ಮಕ್ಕಳ ಹೆಜ್ಜೆಗಳು-ಶಾಲಾ ಮಕ್ಕಳಿಗಿಲ್ಲಿ ಸಾಂಸ್ಕೃತಿಕ ಪಾಠ.

ಶಾಲಾ ಮಕ್ಕಳಿಗಿಲ್ಲಿ ಸಾಂಸ್ಕೃತಿಕ ಪಾಠ!
  

image

ಕುಷ್ಟಗಿ ತಾಲೂಕಿನ ಜಾಗೀರಗುಡದೂರಿನ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ನಿತ್ಯದ ಪಠ್ಯ ವಿಷಯಕ್ಕೆ ಸೀಮಿತರಾಗದೇ ಪಠ್ಯೇತರದಲ್ಲೂ ಹೊಸ ಹೆಜ್ಜೆ ಇಟ್ಟಿದ್ದಾರೆ.

ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವುದೇ ಹೆಚ್ಚು ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಸರಿಯಾದ ಮೂಲಸೌಕರ್ಯ ಇರುವುದಿಲ್ಲ. ಆದರೆ ಈ ಶಾಲೆಯಲ್ಲಿ ಅಗತ್ಯ ಮೂಲ ಸೌಕರ್ಯಗಳಿವೆ. ಇನ್ನು ಅಂತರ್ಜಾಲ ವ್ಯವಸ್ಥೆ ಗ್ರಾಮೀಣ ಶಾಲೆಗಳಲ್ಲಿ
ಕಾಣುವುದೇ ವಿರಳ. 263 ವಿದ್ಯಾರ್ಥಿಗಳಿರುವ ಈ ವಿಭಿನ್ನ ಕಾರ್ಯಚಟುವಟಿಕೆಗಳಿಂದ ಕಳೆದ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ.100ರಷ್ಟು ಸಾಧನೆ ಹೆಮ್ಮೆ ಈ ಶಾಲೆಗಿದೆ. ಗ್ರಾಮೀಣ ಪ್ರದೇಶ ಶಾಲೆಯ ಈ ಮಕ್ಕಳು ಬರೆದ ಕತೆ ಕವನ, ಲೇಖನಗಳು ಫೇಸ್‌
ಬುಕ್‌ನಲ್ಲಿ ಅನಾವರಣಗೊಂಡಿದ್ದು, ಹೆಚ್ಚು ಲೈಕ್‌ ಗಿಟ್ಟಿಸಿವೆ. ಅಲ್ಲದೇ ಈ ಶಾಲೆಯ ರಂಗ
ಚಟುವಟಿಕೆಗಳು ವಿದೇಶಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸಿದ್ದು, http://www.hejjegalushalapatrike.blogspot.com ಈ ಬ್ಲಾಗ್‌ ಮೂಲಕ ವೈವಿದ್ಯಮಯ ಕಾರ್ಯಚಟುವಟಿಕೆ ವಿಸ್ತರಿಸಿಕೊಂಡಿದೆ. ಇದಕ್ಕೆ ಮೂಲ ಪ್ರೇರಣೆ ರಂಗ
ಶಿಕ್ಷಕ ಗುರುರಾಜ ಹೊಸಪೇಟೆ.

2008ರಲ್ಲಿ ಈ ಶಾಲೆಗೆ ನೇಮಕಗೊಂಡಾಗಿನಿಂದ ಇಲ್ಲಿವರೆಗೂ ಹಲವು ವಿಧದ ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಮಕ್ಕಳ ಕಲಿಕೆ ಸಾಮರ್ಥ್ಯ ಹೆಚ್ಚಿಸಲು ಪೂರಕವಾಗಿದ್ದಾರೆ. ನೀನಾಸಂ ಕಲಾವಿದರಾದ ಗುರುರಾಜ ಹೊಸಪೇಟೆ ಅವರು,
ಒಂದಲ್ಲ ಒಂದು ಕಾರ್ಯಚಟುವಟಿಕೆಗಳಿಂದ ಹೊಸತನ ಸೃಷ್ಟಿಸಿದ್ದಾರೆ.

ರಂಗ ಶಿಕ್ಷಕ ಗುರುರಾಜ ಹೊಸಪೇಟೆ ಅವರು ತಾವು ನೀನಾಸಂನಲ್ಲಿ ಕಲಿತಿರುವ ರಂಗ ಶಿಕ್ಷಣವನ್ನು ಮಕ್ಕಳ ಶೈಕ್ಷಣಿಕ ಪ್ರಜ್ಞೆಗೆ ಬಳಸಿಕೊಂಡಿದ್ದು ಅದರಲ್ಲೂ ಯಶಸ್ವಿಯಾಗಿದ್ದಾರೆ. ಶಾಲೆಯ ಮಕ್ಕಳು ಅಭಿನಯಿಸಿದ ನಾಟಕಗಳು ರಾಜ್ಯದ ವಿವಿಧೆಡೆಗಳಲ್ಲಿ ಪ್ರದರ್ಶನ ಕಂಡಿವೆ.

ಶಾಲೆಯ ಕಾರ್ಯಚಟುವಟಿಕೆ ಗಮನಿಸಿ, ಸಾಂಸ್ಕೃತಿಕ ಕಾರ್ಯಚಟುವಟಿಕೆ, ರಂಗ ಶಿಕ್ಷಣದ
ಹಿನ್ನೆಲೆಗೆ ಇನ್ನಷ್ಟು ಉತ್ತೇಜನ ಪೂರ್ವಕವಾಗಿ ರಾಜ್ಯದ ವಿವಿಧೆಡೆಯಿಂದ ಆಗಮಿಸಿ
ಕಾರ್ಯಾಗಾರಗಳನ್ನು ನಡೆಸಿದ್ದಾರೆ. ಈಚೆಗೆ ಜಾಗೀರಗುಡದೂರು ಶಾಲೆಗೆ ಜರ್ಮನಿಯ
ಗೋಥೆ ಇನ್ಸಿಟ್ಯೂಟ್‌ ನಿರ್ದೇಶಕ ಕ್ರಿಸ್ಟೋಫಾ ಅವರು ಭೇಟಿ ನೀಡಿ, ಮಕ್ಕಳೊಂದಿಗೆ
ಇಡೀ ದಿನ ಕಳೆದು ಅನೇಕ ವಿಷಯಗಳ ಕುರಿತು ಸಂವಾದ ನಡೆಸಿದರು ಎಂದು ಶಿಕ್ಷಕ ಗುರುರಾಜ್‌ ಹೇಳುತ್ತಾರೆ.

ಅಲ್ಲದೇ ಶಾಲೆಯ ಮುಖ್ಯ ಶಿಕ್ಷಕ ಈಶಪ್ಪ ತಳವಾರ ಹಾಗೂ ಶಿಕ್ಷಕ ವೃಂದ ಪ್ರೋತ್ಸಾಹದ ಬೆನ್ನು ತಟ್ಟುವಿಕೆಯಿಂದ ಈ ಸಾಧನೆ ಕಾರಣವಾಗಿದೆ ಎನ್ನುತ್ತಾರೆ ಗುರುರಾಜ್‌ ಹೊಸಪೇಟೆ. ಬೆಂಗಳೂರಿನ ಇಂಡಿಯಾ ಫೌಂಡೇಷನ್‌ ಆರ್ಟ್‌ ಸಂಸ್ಥೆ ಸರ್ವ ಶಿಕ್ಷಣ ಸಹಯೋಗದಲ್ಲಿ ವರ್ಷದ ಯೋಜನೆಯಾಗಿ ಮಕ್ಕಳ ಹೆಜ್ಜೆಗಳು ಜನಪದದತ್ತ ವೈವಿದ್ಯಮಯ
ಕಾರ್ಯಕ್ರಮಗಳು ಇಲ್ಲಿ ಮಾತಾಗಿವೆ. ಅಲ್ಲದೇ ಪ್ರತಿ ಮನೆಗೂ ಭೇಟಿ ನೀಡಿ ಸಂಪ್ರದಾಯ,
ಉಡುಗೆ, ತೊಡುಗೆ, ಹೆಜ್ಜೆ ಕುಣಿತ, ಸೋಬಾನೆ, ರಿವಾಯತ್‌ ಮೊದಲಾದವುಗಳನ್ನು
ದಾಖಲಿಸಿಕೊಂಡು ಮಕ್ಕಳ ಹೆಜ್ಜೆಗಳು ಸಾಕ್ಷಚಿತ್ರವೂ ನಿರ್ಮಾಣವಾಗಿದೆ.

ಅಲ್ಲದೇ ವಿಜ್ಞಾನ ವಿಷಯದಲ್ಲಿ ನಾಟಕ ಅಭಿನಯಿಸಿ ಸಹಿ ಎನಿಸಿಕೊಂಡಿದ್ದು, ರಾಜ್ಯಮಟ್ಟದ
ಪ್ರದರ್ಶನದಲ್ಲಿ ಭೇಷ್‌ ಗಿಟ್ಟಿಸಿದ್ದಾರೆ. ಬೆಂಗಳೂರಲ್ಲಿ ಜರುಗಿದ ಕಲಾ ಉತ್ಸವದಲ್ಲಿ ಈ ಮಕ್ಕಳು ತಮ್ಮ ಪ್ರತಿಭೆ ಅನಾವರಣಗೊಳಿಸಿದ್ದಾರೆ.

Leave a comment