ್ತವ್ಯಕ್ಕಾಗಿ ನೇಮಕಗೊಂಡ ನೌಕರನ ಸೇವೆ ನಿಯಮ 216(ಎ) ರೀತ್ಯ.
# ವ್ಯಕ್ತಿಯನ್ನು ತಾತ್ಕಾಲಿಕವಾಗಿ ಮಾಹೆಯಾನ ಸಂಬಳಕ್ಕಾಗಿ ಯಾವುದೇ ನಿರ್ದಿಷ್ಚ ಕಾಲಾವಧಿ/ಕರ್ತವ್ಯಕ್ಕಾಗಿ ನೇಮಿಸಿದ ಸೇವೆ ನಿಯಮ 216(ಬಿ) ರೀತ್ಯ.
# 18ವರ್ಷ ಒಳಪಟ್ಟ ಬಾಲ್ಯ ಸೇವೆ/ಅಪ್ರಾಪ್ತ ಸೇವೆ, (ನಿಯಮ 220ರ ರೀತ್ಯ)
# ಲೆಕ್ಕಕ್ಕಿಲ್ಲದ ರಜೆ
# ಅಭ್ಯಾಸಾವಧಿ
# ನೌಕರನ ಸೇವೆಯ ಒಪ್ಪಂದದ ಮೇರೆಗೆ ನಿವೃತ್ತಿವೇತನ ರಹಿತ ಸೇವೆಯೆಂದು ಷರತ್ತು ಹಾಕಿರುವ ಹುದ್ದೆ.
ಉಪಲಬ್ಧಗಳು
ಉಪಲಬ್ಧಗಳು ನಿವೃತ್ತಿ ವೇತನ, ಉಪದಾನ, ಕುಟುಂಬ ನಿವೃತ್ತಿ ವೇತನ, ಅಸಾಧಾರಣ ನಿವೃತ್ತಿವೇತನ ಸೌಲಭ್ಯಗಳ ಲೆಕ್ಕಾಚಾರ ಮಾಡಲು ಒಳಗೊಂಡಿರುತ್ತದೆ.
# ನಿವೃತ್ತಿ/ನಿಧನ ದಿನಾಂಕದಂದು ಪಡೆಯುತ್ತಿರುವ ಮೂಲ ವೇತನ 10 ತಿಂಗಳ ಸರಾಸರಿ ವೇತನ
# ಸ್ಥಗಿತ ವೇತನ ಬಡ್ತಿ: ಗರಿಷ್ಠ ವೇತನ ಶ್ರೇಣಿಗೂ ಮೀರಿದ ವೇತನ
# ವೈಯುಕ್ತಿಕ ವೇತನ: ಕ.ಸ.ಸೇ.ನಿ.ಪರಿಷ್ಕೃತ ವೇತನ ನಿಯಮಾವಳಿ 1999ರ ನಿಯಮ 7ರ ಉಪನಿಯಮ (3)ರ ಅಡಿಯಲ್ಲಿ
# ವಿಶೇಷ ಭತ್ಯೆ: ಶೀಘ್ರಲಿಪಿಗಾರರು, ಬೆರಳಚ್ಚುಗಾರರು, ವಾಹನ ಚಾಲಕರು ಹಾಗೂ ಲಿಫ್ಟ್ ಆಪರೇಟರ್ ಇವರ ಹುದ್ದೆಗೆ ಹೊಂದಿರುವ ವಿಶೇಷ ವೇತನ.
# ಹೆಚ್ಚುವರಿ ವೇತನ: ಹೆಚ್ಚುವರಿ ವಾರ್ಷಿಕ ವೇತನ ಬಡ್ತಿಯು ಗರಿಷ್ಠ ವೇತನ ಶ್ರೇಣಿ ತಲುಪಿದ ನಂತರ ನೀಡಿರುವಂತಹದ್ದು, ಇದು 1974ರ ಕನ್ನಡ ಭಾಷಾ ಪರೀಕ್ಷೆ ನಿಯಮ 6 ರೀತ್ಯಾ ನೀಡಿರುವಂತದ್ದಾಗಿರಬೇಕು. ್ಝ ನಿವೃತ್ತಿ ವೇತನ, ಉಪದಾನ, ಕುಟುಂಬ ನಿವೃತ್ತಿ ವೇತನ ಲೆಕ್ಕಾಚಾರಕ್ಕಾಗಿ ಉಪಲಬ್ಧಿಯನ್ನು ಸೀಮಿತಗೊಳಿಸಿರುವುದಿಲ್ಲ.
***
ನಿವೃತ್ತಿವೇತನದ ನಿಯಮಗಳು
Wednesday, 18.10.2017
| ಲ. ರಾಘವೇಂದ್ರ
ನಿವೃತ್ತ ನೌಕರರಿಗೆ ಜೀವಿತ ಅವಧಿವರೆಗೂ ಆವರ್ಥಕವಾಗಿ ವೇತನ ಬಟವಾಡೆಯಾಗಿರುತ್ತದೆ. ಉಪದಾನವು ನಿವೃತ್ತ ನೌಕರರಿಗೆ ಹಾಗೂ ಮೃತ ನೌಕರ/ಳ ಕುಟುಂಬವರ್ಗದವರಿಗೆ ನೀಡುವಂತಹ ಹಣ. ಕ.ಸ.ಸೇ.ನಿ. ನಿಯಮ 208ರ ರೀತ್ಯ ನಿವೃತ್ತಿವೇತನ ಉಪದಾನದಲ್ಲಿ ಸೇರುತ್ತದೆ. ಆದ್ದರಿಂದ ನಿವೃತ್ತಿವೇತನ ಮತ್ತು ಉಪದಾನವನ್ನು ಜತೆಗೆ ನೌಕರರು ಸಲ್ಲಿಸಿರುವ ಅರ್ಹಸೇವೆ ಹಾಗೂ ಉಪಲಬ್ಧಗಳ ಆಧಾರದ ಮೇಲೆ ಲೆಕ್ಕಾಚಾರ ಮಾಡಬಹುದು.
ನಿವೃತ್ತಿವೇತನ ವಿಧಗಳು: ನಿವೃತ್ತಿ ವೇತನಗಳನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಲಾಗಿದೆ. ಪರಿಹಾರ(ನಿಯಮ 259), ಅಶಕ್ತತಾ (ನಿಯಮ 273), ವಯೋ ನಿವೃತ್ತಿ ವೇತನ(ನಿಯಮ 283), ವಿಶ್ರಾಂತಿ(ನಿಯಮ 285)
ನಿವೃತ್ತಿ ವೇತನ ಮತ್ತು ಉಪದಾನ ಪಡೆಯಲು ಅರ್ಹ ವ್ಯಕ್ತಿಗಳು: ಕ.ಸ.ಸೇ.ನಿ. ನಿಯಮ 302ರ ರೀತ್ಯ ಹಾಗೂ ಕೆ.ಜಿ.ಎಸ್.(ಎಸ್.ಪಿ.)ನಿಯಮ 2002ರ ನಿಯಮ 7 ಪರಿಶಿಷ್ಟರ ರೀತ್ಯ ಪಿಂಚಣಿ ಮತ್ತು ಉಪದಾನ ಸೌಲಭ್ಯ ಪಡೆಯಲು ಈ ಕೆಳಕಂಡ ವ್ಯಕ್ತಿಗಳು ಅರ್ಹರು. ಕುಟುಂಬ ನಿವೃತ್ತಿಗಾಗಿ ಹೆಂಡತಿ, ಗಂಡ, ಅಪ್ರಾಪ್ತ ಮಕ್ಕಳು, ಅಪ್ರಾಪ್ತ ಅವಿವಾಹಿತ ಮಗಳು. ಉಪದಾನಕ್ಕಾಗಿ ಹೆಂಡತಿ, ಗಂಡ, ಮಕ್ಕಳು(ದತ್ತು ಮಕ್ಕಳು ಸೇರುತ್ತಾರೆ), ಅವಿವಾಹಿತ/ವಿಧವಾ/ವಿಚ್ಛೇದನ ಹೊಂದಿದ ಮಗಳು, ತಮ್ಮಂದಿರು 18 ವರ್ಷ ಒಳಗಿರುವವರು ಅವಿವಾಹಿತ/ವಿಧವಾ/ವಿಚ್ಛೇದಿತ ತಂಗಿಯರು, ತಂದೆ, ತಾಯಿ, ವಿವಾಹಿತ ಮಗಳು, ಮೃತನ ಮಗನ ಮಕ್ಕಳು.
ನಿವೃತ್ತಿ ವೇತನ ಪತ್ರಗಳನ್ನು ಯಾರಿಗೆ ಸಲ್ಲಿಸಬೇಕು?
ನಿವೃತ್ತ ಸರ್ಕಾರಿ ನೌಕರರಿಗೆ ಮತ್ತು ಸ್ಥಳೀಯ ಸಂಸ್ಥೆಯ ನೌಕರರಿಗೆ ನಿವೃತ್ತಿ ವೇತನ ಸೌಲಭ್ಯಗಳನ್ನು ಪ್ರಾಧೀಕರಿಸುವ ಸಲುವಾಗಿ ಭರ್ತಿ ಮಾಡಿದ ನಿವೃತ್ತಿ ವೇತನ ಪತ್ರಗಳನ್ನು ಬಟವಾಡೆ ಅಧಿಕಾರಿಗಳು/ಮಂಜೂರಾತಿ ಅಧಿಕಾರಿಗಳು ದೃಢೀಕರಿಸಿ ಸರ್ಕಾರಿ ಸುತ್ತೋಲೆ ಸಂಖ್ಯೆ ಎಫ್ಡಿ(ವಿಶೇಷ)2 ಸಿಪಿಸಿ 2002 ಬೆಂಗಳೂರು ದಿನಾಂಕ 19-1-2002ರ ರೀತ್ಯ ಆರು ತಿಂಗಳು ಮುಂಚಿತವಾಗಿ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಕಳುಹಿಸಬೇಕು. ಅಂತೆಯೇ ಪೂರ್ಣಪ್ರಮಾಣದ ನಿವೃತ್ತಿ ಕಡತಗಳನ್ನು ಪರಿಶೀಲಿಸಿ ನಿವೃತ್ತಿ ಪ್ರಾಧಿಕಾರವು ನಿವೃತ್ತ/ನಿಧನರಾದ ನೌಕರರ ಸಂಬಂಧ ನಿವೃತ್ತಿ ಪಾವತಿ ಆದೇಶ ಪತ್ರವನ್ನು 15 ದಿನ ಮುಂಚಿತವಾಗಿ ನೀಡಬೇಕು.
ಒಂದು ವೇಳೆ ನಿವೃತ್ತಿ ವೇತನ ಪತ್ರಗಳನ್ನು ತಡವಾಗಿ ಸಲ್ಲಿಸಿದಲ್ಲಿ ಸರ್ಕಾರಿ ಆದೇಶ ಸಂಖ್ಯೆ ಎಫ್ಡಿ(ವಿಶೇಷ) 199 ಪಿಇಎಸ್ 93ಬೆಂಗಳೂರು ದಿನಾಂಕ 13-9-94ರ ರೀತ್ಯ ತಡವಾಗಿ ಪಾವತಿಸಬಹುದಾದ ನಿವೃತ್ತಿ ವೇತನ, ಉಪದಾನ ಹಾಗೂ ಗಳಿಕೆ ರಜೆ ಮೊತ್ತಕ್ಕೆ ಶೇ.8ರಷ್ಟು ಬಡ್ಡಿ ನೀಡಬೇಕಾಗುತ್ತದೆ.
ಅರ್ಹದಾಯಕ ಸೇವೆಯ ಲೆಕ್ಕಾಚಾರಗಳು
ದಿನಾಂಕ 30-9-2003ರ ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ ಎಫ್ಡಿ 6 ಸನಿತಿ 2003ರಲ್ಲಿ ನಿವೃತ್ತಿ ವೇತನ ಪಡೆಯಲು ನಿಯಮ 222ರ ಉಪಬಂಧಗಳನ್ನು ಮಾರ್ಪಡಿಸಿ ಕನಿಷ್ಠ 10 ವರ್ಷ ಅರ್ಹತೆ ಸೇವೆ ಸಲ್ಲಿಸಬೇಕೆಂದು ಆದೇಶಿಸಿದೆ. ಈ ಆದೇಶವು ದಿನಾಂಕ 1-9-2003 ರಿಂದ ಜಾರಿಗೆ ಬಂದಿದೆ.
ಸರಳ ನಿಯಮ
# ಮೂರು ತಿಂಗಳು ಅವಧಿ ಸೇವೆಯ ಕಡಿಮೆ ಬೀಳುವ ಭಿನ್ನಾಂಕವನ್ನು ಕಡೆಗಣಿಸಬೇಕು.
# ಮೂರು ತಿಂಗಳು ಮೇಲ್ಪಟ್ಟು 9 ತಿಂಗಳು ಅವಧಿಯ ಸೇವೆಯನ್ನು ಒಂದು ಅರ್ಧವರ್ಷ ಎಂದು ಪರಿಗಣಿಸಬೇಕು.
# 9 ತಿಂಗಳು ಮತ್ತು ಅದಕ್ಕೂ ಮೇಲ್ಪಟ್ಟ ಅವಧಿಯ ಸೇವೆಯನ್ನು ಎರಡು ಅರ್ಧ ವರ್ಷ ಎಂದು ಪರಿಗಣಿಸಬೇಕು.
ಉದಾಹರಣೆಗಳು: # ಒಟ್ಟು ಅರ್ಹ ಸೇವೆಯು 31 ವರ್ಷ 1ತಿಂಗಳು 25 ದಿನಗಳಾಗಿದ್ದಲ್ಲಿ ಇದನ್ನು 31 ವರ್ಷ ಅಥವಾ 62 ಅರ್ಧ ವರ್ಷಗಳೆಂದು ಲೆಕ್ಕ ಹಾಕಬೇಕು.
# ಒಟ್ಟು ಅರ್ಹ ಸೇವೆಯು 31 ವರ್ಷ 7 ತಿಂಗಳು 20 ದಿನಗಳಾಗಿದ್ದಲ್ಲಿ ಇದನ್ನು 31 1/2 ವರ್ಷ ಅಥವಾ 63 ಅರ್ಧ ವರ್ಷ ಎಂದು ಲೆಕ್ಕ ಹಾಕಬೇಕು.
# ಒಟ್ಟು ಸೇವೆಯು 30 ವರ್ಷ 9 ತಿಂಗಳು 12 ದಿನಗಳಾಗಿದ್ದಲ್ಲಿ ಇದನ್ನು 31 ವರ್ಷ ಅಥವಾ 62 ಅರ್ಧ ವರ್ಷಗಳೆಂದು ಲೆಕ್ಕ ಹಾಕಬೇಕು.
# ಅರ್ಹ ಸೇವೆಯು 35 ವರ್ಷ 6 ತಿಂಗಳು 18 ದಿನಗಳಾಗಿದ್ದಲ್ಲಿ ಇದನ್ನು ಗರಿಷ್ಠ 33 ವರ್ಷ ಅಥವಾ 66 ಅರ್ಧ ವರ್ಷಗಳಿಗೆ ಸೀಮಿತಗೊಳಿಸಿ ಲೆಕ್ಕ ಹಾಕಬೇಕು.
ಉಪಲಬ್ಧಗಳು (ನಿಯಮ 296 ಬಿ. ರೀತ್ಯಾ)
ಉಪಲಬ್ಧಗಳು ನಿವೃತ್ತಿ ವೇತನ, ಉಪದಾನ, ಕುಟುಂಬ ನಿವೃತ್ತಿ ವೇತನ, ಅಸಾಧಾರಣ ನಿವೃತ್ತಿವೇತನ ಸೌಲಭ್ಯಗಳ ಲೆಕ್ಕಾಚಾರ ಮಾಡಲು ಒಳಗೊಂಡಿರುತ್ತದೆ.
# ನಿವೃತ್ತಿ/ನಿಧನ ದಿನಾಂಕದಂದು ಪಡೆಯುತ್ತಿರುವ ಮೂಲ ವೇತನ 10 ತಿಂಗಳ ಸರಾಸರಿ ವೇತನ
# ಸ್ಥಗಿತ ವೇತನ ಬಡ್ತಿ: ಗರಿಷ್ಠ ವೇತನ ಶ್ರೇಣಿಗೂ ಮೀರಿದ ವೇತನ
# ವೈಯುಕ್ತಿಕ ವೇತನ: ಕ.ಸ.ಸೇ.ನಿ.ಪರಿಷ್ಕೃತ ವೇತನ ನಿಯಮಾವಳಿ 1999ರ ನಿಯಮ 7ರ ಉಪನಿಯಮ (3)ರ ಅಡಿಯಲ್ಲಿ
# ವಿಶೇಷ ಭತ್ಯೆ: ಶೀಘ್ರಲಿಪಿಗಾರರು, ಬೆರಳಚ್ಚುಗಾರರು, ವಾಹನ ಚಾಲಕರು ಹಾಗೂ ಲಿಫ್ಟ್ ಆಪರೇಟರ್ ಇವರ ಹುದ್ದೆಗೆ ಹೊಂದಿರುವ ವಿಶೇಷ ವೇತನ.
# ಹೆಚ್ಚುವರಿ ವೇತನ: ಹೆಚ್ಚುವರಿ ವಾರ್ಷಿಕ ವೇತನ ಬಡ್ತಿಯು ಗರಿಷ್ಠ ವೇತನ ಶ್ರೇಣಿ ತಲುಪಿದ ನಂತರ ನೀಡಿರುವಂತಹದ್ದು, ಇದು 1974ರ ಕನ್ನಡ ಭಾಷಾ ಪರೀಕ್ಷೆ ನಿಯಮ 6 ರೀತ್ಯಾ ನೀಡಿರುವಂತದ್ದಾಗಿರಬೇಕು.
#ನಿವೃತ್ತಿ ವೇತನ, ಉಪದಾನ, ಕುಟುಂಬ
# ನಿವೃತ್ತಿ ವೇತನ ಲೆಕ್ಕಾಚಾರಕ್ಕಾಗಿ ಉಪಲಬ್ಧಿಯನ್ನು ಸೀಮಿತಗೊಳಿಸಿರುವುದಿಲ್ಲ.
ನಿವೃತ್ತಿ ವೇತನ ಮೊತ್ತವನ್ನು ಹತ್ತಿರದ ರೂಪಾಯಿಗೆ ಲೆಕ್ಕಹಾಕುವುದು
ನಿವೃತ್ತಿ ವೇಳೆ ನಿವೃತ್ತಿವೇತನವನ್ನು ಸೌಲಭ್ಯ ಮಂಜೂರಿಗೆ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನ ಮೊತ್ತ ರೂಪಾಯಿಗಿಂತ ಭಿನ್ನಾಂಕವಾಗಿದ್ದರೂ ಅಧಿಕೃತ ಜ್ಞಾಪನ ಸಂಖ್ಯೆ ಎಫ್ಡಿ ವಿಶೇಷ: ಪಿಇಟಿ 84 ಬೆಂಗಳೂರು, ದಿನಾಂಕ 7-1-84ರ ರೀತ್ಯ ಹತ್ತಿರದ ರೂಪಾಯಿಗೆ ಲೆಕ್ಕಹಾಕಬೇಕು.
ನಿವೃತ್ತಿ ವೇತನ ಮತ್ತು ಉಪದಾನ ಪಡೆಯಲು ಅರ್ಹವಲ್ಲದ ಸೇವೆಗಳು:
# ನಿಗದಿತ ಅವಧಿಗಾಗಿ/ನಿರ್ದಿಷ್ಟ ಕರ್ತವ್ಯಕ್ಕಾಗಿ ನೇಮಕಗೊಂಡ ನೌಕರನ ಸೇವೆ ನಿಯಮ 216(ಎ) ರೀತ್ಯ.
# ವ್ಯಕ್ತಿಯನ್ನು ತಾತ್ಕಾಲಿಕವಾಗಿ ಮಾಹೆಯಾನ ಸಂಬಳಕ್ಕಾಗಿ ಯಾವುದೇ ನಿರ್ದಿಷ್ಚ ಕಾಲಾವಧಿ/ಕರ್ತವ್ಯಕ್ಕಾಗಿ ನೇಮಿಸಿದ ಸೇವೆ ನಿಯಮ 216(ಬಿ) ರೀತ್ಯ.
# 18ವರ್ಷ ಒಳಪಟ್ಟ ಬಾಲ್ಯ ಸೇವೆ/ಅಪ್ರಾಪ್ತ ಸೇವೆ,(ನಿಯಮ 220ರ ರೀತ್ಯ)
#ಲೆಕ್ಕಕ್ಕಿಲ್ಲದ ರಜೆ
# ಅಭ್ಯಾಸಾವಧಿ
# ನೌಕರನ ಸೇವೆಯ ಒಪ್ಪಂದದ ಮೇರೆಗೆ ನಿವೃತ್ತಿವೇತನ ರಹಿತ ಸೇವೆಯೆಂದು ಷರತ್ತು ಹಾಕಿರುವ ಹುದ್ದೆ.
****
ನೌಕರರ ನಿವೃತ್ತಿ ವೇತನದ ನಿಯಮಗಳುWednesday, 27.09.2017,
ಸರ್ಕಾರಿ ನೌಕರರು 1958ರ ಏಪ್ರಿಲ್ 1ರಿಂದ 2006ರ ಮಾರ್ಚ್ 31ರವರೆಗೆ ಸರ್ಕಾರಿ ಸೇವೆಗೆ ಸೇರಿದ್ದರೆ ಅಂತಹವರಿಗೆ ಹಳೆಯ ಪಿಂಚಣಿ ಸೌಲಭ್ಯ ನೀಡಲಾಗುತ್ತದೆ. ಆದರೆ 2006ರ ಏಪ್ರಿಲ್ 1ರಿಂದ ಸರ್ಕಾರಿ ಸೇವೆಗೆ ಸೇರಿದ ಸರ್ಕಾರಿ ನೌಕರನಿಗೆ ನೂತನ ಪಿಂಚಣಿ ಸೌಲಭ್ಯಗಳನ್ನು ನೀಡಲಾಗುವುದು. ಈ ಕೆಳಗೆ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಸೌಲಭ್ಯಗಳ ಬಗ್ಗೆ ವಿವರ ನೀಡಲಾಗಿದೆ.
ನಿವೃತ್ತಿ ವೇತನದ ಬಗ್ಗೆ ಗಮನಿಸ ಬೇಕಾದ ಅಂಶಗಳು:
ನಿವೃತ್ತಿ ವೇತನ ಸೌಲಭ್ಯಗಳುಳ್ಳ ಸಿಬ್ಬಂದಿ ವರ್ಗದ ಸೇವೆಯನ್ನು ಮಾತ್ರ ನಿವೃತ್ತಿ ವೇತನ ಸೌಲಭ್ಯಗಳಿಗೆ ಪರಿಗಣಿಸಲಾಗುವುದು.
ಪೂರ್ಣ ಪ್ರಮಾಣದ ಪಿಂಚಣಿ ಸೌಲಭ್ಯಗಳನ್ನು ಪಡೆಯಲು ಉದ್ಯೋಗಿಯ ಸೇವೆ ಸಂಪೂರ್ಣವಾಗಿ ತೃಪ್ತಿಕರವಾಗಿರಬೇಕು.
ನಿವೃತ್ತಿಯ ನಂತರವೂ ಉದ್ಯೋಗಿ ಸನ್ನಡತೆಯವನಾಗಿ ಇರಬೇಕೆಂಬುದು ನಿವೃತ್ತಿ ವೇತನ ನಿಯಮಗಳ ಸೂಚ್ಯ ಷರತ್ತು.
ದುರ್ನಡತೆ, ಅಧಕ್ಷತೆ ಹಾಗೂ ದಿವಾಳಿತನದ ಕಾರಣಕ್ಕಾಗಿ ಸೇವೆಯಿಂದ ವಜಾ ಮಾಡಿದ ಉದ್ಯೋಗಿಗೂ, ವಿಶೇಷ ಸಂದರ್ಭಗಳಲ್ಲಿ ‘ಅನುಕಂಪಭತ್ಯೆ’ಯನ್ನು ಸರ್ಕಾರ ಮಂಜೂರು ಮಾಡಬಹುದು.
ನಿವೃತ್ತಿ ವೇತನ ತಡೆಹಿಡಿಯುವುದು, ಹಿಂಪಡೆಯುವುದು ಹಾಗೂ ಕಡಿತಗೊಳಿಸುವುದು ಸರ್ಕಾರದ ಅಧಿಕಾರಕ್ಕೆ ಒಳಪಟ್ಟಿದೆ.
ಇಲಾಖಾ/ನ್ಯಾಯಾಂಗ ವಿಚಾರಣೆಗೆ ಒಳಪಟ್ಟ ಉದ್ಯೋಗಿ 60 ವರ್ಷ ತಲುಪಿ ನಿವೃತ್ತಿ ಹೊಂದಿದ ಪ್ರಕರಣದಲ್ಲಿ ‘ತಾತ್ಕಾಲಿಕ ಪಿಂಚಣಿ’ ಮಂಜೂರು ಮಾಡಲಾಗುವುದು.
ನಿವೃತ್ತಿ ವೇತನ ಸೌಲಭ್ಯಗಳ ಇತ್ಯರ್ಥ ವಿಳಂಬವಾಗುವುದು ಕಂಡುಬಂದಲ್ಲಿ ನಿರೀಕ್ಷಣಾ ನಿವೃತ್ತಿ ಮತ್ತು ನಿರೀಕ್ಷಣಾ ಉಪದಾನವನ್ನು ಸಂದಾಯ ಮಾಡಬಹುದು.
ಉದ್ಯೋಗಿ ನಿವೃತ್ತನಾದ ನಂತರವೂ ನಾಲ್ಕು ವರ್ಷಗಳೊಳಗೆ ಸಂಭವಿಸಿದ ಘಟನೆಗಳ ಬಗ್ಗೆ ಸರ್ಕಾರದ ಪೂರ್ವಾನುಮತಿ ಪಡೆದು ಇಲಾಖಾ ವಿಚಾರಣೆಗೆ ಹೂಡಬಹುದು.
ಸರ್ಕಾರಕ್ಕೆ ಅಥವಾ ಸರ್ಕಾರೇತರ ಸಂಸ್ಥೆಗಳಿಗೆ ಬರಬೇಕಾದ ಬಾಕಿಗಳನ್ನು ನಿವೃತ್ತಿ ವೇತನ ಪರಿವರ್ತಿತ ನಿವೃತ್ತಿ ವೇತನದ ಮೊಬಲಗುಗಳಿಂದ ಹಾಗೂ ಕುಟುಂಬ ನಿವೃತ್ತಿಯಿಂದ ವಸೂಲಿಗೆ ಅವಕಾಶವಿಲ್ಲ.
ನಿವೃತ್ತಿ/ಮರಣ ಉಪದಾನ ಮತ್ತು ಗಳಿಕೆ ರಜೆ ನಗದೀಕರಣದ ವೇತನದಿಂದ, ಸರ್ಕಾರಕ್ಕೆ ಬರಬೇಕಾದ ಬಾಕಿಗಳನ್ನು ಉದ್ಯೋಗಿಯ/ಕುಟುಂಬದ ಒಪ್ಪಿಗೆಯಿಲ್ಲದೆಯೂ ವಸೂಲಿ ಮಾಡಬಹುದು.
ಸಾಲದ ವಸೂಲಾತಿಗಾಗಿ ನಿವೃತ್ತಿ ವೇತನ, ಪರಿವರ್ತಿತ ನಿವೃತ್ತಿ ವೇತನದ ಮೊಬಲಗು, ಉಪದಾನಗಳನ್ನು ಜಪ್ತಿ ಮಾಡಲು ಅವಕಾಶವಿಲ್ಲ.
ನಿವೃತ್ತಿ/ಮರಣ ಉಪದಾನ, ನಿವೃತ್ತಿ ವೇತನದ ಪರಿವರ್ತಿತಾ ಮೊಬಲಗು ನಿವೃತ್ತಿ ಅಥವಾ ಮರಣದ ವೇಳೆಯಲ್ಲಿ ಗಳಿಕೆ ರಜೆ ನಗದೀಕರಿಸಿದ ರಜಾ ವೇತನ – ಇವುಗಳು ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡುವುದಿಲ್ಲ.
ಮಾನಸಿಕ ಅಸ್ವಸ್ಥತೆ ಅಥವಾ ದೈಹಿಕ ಅಸಮರ್ಥತೆಯ ಮಕ್ಕಳಿಗೆ ಜೀವನ ಪರ್ಯಂತ ಕುಟುಂಬ ಪಿಂಚಣಿ ಸಂದಾಯ ಮಾಡಲಾಗುವುದು.
ವಿಚ್ಛೇದನ ಪಡೆದ ಪತಿ/ಪತ್ನಿ ಹಾಗೂ ಮರು ಮದುವೆಯಾದ ವಿಧುರ/ವಿಧವೆಯರು ಕುಟುಂಬ ಪಿಂಚಣಿಗೆ ಅರ್ಹರಲ್ಲ.
ಕಾನೂನಿನ್ವಯ ಬೇರೊಬ್ಬ ಪತ್ನಿ ಹೊಂದಿರುವ ಪುರುಷ ಕುಟುಂಬ ಪಿಂಚಣಿಗೆ ಅರ್ಹನಲ್ಲ.
ನಿವೃತ್ತಿಯ ನಂತರ ಮದುವೆಯಾದ ಪಿಂಚಣಿದಾರನ ಪತ್ನಿ ಕುಟುಂಬ ಪಿಂಚಣಿಗೆ ಅರ್ಹಳು.
ಉದ್ಯೋಗಿಯ ಕೊಲೆಗೆ ಕಾರಣರಾದ ಅಥವಾ ದುಷ್ಪೇರಣೆ ನೀಡಿದ ಕುಟುಂಬದ ಸದಸ್ಯರಿಗೆ ಕುಟುಂಬ ಪಿಂಚಣಿ ಮತ್ತು ಉಪದಾನದ ಸಂದಾಯಕ್ಕೆ ಅವಕಾಶವಿಲ್ಲ.
ಕಾಣೆಯಾದ ಸರ್ಕಾರಿ ಉದ್ಯೋಗಿಯ ಕುಟುಂಬಕ್ಕೆ ಕುಟುಂಬ ಪಿಂಚಣಿ ಮತ್ತಿತರ ಸೌಲಭ್ಯಗಳನ್ನು ಮಂಜೂರು ಮಾಡಬಹುದು.
ನಿವೃತ್ತಿಯನ್ನು 1/3ನೇ ಭಾಗದವರೆಗೆ ಪರಿವರ್ತಿಸಿ ಇಡುಗಂಟಿನಲ್ಲಿ ಪಡೆಯಬಹುದು. 15 ವರ್ಷ ಪೂರ್ಣಗೊಂಡ ನಂತರ ಮೂಲ ನಿವೃತ್ತಿ ಸಂದಾಯ ಮಾಡಲಾಗುವುದು.
ನಿವೃತ್ತಿ ವೇತನ ಸೌಲಭ್ಯಗಳ ಇತ್ಯರ್ಥದ ವಿಳಂಬಕ್ಕೆ ಶೇ.12 ಬಡ್ಡಿ ಪಾವತಿಸಬೇಕು.
ಉದ್ಯೋಗಿಯಿಂದ ಸರ್ಕಾರಕ್ಕೆ ಬರಬೇಕಾದ ಬಾಕಿಯನ್ನು ಕಾಲ ಮಿತಿಯಲ್ಲಿ ನಿರ್ಧರಿಸದೆ ಸರ್ಕಾರಕ್ಕೆ ಉಂಟಾಗುವ ಆರ್ಥಿಕ ನಷ್ಟಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಜವಾಬ್ದಾರರು.
ಕಚೇರಿ ಮುಖ್ಯಸ್ಥರು ಪತ್ರಾಂಕಿತರಲ್ಲದ ಅಧಿಕಾರಿಗಳ ಪಿಂಚಣಿ ದಾಖಲೆಗಳನ್ನು ಮಹಾಲೇಖಪಾಲರಿಗೆ ರವಾನಿಸಬೇಕು. ಪತ್ರಾಂಕಿತ ಅಧಿಕಾರಿಗಳು ನೇರವಾಗಿ ಮಹಾಲೇಖಪಾಲರಿಗೆ ರವಾನಿಸಬಹುದು. ಅನ್ಯಸೇವೆಯಲ್ಲಿನ ಎಲ್ಲ ಸರ್ಕಾರಿ ಅಧಿಕಾರಿಗಳ ಪಿಂಚಣಿ ದಾಖಲೆಗಳನ್ನು ಇಲಾಖಾ ಮುಖ್ಯಸ್ಥರ ಮೂಲಕ ರವಾನಿಸಬೇಕು.
ಪತ್ರಾಂಕಿತರಲ್ಲದ ಉದ್ಯೋಗಿಗಳ ಪಿಂಚಣಿ ದಾಖಲೆಗಳನ್ನು ಮುಷ್ಕರದ ಅವಧಿಯನ್ನು ಸರ್ಕಾರ ರಜೆಯೆಂದು ಪರಿಗಣಿಸದಿದ್ದಲ್ಲಿ ಉದ್ಯೋಗಿಯ ಹಿಂದಿನ ಸೇವೆಯನ್ನು ನಿವೃತ್ತಿ ವೇತನ ಸೌಲಭ್ಯಗಳಿಗೆ ಅರ್ಹ ಸೇವೆಗಾಗಿ ಪರಿಗಣಿಸುವಂತಿಲ್ಲ.
***
ಸೇವಾ ದಾಖಲೆ ನಿರ್ವಹಣೆ ನಿಯಮಗಳು
13.09.2017.
| ಲ. ರಾಘವೇಂದ್ರ
ಗೆಜೆಟೆಡ್ ಮತ್ತು ನಾನ್ ಗೆಜೆಟೆಡ್ ನೌಕರರ ಸೇವಾ ದಾಖಲು ಮಾಡುವುದರಿಂದ ನಿವೃತ್ತಿ ವೇತನದ ದಾಖಲೆ ತಯಾರಿಸಲು ಮತ್ತು ನಿವೃತ್ತಿ ವೇತನ ಲೆಕ್ಕ ಮಾಡಲು ಸಹಾಯವಾಗುತ್ತದೆ. ಗೆಜೆಟೆಡ್ ಅಧಿಕಾರಿಯ ಸೇವಾ ಪುಸ್ತಕವನ್ನು ಮಹಾಲೇಖಪಾಲರೂ, ನಾನ್ ಗೆಜೆಟೆಡ್ ನೌಕರರ ಸೇವಾ ಪುಸ್ತಕವನ್ನು ಕಚೇರಿ ಮುಖ್ಯಸ್ಥರು ತಯಾರಿಸಬೇಕು.
ಪ್ರತಿ ಸರ್ಕಾರಿ ನೌಕರನು ಕೆಲಸಕ್ಕೆ ಸೇರುವ ಮೊದಲು ಸರ್ಕಾರಿ ಖರ್ಚಿನಲ್ಲಿ ನಮೂನೆ 1ರಿಂದ ಸೇವಾ ಪುಸ್ತಕದಲ್ಲಿ ಕೆಳಕಂಡ ಅಂಶಗಳನ್ನು ಎಚ್ಚರಿಕೆಯಿಂದ ಬರೆಯಬೇಕಿದೆ.
1. ಸರ್ಕಾರಿ ನೌಕರನು ಮೊದಲು ಕೆಲಸಕ್ಕೆ ಹಾಜರಾದ ದಿನಾಂಕವನ್ನು ಬೆಳಗ್ಗೆ, ಮಧ್ಯಾಹ್ನವೇ ಸಮಸಹಿತ ಸೇವಾ ಪುಸ್ತಕದಲ್ಲಿ ಬರೆಯಬೇಕು.
2. ಸೇವಾ ಪುಸ್ತಕ ಕಚೇರಿ ಮುಖ್ಯಸ್ಥನ ಸುಪರ್ದಿನಲ್ಲಿರತಕ್ಕದ್ದು ಮತ್ತು ವರ್ಗವಾದಾಗ ಒಂದು ಕಚೇರಿಯಿಂದ ಇನ್ನೊಂದು ಕಚೇರಿಗೆ ಪೂರ್ತಿ ವಿವರಗಳೊಡನೆ ಕಳುಹಿಸುವುದು.
3. ಎಲ್ಲಾ ತರಹದ ಕಾರ್ಯನಿರ್ವಹಣೆ, ಬಡ್ತಿ ಮತ್ತು ಹಂಗಾಮಿ ಬಡ್ತಿಗಳನ್ನು ನಮೂದಿಸಬೇಕು.
4. ಪರೀಕ್ಷಾರ್ಥವಾಗಿ ನಿಗದಿಪಡಿಸಿದ ಸಮಯವನ್ನು ತೃಪ್ತಿಕರವಾಗಿ ಮಾಡಿದ್ದಾನೆಂಬುದನ್ನು ನಮೂದಿಸಬೇಕು.
5. ಸಂಬಳ ಬಡ್ತಿ ವರ್ಗಾವಣೆ ಮತ್ತು ರಜೆ ಬರೆಯಬೇಕು.
6. ಸೇವಾ ಪುಸ್ತಕದಲ್ಲಿ ದಾಖಲಿಸಿದ ಬರಹವನ್ನು ಕಚೇರಿ ಮುಖ್ಯಸ್ಥ ತನ್ನ ಸಹಿಯ ಮೂಲಕ ದೃಢಪಡಿಸಬೇಕು. ಸರ್ಕಾರಿ ನೌಕರನೇ ಮುಖ್ಯಸ್ಥನಾದಲ್ಲಿ ಆತನ ಮೇಲಧಿಕಾರಿಯು ದೃಢೀಕರಿಸಬೇಕು.
7. ಪ್ರತಿಯೊಂದು ದಾಖಲೆಯನ್ನು ಇಲಾಖಾ ಆದೇಶ ಪೇ ಬಿಲ್ ಮತ್ತು ರಜೆ ಪಟ್ಟಿಗಳಿಂದ ಪರೀಕ್ಷಿಸತಕ್ಕದ್ದು.
8. ಕಚೇರಿಯ ಗೆಜೆಟೆಡ್ ಸಹಾಯಕರಿಗೆ ಈ ದೃಡೀಕರಿಸುವುದನ್ನು ವಹಿಸಬಹುದು.
9. ತಿದ್ದುಪಡಿ ಮತ್ತು ಮೇಲ್ಬರವಣಿಗೆಗಳನ್ನು ಬರೆದುದನ್ನು ಸಹಿ ಮೂಲಕ ದೃಢೀಕರಿಸತಕ್ಕದ್ದು.
10. ಇಲಾಖಾ ಪರೀಕ್ಷೆಗಳಲ್ಲಿ ಸರ್ಕಾರಿ ನೌಕರನು ತೇರ್ಗಡೆಯಾಗಿದ್ದರೆ ಸೇವಾ ಪುಸ್ತಕದಲ್ಲೂ ನಮೂದಿಸಬೇಕು. ತೇರ್ಗಡೆಯಾದವರ ರಿ.ನಂಬರ್ ಪ್ರಕಟಿಸಿದ ಗೆಜೆಟ್ನ ದಿನಾಂಕ ಬರೆಯಬೇಕು.
11. ತಾತ್ಕಾಲಿಕ, ಕಾಯಂ ಸೇವೆಗಳನ್ನು ನಿವೃತ್ತಿ ಸೇವೆಗೆ ತೆಗೆದá-ಕೊಳ್ಳಲು ನಿರ್ಧರಿಸಲು ಆಡಿಟ್ ಕಚೇರಿಯವರಿಗೆ ಸಹಾಯವಾಗá-ವಂಥ ವಿವರಗಳನ್ನು ಕಚೇರಿ ಮುಖ್ಯಸ್ಥ ಒದಗಿಸಬೇಕು.
12. ಸರ್ಕಾರಿ ನೌಕರನನ್ನು ಕೆಳದರ್ಜೆಗೆ ಇಳಿಸಿದಾಗ, ವಜಾ ಮಾಡಿದಾಗ ಇನ್ನಿತರ ಶಿಕ್ಷೆ ವಿಧಿಸಿದಾಗ ಸೂಕ್ಷ್ಮವಿವರ ನಮೂದಿಸಬೇಕು. ಇವುಗಳ ಆದೇಶಗಳನ್ನು ಸೇವಾ ಪುಸ್ತಕದಲ್ಲಿ ಲಗತ್ತಿಸಲಾಗá-ವುದು.
13. ಕಡ್ಡಾಯ ನಿವೃತ್ತಿ ತೆಗೆದು ಹಾಕá-ವುದು ಅಥವಾ ವಜಾ ಮಾಡá-ವಂತೆ ನಿವೃತ್ತಿಯ ಗಣನೆಗೆ ಬರುವ ವಿಷಯಗಳು ಹಿಂದಿನ ಸೇವಾ ಅವಧಿಯಲ್ಲಿದ್ದವೇ ಅಥವಾ ಇಲ್ಲವೆ ಎಂಬá-ದನ್ನು ಸ್ಪಷ್ಟವಾಗಿ ಸೇವಾ ಪುಸ್ತಕದಲ್ಲಿ ತಿಳಿಸತಕ್ಕದ್ದು.
14. ರಜೆಯ ಲೆಕ್ಕಗಳನ್ನು ಕಚೇರಿಯ ಮುಖ್ಯಸ್ಥ ಸಹಿಯೊಂದಿಗೆ ದೃಢೀಕರಿಸಬೇಕು.
15. ಹೊಸ ಪೇಸ್ಕೇಲ್, ರಜೆ ನಿಯಮ, ನಿವೃತ್ತಿ ನಿಯಮ ಅಥವಾ ಇನ್ನಿತರೆ ಷರತ್ತುಗಳ ಒಪ್ಪಿಗೆಗಳನ್ನು ಲಗತ್ತಿಸತಕ್ಕದ್ದು.
16. ಹುಟ್ಟಿದ ದಿನಾಂಕಕ್ಕೆ ಸಂಬಂಧಿಸಿದ ಪತ್ರಗಳಿಂದ ಪರಿಶೀಲಿಸಿದ ದೃಢೀಕರಣ ಪತ್ರ ಪಡೆಯಬೇಕು.
17. ಗುರುತಿಗೋಸ್ಕರ ಬೆರಳಚ್ಚು ಮತ್ತು ವ್ಯಕ್ತಿಯ ಚಿಹ್ನೆ – ವಿವರ ನಮೂದಿಸಬೇಕು.
18. ವರ್ಷಕ್ಕೆ ಒಂದು ಸಲ ಕಚೇರಿ ಮುಖ್ಯಸ್ಥ ನೌಕರನಿಗೆ ಸೇವಾ ಪುಸ್ತಕ, ವಿವರಗಳನ್ನು ಪರಿಶೀಲಿಸಲು ನೀಡಬೇಕು.
19. ಸರ್ಕಾರಿ ನೌಕರನ ನಿವೃತ್ತಿ, ರಾಜೀನಾಮೆ ಅಥವಾ ಸೇವೆಯಿಂದ ಕೊನೆಗೊಳಿಸಿದಾಗ ಸೇವಾ ಪುಸ್ತಕವನ್ನು ವಾಪಸ್ಸು ಕೊಡಲಾಗದು.
20. ಸರ್ಕಾರಿ ನೌಕರರನ್ನು ಸೇವೆಯಿಂದ ತೆಗೆದಾಗ ಅಥವಾ ವಜಾ ಮಾಡಿದಾಗ 5 ವರ್ಷದವರೆಗೆ ಸೇವಾ ಪುಸ್ತಕ ಇಟ್ಟಿರಬೇಕು.
21. ಸೇವಾ ಪುಸ್ತಕವನ್ನು ಕಚೇರಿ ಮುಖ್ಯಸ್ಥ ಅಥವಾ ಇತರೆ ಅಧಿಕೃತ ಅಧಿಕಾರಿಯು ವರ್ಷದ ಪರಿಶೀಲಿಸಬೇಕು.
22. ಸರ್ಕಾರಿ ನೌಕರನ 25ವರ್ಷ ಪೂರ್ಣ ಸೇವೆಗೊಳಿಸಿದ ನಂತರ ಮಹಾಲೇಖಪಾಲ (ಎ.ಜಿ.)ರಿಂದ ಪುಸ್ತಕ ಪರಿಶೀಲಿಸಬೇಕು.
23. ಕಚೇರಿ ಮುಖ್ಯಸ್ಥನು ಸೇವಾ ಪುಸ್ತಕದ ಎರಡನೇ ಪ್ರತಿ ತಯಾರಿಸಿ ಎಲ್ಲಾ ವಿವರ ದೃಢೀಕರಿಸಿ ನೌಕರನೇ ಎರಡನೇ ಪ್ರತಿ ತಯಾರಿಸಲು ಬರುವ ತೊಂದರೆ ತಪ್ಪಿಸಬಹುದು.
24. ಸರ್ಕಾರಿ ನೌಕರನು ಸೇವೆಗೆ ಸೇರಿ ಒಂದು ತಿಂಗಳಿಗೆ ಕಚೇರಿ ಮುಖ್ಯಸ್ಥನಿಗೆ ತನ್ನ ಕುಟುಂಬ ಸದಸ್ಯರ ವಿವರಗಳನ್ನು ಕ.ಸ.ಸೇ. (ಕು.ನಿ.) ನಿಯಮ 7ರಲ್ಲಿ ಸೂಚಿಸಿರುವಂತೆ ಒದಗಿಸಬೇಕು.
***
ಪರೀಕ್ಷಾ ರಜೆ ಪ್ರಸೂತಿ ರಜೆ
30.08.2017.
| ಲ. ರಾಘವೇಂದ್ರ
ಪರೀಕ್ಷಾ ರಜೆ (Examination Leave): ನಿಗದಿಪಡಿಸಿದ ಇಲಾಖಾ ಪರೀಕ್ಷೆಯ ಸಂಬಂಧದಲ್ಲಿ ಪರೀಕ್ಷೆಗೆ ಹಾಜರಾಗಲು ಆತನ ಸೇವಾವಧಿಯಲ್ಲಿ 2 ಬಾರಿ ಮಾತ್ರ ಅನುಮತಿ ನೀಡಲಾಗುವುದು ಆದರೆ ರಾಜ್ಯ ಲೆಕ್ಕಪತ್ರ ಇಲಾಖೆಯ ಎಸ್ಎಎಸ್ ಹಾಗೂ ಖಜಾನೆ ಇಲಾಖೆಯ ಟ್ರೆಝುರಿ ಹೆಡ್ ಅಕೌಂಟಂಟ್ ಪರೀಕ್ಷೆಗೆ ಹಾಜರಾಗಲು 3 ಬಾರಿ ಅನುಮತಿ ನೀಡಲಾಗುವುದು. ಈ ಸಂದರ್ಭಗಳಲ್ಲಿ ಪರೀಕ್ಷೆ ದಿನ ಮತ್ತು ಪ್ರಯಾಣದ ದಿನಗಳಿಗೆ ರಜೆ ನೀಡಲಾಗುವುದು.
ಪ್ರಸೂತಿ ರಜೆ (Maternity Leave): ಎರಡು ಅಥವಾ ಹೆಚ್ಚು ಜೀವಂತ ಮಕ್ಕಳನ್ನು ಹೊಂದಿರದ ವಿವಾಹಿತ ಸರ್ಕಾರಿ ನೌಕರಳಿಗೆ ಪ್ರಸೂತಿ ರಜೆಯನ್ನು ಅದರ ಆರಂಭದ ದಿನಾಂಕದಿಂದ 180 ದಿನಗಳು ನೀಡಬಹುದು. ಈ ಅವಧಿಯಲ್ಲಿ ಅವಳು ರಜೆಯ ಮೇಲೆ ಹೋಗುವ ನಿಕಟಪೂರ್ವದಲ್ಲಿ ಆಕೆ ಪಡೆಯುತ್ತಿದ್ದ ವೇತನಕ್ಕೆ ಸಮನಾದ ರಜಾವೇತನವನ್ನು ನೀಡಲಾಗುವುಗು. (ಕ.ಸ.ಸೇ.ನಿ. 135(1).
ಇದನ್ನು ವೊಕೆಷನ್ ರಜೆ ಅಥವಾ ಇನ್ನಾವುದೇ ರೀತಿಯ ರಜೆಯೊಂದಿಗೆ ಸೇರಿಸಬಹುದು. ವೈದ್ಯಕೀಯ ಪ್ರಮಾಣಪತ್ರವನ್ನು ಹಾಜರುಪಡಿಸದೆ ಇದ್ದರೂ 60 ದಿನಗಳಿಗೆ ಮೀರದಂತೆ ರಜೆಯನ್ನು ಮಂಜೂರು ಮಾಡಬಹುದು (ಕ.ಸ.ಸೇ.ವಿ. 135 (4ಎ) ಪ್ರಸೂತಿ ರಜೆಯನ್ನು ಯಾವುದೇ ರಜೆಯ ಲೆಕ್ಕದಿಂದ ಕಳೆಯತಕ್ಕದ್ದಲ್ಲ. (ಕ.ಸ.ಸೇ.ವಿ. 135 (4ಬಿ).
ಗರ್ಭಸ್ರಾವ ಅಥವಾ ಗರ್ಭಪಾತ ರಜೆ (Medical Termination Leave): ವೈದ್ಯಕೀಯ ಪರ್ಯವಸಾನ ಅಧಿನಿಯಮ 71ರ ಮೇರೆಗೆ ಪ್ರೇರಣೆಯಿಂದ ಮಾಡಿಸಿಕೊಂಡ ಗರ್ಭಪಾತವು ಸೇರಿದಂತೆ ಗರ್ಭಸ್ರಾವ ಅಥವಾ ಗರ್ಭಪಾತವಾದಾಗ ವೈದ್ಯಕೀಯ ಪ್ರಮಾಣ ಪತ್ರದ ಆಧಾರದಿಂದ 2 ಅಥವಾ ಹೆಚ್ಚು ಜೀವಂತ ಮಕ್ಕಳನ್ನು ಹೊಂದಿರದ ವಿವಾಹಿತ ಸರ್ಕಾರಿ ನೌಕರಳಿಗೆ 6 ವಾರಗಳಿಗೆ ಮೀರದಂತೆ ಮಂಜೂರು ಮಾಡಬಹುದು. (ಕ.ಸ.ಸೇ.ವಿ. 135 (2ಎ, ಬಿ, 3)
ಮಗುವನ್ನು ದತ್ತು ತೆಗೆದುಕೊಂಡಾಗ ಮಹಿಳಾ ಸರ್ಕಾರಿ ನೌಕರಳಿಗೆ ರಜೆ Leave to female Govt. Servant on adoption of child): ಎರಡು ಜೀವಂತ ಮಕ್ಕಳನ್ನು ಹೊಂದಿರದ ಮಹಿಳಾ ಸರ್ಕಾರಿ ನೌಕರಳು ಮಗುವೊಂದನ್ನು ದತ್ತು ತೆಗೆದುಕೊಂಡಾಗ ಒಂದು ವರ್ಷದ ಅಥವಾ ದತ್ತಕ ಮಗುವಿಗೆ ಒಂದು ವರ್ಷ ವಯಸ್ಸಾಗುವವರೆಗೆ ಇವುಗಳಲ್ಲಿ ಯಾವುದು ಕಡಿಮೆಯೊ ಆವರೆಗೆ ದೊರೆಯಬಹುದಾದ ಮತ್ತು ಅನುಮತಿಸಬಹುದಾದ ರಜೆಯನ್ನು (60 ದಿನಗಳನ್ನು ಮೀರದಂತೆ, ವೈದ್ಯಕೀಯ ಪ್ರಮಾಣಪತ್ರವನ್ನು ಹಾಜರುಪಡಿಸದೆ ಪರಿವರ್ತಿತ ರಜೆ ಮತ್ತು ಗಳಿಸದ ರಜೆ ಸೇರಿದಂತೆ) ಮಂಜೂರು ಮಾಡಬಹುದು. (ಕ.ಸ.ಸೇ.ವಿ. 135ಎ).
ಪಿತೃತ್ವ ರಜೆ (Paternity Leave): ಎರಡು ಅಥವಾ ಹೆಚ್ಚಿಗೆ ಜೀವಂತ ಮಕ್ಕಳಿಲ್ಲದ ಸರ್ಕಾರಿ ನೌಕರನ ಪತ್ನಿಯ ಹೆರಿಗೆ ಸಂದರ್ಭದಲ್ಲಿ ಹೆರಿಗೆ ದಿನಾಂಕದಿಂದ ಪ್ರಾರಂಭವಾಗುವಂತೆ 15 ದಿನಗಳ ಮೆಟರ್ನಿಟಿ ರಜೆಯನ್ನು ಮಂಜೂರು ಮಾಡಬಹುದು. ಇದನ್ನು ಯಾವುದೇ ರಜಾ ಲೆಕ್ಕದಿಂದ ಕಳೆಯತಕ್ಕದ್ದಲ್ಲ ಹಾಗೂ ಸಾಂರ್ದಭಿಕ ರಜೆ ಹೊರತು ಉಳಿದ ಯಾವುದೇ ರಜೆಯೊಂದಿಗೆ ಸಂಯೋಜಿಸಿಕೊಳ್ಳಬಹುದು. ಈ ರಜೆ ಅವಧಿಯಲ್ಲಿ ರಜೆಗೆ ಹೋಗುವ ನಿಕಟ ಪೂರ್ವದಲ್ಲಿದ್ದಂತೆ ವೇತನವು ಪ್ರಾಪ್ತವಾಗುತ್ತದೆ. ಈ ರಜೆಯನ್ನು ನಗದೀಕರಿಸಿಕೊಳ್ಳಲು ಅಥವಾ ಗಳಿಕೆ ರಜೆಯೊಂದಿಗೆ ಸೇರಿಸಿಕೊಳ್ಳಲು ಆಗುವುದಿಲ್ಲ. ಸಾಮಾನ್ಯವಾಗಿ ಈ ರಜೆಯನ್ನು ನಿರಾಕರಿಸುವಂತಿಲ್ಲ (ಕ.ಸ.ಸೇ.ವಿ. 135 (ಬಿ)
ಮುಂದುವರಿಯುವುದು…
06.09.2017.
ಸರ್ಕಾರಿ ನೌಕರ ತನ್ನ ಕಚೇರಿ ಕೆಲಸದ ನಿರ್ವಹಣೆ ವೇಳೆ ಅಂಗವಿಕಲನಾದರೆ(ಕಾಯಂ ಅಥವಾ ತಾತ್ಕಾಲಿಕ ನೌಕರ)ಅಂಗವೈಕಲ್ಯ ವಿಶೇಷ ರಜೆ ಮಂಜೂರು ಮಾಡಬಹುದು. ವೈಕಲ್ಯ ಸಂಭವಿಸಲು ಕಾರಣವಾದ ಘಟನೆ ನಡೆದ ಮೂರು ತಿಂಗಳ ತರುವಾಯ ವೈಕಲ್ಯ ಕಾಣಿಸಿಕೊಂಡಾಗ ಇದರ ಕಾರಣವು ಸರ್ಕಾರಕ್ಕೆ ಮನದಟ್ಟಾದರೆ ರಜೆಗೆ ಅನುಮತಿ ನೀಡಬಹುದು. ಅಧಿಕೃತ ಮೆಡಿಕಲ್ ಅಟೆಂಡರ್ಗಳು ಅಗತ್ಯವೆಂದು ಪ್ರಮಾಣೀಕರಿಸಿದ ಅವಧಿಗೆ ರಜೆ ಮಂಜೂರು ಮಾಡಬಹುದು. ಆದರೆ ಇದು 24 ತಿಂಗಳನ್ನು ಮೀರತಕ್ಕದ್ದಲ್ಲ. ಇದನ್ನು ಯಾವುದೇ ಇತರ ರಜೆಯೊಂದಿಗೆ ಸೇರಿಸಬಹುದು. ಈ ರಜೆಯನ್ನು ನಿವೃತ್ತಿಗೆ ಸಂಬಂಧಪಟ್ಟಂತೆ ಕರ್ತವ್ಯದ ದಿನಗಳೆಂದು ಪರಿಗಣಿಸಲಾಗುವುದು. ಈ ರಜೆಯ ಯಾವುದೇ ಅವಧಿಯ ಮೊದಲ 120 ದಿನಗಳಿಗೆ ಗಳಿಕೆ ರಜೆಯಲ್ಲಿದ್ದಾಗ ಪಡೆಯುವ ರಜಾವೇತನಕ್ಕೆ ಸಮನಾದ ವೇತನ ದೊರೆಯುವುದು.
ವಿಶೇಷ ರಜೆ: ಪಶು ವೈದ್ಯಕೀಯ ಇಲಾಖೆಯ ಲೈವ್ಸ್ಟಾಕ್ ಫಾರ್ಮ್ಗಳ ತಾತ್ಕಾಲಿಕ ನೌಕರರು ಕರ್ತವ್ಯ ನಿರ್ವಹಿಸುವಾಗ ಗಾಯಗಳಾಗಿ ಕೆಲಸ ಮಾಡಲು ಅಸಮರ್ಥರಾದರೆ (ನಿರ್ಲಕ್ಷತೆಯಿಂದಲ್ಲದೆ) ಕರ್ನಾಟಕ ಪಶು ಸಂಗೋಪನ ನಿರ್ದೇಶಕರು, ಜಿಲ್ಲಾ ವೈದ್ಯಾಧಿಕಾರಿ ಪ್ರಮಾಣಪತ್ರದ ಆಧಾರದ ಮೇಲೆ ಭತ್ಯೆ ಸಹಿತ ರಜೆಯನ್ನು 30 ದಿನಗಳವರೆಗೆ ವಿಶೇಷ ರಜೆ ನೀಡಬಹುದು. ಸ.ಸೇ.ವಿ. 138.
ವೈದ್ಯ ಇಲಾಖೆಯಲ್ಲಿ ರೇಡಿಯಂ ಸಂಪರ್ಕವಿರುವ ಸರ್ಕಾರಿ ನೌಕರನಿಗೆ ಪ್ರತಿ 6 ತಿಂಗಳಿಗೊಮ್ಮೆ 15 ದಿನಗಳಿಗೆ ಮೀರದಂತ ರಜೆ ಮಂಜೂರು ಮಾಡಬಹುದು. ಈ ಅವಧಿಯು ಅರ್ಧ ವೇತನದ ರಜೆಗೆ ಗಣನೆಗೆ ಬರುವುದು. ಆದರೆ ಗಳಿಕೆ ರಜೆಗೆ ಗಣನೆಗೆ ಬರುವುದಿಲ್ಲ. ಈ ರಜೆಯ ಅವಧಿಯಲ್ಲಿ ಗಳಿಕೆ ರಜೆಯ ಕಾಲದಲ್ಲಿ ದೊರೆಯುವಂತೆ ರಜಾ ಭತ್ಯೆಗಳು ದೊರೆಯುವುದು. (ಕ.ಸ.ಸೇ.ವಿ. 139).
ಅರಣ್ಯ ಇಲಾಖೆಯ ಕೆಲವು ಆಯ್ದ ರೇಂಜುಗಳಲ್ಲಿ ಕೆಲಸ ಮಾಡುತ್ತಿರುವ ರೇಂಜರ್, ಫಾರೆಸ್ಟರ್, ಅರಣ್ಯ ರಕ್ಷಕ ಮತ್ತು ಗುಮಾಸ್ತರಿಗೆ ಗಳಿಕೆ ರಜೆ ಜತೆಗೆ ಆರೋಗ್ಯ ಸುಧಾರಣೆಗೆ ಸ್ಥಳ ಬದಲಾಯಿಸಲು ಪ್ರತಿ ವರ್ಷವು ಒಂದು ತಿಂಗಳು ಪೂರ್ಣ ವೇತನ ಸಹಿತ ವಿಶೇಷ ಸ್ಥಳದ ರಜೆ ನೀಡಬಹುದು.
ಅನಧಿಕೃತ ಗೈರು ಹಾಜರಿ: ಸರ್ಕಾರಿ ನೌಕರನು ಸಕ್ಷಮ ಪ್ರಾಧಿಕಾರಿಯ ಮಂಜೂರಾತಿಯಿಲ್ಲದೆ ಕರ್ತವ್ಯಕ್ಕೆ ಗೈರಾಗುವಂತಿಲ್ಲ, ಆದರೆ ನೌಕರನು ತನ್ನ ನಿಯಂತ್ರಣಕ್ಕೆ ಮೀರಿದ ಕಾರಣದಿಂದ ಸಕ್ಷಮ ಪ್ರಾಧಿಕಾರದ ಮಂಜೂರಾತಿಯಿಲ್ಲದೆ ಗೈರಾದ ಬಗ್ಗೆ ತಿಳಿಸಿದಾಗ ಅದನ್ನು ಪರಿಶೀಲಿಸಿ ತೃಪ್ತಿಕರವಾಗಿದೆ ಎಂದು ಪರಿಗಣಿಸಿ ಗೈರು ಅವಧಿಯನ್ನು ನೌಕರನ ಹಕ್ಕಿನಲ್ಲಿರುವ ಯಾವುದಾದರೂ ರಜೆಯನ್ನಾಗಿ ಪರಿವರ್ತಿಸಬಹುದು. ಸಕ್ಷಮ ಪ್ರಾಧಿಕಾರಿಯು ನೌಕರನ ಗೈರಿನ ಕಾರಣ ಒಪ್ಪಿಕೊಳ್ಳದಿದ್ದಲ್ಲಿ ಗೈರು ಅವಧಿಯನ್ನು ಅನಧಿಕೃತ ಗೈರು ಹಾಜರಿ ಎಂದು ಆದೇಶಿಸಬಹುದು. ಇಂತಹ ಅವಧಿಯಲ್ಲಿ ನೌಕರನಿಗೆ ಯಾವುದೇ ವೇತನ ಭತ್ಯೆಗಳು ಲಭ್ಯವಾಗುವುದಿಲ್ಲ.
ಸರ್ಕಾರಿ ನೌಕರನು ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದು ರಜೆ ಬಳಸಿಕೊಂಡು, ರಜಾ ಅವಧಿ ಮುಗಿದ ನಂತರ ಕೂಡಲೆ ಕರ್ತವ್ಯಕ್ಕೆ ಹಾಜರಾಗಿದ್ದಾಗಲೂ ಅವಧಿ ಮೀರಿದ ಗೈರು ಹಾಜರಿ ಪ್ರಕರಣ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲೂ ಈ ಮೇಲಿನಂತೆಯೇ ಕ್ರಮ ತೆಗೆದುಕೊಳ್ಳಬಹುದು.
ಕಚೇರಿ ವೇಳೆಯನ್ನು ಎರಡು ಬಾಗಗಳಾಗಿ ವಿಂಗಡಿಸಿರುವಾಗ ಯಾವುದೇ ಒಂದು ಭಾಗದ ಅನಧಿಕೃತ ಗೈರಿಗೆ ಅರ್ಧ ದಿನದ ವೇತನ ಭತ್ಯೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಕಚೇರಿ ಪ್ರಾರಂಭದ ವೇಳೆಯೊಳಗೆ ಹಾಜರಾಗಬೇಕು, ಹತ್ತು ನಿಮಿಷ ತಡವಾದರೆ ಮಾತ್ರ ಸಾಂರ್ದಭಿಕ ವಿನಾಯಿತಿ ಇರುತ್ತದೆ. ಹತ್ತು ನಿಮಿಷಗಳ ನಂತರ ಮಧ್ಯಾಹ್ನ 2 ಗಂಟೆ ಒಳಗೆ ಕಚೇರಿಗೆ ಹಾಜರಾದಾಗ ನೌಕರನು 1/2 ದಿನದ ಸಾಂರ್ದಭಿಕ ರಜೆ ಕಳೆದುಕೊಳ್ಳುತ್ತಾನೆ. ನೌಕರನ ಹಕ್ಕಿನಲ್ಲಿ ಸಾಂರ್ದಭಿಕ ರಜೆ ಇಲ್ಲದಿದ್ದರೆ ಹಕ್ಕಿನಲ್ಲಿರುವ ಒಂದು ದಿನದ ಗಳಿಕೆ ರಜೆ ಅಥವಾ ಇತರೆ ರಜೆ ಕಳೆದುಕೊಳ್ಳಬೇಕಾಗುತ್ತದೆ. (ಕ.ಸ.ಸೇ.ನಿ. 106ಎ)
ಮುಷ್ಕರದ ಕಾರಣದಿಂದ ಕರ್ತವ್ಯಕ್ಕೆ ಗೈರಾದ ಸರ್ಕಾರಿ ನೌಕರನು ಯಾವುದೇ ರಜೆಗೆ ಹಕ್ಕು ಹೊಂದಿರುವುದಿಲ್ಲ, ಹಾಗೂ ತನ್ನ ಲೆಕ್ಕದಲ್ಲಿರುವ ಎಲ್ಲಾ ಬಗೆಯ ರಜೆ ಕಳೆದುಕೊಳ್ಳುತ್ತಾನೆ.(ಕ.ಸ.ಸೇ.ನಿ. 106 ಬಿ).
(ಪ್ರತಿಕ್ರಿಯಿಸಿ:raghuprakash57@gmail.com, feedback@vijayavani.in)
***
ಅರ್ಧವೇತನ ರಜೆಯ ನಿಯಮಗಳು
16.08.2017.
| ಲ.ರಾಘವೇಂದ್ರ
ಬಿಡುವಿರುವ ಇಲಾಖೆಯ ಸರ್ಕಾರಿ ನೌಕರನು ಯಾವುದೇ ವರ್ಷದಲ್ಲಿ ಬಿಡುವನ್ನು ಭಾಗಶಃ ಬಳಸಿಕೊಂಡ ಪಕ್ಷದಲ್ಲಿ ಆ ವರ್ಷದ ಬಿಡುವಿನಲ್ಲಿ ಆತ ಬಳಸಿಕೊಳ್ಳದಿರುವ ಬಿಡುವಿನ ದಿವಸಗಳಷ್ಟಕ್ಕೆ 30 ದಿವಸಗಳ ಅಂತಹ ಅನುಪಾತದಲ್ಲಿ ಗಳಿಕೆ ರಜೆಯನ್ನು ಪಡೆಯಲು ಹಕ್ಕುಳ್ಳವನಾಗಿರುತ್ತಾನೆ. ಆದರೆ ಕಾಯಂ ಸೇವೆ ಅಥವಾ ಅರೆ ಕಾಯಂ ಸೇವೆಯಲ್ಲಿಲ್ಲದ ಸರ್ಕಾರಿ ನೌಕರನಿಗೆ ಸೇವೆಯ ಮೊದಲನೆ ವರ್ಷಕ್ಕೆ ಸಂಬಂಧಿಸಿದಂತೆ ಇದು ಅನ್ವಯಿಸುವುದಿಲ್ಲ
ಉದಾ: ಒಂದು ವರ್ಷದಲ್ಲಿ 120 ದಿನಗಳ ಬಿಡುವಿರುವ ಇಲಾಖೆಯ ಒಬ್ಬ ಸರ್ಕಾರಿ ನೌಕರನನ್ನು ಬಿಡುವಿನ ದಿನಗಳಾದ 8.5.2005 ರಿಂದ 27.5.2005 ರವರೆಗೆ 20 ದಿನಗಳು ದಾಸ್ತಾನು ಪರಿಶೀಲನಾ ಕಾರ್ಯಕ್ಕಾಗಿ ನಿಯೋಜಿಸಿದೆ. ಈ ಅವಧಿಯಲ್ಲಿ ಅವರಿಗೆ ಲಭ್ಯವಾಗುವ ಹೆಚ್ಚುವರಿ ಗಳಿಕೆ ರಜೆಯನ್ನು ಲೆಕ್ಕಾಚಾರ ಮಾಡಿ.
ಹೆಚ್ಚುವರಿ ಗಳಿಕೆ ರಜೆ = (30(ಉಪಯೋಗಿಸದ ಬಿಡುವು) / (ವರ್ಷದ ಒಟ್ಟು ಬಿಡುವಿನ ಅವಧಿ)
= (3020) /120 = 5 ದಿನಗಳು (ಕ.ಸ.ಸೇ.ನಿ. 113(3-ಎ) ಬಿಡುವಿರುವ ಇಲಾಖೆಯ ಸರ್ಕಾರಿ ನೌಕರನು ಯಾವುದೇ ವರ್ಷದಲ್ಲಿ ಯಾವುದೇ ಬಿಡುವನ್ನು ಉಪಯೋಗಿಸಿಕೊಳ್ಳದೇ ಇದ್ದರೆ ಆ ವರ್ಷಕ್ಕೆ ಸಂಬಂಧಪಟ್ಟಂತೆ ಕ.ಸ.ಸೇ.ನಿ. 112 ರಂತೆ ಗಳಿಕೆ ರಜೆಯನ್ನು ಅನುಮತಿಸಲಾಗುತ್ತದೆ.
(ಕ.ಸ.ಸೇ.ನಿ. 113(3ಬಿ)) ಬಿಡುವಿರುವ ಇಲಾಖೆಯಿಂದ ಬಿಡುವಿರದ ಇಲಾಖೆಗೆ ವರ್ಗಾವಣೆಯಾದಾಗ ಸರ್ಕಾರಿ ನೌಕರನು ಅಂತಹ ವರ್ಗಾವಣೆಯ ಹಿಂದಿನ ಅರ್ಧ ಕ್ಯಾಲೆಂಡರ್ ವರ್ಷದಿಂದ ವರ್ಗಾವಣೆಯ ದಿನಾಂಕದವರೆಗೆ ಪೂರ್ಣಗೊಂಡ ಪ್ರತಿಯೊಂದು ತಿಂಗಳಿಗೆ 5/6 ದಿನದ ದರದಲ್ಲಿ ಗಳಿಕೆ ರಜೆ ಲೆಕ್ಕ ಹಾಕಲಾಗುವುದು. ವರ್ಗಾವಣೆಯಾದ ದಿನಾಂಕದಿಂದ ಅವನು ಬಿಡುವಿಲ್ಲದ ಇಲಾಖಾ ನೌಕರನಿಗೆ ಅನ್ವಯವಾಗುವ ಗಳಿಕೆ ರಜೆಯನ್ನು ಪಡೆಯಲು ಹಕ್ಕುಳ್ಳವನಾಗಿರುತ್ತಾನೆ.
(ಕ.ಸ.ಸೇ.ನಿ. 113(6ಎ)) ವರ್ಗಾವಣೆಯಾದ ದಿನಾಂಕದಿಂದ ಅರ್ಧ ಕ್ಯಾಲೆಂಡರ್ ವರ್ಷದ ಕೊನೆಯವರೆಗೆ ಅವನ ಸೇವೆಯು ಪೂರ್ತಿಗೊಂಡ ಪ್ರತಿಯೊಂದು ತಿಂಗಳಿಗೆ 5/6 ದಿನದ ದರದಲ್ಲಿ ಗಳಿಕೆ ರಜೆಯನ್ನು ಲೆಕ್ಕಹಾಕಲಾಗುವುದು.
(ಕ.ಸ.ಸೇ.ನಿ. 113(7ಎ)) 6. ಅರ್ಧ ವೇತನ ರಜೆ (ಏಚ್ಝ್ಛ ಕಚಢ ಔಛಿಚಡಛಿ): ಪ್ರತಿಯೊಂದು ಕ್ಯಾಲೆಂಡರ್ ವರ್ಷದ ಜನವರಿ ಮತ್ತು ಜುಲೈ ತಿಂಗಳ ಮೊದಲ ದಿನಾಂಕದಂದು ಪ್ರತಿ ಅರ್ಧವರ್ಷಕ್ಕೆ 10 ದಿನಗಳಂತೆ 2 ಕಂತುಗಳಲ್ಲಿ ಮುಂಚಿತವಾಗಿ ಜಮೆ ಮಾಡಬೇಕು. ಇದು 1.7.95 ರಿಂದ ಜಾರಿಗೆ ಬಂದಿದೆ. ಅರ್ಧ ವೇತನ ರಜೆಯು ಬಿಡುವಿರುವ ಇಲಾಖೆಯ ಸರ್ಕಾರಿ ನೌಕರರಿಗೆ ಅನ್ವಯಿಸುವುದಿಲ್ಲ.
ಸರ್ಕಾರಿ ನೌಕರನು ಯಾವುದೇ ಅರ್ಧ ವರ್ಷದಲ್ಲಿ ಯಾವುದೇ ಅಸಾಧಾರಣ ರಜೆ, ಗೈರುಹಾಜರಿ ಅವಧಿ, ಅಮಾನತ್ತಿನ ಅವಧಿ, ಲೆಕ್ಕಕ್ಕಿಲ್ಲದ ಅವಧಿ ಅಥವಾ ಕರ್ತವ್ಯವಲ್ಲದ ಅವಧಿಯೆಂದು ತೀರ್ವನಿಸಿದಾಗ ಈ ಅವಧಿಯ 1/18 ಭಾಗವನ್ನು, 10 ದಿನಗಳ ಗರಿಷ್ಠ ಮಿತಿಗೊಳಪಟ್ಟು ಕಡಿಮೆ ಮಾಡಬೇಕು.
ಸರ್ಕಾರಿ ನೌಕರನು ನೇಮಕಗೊಂಡ ಪ್ರತಿಪೂರ್ಣ ಕ್ಯಾಲೆಂಡರ್ ತಿಂಗಳಿಗೆ 5/3 ದಿನಗಳ ದರದಲ್ಲಿ ಅರ್ಧ ವೇತನ ರಜೆಯನ್ನು ಜಮೆ ಮಾಡಬೇಕು(ಕ.ಸ.ಸೇ.ನಿ. 112 (2ಎ)
ಸರ್ಕಾರಿ ನೌಕರನು ನಿವೃತ್ತಿ ಅಥವಾ ರಾಜೀನಾಮೆ ನೀಡಿದಾಗ ಸೇವೆಯು ಪೂರ್ಣಗೊಂಡ ಪ್ರತಿ ಕ್ಯಾಲೆಂಡರ್ ತಿಂಗಳಿಗೆ 5/3 ದಿನಗಳ ದರದಲ್ಲಿ ಅರ್ಧವೇತನ ರಜೆಯನ್ನು ಜಮೆ ಮಾಡಬೇಕು(ಕ.ಸ.ಸೇ.ನಿ. 114(2ಬಿ).
ಸರ್ಕಾರಿ ನೌಕರನನ್ನು ಸೇವೆಯಿಂದ ವಜಾ ಮಾಡಿದಾಗ ಅಥವಾ ತೆಗೆದು ಹಾಕಿದಾಗ ಅಥವಾ ಸೇವೆಯಲ್ಲಿರುವಾಗಲೇ ಮೃತನಾದಾಗ ಆ ಕ್ಯಾಲೆಂಡರ್ ತಿಂಗಳಿನ ಹಿಂದಿನ ಕೊನೆಯವರೆಗೆ ಪೂರ್ಣಗೊಂಡ ಪ್ರತಿ ತಿಂಗಳಿಗೆ 5/3 ದಿನಗಳ ದರದಲ್ಲಿ ಅರ್ಧ ವೇತನ ರಜೆಯನ್ನು ಜಮೆ ಮಾಡಬೇಕು.
***
ಗಳಿಕೆ ರಜೆ
Wednesday, 09.08.2017.
4. ಬಿಡುವಿಲ್ಲದ ಇಲಾಖಾ ನೌಕರರಿಗೆ ಗಳಿಕೆ ರಜೆ (Earned Leave)
ಒಂದು ಕ್ಯಾಲೆಂಡರ್ ವರ್ಷದಲ್ಲಿ 30 ದಿನಗಳ ಗಳಿಕೆ ರಜೆ ಲಭ್ಯ. ಇದನ್ನು ಎರಡು ಕಂತುಗಳಲ್ಲಿ ಅಂದರೆ ಪ್ರತಿವರ್ಷ ಜನವರಿ 1 ರಂತೆ 15 ದಿನಗಳು ಮತ್ತು ಜುಲೈ 1 ರಂದು 15 ದಿನಗಳು ಮುಂಗಡವಾಗಿ ಸರ್ಕಾರಿ ನೌಕರನ ರಜೆ ಲೆಕ್ಕಕ್ಕೆ ಜಮೆ ಮಾಡಲಾಗುತ್ತದೆ. ಹೀಗೆ ಜಮೆ ಮಾಡಿದ ಗಳಿಕೆ ರಜೆಯು ಒಟ್ಟು 300 ದಿನಗಳಿಗೆ ಮೀರಕೂಡದು. ಸರ್ಕಾರಿ ನೌಕರನ ಹಕ್ಕಿನಲ್ಲಿ ಡಿಸೆಂಬರ್ ಅಥವಾ ಜೂನ್ ತಿಂಗಳ ಕೊನೆಯ ದಿನದಂದು ಗಳಿಕೆ ರಜೆಯು 300 ದಿನಗಳಿಗಿಂತ ಹೆಚ್ಚು, 15 ದಿನಗಳ ಗಳಿಕೆ ರಜೆಯನ್ನು ಪ್ರತ್ಯೇಕವಾಗಿಡಬೇಕು. ಮತ್ತು ಮೊದಲಿಗೆ ಆ ಅರ್ಧ ವರ್ಷದಲ್ಲಿ ಸರ್ಕಾರಿ ನೌಕರನು ಬಳಸಿಕೊಳ್ಳುವ ಗಳಿಕೆ ರಜೆಗೆ ಸರಿ ಹೊಂದಿಸಬೇಕು. ನಂತರ ಯಾವುದೇ ಗಳಿಕೆ ರಜೆ ಉಳಿದಿದ್ದರೆ ಅದನ್ನು ಉಳಿದಿರುವ ಸದರಿ ಗಳಿಕೆ ರಜೆ ಹಾಗೂ ಈಗಾಗಲೆ ಹಕ್ಕಿನಲ್ಲಿರುವ ಗಳಿಕೆ ರಜೆ. ಇವೆರಡು ಸೇರಿ ಗರಿಷ್ಠ 300 ದಿನಗಳಿಗೆ ಮೀರದಂತೆ ಅರ್ಧ ವರ್ಷದ ಅಂತ್ಯದಲ್ಲಿ ಗಳಿಕೆ ರಜೆಯ ಲೆಕ್ಕಕ್ಕೆ ಜಮೆ ಮಾಡಬೇಕು. ಸರ್ಕಾರಿ ನೌಕರನು ನೇಮಕಗೊಂಡ ಪ್ರತಿ ಪೂರ್ಣ ಕ್ಯಾಲೆಂಡರ್ ತಿಂಗಳಿಗೆ ಎರಡೂವರೆ ದಿನಗಳ ದರದಲ್ಲಿ ಗಳಿಕೆ ರಜೆಯನ್ನು ಜಮೆ ಮಾಡಬೇಕು. ಸರ್ಕಾರಿ ನೌಕರನು ನಿವೃತ್ತಿ ಅಥವಾ ರಾಜೀನಾಮೆ ನೀಡಿದಾಗ ಸೇವೆಯು ಪೂರ್ಣಗೊಂಡ ಪ್ರತಿ ಕ್ಯಾಲೆಂಡರ್ ತಿಂಗಳಿಗೆ ಎರಡೂವರೆ ದಿನಗಳಂತೆ ಲೆಕ್ಕಹಾಕಬೇಕು. ಸರ್ಕಾರಿ ನೌಕರನನ್ನು ಸೇವೆಯಿಂದ ವಜಾ ಮಾಡಿದಾಗ ಅಥವಾ ತೆಗೆದು ಹಾಕಿದಾಗ ಅಥವಾ ಸೇವೆಯಲ್ಲಿರುವಾಗಲೇ ಮೃತನಾದಾಗ ಆ ಕ್ಯಾಲೆಂಡರ್ ತಿಂಗಳಿನ ಹಿಂದಿನ ತಿಂಗಳಿನ ಕೊನೆಯವರೆಗೆ ಪೂರ್ಣಗೊಂಡ ಪ್ರತಿ ಕ್ಯಾಲೆಂಡರ್ ತಿಂಗಳಿಗೆ ಎರಡೂವರೆ ದಿನಗಳಂತೆ ಲೆಕ್ಕಹಾಕಲಾಗುತ್ತದೆ. ಅರ್ಧವರ್ಷ ಮುಗಿಯುವ ಕೊನೆಯ ದಿನ ಸರ್ಕಾರಿ ನೌಕರನು ರಜೆಯ ಮೇಲಿದ್ದರೆ ಅವನು ಕರ್ತವ್ಯಕ್ಕೆ ಹಿಂತಿರುಗುವುದನ್ನು ಖಾತ್ರಿ ಮಾಡಿಕೊಂಡ ನಂತರ ಮುಂದಿನ ಅರ್ಧವರ್ಷದ ಮೊದಲ ದಿನ 15 ದಿನಗಳ ಮುಂಗಡ ಗಳಿಕೆ ರಜೆಯನ್ನು ಜಮೆ ಮಾಡಬೇಕು.
5. ಬಿಡುವಿರುವ ಇಲಾಖಾ ನೌಕರರಿಗೆ ಗಳಿಕೆ ರಜೆ (EL for vacation)
ಬಿಡುವಿರುವ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನೌಕರರಿಗೆ ಪ್ರತಿ ವರ್ಷ ಜನವರಿ ಮತ್ತು ಜುಲೈ ತಿಂಗಳ ಮೊದಲನೆ ದಿನದಂದು 5 ದಿನಗಳಂತೆ ಎರಡು ಕಂತುಗಳಲ್ಲಿ ಗಳಿಕೆ ರಜೆಗೆ ಮುಂಚಿತವಾಗಿ ಜಮೆ ಮಾಡಲಾಗುತ್ತದೆ. ಬಿಡುವಿರುವ ಇಲಾಖೆಯ ಸರ್ಕಾರಿ ನೌಕರನು ಯಾವುದೇ ಅರ್ಧ ವರ್ಷದಲ್ಲಿ ಯಾವುದೇ ಅಸಾಧಾರಣ ರಜೆ ಗೈರುಹಾಜರಿ ಅವಧಿ, ಅಮಾನತ್ತಿನ ಅವಧಿ, ಲೆಕ್ಕಕ್ಕಿಲ್ಲದ ಅವಧಿ ಅಥವಾ ಕರ್ತವ್ಯವಲ್ಲದ ಅವಧಿಯೆಂದು ತೀರ್ವನಿಸಿದಾಗ ಈ ಅವಧಿಯ ಮೂವತ್ತನೆಯ ಒಂದು ಭಾಗವನ್ನು, 5 ದಿನಗಳ ಗರಿಷ್ಠ ಮಿತಿಗೊಳಪಟ್ಟು ಕಡಿಮೆ ಮಾಡಬೇಕು. ಬಿಡುವಿರುವ ಇಲಾಖೆಯ ಸರ್ಕಾರಿ ನೌಕರನು ಯಾವುದೇ ಅರ್ಧ ವರ್ಷದಲ್ಲಿ ನೇಮಕವಾದರೆ ಅಥವಾ ಸೇವೆಯಲ್ಲಿಲ್ಲವಾದರೆ ಆ ಅರ್ಧವರ್ಷದಲ್ಲಿ ಅವನು ಸಲ್ಲಿಸಿದ ಅಥವಾ ಸಲ್ಲಿಸಬಹುದಾದ ಪ್ರತಿ ಪೂರ್ಣಗೊಂಡ ಕ್ಯಾಲೆಂಡರ್ ತಿಂಗಳಿಗೆ 5/6 ದಿನದ ದರದಲ್ಲಿ ವೇತನ ರಜೆಯನ್ನು ನೀಡಬೇಕು. ಬಿಡುವಿರುವ ಇಲಾಖೆಯ ಸರ್ಕಾರಿ ನೌಕರನು ಯಾವುದೇ ವರ್ಷದಲ್ಲಿ ಬಿಡುವನ್ನು ಭಾಗಶಃ ಬಳಸಿಕೊಂಡ ಪಕ್ಷದಲ್ಲಿ ಆ ವರ್ಷದ ಬಿಡುವಿನಲ್ಲಿ ಆತ ಬಳಸಿಕೊಳ್ಳದೇ ಇರುವ ಬಿಡುವಿನ ದಿವಸಗಳಷ್ಟಕ್ಕೆ ಅಂತಹ ಅನುಪಾತದಲ್ಲಿ 30 ದಿವಸಗಳ ಗಳಿಕೆ ರಜೆಯನ್ನು ಪಡೆಯಲು ಹಕ್ಕುಳ್ಳವನಾಗಿರುತ್ತಾನೆ. ಆದರೆ ಖಾಯಂ ಸೇವೆ ಅಥವಾ ಅರೆ ಖಾಯಂ ಸೇವೆಯಲ್ಲಿಲ್ಲದ ಸರ್ಕಾರಿ ನೌಕರನಿಗೆ ಸೇವೆಯ ಮೊದಲನೆ ವರ್ಷಕ್ಕೆ ಸಂಬಂಧಿಸಿದಂತೆ ಇದು ಅನ್ವಯಿಸುವುದಿಲ್ಲ.
(ಪ್ರತಿಕ್ರಿಯಿಸಿ:raghuprakash57@gmail.com,
feedback@vijayavani.in)
***
ವೈವಿಧ್ಯಪೂರ್ಣ ರಜೆ ಸೌಲಭ್ಯಗಳು
Wednesday, 26.07.2017.
| ಲ. ರಾಘವೇಂದ್ರ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ಅನುಬಂಧ ‘ಬಿ’ಯಲ್ಲಿ ಸಾಂರ್ದಭಿಕ ಮತ್ತು ವಿಶೇಷ ಸಾಂರ್ದಭಿಕ ರಜೆಗಳು ಈ ಕೆಳಗಿನಂತೆ ಸರ್ಕಾರಿ ನೌಕರರಿಗೆ ಲಭ್ಯವಾಗುತ್ತದೆ.
1. ಸಾಂರ್ದಭಿಕ ರಜೆ
ಕಾಯಂ ಅಥವಾ ಹಂಗಾಮಿ ಸರ್ಕಾರಿ ನೌಕರರಿಗೆ ಜನವರಿ ಮೊದಲ ದಿನಾಂಕದಿಂದ ಡಿಸೆಂಬರ್ 31ನೇ ದಿನಾಂಕದವರೆಗೆ 15 ದಿನಗಳ ಸಾಂರ್ದಭಿಕ ರಜೆ ದೊರೆಯುತ್ತದೆ. ಬಿಡುವಿನ ವೇಳೆ ಇಲಾಖೆಯಲ್ಲಿ ಕೆಲಸ ಮಾಡುವ ನೌಕರರಿಗೂ ಸಾಂರ್ದಭಿಕ ರಜೆ ಲಭ್ಯ. ಒಂದು ಸಲಕ್ಕೆ 7 ದಿನಗಳಿಗಿಂತ ಇದನ್ನು ಮಂಜೂರು ಮಾಡಲಾಗುವುದಿಲ್ಲ.
ಮೊದಲನೇ ವರ್ಷದ ಸೇವಾ ಅವಧಿಯಲ್ಲಿ ಸರ್ಕಾರಿ ನೌಕರರಿಗೆ ಒಂದು ತಿಂಗಳಿನ ಸೇವೆಗಾಗಿ ಒಂದು ದಿನದಂತೆ ಸಾಂರ್ದಭಿಕ ರಜೆ ಕೊಡಬೇಕು. ಅರ್ಧ ದಿನದ ಸಾಂರ್ದಭಿಕ ರಜೆಯನ್ನೂ ಕೊಡಬಹುದು. ಮಧ್ಯಾಹ್ನ 2 ಗಂಟೆವರೆಗೆ ಮತ್ತು ನಂತರದ ಅವಧಿಯನ್ನು, ಅರ್ಧ ದಿನಕ್ಕಾಗಿ ಲೆಕ್ಕ ಹಾಕಬೇಕು.
ಸಾಂರ್ದಭಿಕ ರಜೆಯನ್ನು ಹಕ್ಕೆಂದು ಕೇಳಲು ಬರುವುದಿಲ್ಲ. ಅಧಿಕಾರಿಗಳಿಗೆ ಮಂಜೂರು ಮಾಡಿದ ರಜೆಯನ್ನು ರದ್ದು ಪಡಿಸುವುದಕ್ಕೂ ಹಕ್ಕಿದೆ. ರಜೆಯನ್ನು ಮೊದಲು ಮಂಜೂರು ಮಾಡಿಸಿಕೊಂಡು ನಂತರ ಅದನ್ನು ಬಳಸಬೇಕು. ಆದರೆ ಕಾಯಿಲೆಯಾಗಿ ಅಥವಾ ಇನ್ನಾವುದೇ ಆಕಸ್ಮಿಕಗಳಿಂದಾಗಿ ಕಚೇರಿಗೆ ಬಂದು ರಜೆಯನ್ನು ಮುಂಗಡವಾಗಿ ಮಂಜೂರು ಮಾಡಿಸಲು ಸಾಧ್ಯವಾಗದಿರುವ ಸಂದರ್ಭಗಳಲ್ಲಿ ಅಧಿಕಾರಿಗಳಿಗೆ ಮನವರಿಕೆ ಮಾಡಿಸಿ ಮರುದಿನ ರಜೆ ಮಂಜೂರು ಮಾಡಿಸಿಕೊಳ್ಳಬಹುದು.
ಸಾಂರ್ದಭಿಕ ರಜೆಯನ್ನು ಪರಿವರ್ತಿತ ರಜೆಗಳೊಡನೆ ಸೇರಿಸಬಹುದು. ಆದರೆ ಒಟ್ಟು ಅನುಪಸ್ಥಿತಿ 10 ದಿನಗಳಿಗೆ ಮೀರಕೂಡದು. ಆಕಸ್ಮಿಕ ರಜೆಯನ್ನು ಸೇವಾ ಅವಧಿಯೆಂದೇ ಭಾವಿಸಲಾಗುವುದು.
2. ವಿಶೇಷ ಸಾಂರ್ದಭಿಕ ರಜೆ
ವಿಶೇಷ ಸಂದರ್ಭಗಳಲ್ಲಿ ಈ ರಜೆ ಪಡೆಯಬಹುದು
1. ನಾಯಿ ಅಥವಾ ಇನ್ನಾವುದೇ ವಿಷಪೂರಿತ ಪ್ರಾಣಿ/ಹುಳು ಕಡಿದರೆ ಅಂತಹವರಿಗೆ ಚಿಕಿತ್ಸೆಗಾಗಿ – 14ದಿನಗಳ ವಿಶೇಷ ಸಾಂರ್ದಭಿಕರಜೆ ಹಾಗೂ ಹೋಗಿಬರುವ ಪ್ರಯಾಣದ ದಿನಗಳು
2. ಸ್ವಯಂ ಸೇವಕರಾಗಿರುವ ಸರ್ಕಾರಿ ನೌಕರರು ಬಂದೂಕು ತರಬೇತಿಗೆ ಹಾಜರಾದಾಗ – ಅಗತ್ಯವಿರುವಷ್ಟು ಅವಧಿಗೆ ನೀಡಬಹುದು.
3. ಸರ್ಕಾರಿ ನೌಕರರ ಕೇಂದ್ರ ಮತ್ತು ಜಿಲ್ಲಾ ಮಟ್ಟದ ಸಂಘದ ಪದಾಧಿಕಾರಿಗಳಿಗೆ – ಪ್ರತಿ ವರ್ಷಕ್ಕೆ 15 ದಿನಗಳು ಮೀರದಂತೆ
4. ರಾಜ್ಯ ಸರ್ಕಾರಿ ‘ಡಿ’ ವರ್ಗದ ನೌಕರರ ಸಂಘದ ಪದಾಧಿಕಾರಿಗಳಿಗೆ – ಪ್ರತಿ ವರ್ಷಕ್ಕೆ 15 ದಿನಗಳು ಮೀರದಂತೆ.
5. ದೆಹಲಿಯ ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸರ್ಕಾರಿ ಉದ್ಯೋಗಿಗಳಿಗೆ ಪ್ರತಿ ವರ್ಷಕ್ಕೆ 6 ದಿನಗಳು ಮೀರದಂತೆ ವಿಶೇಷ ಸಾಂರ್ದಭಿಕ ರಜೆ ಲಭ್ಯ .
6. ಶೈಕ್ಷಣಿಕವಾಗಿ ವಾಣಿಜ್ಯ ಪರೀಕ್ಷಾ ಮಂಡಳಿಯು ನಡೆಸುವ ಪರೀಕ್ಷೆಗಾಗಿ ಪರೀಕ್ಷಾ ಅವಧಿ ಮತ್ತು ವಾಸ್ತವ ಪ್ರಯಾಣದ ಅವಧಿಯ ದಿನಗಳ ಮಟ್ಟಿಗೆ ವಿಶೇಷ ಸಾಂರ್ದಭಿಕ ರಜೆ ಲಭ್ಯ .
7. ಅಖಿಲ ಭಾರತ ಮಾಧ್ಯಮಿಕ ಶಿಕ್ಷಕರ ಫೆಡರೇಷನ್ನಿನ ಪದಾಧಿಕಾರಿಗಳು ವಿವಿಧ ಸಭೆ ವಿಚಾರ ಸಂಕಿರಣ ಗೋಷ್ಠಿಗಳು ನಡೆಯುವ ದಿನಗಳ ಮಟ್ಟಿಗೆ ಈ ವಿಶೇಷ ಸಾಂರ್ದಭಿಕ ರಜೆ ಲಭ್ಯ.
8. ವಿಶ್ವವಿದ್ಯಾಲಯಗಳ ಪರೀಕ್ಷೆಗಳಲ್ಲಿ ಪರೀಕ್ಷಕರಾಗಿ ಆಯ್ಕೆಗೊಂಡ ಸರ್ಕಾರಿ ನೌಕರರಿಗೆ 30 ದಿನಗಳಿಗೆ ಮೀರದಂತೆ ವಿಶೇಷ ಸಾಂರ್ದಭಿಕ ರಜೆ ಲಭ್ಯ.
9. ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ ಇಲಾಖೆಯವರು ನಡೆಸುವ ಸಮ್ಮೇಳನಗಳಲ್ಲಿ 15 ದಿನ ವಿಶೇಷ ಸಾಂರ್ದಭಿಕ ರಜೆ ಕೊಡಬಹುದು. (ಪ್ರಯಾಣ ಭತ್ಯೆ ರಹಿತ)
10. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಏರ್ಪಾಟಾಗುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆ ವರ್ಷಕ್ಕೆ 15 ದಿನ ವಿಶೇಷ ಸಾಂರ್ದಭಿಕ ರಜೆ ಕೊಡಬಹುದು
11. ಯುವ ಜನ ಇಲಾಖೆಯವರು ಏರ್ಪಡಿಸುವ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆ ವರ್ಷಕ್ಕೆ 15 ದಿನ ವಿಶೇಷ ಸಾಂರ್ದಭಿಕ ರಜೆ ಕೊಡಬಹುದು.
12. ಸಂತಾನ ಹರಣ ಶಸ್ತ್ರ ಚಿಕಿತ್ಸೆಯ ಸಂದರ್ಭಗಳಲ್ಲಿ 7 ದಿನಗಳಿಗೆ ಮೀರದಂತೆ ವಿಶೇಷ ಸಾಂರ್ದಭಿಕ ರಜೆ ಕೊಡಬಹುದು.
13. ಸಂತಾನ ಹರಣ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಲಿಲ್ಲವೆಂದು ವೈದ್ಯಾಧಿಕಾರಿಗಳು ಪ್ರಮಾಣ ಪತ್ರ ಕೊಟ್ಟರೆ 6 ದಿನಗಳ ವಿಶೇಷ ಸಾಂರ್ದಭಿಕ ರಜೆ ಕೊಡಬಹುದು.
14. ಶೀಘ್ರಲಿಪಿ ಪರೀಕ್ಷೆಗಳ ಮೇಲ್ವಿಚಾರಕರಾಗಿ ಹೋಗುವ ಶೀಘ್ರಲಿಪಿಗಾರರಿಗೆ ಪರೀಕ್ಷೆಯ ಅವಧಿಗಾಗಿ ಮತ್ತು ಪ್ರಯಾಣದ ಅವಧಿಗಾಗಿ ವಿಶೇಷ ಸಾಂರ್ದಭಿಕ ರಜೆ ಲಭ್ಯ.
15. ಬಾಣಂತಿತನವಿಲ್ಲದ ಸಂತಾನ ಹರಣ ಶಸ್ತ್ರ ಚಿಕಿತ್ಸೆಗಾಗಿ ಮಹಿಳಾ ಉದ್ಯೋಗಿಗಳಿಗೆ ಇಲಾಖಾ ಮುಖ್ಯಸ್ಥರು 14 ದಿನಗಳ ವಿಶೇಷ ಸಾಂರ್ದಭಿಕ ರಜೆ ಮಂಜೂರು ಮಾಡಬಹುದು.
16. ಐ.ಯು.ಸಿ.ಡಿ.ಯನ್ನು ಅಳವಡಿಸಿಕೊಳ್ಳುವ ಸಲುವಾಗಿ 1 ದಿನ ರಜೆ ಕೊಡಬಹುದು.
17. ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಕ್ರೀಡೋತ್ಸವಗಳಲ್ಲಿ ಭಾಗವಹಿಸಿದಾಗ 1 ವರ್ಷಕ್ಕೆ 30 ದಿನಗಳ ವಿಶೇಷ ರಜೆ ಲಭ್ಯ.
18. ಅಖಿಲ ಭಾರತ ಫುಟ್ಬಾಲ್, ಹಾಕಿ, ಕ್ರಿಕೆಟ್, ಟೆನ್ನಿಸ್ ಮೊದಲಾದ ಕ್ರೀಡಾ ಸಂಸ್ಥೆಗಳು ಸರ್ಕಾರಿ ನೌಕರರನ್ನು ಕ್ರೀಡೆಗಳಲ್ಲಿ ಭಾಗವಹಿಸಲು ಚುನಾಯಿಸಿದಾಗ ಕೊಡಬಹುದು. ಇದಕ್ಕೂ ಹೆಚ್ಚಿಗೆ ಬೇಕಾದಲ್ಲಿ, ಗಳಿಕೆ ರಜೆ, ಅಥವಾ ಅರ್ಧ ವೇತನ ರಜೆಯನ್ನು ತೆಗೆದುಕೊಳ್ಳಬೇಕು. ಈ ವಿಶೇಷ ಸಾಂರ್ದಭಿಕ ರಜೆಯನ್ನು ಸಾಮಾನ್ಯ ಸಾಂರ್ದಭಿಕ ರಜೆ ಎನ್ನುವರು.
19. ಕ್ರೀಡಾ ಸಂಸ್ಥೆಗಳಲ್ಲಿ ತರಬೇತಿದಾರರೆಂದು ನೇಮಕ ಮಾಡಿದಾಗ ರಜೆಯೊಡನೆ ಸೇರಿಸಕೂಡದು.
20. ರಕ್ತದಾನ ಮಾಡಿದ ಸಂದರ್ಭದಲ್ಲಿ (ಬ್ಲಡ್ ಬ್ಯಾಂಕ್ / ಆಸ್ಪತ್ರೆ / ರೆಡ್ ಕ್ರಾಸ್ ಸಂಸ್ಥೆಗಳಿಂದ ಪೂರಕ ದಾಖಲೆಗಳನ್ನು ಒದಗಿಸಬೇಕು.) ಕೆಸಿಎಸ್ಆರ್ ನಿಯಮಾವಳಿ ಪ್ಯಾರಾ 11ಜಿ ಅನುಬಂಧ-ಬಿ, ಪ್ರಕಾರ ಒಂದು ದಿನ ವಿಶೇಷ ಸಾಂರ್ದಭಿಕ ರಜೆ ಮಂಜೂರು ಮಾಡಬಹುದು.
3. ನಿರ್ಬಂಧಿತ ರಜೆ (ಛಿಠಠ್ಟಿಜ್ಚಿಠಿಛಿಛ ಜಟ್ಝಜಿಛಚಢ):
ಪ್ರತಿವರ್ಷ ಘೊಷಿತ ದಿನಾಂಕಗಳ ಅಧಿಕೃತ ಹಬ್ಬಗಳ ಆಚರಣೆಯ ಸಂಬಂಧ 2 ದಿನ ನಿರ್ಬಂಂಧಿತ ರಜೆ ಪ್ರತಿಯೊಬ್ಬ ಸರ್ಕಾರಿ ನೌಕರನಿಗೆ ದೊರೆಯುತ್ತದೆ. ಈ ರಜೆಯನ್ನು ಸಾಂರ್ದಭಿಕ ರಜೆ ಅಥವಾ ಇತರ ರಜೆಯ ಮೊದಲು ಅಥವಾ ಅನಂತರ ಸಂಯೋಜಿಸಿ ಮಂಜೂರು ಮಾಡಬಹುದು. ಈ ನಿರ್ಬಂಧಿತ ರಜೆಗಳ ಪಟ್ಟಿಯನ್ನು ರಾಜ್ಯ ಸರ್ಕಾರವು ಮುಂದಿನ ಕ್ಯಾಲೆಂಡರ್ ವರ್ಷಕ್ಕೆ ಅನ್ವಯವಾಗುವಂತೆ ಅಧಿಸೂಚನೆಯನ್ನು ಹೊರಡಿಸುತ್ತದೆ. ಈ ರಜೆಯನ್ನು ಆಯಾ ಧರ್ವಿುಯರು ಮಾತ್ರ ಬಳಸಬಹುದು. (ಸರ್ಕಾರಿ ಆದೇಶದ ಸಂಖ್ಯೆ: ಊಈ 7 ಖ್ಕಖ 87 ಛಚಠಿಛಿ : 20.3.1987)
***
14.06.2017.
ಸ್ಥಗಿತ ವೇತನ ಬಡ್ತಿ ನಿಯಮಗಳು
(Stagnation Increment)
| ಲ. ರಾಘವೇಂದ್ರ
ಸರ್ಕಾರಿ ನೌಕರನು ತನ್ನ ಹುದ್ದೆಗೆ ಸಂಬಂಧಿಸಿದ ವೇತನ ಶ್ರೇಣಿಯಲ್ಲಿ ಗರಿಷ್ಠ ಮಿತಿಯನ್ನು ದಾಟಿದಾಗ ಆ ನೌಕರನು ಈ ಮಿತಿಯ ಪೂರ್ವದಲ್ಲಿ ಪಡೆಯುತ್ತಿದ್ದ ವೇತನ ಬಡ್ತಿಯ ಪ್ರಮಾಣದಲ್ಲೇ ನಿರ್ದಿಷ್ಟಾವಧಿ ನಂತರ ಮಂಜೂರು ಮಾಡುವ ವೇತನ ಬಡ್ತಿಯನ್ನೇ ಸ್ಥಗಿತ ವೇತನ ಬಡ್ತಿ ಎನ್ನಬಹುದು.
ದಿನಾಂಕ 31-10-79ರ ಸರ್ಕಾರಿ ಆದೇಶ ಸಂಖ್ಯೆ ಎಫ್ಡಿ 52 ಎಸ್.ಆರ್.ಪಿ. 79ರ ಮೇರೆಗೆ ಸರ್ಕಾರಿ ನೌಕರನು ವೇತನ ಶ್ರೇಣಿಯ ಗರಿಷ್ಠ ಮಿತಿ ದಾಟಿ ವೇತನ ಬಡ್ತಿಯನ್ನು ಎರಡು ವರ್ಷಗಳವರೆಗೆ ಪಡೆಯದಿದ್ದರೆ, ಅವನಿಗೆ ಮೊದಲ ಸ್ಥಗಿತ ವೇತನ ಬಡ್ತಿಯನ್ನು ಮಂಜೂರು ಮಾಡಬಹುದೆಂದು ತಿಳಿಸಲಾಗಿದೆ. ಅಲ್ಲದೆ, ಎರಡನೇ ಸ್ಥಗಿತ ವೇತನಬಡ್ತಿಯನ್ನು ಮತ್ತೊಂದು ವರ್ಷದ ನಂತರ ನೀಡಬೇಕೆಂದು ಸೂಚಿಸಲಾಗಿತ್ತು. ಈ ನಿಯಮಾವಳಿ ಪ್ರಕಾರ ಸರ್ಕಾರಿ ನೌಕರನು ವಾರ್ಷಿಕ ವೇತನ ಬಡ್ತಿ ಹೊಂದಿದ ಕಾಲಿಕ ವೇತನ ಶ್ರೇಣಿಯಲ್ಲಿ ಗರಿಷ್ಠ ಹಂತವನ್ನು ದಾಟಿದ್ದರೆ ಅಂತಹ ನೌಕರನಿಗೆ ಅವನು ಪಡೆದಿದ್ದ ವಾರ್ಷಿಕ ವೇತನ ಬಡ್ತಿಯ ದರದ ಪ್ರಮಾಣದಲ್ಲಿ ದಿನಾಂಕ 1-4-2012ನೇ ಸಾಲಿನ ಎಂಟು ವಾರ್ಷಿಕ ಸ್ಥಗಿತ ವೇತನ ಬಡ್ತಿಗಳನ್ನು ಮಂಜೂರು ಮಾಡಬೇಕು. ಇದನ್ನು ಎಲ್ಲ ಉದ್ದೇಶಗಳಿಗಾಗಿ ‘ವೇತನ’ ಎಂದು ಪರಿಗಣಿಸಲು ತಿಳಿಸಲಾಗಿದೆ.
ಸ್ಥಗಿತ ವೇತನ ಬಡ್ತಿ ಮಂಜೂರಾತಿಗೆ ನಿಬಂಧನೆಗಳು
ಅ) ಸರ್ಕಾರಿ ನೌಕರನು ತೃಪ್ತಿದಾಯಕ ಸೇವಾ ದಾಖಲೆ ಹೊಂದಿರಬೇಕು. ಅಲ್ಲದೆ ವೇತನ ಶ್ರೇಣಿಯ ಗರಿಷ್ಠ ಹಂತವನ್ನು ತಲುಪದಿದ್ದರೆ, ಅವನಿಗೆ ಅನ್ವಯವಾಗುವ ಕಾಲಿಕ ವೇತನ ಶ್ರೇಣಿಯಲ್ಲಿ ಸಾಮಾನ್ಯ ವೇತನ ಬಡ್ತಿಯನ್ನು ಪಡೆಯಲು ಅರ್ಹನಿರಬೇಕು.
ಆ) ಸ್ಥಗಿತ ವೇತನ ಬಡ್ತಿಯನ್ನು ಮಂಜೂರು ಮಾಡುವ ಉದ್ದೇಶಕ್ಕೆ ತೃಪ್ತಿಕರ ಸೇವೆಯ ಸ್ವರೂಪವನ್ನು ಪದೋನ್ನತಿಗೆ ಅರ್ಹತೆಯನ್ನು ಪರಿಗಣಿಸುವ ರೀತಿಯಲ್ಲೇ ನಿರ್ಧರಿಸಬೇಕು.
ಇ) ತೃಪ್ತಿಕರ ಸೇವೆ ಪರಿಗಣಿಸುವಾಗ ಸರ್ಕಾರಿ ನೌಕರನು ಪದೋನ್ನತಿಗೆ ಯಾವುದೇ ಇಲಾಖಾ ಪರೀಕ್ಷೆಗಳನ್ನು ನಿಗದಿಪಡಿಸಿದಲ್ಲಿ, ಅವುಗಳಲ್ಲಿ ತೇರ್ಗಡೆಯಾಗಿದ್ದಾನೆಯೇ ಅಥವಾ ಇಲ್ಲವೇ ಎಂಬಂಶವನ್ನು ಗಣನೆಗೆ ತೆಗೆದುಕೊಳ್ಳುವ ಅಗತ್ಯ ಇರುವುದಿಲ್ಲ.
ಈ) ಸ್ವಇಚ್ಛೆಯಿಂದ ಪದೋನ್ನತಿ ಬಿಟ್ಟುಕೊಡುವ ಅಥವಾ ಪದೋನ್ನತಿ ನಂತರ ಸ್ವಂತ ಇಚ್ಛೆ ಮೇರೆಗೆ ಹಿಂಬಡ್ತಿಯನ್ನು ಬಯಸುವ ಸರ್ಕಾರಿ ನೌಕರನಿಗೆ ಈ ಸ್ಥಗಿತ ವೇತನ ಬಡ್ತಿಯನ್ನು ನೀಡಬಾರದು.
***
ರೆವಿನ್ಯೂ ಹೈಯರ್ ಪರೀಕ್ಷಾ ವಿಧಾನ
Wednesday, 15.03.2017,
ಕರ್ನಾಟಕ ಸರ್ಕಾರಿ ಸೇವಾ (ಸೇವಾ ಮತ್ತು ಕನ್ನಡ ಭಾಷಾ) ಪರೀಕ್ಷೆಗೆ ನಿಯಮಗಳು 1974ರ ಮೇರೆಗೆ ರೆವಿನ್ಯೂ ಹೈಯರ್ ಭಾಗ 1ರ ಪತ್ರಿಕೆ 1ಕ್ಕೆ ಕರ್ನಾಟಕ ಭೂ ಕಂದಾಯ ಅಧಿನಿಯಮ 1961, ಕರ್ನಾಟಕ ಭೂಕಂದಾಯ ಅಧಿನಿಯಮಗಳು 1966, ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ನ್ನು ನಿಗದಿಪಡಿಸಲಾಗಿದ್ದು, ಈ ಪತ್ರಿಕೆಗೆ 200 ಅಂಕಗಳಿಗೆ 50 ವಸ್ತುನಿಷ್ಠ ಪ್ರಶ್ನೆಗಳಿಗೆ 2 ಗಂಟೆ ಕಾಲಾವಧಿಯಲ್ಲಿ ಉತ್ತರಿಸಬೇಕಿರುತ್ತದೆ. ಪತ್ರಿಕೆ 2ರಲ್ಲಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ, ಪಾರದರ್ಶಕತೆ ಮತ್ತು ನ್ಯಾಯೋಚಿತ ಪರಿಹಾರಕ್ಕೆ ಹಕ್ಕು, ಪುನರ್ವಸತಿ ಮತ್ತು ಪುನರ್ ವ್ಯವಸ್ಥೆ ಅಧಿನಿಯಮ 2013 (2013ರ ಕೇಂದ್ರ ಅಧಿನಿಯಮ 30) ಮತ್ತು (ಕರ್ನಾಟಕ) ನಿಯಮಗಳು 2014, ಕರ್ನಾಟಕ ನೀರಾವರಿ (ಶುಲ್ಕ ಸುಧಾರಣೆ ವಂತಿಕೆ ಮತ್ತು ನೀರು ದರ) ಅಧಿನಿಯಮ 1957, ಕರ್ನಾಟಕ ಭೂಸುಧಾರಣಾ ಅಧಿನಿಯಮ 1961 ಮತ್ತು ನಿಯಮಗಳು 1965, ಭಾರತದ ನೋಂದಣಿ ಅಧಿನಿಯಮ, ಭಾರತದ ಸ್ಟಾಂಪ್ ಅಧಿನಿಯಮ, ಕರ್ನಾಟಕ ಸ್ಟಾಂಪ್ ಅಧಿನಿಯಮ ಹಾಗೂ ಕರ್ನಾಟಕ ಗ್ರಾಮ ಲೆಕ್ಕಾಧಿಕಾರಿಗಳ ರದ್ದಿಯಾತಿ ಅಧಿನಿಯಮ, 1965 ನಿಗದಿಪಡಿಸಲಾಗಿದೆ.
ರೆವಿನ್ಯೂ ಹೈಯರ್ ಭಾಗ – 2ರ ಪತ್ರಿಕೆ 1ರಲ್ಲಿ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959, ಕೃಷಿ ಆದಾಯ ತೆರಿಗೆ ಅಧಿನಿಯಮ, ಕರ್ನಾಟಕ ಲೇವಾದೇವಿಗಾರರ ಅಧಿನಿಯಮ 1961 ಮತ್ತು ನಿಯಮಗಳು 1965, ಕರ್ನಾಟಕ ಗಿರವಿದಾರರ ಅಧಿನಿಯಮ 1961 ಮತ್ತು ನಿಯಮಗಳು 1966 ಎಂದು ನಿಗದಿಪಡಿಸಲಾಗಿದ್ದು 100 ಅಂಕಗಳಿಗೆ 50 ಪ್ರಶ್ನೆಗಳಿಗೆ 2 ಗಂಟೆ ಕಾಲಾವಧಿಯಲ್ಲಿ ಉತ್ತರಿಸಬೇಕಾಗಿರುತ್ತದೆ.
ಪತ್ರಿಕೆ 2ರಲ್ಲಿ ಕರ್ನಾಟಕ ಧಾರ್ವಿುಕ ದತ್ತಿ ಮತ್ತು ಧರ್ವದಾಯಗಳ ಅಧಿನಿಯಮ 1969 ಮತ್ತು ನಿಯಮಗಳು 2002 ಹಾಗೂ ವಕ್ಪ್ ಅಧಿನಿಯಮ 1995 ಮತ್ತು ಕರ್ನಾಟಕ ವಕ್ಪ್ ನಿಯಮಗಳು 1997 ಎಂದು ನಿಗದಿಪಡಿಸಲಾಗಿದ್ದು 100 ಅಂಕಗಳಿಗೆ 50 ಪ್ರಶ್ನೆಗಳನ್ನು 2 ಗಂಟೆ ಕಾಲಾವಧಿಯಲ್ಲಿ ಉತ್ತರಿಸಬೇಕಾಗುತ್ತದೆ.
ರೆವಿನ್ಯೂ ಲೋಯರ್ ಪರೀಕ್ಷೆಯಲ್ಲಿ 3 ಪತ್ರಿಕೆಗಳಿದ್ದು ಪತ್ರಿಕೆ 1 ಕರ್ನಾಟಕ ಭೂಕಂದಾಯ ಅಧಿನಿಯಮ 1964 ಮತ್ತು ನಿಯಮಗಳು 1966, ಕರ್ನಾಟಕ ಭೂಮಂಜೂರಾತಿ ನಿಯಮಗಳು 1969 ಪತ್ರಿಕೆ 2ರಲ್ಲಿ ಭಾರತದ ನೋಂದಣಿ ಅಧಿನಿಯಮ, ಕರ್ನಾಟಕ ಸ್ಟಾಂಪ್ ಅಧಿನಿಯಮ 1957, ಭೂಸ್ವಾದೀನ ಪ್ರಕ್ರಿಯೆಯಲ್ಲಿ, ಪಾರದರ್ಶಕತೆ ಮತ್ತು ನ್ಯಾಯೋಚಿತ ಪರಿಹಾರಕ್ಕೆ ಹಕ್ಕು, ಪುನರ್ವಸತಿ ಮತ್ತು ಪುನರ್ ವ್ಯವಸ್ಥೆ ಅಧಿನಿಯಮ 2013 (2013ರ ಕೇಂದ್ರ ಅಧಿನಿಯಮ 30) ಮತ್ತು (ಕರ್ನಾಟಕ) ನಿಯಮಗಳು 2014, ಭೂಸುಧಾರಣಾ ಅಧಿನಿಯಮ 1961, ಕರ್ನಾಟಕ ನೀರಾವರಿ (ಶುಲ್ಕವಂತಿಕೆ ಮತ್ತು ನೀರು ದರ) ಅಧಿನಿಯಮ 1952, ಗ್ರಾಮಾಧಿಕಾರಿಗಳ ರದ್ದಿಯಾತಿ (ಚಚಿಟ್ಝಜಿಠಿಜಿಟ್ಞ ) ಅಧಿನಿಯಮವನ್ನು ನಿಗದಿಪಡಿಸಲಾಗಿದೆ. ಪತ್ರಿಕೆ 3ರಲ್ಲಿ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, ಕರ್ನಾಟಕ ಲೇವಾದೇವಿಗಾರರ ಅಧಿನಿಯಮ, 1961 ಮತ್ತು ನಿಯಮಗಳು 1965, ಕರ್ನಾಟಕ ಗಿರವಿದಾರರ ಅಧಿನಿಯಮ 1961, ನಿಯಮಗಳು 1966ನ್ನು ನಿಗದಿಪಡಿಸಲಾಗಿದ್ದು ಅಭ್ಯರ್ಥಿಯು 50 ಪ್ರಶ್ನೆಗಳಿಗೆ 2 ಗಂಟೆ ಕಾಲಾವಧಿಯಲ್ಲಿ ಉತ್ತರಿಸಬೇಕಾಗುತ್ತದೆ. ರೆವಿನ್ಯೂ ಹೈಯರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೆ ರೆವಿನ್ಯೂ ಲೋಯರ್ ಪರೀಕ್ಷೆಗೆ ವಿನಾಯಿತಿ ದೊರಕುತ್ತದೆ.
***